ETV Bharat / state

ಸಿಎಂ ನಿವಾಸದ ಬಳಿ ಟ್ರಾಫಿಕ್ ಜಾಮ್: ಕಾರು ಇಳಿದು ನಡೆದುಕೊಂಡೇ ಬಂದ ಸಚಿವ ಅಶೋಕ್, ಯೋಗೇಶ್ವರ್

author img

By

Published : Feb 2, 2021, 9:40 PM IST

ಕೇಂದ್ರ ಸಚಿವ ರಾಜನಾಥ್ ಸಿಂಗ್​​ ಅವರಿಗೆ ಝೀರೋ ಟ್ರಾಫಿಕ್ ಇದ್ದ ಹಿನ್ನೆಲೆ ಕುಮಾರ ಪಾರ್ಕ್​ನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕೆಲಕಾಲ ವ್ಯತ್ಯಯವಾಯಿತು. ಸಿಎಂ ನಿವಾಸಕ್ಕೆ ಶಾಸಕರ ದಂಡು ಆಗಮಿಸಿದ್ದ ವೇಳೆಯಲ್ಲೇ ರಾಜನಾಥ್ ಸಿಂಗ್ ಅವರ ಕಾನ್ವಾಯ್ ಹೋದ ಕಾರಣ ಕೆಲಕಾಲ ಸಿಎಂ ನಿವಾಸದ ಸುತ್ತಮುತ್ತ ಉಂಟಾದ ಟ್ರಾಫಿಕ್ ಜಾಮ್ ಬಿಸಿ ಸಚಿವರಿಗೂ ತಟ್ಟಿತು.

traffic-jam-near-cm-residence-news
ಸಿಎಂ ನಿವಾಸದ ಬಳಿ ಟ್ರಾಫಿಕ್ ಜಾಮ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆದಿದ್ದ ಭೋಜನ ಕೂಟಕ್ಕೆ ಆಗಮಿಸಿದ್ದ ಸಚಿವರಿಗೆ ಟ್ರಾಫಿಕ್ ಬಿಸಿ ತಟ್ಟಿದ್ದು, ಕಾರು ಇಳಿದು ಕಾಲ್ನಡಿಗೆಯಲ್ಲೇ ಕಾವೇರಿಗೆ ಆಗಮಿಸಿದರು.

ಓದಿ: ರಾಜ್ಯದಲ್ಲಿಂದು 395 ಮಂದಿಗೆ ಕೋವಿಡ್ ಪಾಸಿಟಿವ್: ಮೂವರು ಸೋಂಕಿಗೆ ಬಲಿ

ಕೇಂದ್ರ ಸಚಿವ ರಾಜನಾಥ್ ಸಿಂಗ್​​ ಅವರಿಗೆ ಝೀರೋ ಟ್ರಾಫಿಕ್ ಇದ್ದ ಹಿನ್ನೆಲೆ ಕುಮಾರ ಪಾರ್ಕ್​ನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕೆಲಕಾಲ ವ್ಯತ್ಯಯವಾಯಿತು. ಸಿಎಂ ನಿವಾಸಕ್ಕೆ ಶಾಸಕರ ದಂಡು ಆಗಮಿಸಿದ್ದ ವೇಳೆಯಲ್ಲೇ ರಾಜನಾಥ್ ಸಿಂಗ್ ಅವರ ಕಾನ್ವಾಯ್ ಹೋದ ಕಾರಣ ಕೆಲಕಾಲ ಸಿಎಂ ನಿವಾಸದ ಸುತ್ತಮುತ್ತ ಉಂಟಾದ ಟ್ರಾಫಿಕ್ ಜಾಮ್ ಬಿಸಿ ಸಚಿವರಿಗೂ ತಟ್ಟಿತು.

ಟ್ರಾಫಿಕ್ ಜಾಮ್​​​ನಿಂದಾಗಿ ಕೆಲ ಶಾಸಕರು ಹಾಗೂ ಸಚಿವ ಸಿ.ಪಿ.ಯೋಗೇಶ್ವರ್, ಸಚಿವ ಆರ್.ಅಶೋಕ್ ಕೂಡ ಕಾರು ಇಳಿದು ನಡೆದುಕೊಂಡು ಸಿಎಂ ನಿವಾಸಕ್ಕೆ ತೆರಳಿದರು.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆದಿದ್ದ ಭೋಜನ ಕೂಟಕ್ಕೆ ಆಗಮಿಸಿದ್ದ ಸಚಿವರಿಗೆ ಟ್ರಾಫಿಕ್ ಬಿಸಿ ತಟ್ಟಿದ್ದು, ಕಾರು ಇಳಿದು ಕಾಲ್ನಡಿಗೆಯಲ್ಲೇ ಕಾವೇರಿಗೆ ಆಗಮಿಸಿದರು.

ಓದಿ: ರಾಜ್ಯದಲ್ಲಿಂದು 395 ಮಂದಿಗೆ ಕೋವಿಡ್ ಪಾಸಿಟಿವ್: ಮೂವರು ಸೋಂಕಿಗೆ ಬಲಿ

ಕೇಂದ್ರ ಸಚಿವ ರಾಜನಾಥ್ ಸಿಂಗ್​​ ಅವರಿಗೆ ಝೀರೋ ಟ್ರಾಫಿಕ್ ಇದ್ದ ಹಿನ್ನೆಲೆ ಕುಮಾರ ಪಾರ್ಕ್​ನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕೆಲಕಾಲ ವ್ಯತ್ಯಯವಾಯಿತು. ಸಿಎಂ ನಿವಾಸಕ್ಕೆ ಶಾಸಕರ ದಂಡು ಆಗಮಿಸಿದ್ದ ವೇಳೆಯಲ್ಲೇ ರಾಜನಾಥ್ ಸಿಂಗ್ ಅವರ ಕಾನ್ವಾಯ್ ಹೋದ ಕಾರಣ ಕೆಲಕಾಲ ಸಿಎಂ ನಿವಾಸದ ಸುತ್ತಮುತ್ತ ಉಂಟಾದ ಟ್ರಾಫಿಕ್ ಜಾಮ್ ಬಿಸಿ ಸಚಿವರಿಗೂ ತಟ್ಟಿತು.

ಟ್ರಾಫಿಕ್ ಜಾಮ್​​​ನಿಂದಾಗಿ ಕೆಲ ಶಾಸಕರು ಹಾಗೂ ಸಚಿವ ಸಿ.ಪಿ.ಯೋಗೇಶ್ವರ್, ಸಚಿವ ಆರ್.ಅಶೋಕ್ ಕೂಡ ಕಾರು ಇಳಿದು ನಡೆದುಕೊಂಡು ಸಿಎಂ ನಿವಾಸಕ್ಕೆ ತೆರಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.