ETV Bharat / state

ದೈಹಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದ ಸ್ನೇಹಿತ: ಬರ್ಬರವಾಗಿ ಕೊಂದು ರೈಲು ಹಳಿ ಮೇಲೆ ಹಾಕಿದ ಗೆಳೆಯರು ! - ಲೈಂಗಿಕ ದಾಹ ತೀರಿಸಿಕೊಳ್ಳಲು ಯುವತಿಯರನ್ನು‌ ಕರೆ ತರುವಂತೆ ಪೀಡಿಸುತ್ತಿದ್ದ

ಮೃತ ಅಪ್ರೋಜ್ ಇವರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಮೂಲಕ ಸಲಿಂಗಕಾಮಿಯಾಗಿದ್ದನಂತೆ. ಆರೋಪಿಗಳ ಪೈಕಿ ಮೊಹಮ್ಮದ್ ಸಿದ್ದಿಕ್​ಗೆ ಪರಿಚಯವಾಗಿದ್ದ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಬೇಕು ತನ್ನ ಬಳಿ ಕರೆತರುವಂತೆ ಅಪ್ರೋಜ್ ಪೀಡಿಸುತ್ತಿದ್ದನಂತೆ.‌

Three boys killed his friend in bangalore
ದೈಹಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದ ಸ್ನೇಹಿತ
author img

By

Published : Jan 13, 2021, 11:47 PM IST

ಬೆಂಗಳೂರು: ಲೈಂಗಿಕ ದಾಹ ತೀರಿಸಿಕೊಳ್ಳಲು ಯುವತಿಯರನ್ನು‌ ಕರೆ ತರುವಂತೆ ಪೀಡಿಸುತ್ತಿದ್ದ ಯುವಕನನ್ನು ಗೆಳೆಯರೇ ಕೊಂದು ರೈಲು ಹಳಿ ಮೇಲೆ ಬಿಸಾಕಿ ಹೋಗಿದ್ದಾರೆ. ಘಟನೆ ಸಬಂಧ ಮೂವರು ಆರೋಪಿಗಳನ್ನು ಬೆಂಗಳೂರು ನಗರ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.‌

ಪಾದರಾಯನಪುರ ನಿವಾಸಿಗಳಾದ ಮಹಮ್ಮದ್ ಸಿದ್ಧಿಕ್ (26) ಮುಬಾರಕ್ ಪಾಶಾ (21) ಹಾಗೂ ಖಲೀಲ್ ಅಹಮದ್(23) ಬಂಧಿತರು. ಮೊಹಮ್ಮದ್ ಅಪ್ರೋಜ್ ಮೃತಪಟ್ಟವ.

ಜನವರಿ 6ರಂದು ಮೊಹಮ್ಮದ್ ಅಪ್ರೋಜ್ ಶವ ನಾಯಂಡಹಳ್ಳಿ-ಮೆಜೆಸ್ಟಿಕ್ ನಡುವಿನ ರೈಲ್ವೇ ಮಾರ್ಗದಲ್ಲಿ ಪತ್ತೆಯಾಗಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ಡೌಡಾಯಿಸಿ ಪರಿಶೀಲನೆ ನಡೆಸಿದ ಪೊಲೀಸರು ಅನುಮಾನಸ್ಪಾದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು‌. ಪ್ರಾಥಮಿಕ ತನಿಖೆಯಲ್ಲಿ ಕೊಲೆ ಎಂದು ಅರಿತ ರೈಲ್ವೇ ಪೊಲೀಸರು ಇದಕ್ಕೆ ಪೂರಕವಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಲವಾದ ಆಯುಧದಿಂದ ಹೊಡೆದು ಹತ್ಯೆಗೈಯಲಾಗಿದೆ ಎಂಬ ವರದಿ ಬಂದಿತ್ತು.

ಆರೋಪಿತರ ಜಾಡು ಹಿಡಿದ ತನಿಖಾಧಿಕಾರಿಗಳಿಗೆ ಅಪ್ರೋಜ್ ಬಳಸುತ್ತಿದ್ದ ಮೊಬೈಲ್ ಕರೆ ವಿವರ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆಗೆ ಕಾರಣವೇನು ಗೊತ್ತಾ ?

ಮೊಬೈಲ್ ಕರೆ ಆಧರಿಸಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಮೃತ ಅಪ್ರೋಜ್ ಇವರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಮೂಲಕ ಸಲಿಂಗಕಾಮಿಯಾಗಿದ್ದನಂತೆ. ಆರೋಪಿಗಳ ಪೈಕಿ ಮೊಹಮ್ಮದ್ ಸಿದ್ದಿಕ್​ಗೆ ಪರಿಚಯವಾಗಿದ್ದ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಬೇಕು ತನ್ನ ಬಳಿ ಕರೆತರುವಂತೆ ಅಪ್ರೋಜ್ ಪೀಡಿಸುತ್ತಿದ್ದನಂತೆ.‌ ಈತನ‌ ಉಪಟಳ ಹೆಚ್ಚಾಗಿದ್ದಕ್ಕೆ ಹತ್ಯೆಗೆ ಸಂಚು ರೂಪಿಸಿ ಸಿದ್ದಿಕ್ ಹಾಗೂ ಸಹಚರರು ಉಪಾಯವಾಗಿ ಪಾದರಾಯನಪುರ ರೈಲ್ವೇ ಹಳಿ ಬಳಿ ಕರೆಯಿಸಿಕೊಂಡು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಪೊಲೀಸರಿಗೆ ಅನುಮಾನ ಬಾರದಿರಲು ರೈಲ್ವೇ ಟ್ರ್ಯಾಕ್​ನಲ್ಲಿ ಶವ ಬಿಸಾಡಿ ರೈಲು ಅಪಘಾತ ಎಂಬಂತೆ ಬಿಂಬಿಸಿದ್ದಾರೆ.

ಬೆಂಗಳೂರು: ಲೈಂಗಿಕ ದಾಹ ತೀರಿಸಿಕೊಳ್ಳಲು ಯುವತಿಯರನ್ನು‌ ಕರೆ ತರುವಂತೆ ಪೀಡಿಸುತ್ತಿದ್ದ ಯುವಕನನ್ನು ಗೆಳೆಯರೇ ಕೊಂದು ರೈಲು ಹಳಿ ಮೇಲೆ ಬಿಸಾಕಿ ಹೋಗಿದ್ದಾರೆ. ಘಟನೆ ಸಬಂಧ ಮೂವರು ಆರೋಪಿಗಳನ್ನು ಬೆಂಗಳೂರು ನಗರ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.‌

ಪಾದರಾಯನಪುರ ನಿವಾಸಿಗಳಾದ ಮಹಮ್ಮದ್ ಸಿದ್ಧಿಕ್ (26) ಮುಬಾರಕ್ ಪಾಶಾ (21) ಹಾಗೂ ಖಲೀಲ್ ಅಹಮದ್(23) ಬಂಧಿತರು. ಮೊಹಮ್ಮದ್ ಅಪ್ರೋಜ್ ಮೃತಪಟ್ಟವ.

ಜನವರಿ 6ರಂದು ಮೊಹಮ್ಮದ್ ಅಪ್ರೋಜ್ ಶವ ನಾಯಂಡಹಳ್ಳಿ-ಮೆಜೆಸ್ಟಿಕ್ ನಡುವಿನ ರೈಲ್ವೇ ಮಾರ್ಗದಲ್ಲಿ ಪತ್ತೆಯಾಗಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ಡೌಡಾಯಿಸಿ ಪರಿಶೀಲನೆ ನಡೆಸಿದ ಪೊಲೀಸರು ಅನುಮಾನಸ್ಪಾದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು‌. ಪ್ರಾಥಮಿಕ ತನಿಖೆಯಲ್ಲಿ ಕೊಲೆ ಎಂದು ಅರಿತ ರೈಲ್ವೇ ಪೊಲೀಸರು ಇದಕ್ಕೆ ಪೂರಕವಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಲವಾದ ಆಯುಧದಿಂದ ಹೊಡೆದು ಹತ್ಯೆಗೈಯಲಾಗಿದೆ ಎಂಬ ವರದಿ ಬಂದಿತ್ತು.

ಆರೋಪಿತರ ಜಾಡು ಹಿಡಿದ ತನಿಖಾಧಿಕಾರಿಗಳಿಗೆ ಅಪ್ರೋಜ್ ಬಳಸುತ್ತಿದ್ದ ಮೊಬೈಲ್ ಕರೆ ವಿವರ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆಗೆ ಕಾರಣವೇನು ಗೊತ್ತಾ ?

ಮೊಬೈಲ್ ಕರೆ ಆಧರಿಸಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಮೃತ ಅಪ್ರೋಜ್ ಇವರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಮೂಲಕ ಸಲಿಂಗಕಾಮಿಯಾಗಿದ್ದನಂತೆ. ಆರೋಪಿಗಳ ಪೈಕಿ ಮೊಹಮ್ಮದ್ ಸಿದ್ದಿಕ್​ಗೆ ಪರಿಚಯವಾಗಿದ್ದ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಬೇಕು ತನ್ನ ಬಳಿ ಕರೆತರುವಂತೆ ಅಪ್ರೋಜ್ ಪೀಡಿಸುತ್ತಿದ್ದನಂತೆ.‌ ಈತನ‌ ಉಪಟಳ ಹೆಚ್ಚಾಗಿದ್ದಕ್ಕೆ ಹತ್ಯೆಗೆ ಸಂಚು ರೂಪಿಸಿ ಸಿದ್ದಿಕ್ ಹಾಗೂ ಸಹಚರರು ಉಪಾಯವಾಗಿ ಪಾದರಾಯನಪುರ ರೈಲ್ವೇ ಹಳಿ ಬಳಿ ಕರೆಯಿಸಿಕೊಂಡು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಪೊಲೀಸರಿಗೆ ಅನುಮಾನ ಬಾರದಿರಲು ರೈಲ್ವೇ ಟ್ರ್ಯಾಕ್​ನಲ್ಲಿ ಶವ ಬಿಸಾಡಿ ರೈಲು ಅಪಘಾತ ಎಂಬಂತೆ ಬಿಂಬಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.