ETV Bharat / state

ಇಂದು‌ ವಿಶ್ವಾಸಮತ ಯಾಚನೆ ಸಾಧ್ಯ: ಶೋಭಾ ಕರಂದ್ಲಾಜೆ - Shobha Karandlaje

ಸಿಎಂ ಕುಮಾರಸ್ವಾಮಿ, ಇಂದು ವಿಶ್ವಾಸಮತ ಸಾಬೀತುಪಡಿಸಲು ಕಾಲಾವಕಾಶ ಕೇಳಿದ್ದರು. ಅದರಂತೆ ಈ ದಿನ ವಿಶ್ವಾಸಮತ ಯಾಚನೆ ಮಾಡುತ್ತಾರೆಯೇ ಹೊರತು ಕಾಲಹರಣ ಮಾಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ
author img

By

Published : Jul 22, 2019, 2:56 PM IST

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದೇ ವಿಶ್ವಾಸಮತ ಯಾಚಿಸುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ಕೆಐಎಎಲ್ ನಲ್ಲಿ ಮಾತನಾಡಿದ ಅವರು, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಇಂದು ಬಹುಮತ ಸಾಬೀತುಮಾಡುತ್ತೇವೆ ಕಾಲಾವಕಾಶ ನೀಡಿ ಎಂದಿದ್ದರು. ಅದೇ ರೀತಿ ಸಿಎಂ ಕುಮಾರಸ್ವಾಮಿ ಕೂಡ ಇಂದು ಸದನಕ್ಕೆ ಬಂದಿದ್ದಾರೆ. ಇದರಿಂದಾಗಿ ಇಂದು ಸದನ ಮುಗಿಯುವುದರೊಳಗೆ ವಿಶ್ವಾಸಮತ ಯಾಚಿಸುವ ನಂಬಿಕೆ ಇದೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ

ಅಲ್ಲದೆ, ಇಂದು ಮತಯಾಚನೆಗೆ ಸ್ಪೀಕರ್ ಅವಕಾಶ ಮಾಡಿಕೊಡುತ್ತಾರೆ. ಬಹುಮತ ಕಳೆದುಕೊಂಡ ಮೇಲೆ ಸಿಎಂ ರಾಜೀನಾಮೆ ಕೊಡಬೇಕಿತ್ತು. ಬಹುಮತ ಇಲ್ಲದಿದ್ದರೂ ಯಾಕೆ ಕುರ್ಚಿಗೆ ಆಂಟಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಸಿಎಂ ಹೇಳಿದ ಹಾಗೆ ಇಂದು‌ ನಡೆದುಕೊಳ್ತಾರೆ ಎಂಬ ವಿಶ್ವಾಸ ನಮ್ಮದು ಎಂದು ಸಂಸದೆ ಶೋಭಾ ಹೇಳಿದರು.

ರಾಜ್ಯದ ಜನ ಸಹ ಇದನ್ನೆಲ್ಲಾ ನೋಡುತ್ತಿದ್ದಾರೆ. ಸರ್ಕಾರದಿಂದ‌ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ. ಎರಡು ತಿಂಗಳಿಂದ ಜನರು ಏನಾಗುತ್ತದೆ ಅಂತ‌ ಕಾದು ಕಾದು ರೋಸಿಹೋಗಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದೇ ವಿಶ್ವಾಸಮತ ಯಾಚಿಸುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ಕೆಐಎಎಲ್ ನಲ್ಲಿ ಮಾತನಾಡಿದ ಅವರು, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಇಂದು ಬಹುಮತ ಸಾಬೀತುಮಾಡುತ್ತೇವೆ ಕಾಲಾವಕಾಶ ನೀಡಿ ಎಂದಿದ್ದರು. ಅದೇ ರೀತಿ ಸಿಎಂ ಕುಮಾರಸ್ವಾಮಿ ಕೂಡ ಇಂದು ಸದನಕ್ಕೆ ಬಂದಿದ್ದಾರೆ. ಇದರಿಂದಾಗಿ ಇಂದು ಸದನ ಮುಗಿಯುವುದರೊಳಗೆ ವಿಶ್ವಾಸಮತ ಯಾಚಿಸುವ ನಂಬಿಕೆ ಇದೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ

ಅಲ್ಲದೆ, ಇಂದು ಮತಯಾಚನೆಗೆ ಸ್ಪೀಕರ್ ಅವಕಾಶ ಮಾಡಿಕೊಡುತ್ತಾರೆ. ಬಹುಮತ ಕಳೆದುಕೊಂಡ ಮೇಲೆ ಸಿಎಂ ರಾಜೀನಾಮೆ ಕೊಡಬೇಕಿತ್ತು. ಬಹುಮತ ಇಲ್ಲದಿದ್ದರೂ ಯಾಕೆ ಕುರ್ಚಿಗೆ ಆಂಟಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಸಿಎಂ ಹೇಳಿದ ಹಾಗೆ ಇಂದು‌ ನಡೆದುಕೊಳ್ತಾರೆ ಎಂಬ ವಿಶ್ವಾಸ ನಮ್ಮದು ಎಂದು ಸಂಸದೆ ಶೋಭಾ ಹೇಳಿದರು.

ರಾಜ್ಯದ ಜನ ಸಹ ಇದನ್ನೆಲ್ಲಾ ನೋಡುತ್ತಿದ್ದಾರೆ. ಸರ್ಕಾರದಿಂದ‌ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ. ಎರಡು ತಿಂಗಳಿಂದ ಜನರು ಏನಾಗುತ್ತದೆ ಅಂತ‌ ಕಾದು ಕಾದು ರೋಸಿಹೋಗಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Intro:KN_BNG_03_22_Shobha_Ambarish_7203301
Slug: ಇಂದು‌ ವಿಶ್ವಾಸಮತ ಯಾಚನೆ ಮಾಡುವ ವಿಶ್ವಾಸ ಇದೆ :ಶೋಭಾ ಕರಂದ್ಲಾಜೆ

ಬೆಂಗಳೂರು: ಇಂದು‌ ವಿಶ್ವಾಸಮತ ಯಾಚನೆ ಮಾಡುವ ವಿಶ್ವಾಸ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ರು..

ಕೆಐಎಎಲ್ ನಲ್ಲಿ ಮಾತನಾಡಿದ ಅವರು, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಇಂದು ಬಹುಮತ ಸಾಬೀತು ಮಾಡುತ್ತೇವೆ ಕಾಲಾವಕಾಶ ನೀಡಿ ಎಂದಿದ್ದರು, ಅದೇ ರೀತಿ ಸಿಎಂ ಕುಮಾರಸ್ವಾಮಿ ಅವರು ಕೂಡ ಇಂದು ಸದನಕ್ಕೆ ಬಂದಿದ್ದಾರೆ ಇದರಿಂದ ಇಂದು ಸದನ ಮುಗಿಯುವ ಒಳಗೆ ಮತಯಾಚನೆ ಮಾಡುವ ವಿಸ್ವಾಸ ಇದೆ ಎಂದರು..

ಈ ದಿನದ ಓಳಗೆ ಮತಯಾಚನೆಗೆ ಸ್ಪೀಕರ್ ಅವಕಾಶ ಮಾಡಿಕೊಡ್ತಾರೆ. ಬಹುಮತ ಕಳ್ಕೊಂಡ ಮೇಲೆ ಸಿಎಂ ರಾಜೀನಾಮೆ ಕೊಡಬೇಕಿತ್ತು. ಬಹುಮತ ಇಲ್ಲಿದಿದ್ರೂ ಯಾಕೆ ಕುರ್ಚಿಗೆ ಆಂಟಿಕೊಂಡಿದ್ದಾರೋ ಗೊತ್ತಿಲ್ಲ. ಆದ್ರೆ ಸಿಎಂ ಹೇಳಿದ ಹಾಗೆ ಇಂದು‌ ನಡೆದುಕೊಳ್ತಾರೆ ಎಂಬ ವಿಶ್ವಾಸ ನಮ್ಮದು. ರಾಜ್ಯದ ಜನ ಸಹ ಇದನ್ನ ನೋಡ್ತಿದ್ದಾರೆ ಸರ್ಕಾರದಿಂದ‌ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ. ಎರಡು ತಿಂಗಳಿಂದ ಜನರು ಏನಾಗುತ್ತದೆ ಅಂತ‌ ಕಾದು ಕಾದು ರೋಸಿಹೋಗಿದ್ದಾರೆ ಎಂದರು..

Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.