ETV Bharat / state

ಚಿಕನ್ ಫ್ರೈ ಸರಿಯಾಗಿ ಮಾಡಿಲ್ಲ ಎಂದು ಪತ್ನಿಗೆ ಮುಹೂರ್ತ ಇಟ್ಟ: 18 ದಿನಗಳ ನಂತರ ಅಸಲಿ ಕಹಾನಿಯೇ ಬೇರೆಯಾಗಿತ್ತು..! - Bangalore crime news

ಪತಿಯ ಕಿರುಕುಳ ತಾಳಲಾರದ ಪತ್ನಿ ಶಿರಿನ್ ಬಾನು ತನ್ನ ಪೋಷಕರ ಬಳಿ ವ್ಯಥೆ ತೋಡಿಕೊಂಡಿದ್ದಳು. ಇದಾದ ಬಳಿಕ ಹಿರಿಯರೆಲ್ಲರೂ ಸೇರಿ ದಂಪತಿ ನಡುವೆ ಸಂಧಾನ ಮಾಡಿ ಕೂಡಿ ಬಾಳುವಂತೆ ಬುದ್ಧಿ ಹೇಳಿದ್ದರು. ಆದರೆ, ಮುಬಾರಕ್ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ.

ಪತ್ನಿಯನ್ನ ಕೊಲೆ ಮಾಡಿದ ಪತಿ
ಪತ್ನಿಯನ್ನ ಕೊಲೆ ಮಾಡಿದ ಪತಿ
author img

By

Published : Aug 23, 2021, 10:40 PM IST

Updated : Aug 23, 2021, 11:08 PM IST

ಬೆಂಗಳೂರು : ರುಚಿಕಟ್ಟಾದ ಅಡುಗೆ ಮಾಡುವುದಿಲ್ಲ ಎಂದು ಪತ್ನಿಗೆ ದೊಣ್ಣೆಯಿಂದ ಹಲ್ಲೆ ಮಾಡಿ ಪತಿಯೇ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತರಬನಹಳ್ಳಿಯ ಪತ್ನಿ ಶಿರಿನ್ ಬಾನು (25) ಕೊಲೆಯಾದ ಮಹಿಳೆ. ಕೊಲೆ ಆರೋಪಿ ಮುಬಾರಕ್ (32)ನನ್ನು ಪೊಲೀಸರು ಬಂಧಿಸಿದ್ದಾರೆ.

ಅಡುಗೆ ವಿಷಯಕ್ಕೆ ಕ್ಯಾತೆ:

ದಂಪತಿ ಮೂಲತಃ ದಾವಣಗೆರೆಯವರಾಗಿದ್ದು, ಎರಡು ವರ್ಷಗಳ ಹಿಂದೆ ವಿವಾಹವಾದ ಬಳಿಕ ನಗರದ ಸೋಲದೇವನಹಳ್ಳಿಯ ತರಬನಹಳ್ಳಿಯಲ್ಲಿ ನೆಲೆಸಿದ್ದರು. ಮುಬಾರಕ್ ಹಾಸಿಗೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ. ಆದರೆ, ಅಡುಗೆ ವಿಷಯಕ್ಕೆ ಕ್ಯಾತೆ ತೆಗೆಯುತ್ತಿದ್ದ ಮುಬಾರಕ್ ಪತ್ನಿಗೆ ಮನಬಂದಂತೆ ಹಲ್ಲೆ ನಡೆಸುತ್ತಿದ್ದ.

ಪತಿಯ ಕಿರುಕುಳ ತಾಳಲಾರದ ಪತ್ನಿ ಶಿರಿನ್ ಬಾನು ತನ್ನ ಪೋಷಕರ ಬಳಿ ವ್ಯಥೆ ತೋಡಿಕೊಂಡಿದ್ದಳು. ಇದಾದ ಬಳಿಕ ಹಿರಿಯರೆಲ್ಲರೂ ಸೇರಿ ದಂಪತಿ ನಡುವೆ ಸಂಧಾನ ಮಾಡಿ ಕೂಡಿ ಬಾಳುವಂತೆ ಬುದ್ಧಿ ಹೇಳಿದ್ದರು. ಆದರೆ, ಮುಬಾರಕ್ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ.

ಮನೆ ಬಿಟ್ಟು ಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದ ಭೂಪ : ಇತ್ತೀಚಗೆ ಒಂದು ದಿನ ಚಿಕನ್ ಫ್ರೈ ಸರಿಯಾಗಿ ಮಾಡಿಲ್ಲ ಎಂದು ಸಿಟ್ಟಾಗಿ ಪತ್ನಿಗೆ ದೊಣ್ಣೆಯಿಂದ ಹೊಡೆದು ಕೊಂದಿದ್ದ. ಬಳಿಕ ಆಕೆಯ ಶವವನ್ನು ಮೂಟೆ ಕಟ್ಟಿ ಕೆರೆಗೆ ಎಸೆದು ಬಂದು ಏನೂ ಆಗಿಲ್ಲ ಎನ್ನುವಂತೆ ಇದ್ದ.

ಇನ್ನು ಶಿರಿನ್ ಬಾನು ಪೋಷಕರಿಗೆ ಅನುಮಾನ ಬಾರದಿರಲಿ ಎಂದು ಶಿರಿನ್ ಮನೆಬಿಟ್ಟು ಹೋಗಿದ್ದಾಳೆ ಎಂದು ತಿಳಿಸಿದ್ದ. 18 ದಿನಗಳು ಕಳೆದರೂ ಮಗಳು ಮನೆಗೆ ಬಾರದಿದ್ದ ಕಾರಣ ಅನುಮಾನಗೊಂಡ ಪೋಷಕರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ತಮ್ಮ ಅಳಿಯ ಮುಬಾರಕ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ವಿಚಾರಣೆಯಲ್ಲಿ ಬಾಯಿ ಬಿಟ್ಟ ಆರೋಪಿ : ತನಿಖೆ ಕೈಗೊಂಡ ಪೊಲೀಸರು ಮುಬಾರಕ್‍ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವ ಸತ್ಯ ಬಾಯಿಬಿಟ್ಟಿದ್ದಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮೈಸೂರು ಚಿನ್ನದ ಅಂಗಡಿಯಲ್ಲಿ ದರೋಡೆ ಯತ್ನ ಪ್ರಕರಣ.. ಸಿಸಿಟಿವಿಯಲ್ಲಿ ಕಳ್ಳರ ಚಾಣಾಕ್ಷತನ ಸೆರೆ..

ಬೆಂಗಳೂರು : ರುಚಿಕಟ್ಟಾದ ಅಡುಗೆ ಮಾಡುವುದಿಲ್ಲ ಎಂದು ಪತ್ನಿಗೆ ದೊಣ್ಣೆಯಿಂದ ಹಲ್ಲೆ ಮಾಡಿ ಪತಿಯೇ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತರಬನಹಳ್ಳಿಯ ಪತ್ನಿ ಶಿರಿನ್ ಬಾನು (25) ಕೊಲೆಯಾದ ಮಹಿಳೆ. ಕೊಲೆ ಆರೋಪಿ ಮುಬಾರಕ್ (32)ನನ್ನು ಪೊಲೀಸರು ಬಂಧಿಸಿದ್ದಾರೆ.

ಅಡುಗೆ ವಿಷಯಕ್ಕೆ ಕ್ಯಾತೆ:

ದಂಪತಿ ಮೂಲತಃ ದಾವಣಗೆರೆಯವರಾಗಿದ್ದು, ಎರಡು ವರ್ಷಗಳ ಹಿಂದೆ ವಿವಾಹವಾದ ಬಳಿಕ ನಗರದ ಸೋಲದೇವನಹಳ್ಳಿಯ ತರಬನಹಳ್ಳಿಯಲ್ಲಿ ನೆಲೆಸಿದ್ದರು. ಮುಬಾರಕ್ ಹಾಸಿಗೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ. ಆದರೆ, ಅಡುಗೆ ವಿಷಯಕ್ಕೆ ಕ್ಯಾತೆ ತೆಗೆಯುತ್ತಿದ್ದ ಮುಬಾರಕ್ ಪತ್ನಿಗೆ ಮನಬಂದಂತೆ ಹಲ್ಲೆ ನಡೆಸುತ್ತಿದ್ದ.

ಪತಿಯ ಕಿರುಕುಳ ತಾಳಲಾರದ ಪತ್ನಿ ಶಿರಿನ್ ಬಾನು ತನ್ನ ಪೋಷಕರ ಬಳಿ ವ್ಯಥೆ ತೋಡಿಕೊಂಡಿದ್ದಳು. ಇದಾದ ಬಳಿಕ ಹಿರಿಯರೆಲ್ಲರೂ ಸೇರಿ ದಂಪತಿ ನಡುವೆ ಸಂಧಾನ ಮಾಡಿ ಕೂಡಿ ಬಾಳುವಂತೆ ಬುದ್ಧಿ ಹೇಳಿದ್ದರು. ಆದರೆ, ಮುಬಾರಕ್ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ.

ಮನೆ ಬಿಟ್ಟು ಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದ ಭೂಪ : ಇತ್ತೀಚಗೆ ಒಂದು ದಿನ ಚಿಕನ್ ಫ್ರೈ ಸರಿಯಾಗಿ ಮಾಡಿಲ್ಲ ಎಂದು ಸಿಟ್ಟಾಗಿ ಪತ್ನಿಗೆ ದೊಣ್ಣೆಯಿಂದ ಹೊಡೆದು ಕೊಂದಿದ್ದ. ಬಳಿಕ ಆಕೆಯ ಶವವನ್ನು ಮೂಟೆ ಕಟ್ಟಿ ಕೆರೆಗೆ ಎಸೆದು ಬಂದು ಏನೂ ಆಗಿಲ್ಲ ಎನ್ನುವಂತೆ ಇದ್ದ.

ಇನ್ನು ಶಿರಿನ್ ಬಾನು ಪೋಷಕರಿಗೆ ಅನುಮಾನ ಬಾರದಿರಲಿ ಎಂದು ಶಿರಿನ್ ಮನೆಬಿಟ್ಟು ಹೋಗಿದ್ದಾಳೆ ಎಂದು ತಿಳಿಸಿದ್ದ. 18 ದಿನಗಳು ಕಳೆದರೂ ಮಗಳು ಮನೆಗೆ ಬಾರದಿದ್ದ ಕಾರಣ ಅನುಮಾನಗೊಂಡ ಪೋಷಕರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ತಮ್ಮ ಅಳಿಯ ಮುಬಾರಕ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ವಿಚಾರಣೆಯಲ್ಲಿ ಬಾಯಿ ಬಿಟ್ಟ ಆರೋಪಿ : ತನಿಖೆ ಕೈಗೊಂಡ ಪೊಲೀಸರು ಮುಬಾರಕ್‍ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವ ಸತ್ಯ ಬಾಯಿಬಿಟ್ಟಿದ್ದಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮೈಸೂರು ಚಿನ್ನದ ಅಂಗಡಿಯಲ್ಲಿ ದರೋಡೆ ಯತ್ನ ಪ್ರಕರಣ.. ಸಿಸಿಟಿವಿಯಲ್ಲಿ ಕಳ್ಳರ ಚಾಣಾಕ್ಷತನ ಸೆರೆ..

Last Updated : Aug 23, 2021, 11:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.