ETV Bharat / state

ಶಿವಾನಂದ ವೃತ್ತದ ಜ್ಯುವೆಲ್ಲರಿಗೆ ನುಗ್ಗಿ ಚಿನ್ನಾಭರಣ ಎಗರಿಸಿದ ಖದೀಮರು - ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಚಿನ್ನಾಭರಣ ಎಗರಿಸಿದ ಖದೀಮರು

ಬೆಂಗಳೂರಿನ ಶಿವಾನಂದ ವೃತ್ತದ ಜ್ಯುವೆಲ್ಲರಿ ಅಂಗಡಿಯೊಂದಕ್ಕೆ ತಡರಾತ್ರಿ ಗ್ಯಾಸ್ ಕಟರ್​ ಮೂಲಕ ಶಟರ್​ ಮುರಿದು ಒಳ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.

Theft at a jewelery shop Bengaluru
ಶಿವಾನಂದ ವೃತ್ತದ ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನ
author img

By

Published : Jun 8, 2020, 1:46 PM IST

ಬೆಂಗಳೂರು : ನಗರದಲ್ಲಿ ಲಾಕ್​​​​​​ಡೌನ್ ಸಡಿಲಿಕೆ ಬೆನ್ನಲ್ಲೇ ಕಳ್ಳರ ಹಾವಳಿ ಶುರುವಾಗಿದ್ದು, ಶಿವಾನಂದ ವೃತ್ತದ ಚಿರಾಗ್ ಜ್ಯುವೆಲ್ಲರಿ ಶಾಪ್​ಗೆ ನುಗ್ಗಿದ ಖದೀಮರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ್ದಾರೆ.

ತಡರಾತ್ರಿ ಗ್ಯಾಸ್ ಕಟರ್​ ಮೂಲಕ ಶಟರ್​ ಮುರಿದು ಒಳ ನುಗ್ಗಿದ ಕಳ್ಳರು, ತಮ್ಮ ಕೈಚಳಕ ತೋರಿದ್ದಾರೆ. ಮುಂಜಾನೆ ಮಾಲೀಕ ಅಂಗಡಿ ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅಂಗಡಿ ಹೊರ ಭಾಗದ ಸಿಸಿ ಕ್ಯಾಮರಾದ ವೈರ್​ ಕತ್ತರಿಸಿ ಕೃತ್ಯ ಎಸಗಲಾಗಿದೆ.

ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಚಿನ್ನಾಭರಣ ಎಗರಿಸಿದ ಖದೀಮರು

ಕಳೆದ 15 ವರ್ಷಗಳಿಂದ ಗಂಜೇಂದ್ರ ಎಂಬುವವರು ಈ ಜ್ಯುವೆಲ್ಲರಿ ಅಂಗಡಿ ನಡೆಸುತ್ತಿದ್ದಾರೆ. ಖದೀಮರು ಬೆಳ್ಳಿ ಆಭರಣಗಳನ್ನು ಮುಟ್ಟದೇ ಕೇವಲ ಚಿನ್ನದ ಆಭರಣಗಳನ್ನು ಮಾತ್ರ ಕದ್ದೊಯ್ದಿದ್ದಾರೆ. ಈ ಬಗ್ಗೆ ಹೈ ಗ್ರೌಂಡ್ಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು : ನಗರದಲ್ಲಿ ಲಾಕ್​​​​​​ಡೌನ್ ಸಡಿಲಿಕೆ ಬೆನ್ನಲ್ಲೇ ಕಳ್ಳರ ಹಾವಳಿ ಶುರುವಾಗಿದ್ದು, ಶಿವಾನಂದ ವೃತ್ತದ ಚಿರಾಗ್ ಜ್ಯುವೆಲ್ಲರಿ ಶಾಪ್​ಗೆ ನುಗ್ಗಿದ ಖದೀಮರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ್ದಾರೆ.

ತಡರಾತ್ರಿ ಗ್ಯಾಸ್ ಕಟರ್​ ಮೂಲಕ ಶಟರ್​ ಮುರಿದು ಒಳ ನುಗ್ಗಿದ ಕಳ್ಳರು, ತಮ್ಮ ಕೈಚಳಕ ತೋರಿದ್ದಾರೆ. ಮುಂಜಾನೆ ಮಾಲೀಕ ಅಂಗಡಿ ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅಂಗಡಿ ಹೊರ ಭಾಗದ ಸಿಸಿ ಕ್ಯಾಮರಾದ ವೈರ್​ ಕತ್ತರಿಸಿ ಕೃತ್ಯ ಎಸಗಲಾಗಿದೆ.

ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಚಿನ್ನಾಭರಣ ಎಗರಿಸಿದ ಖದೀಮರು

ಕಳೆದ 15 ವರ್ಷಗಳಿಂದ ಗಂಜೇಂದ್ರ ಎಂಬುವವರು ಈ ಜ್ಯುವೆಲ್ಲರಿ ಅಂಗಡಿ ನಡೆಸುತ್ತಿದ್ದಾರೆ. ಖದೀಮರು ಬೆಳ್ಳಿ ಆಭರಣಗಳನ್ನು ಮುಟ್ಟದೇ ಕೇವಲ ಚಿನ್ನದ ಆಭರಣಗಳನ್ನು ಮಾತ್ರ ಕದ್ದೊಯ್ದಿದ್ದಾರೆ. ಈ ಬಗ್ಗೆ ಹೈ ಗ್ರೌಂಡ್ಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.