ETV Bharat / state

ಸಾಲಗಾರರ ಕಾಟದಿಂದ ಸರಗಳ್ಳತನಕ್ಕೆ ಇಳಿದಿದ್ದ ಎಂಬಿಎ ಪದವೀಧರ: ಬಂಧನ

author img

By

Published : Jul 31, 2021, 5:47 PM IST

35,000 ಸಾಲ ಮಾಡಿದ್ದ ಈ ಸಾಲ ತಿರಿಸಲು ಈ ಆಸಾಮಿ ಸರಗಳ್ಳತನಕ್ಕೆ ಇಳಿದಿದ್ದ. ಜಯನಗರದ ಪೂರ್ಣಿಮಾ ಕನ್ವೆನ್ಷನ್ ಹಾಲ್‌ನಿಂದ ಬರ್ತಿದ್ದ ಮಹಿಳೆಯ ಸರ ಎಗರಿಸಿದ್ದ. ಈ ಕಳ್ಳತನದಲ್ಲಿ ಜಯನಗರ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಎಂಬಿಎ ಪದವೀಧರನ ಬಂಧನ
ಎಂಬಿಎ ಪದವೀಧರನ ಬಂಧನ

ಬೆಂಗಳೂರು: ಕಳೆದ ವರ್ಷದಿಂದ ಇಡೀ ಜಗತ್ತಿಗೆ ವಕ್ಕರಿಸಿದ ಕೊರೊನಾದಿಂದ ಹಲವಾರು ರೀತಿಯಲ್ಲಿ ನಷ್ಟಗಳನ್ನ ಜನರು ಅನುಭವಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕ‌ ಸಂಕಷ್ಟ ಎದುರಾಗಿದ್ದು, ಅನೇಕ‌ ಜನರು ಕೆಲಸ ಕಳೆದುಕೊಂಡಿದ್ದರು. ಕೆಲಸ‌ ಕಳೆದುಕೊಂಡ ವಿದ್ಯಾವಂತರು ಕೂಡ ಅಡ್ದ ದಾರಿ ಹಿಡಿದು ಕಂಬಿ ಹಿಂದೆ ಸರಿಯುತ್ತಿದ್ದಾರೆ.

ಇಲ್ಲೊಬ್ಬ ಯುವಕ ಎಂಬಿಎ ಪಧವೀದರನಾದರೂ ಕೆಲಸವಿಲ್ಲದ ಕಾರಣ ಸರಗಳ್ಳತನಕ್ಕೆ ಇಳಿದು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಶೇಖ್ ಗೌಸ್ ಬಾಷಾ ಬಂಧಿತ ಆರೋಪಿ. ಇತ ಖಾಸಗಿ ಕಂಪನಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ, ಆದರೆ, ಲಾಕ್​ಡೌನ್​ ಎಫೆಕ್ಟ್​ನಿಂದ ಕೆಲಸ ಕಳೆದುಕೊಂಡಿದ್ದ.

35,000 ಸಾಲ ಮಾಡಿದ್ದ ಈ ಸಾಲ ತಿರಿಸಲು ಈ ಆಸಾಮಿ ಸರಗಳ್ಳತನಕ್ಕೆ ಇಳಿದಿದ್ದ. ಜಯನಗರದ ಪೂರ್ಣಿಮಾ ಕನ್ವೆನ್ಷನ್ ಹಾಲ್‌ನಿಂದ ಬರ್ತಿದ್ದ ಮಹಿಳೆಯ ಸರ ಎಗರಿಸಿದ್ದ. ಈ ಕಳ್ಳತನದಲ್ಲಿ ಜಯನಗರ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ವಿಚಾರಣೆ ವೇಳೆ ತಾನು MBA ಓದಿದ್ದು, ಸಾಲಗಾರರ ಕಿರುಕುಳ ಹೆಚ್ಚಾಗಿ ಸರಗಳ್ಳತನಕ್ಕೆ ಮುಂದಾಗಿದ್ದೇನೆ ಎಂದು ಪೊಲೀಸರ ಎದುರು ತನ್ನ ಅಳಲು‌ ತೋಡಿಕೊಂಡಿದ್ದಾನೆ.

ಇದನ್ನೂ ಓದಿ : Watch: ಚಲಿಸುತ್ತಿದ್ದ ರೈಲು ಏರುವಾಗ ಕೆಳಗೆ ಬಿದ್ದ ಮಹಿಳೆ..ಆಪತ್ಬಾಂಧವನಾಗಿ ಬಂದು ರಕ್ಷಿಸಿದ ಕಾನ್ಸ್​ಟೇಬಲ್

ಬೆಂಗಳೂರು: ಕಳೆದ ವರ್ಷದಿಂದ ಇಡೀ ಜಗತ್ತಿಗೆ ವಕ್ಕರಿಸಿದ ಕೊರೊನಾದಿಂದ ಹಲವಾರು ರೀತಿಯಲ್ಲಿ ನಷ್ಟಗಳನ್ನ ಜನರು ಅನುಭವಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕ‌ ಸಂಕಷ್ಟ ಎದುರಾಗಿದ್ದು, ಅನೇಕ‌ ಜನರು ಕೆಲಸ ಕಳೆದುಕೊಂಡಿದ್ದರು. ಕೆಲಸ‌ ಕಳೆದುಕೊಂಡ ವಿದ್ಯಾವಂತರು ಕೂಡ ಅಡ್ದ ದಾರಿ ಹಿಡಿದು ಕಂಬಿ ಹಿಂದೆ ಸರಿಯುತ್ತಿದ್ದಾರೆ.

ಇಲ್ಲೊಬ್ಬ ಯುವಕ ಎಂಬಿಎ ಪಧವೀದರನಾದರೂ ಕೆಲಸವಿಲ್ಲದ ಕಾರಣ ಸರಗಳ್ಳತನಕ್ಕೆ ಇಳಿದು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಶೇಖ್ ಗೌಸ್ ಬಾಷಾ ಬಂಧಿತ ಆರೋಪಿ. ಇತ ಖಾಸಗಿ ಕಂಪನಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ, ಆದರೆ, ಲಾಕ್​ಡೌನ್​ ಎಫೆಕ್ಟ್​ನಿಂದ ಕೆಲಸ ಕಳೆದುಕೊಂಡಿದ್ದ.

35,000 ಸಾಲ ಮಾಡಿದ್ದ ಈ ಸಾಲ ತಿರಿಸಲು ಈ ಆಸಾಮಿ ಸರಗಳ್ಳತನಕ್ಕೆ ಇಳಿದಿದ್ದ. ಜಯನಗರದ ಪೂರ್ಣಿಮಾ ಕನ್ವೆನ್ಷನ್ ಹಾಲ್‌ನಿಂದ ಬರ್ತಿದ್ದ ಮಹಿಳೆಯ ಸರ ಎಗರಿಸಿದ್ದ. ಈ ಕಳ್ಳತನದಲ್ಲಿ ಜಯನಗರ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ವಿಚಾರಣೆ ವೇಳೆ ತಾನು MBA ಓದಿದ್ದು, ಸಾಲಗಾರರ ಕಿರುಕುಳ ಹೆಚ್ಚಾಗಿ ಸರಗಳ್ಳತನಕ್ಕೆ ಮುಂದಾಗಿದ್ದೇನೆ ಎಂದು ಪೊಲೀಸರ ಎದುರು ತನ್ನ ಅಳಲು‌ ತೋಡಿಕೊಂಡಿದ್ದಾನೆ.

ಇದನ್ನೂ ಓದಿ : Watch: ಚಲಿಸುತ್ತಿದ್ದ ರೈಲು ಏರುವಾಗ ಕೆಳಗೆ ಬಿದ್ದ ಮಹಿಳೆ..ಆಪತ್ಬಾಂಧವನಾಗಿ ಬಂದು ರಕ್ಷಿಸಿದ ಕಾನ್ಸ್​ಟೇಬಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.