ETV Bharat / state

ರಾಜ್ಯ ಸರ್ಕಾರದ ನೌಕರರಿಗೆ ಸಿಹಿ ಸುದ್ದಿ... ಸಾರ್ವತ್ರಿಕ ವರ್ಗಾವಣೆ ಮಿತಿ ಹೆಚ್ಚಳ

author img

By

Published : Jun 20, 2019, 7:18 PM IST

ರಾಜ್ಯ ಸರ್ಕಾರದ ನೌಕರರ ಸಾರ್ವತ್ರಿಕ ವರ್ಗಾವಣೆ ಮಿತಿಯನ್ನು ಶೇ. 6ಕ್ಕೆ ಏರಿಸಿ ಮೈತ್ರಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ 2019-20ನೇ ಸಾಲಿನ ವರ್ಗಾವಣೆ ಮಿತಿಯನ್ನು 2 ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಇದೀಗ ಆರಕ್ಕೇರಿಸಿ ಮರು ಆದೇಶ ಪ್ರಕಟಿಸಿದೆ.

ಈ‌‌ ಬಾರಿ ಸಾರ್ವತ್ರಿಕ ವರ್ಗಾವಣೆ ಮಿತಿ ಶೇ.6ಕ್ಕೆ ಏರಿಕೆ

ಬೆಂಗಳೂರು: ಸರ್ಕಾರಿ ನೌಕಕರಿಗೆ ಸಿಹಿ ಸುದ್ದಿ ಸಿಕ್ಕಿದೆ. 2019-2020ನೇ ಸಾಲಿನ ವರ್ಗಾವಣೆ ಮಿತಿಯನ್ನು ಮೈತ್ರಿ ಸರ್ಕಾರ ಶೇ. 6 ಕ್ಕೆ ಏರಿಸಿ ಮರು ಆದೇಶ ಹೊರಡಿಸಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, 2019-20ನೇ ಸಾಲಿನಲ್ಲಿ ಸಂಬಂಧಿತ ವೃಂದದ ಸಂಖ್ಯಾಬಲದ ಶೇ. 6ರಷ್ಟು ಸೀಮಿತಗೊಳಿಸಿ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಿದೆ.

ಜೊತೆಗೆ 2019-20ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗಳನ್ನು ಜೂನ್ 30 ರೊಳಗೆ ಪೂರ್ಣಗೊಳಿಸುವಂತೆ ಆದೇಶ ನೀಡಿದೆ. ಈ ಮುಂಚೆ ವರ್ಗಾವಣೆ ಮಿತಿಯನ್ನು ಶೇ.2ಕ್ಕೆ‌ ಮಿತಿಗೊಳಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಎರಡು ಶೇ. ಮಿತಿ ಅಲ್ಪ ಪ್ರಮಾಣವಾಗಿರುವ ಹಿನ್ನೆಲೆ ಮರುಪರಿಶೀಲಿಸುವಂತೆ ಒತ್ತಡ ಬಂದಿತ್ತು. ಇದೀಗ ವರ್ಗಾವಣೆ ಮಿತಿಯನ್ನು ಶೇ. 6ಕ್ಕೆ ಏರಿಕೆಗೊಳಿಸಿ ಸರ್ಕಾರ ಮರು ಆದೇಶ ಹೊರಡಿಸಿದೆ.

ಕಳೆದ ವರ್ಷ ದೋಸ್ತಿ ಸರ್ಕಾರ ವರ್ಗಾವಣೆ ಮಿತಿಯನ್ನು ಶೇ. 4ಕ್ಕೆ ಮಿತಿಗೊಳಿಸಿತ್ತು. ಆದರೂ ಹಲವು ಇಲಾಖೆಗಳಲ್ಲಿ ತಮ್ಮ ಒಟ್ಟು ಸಿಬ್ಬಂದಿ ಸಂಖ್ಯಾ ಬಲದ ಶೇ.‌4ರ ಮಿತಿಯನ್ನು ಮೀರಿ ವರ್ಗಾವಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಸುತ್ತೋಲೆ ಹೊರಡಿಸಿ, ಶೇ.4ರ ಮಿತಿ‌ ಮೀರದಂತೆ ಸೂಚನೆ ನೀಡಿದ್ದರು.

ಈ ಬಾರಿ ದೋಸ್ತಿ ಸರ್ಕಾರ ವರ್ಗಾವಣೆ ಮಿತಿಯನ್ನು ಶೇ. 2 ರಿಂದ ಶೇ.6ಕ್ಕೆ ಏರಿಸಿ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದೆ.

ಬೆಂಗಳೂರು: ಸರ್ಕಾರಿ ನೌಕಕರಿಗೆ ಸಿಹಿ ಸುದ್ದಿ ಸಿಕ್ಕಿದೆ. 2019-2020ನೇ ಸಾಲಿನ ವರ್ಗಾವಣೆ ಮಿತಿಯನ್ನು ಮೈತ್ರಿ ಸರ್ಕಾರ ಶೇ. 6 ಕ್ಕೆ ಏರಿಸಿ ಮರು ಆದೇಶ ಹೊರಡಿಸಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, 2019-20ನೇ ಸಾಲಿನಲ್ಲಿ ಸಂಬಂಧಿತ ವೃಂದದ ಸಂಖ್ಯಾಬಲದ ಶೇ. 6ರಷ್ಟು ಸೀಮಿತಗೊಳಿಸಿ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಿದೆ.

ಜೊತೆಗೆ 2019-20ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗಳನ್ನು ಜೂನ್ 30 ರೊಳಗೆ ಪೂರ್ಣಗೊಳಿಸುವಂತೆ ಆದೇಶ ನೀಡಿದೆ. ಈ ಮುಂಚೆ ವರ್ಗಾವಣೆ ಮಿತಿಯನ್ನು ಶೇ.2ಕ್ಕೆ‌ ಮಿತಿಗೊಳಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಎರಡು ಶೇ. ಮಿತಿ ಅಲ್ಪ ಪ್ರಮಾಣವಾಗಿರುವ ಹಿನ್ನೆಲೆ ಮರುಪರಿಶೀಲಿಸುವಂತೆ ಒತ್ತಡ ಬಂದಿತ್ತು. ಇದೀಗ ವರ್ಗಾವಣೆ ಮಿತಿಯನ್ನು ಶೇ. 6ಕ್ಕೆ ಏರಿಕೆಗೊಳಿಸಿ ಸರ್ಕಾರ ಮರು ಆದೇಶ ಹೊರಡಿಸಿದೆ.

ಕಳೆದ ವರ್ಷ ದೋಸ್ತಿ ಸರ್ಕಾರ ವರ್ಗಾವಣೆ ಮಿತಿಯನ್ನು ಶೇ. 4ಕ್ಕೆ ಮಿತಿಗೊಳಿಸಿತ್ತು. ಆದರೂ ಹಲವು ಇಲಾಖೆಗಳಲ್ಲಿ ತಮ್ಮ ಒಟ್ಟು ಸಿಬ್ಬಂದಿ ಸಂಖ್ಯಾ ಬಲದ ಶೇ.‌4ರ ಮಿತಿಯನ್ನು ಮೀರಿ ವರ್ಗಾವಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಸುತ್ತೋಲೆ ಹೊರಡಿಸಿ, ಶೇ.4ರ ಮಿತಿ‌ ಮೀರದಂತೆ ಸೂಚನೆ ನೀಡಿದ್ದರು.

ಈ ಬಾರಿ ದೋಸ್ತಿ ಸರ್ಕಾರ ವರ್ಗಾವಣೆ ಮಿತಿಯನ್ನು ಶೇ. 2 ರಿಂದ ಶೇ.6ಕ್ಕೆ ಏರಿಸಿ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದೆ.

Intro:Transfer limitBody:KN_BNG_01_20_GENERALTRANSFER_LIMITRAISE_SCRIPT_VENKAT_7201951

ಈ‌‌ ಬಾರಿ ಸಾರ್ವತ್ರಿಕ ವರ್ಗಾವಣೆ ಮಿತಿ ಶೇ.6ಕ್ಕೆ ಏರಿಸಿ ಮೈತ್ರಿ ಸರ್ಕಾರ‌ ಮರು ಆದೇಶ

ಬೆಂಗಳೂರು: ಈ‌ ಮುಂಚೆ 2019-2020ನೇ ಸಾಲಿನ ವರ್ಗಾವಣೆ ಮಿತಿಯನ್ನು ಶೇ.2ಕ್ಕೆ ಸೀಮಿತಗೊಳಿಸಿ, ಆದೇಶ ಹೊರಡಿಸಿದ್ದ ಮೈತ್ರಿ ಸರ್ಕಾರ ಇದೀಗ ಆ‌ ಮಿತಿಯನ್ನು ಶೇ.6ಕ್ಕೆ ಏರಿಸಿ ಮರು ಆದೇಶ ಹೊರಡಿಸಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ , 2019-20ನೇ ಸಾಲಿನಲ್ಲಿ ಸಂಬಂಧಿತ ವೃಂದದ ಸಂಖ್ಯಾಬಲದ ಶೇ.6ರಷ್ಟು ಸೀಮಿತಗೊಳಿಸಿ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಿದೆ.

ಜತೆಗೆ 2019-20ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಗಳನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಸರ್ಕಾರ ಆದೇಶ ನೀಡಿದೆ. ಈ ಮುಂಚೆ ವರ್ಗಾವಣೆ ಮಿತಿಯನ್ನು ಶೇ.2ಕ್ಕೆ‌ ಮಿತಿಗೊಳಿಸಿ ಆದೇಶ ಹೊರಡಿಸಿತ್ತು. ಆದರೆ, ಎರಡು ಶೇ. ಮಿತಿ ಅಲ್ಪ ಪ್ರಮಾಣವಾಗಿರುವ ಹಿನ್ನೆಲೆ ಅದನ್ನು ಏರಿಸುವಂತೆ ಒತ್ತಡ ಬಂದಿತ್ತು. ಇದೀಗ ವರ್ಗಾವಣೆ ಮಿತಿಯನ್ನು ಆರು ಶೇ.ಗೆ ಏರಿಕೆ ಗೊಳಿಸಿ ಮರು ಆದೇಶ ಮಾಡಿದೆ.

ಕಳೆದ ವರ್ಷ ದೋಸ್ತಿ ಸರ್ಕಾರ ವರ್ಗಾವಣೆ ಮಿತಿಯನ್ನು ಶೇ. 4ಕ್ಕೆ ಮಿತಿಗೊಳಿಸಿತ್ತು. ಆದರೂ ಹಲವು ಇಲಾಖೆಗಳಲ್ಲಿ ತಮ್ಮ ಒಟ್ಟು ಸಿಬ್ಬಂದಿಗಳ ಸಂಖ್ಯಾ ಬಲದ ಶೇ.‌4ರ ಮಿತಿಯನ್ನು ಮೀರಿ ವರ್ಗಾವಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಎಲ್ಲ‌ ಇಲಾಖೆಗಳ ಕಾರ್ಯದರ್ಶಿಗಳಿಗೆ ಸುತ್ತೋಲೆ ಹೊರಡಿಸಿ, ಶೇ.4ರ ಮಿತಿ‌ ಮೀರದಂತೆ ಸೂಚನೆ ನೀಡಿದ್ದರು.

ಈ ಬಾರಿ ದೋಸ್ತಿ ಸರ್ಕಾರ ವರ್ಗಾವಣೆ ಮಿತಿಯನ್ನು ಶೇ.2ರಿಂದ ಶೇ.6ಕ್ಕೆ ಏರಿಸಿ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದ್ದಾರೆ.Conclusion:Venkat
ETV Bharat Logo

Copyright © 2024 Ushodaya Enterprises Pvt. Ltd., All Rights Reserved.