ETV Bharat / state

ಬೆಂಗಳೂರಲ್ಲಿ 3 ಅಂತಸ್ತಿನ ಕಟ್ಟಡದ ನೆಲ ಮಹಡಿ ಕುಸಿತ: ಓರ್ವ ಮಹಿಳೆಗೆ ಗಾಯ - ಪುಟ್ಟೇನಹಳ್ಳಿಯ ವಿವೇಕಾನಂದ ಕಾಲೋನಿ

ಬೆಂಗಳೂರಿನ ಜೆ.ಪಿ. ನಗರದ 7ನೇ ಹಂತದ ಪುಟ್ಟೇನಹಳ್ಳಿಯ ವಿವೇಕಾನಂದ ಕಾಲೋನಿ ಬಳಿ‌ ಮೂರು ಅಂತಸ್ತಿನ ಕಟ್ಟಡದ ನೆಲ ಅಂತಸ್ತು ಕುಸಿದು ಬಿದ್ದಿದೆ.

ಕಟ್ಡಡದ ನೆಲ ಅಂತಸ್ತು ಧರಾಶಾಹಿ
author img

By

Published : Sep 8, 2019, 9:43 PM IST

ಬೆಂಗಳೂರು: ನಗರದಲ್ಲಿ ಜೆ.ಪಿ. ನಗರದ 7ನೇ ಹಂತದಲ್ಲಿ ಮತ್ತೊಂದು ಕಟ್ಟಡ ಧರಾಶಾಹಿಯಾಗಿದೆ. ಈ ಘಟನೆ ಕಳೆದ ಒಂದು ಗಂಟೆ ಹಿಂದೆ ನಡೆದಿದೆ.

ಪುಟ್ಟೇನಹಳ್ಳಿಯ ವಿವೇಕಾನಂದ ಕಾಲೋನಿ ಬಳಿ‌ ಮೂರು ಅಂತಸ್ತಿನ ಕಟ್ಟಡದ ನೆಲ ಅಂತಸ್ತು ಕುಸಿದು ಬಿದ್ದಿದೆ. ಕಟ್ಟಡದ ಮೊದಲ ಎರಡು ಅಂತಸ್ತಿನಲ್ಲಿ ಮನೆಗಳಿದ್ದರೆ, ಕೆಳ ಮಹಡಿಯಲ್ಲಿ ಅಂಗಡಿಗಳಿದ್ದವು. ಕಟ್ಟಡ ಬೀಳುತ್ತಿದ್ದಂತೆಯೇ ಜನರು ಅಂಗಡಿಯಿಂದ ಹೊರ ಓಡಿ ಬಂದಿದ್ದಾರೆ.

ಕಟ್ಟಡದ ನೆಲ ಅಂತಸ್ತು ಕುಸಿತ

ಈ ಕಟ್ಟಡವನ್ನು 30 ವರ್ಷದ ಹಿಂದೆ ನಿರ್ಮಾಣ ಮಾಡಲಾಗಿತ್ತು. ಮಣ್ಣಿನಿಂದ ಮೊದಲೆರಡು ಮಹಡಿ ನಿರ್ಮಾಣ ಮಾಡಲಾಗಿದೆ. ಮಳೆ ನೀರಿಗೆ ಮೊದಲೆರಡು ಮಹಡಿ ಸಂಪೂರ್ಣವಾಗಿ ಶಿಥಿಲವಾಗಿದ್ದವು. ಏಳೆಂಟು ವರ್ಷದಿಂದಲೇ ಕಟ್ಟಡ ಬೀಳುವ ಹಂತದಲ್ಲಿದ್ರೂ ಒಂದು ವರ್ಷದ ಹಿಂದೆ ಮೂರನೇ ಮಹಡಿಯನ್ನು ನಿರ್ಮಿಸಲಾಗಿತ್ತು ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೂಡಲೇ 2 ಅಗ್ನಿಶಾಮಕ ವಾಹನ, 30ಕ್ಕೂ ಹೆಚ್ಚು ಸಿಬ್ಬಂದಿ, ಐದು ಜನ ಅಧಿಕಾರಿಗಳು ಬಂದಿದ್ದಾರೆ. ಇನ್ನು ಬಿಬಿಎಂಪಿಯಿಂದ ಕಟ್ಟಡ ತೆರೆವಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು: ನಗರದಲ್ಲಿ ಜೆ.ಪಿ. ನಗರದ 7ನೇ ಹಂತದಲ್ಲಿ ಮತ್ತೊಂದು ಕಟ್ಟಡ ಧರಾಶಾಹಿಯಾಗಿದೆ. ಈ ಘಟನೆ ಕಳೆದ ಒಂದು ಗಂಟೆ ಹಿಂದೆ ನಡೆದಿದೆ.

ಪುಟ್ಟೇನಹಳ್ಳಿಯ ವಿವೇಕಾನಂದ ಕಾಲೋನಿ ಬಳಿ‌ ಮೂರು ಅಂತಸ್ತಿನ ಕಟ್ಟಡದ ನೆಲ ಅಂತಸ್ತು ಕುಸಿದು ಬಿದ್ದಿದೆ. ಕಟ್ಟಡದ ಮೊದಲ ಎರಡು ಅಂತಸ್ತಿನಲ್ಲಿ ಮನೆಗಳಿದ್ದರೆ, ಕೆಳ ಮಹಡಿಯಲ್ಲಿ ಅಂಗಡಿಗಳಿದ್ದವು. ಕಟ್ಟಡ ಬೀಳುತ್ತಿದ್ದಂತೆಯೇ ಜನರು ಅಂಗಡಿಯಿಂದ ಹೊರ ಓಡಿ ಬಂದಿದ್ದಾರೆ.

ಕಟ್ಟಡದ ನೆಲ ಅಂತಸ್ತು ಕುಸಿತ

ಈ ಕಟ್ಟಡವನ್ನು 30 ವರ್ಷದ ಹಿಂದೆ ನಿರ್ಮಾಣ ಮಾಡಲಾಗಿತ್ತು. ಮಣ್ಣಿನಿಂದ ಮೊದಲೆರಡು ಮಹಡಿ ನಿರ್ಮಾಣ ಮಾಡಲಾಗಿದೆ. ಮಳೆ ನೀರಿಗೆ ಮೊದಲೆರಡು ಮಹಡಿ ಸಂಪೂರ್ಣವಾಗಿ ಶಿಥಿಲವಾಗಿದ್ದವು. ಏಳೆಂಟು ವರ್ಷದಿಂದಲೇ ಕಟ್ಟಡ ಬೀಳುವ ಹಂತದಲ್ಲಿದ್ರೂ ಒಂದು ವರ್ಷದ ಹಿಂದೆ ಮೂರನೇ ಮಹಡಿಯನ್ನು ನಿರ್ಮಿಸಲಾಗಿತ್ತು ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೂಡಲೇ 2 ಅಗ್ನಿಶಾಮಕ ವಾಹನ, 30ಕ್ಕೂ ಹೆಚ್ಚು ಸಿಬ್ಬಂದಿ, ಐದು ಜನ ಅಧಿಕಾರಿಗಳು ಬಂದಿದ್ದಾರೆ. ಇನ್ನು ಬಿಬಿಎಂಪಿಯಿಂದ ಕಟ್ಟಡ ತೆರೆವಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Intro:Body:ಕಟ್ಡಡದ ನೆಲ ಅಂತಸ್ತು ಧರೆಶಾಹಿ; ಮಹಿಳೆ ಸೇರಿ ಮೂವರು ಸಿಲುಕಿರುವ ಶಂಕೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕಟ್ಟಡ ಧರೆಶಾಹಿಯಾಗಿದೆ. ಜೆ.ಪಿ. ನಗರದ 7ನೇ ಹಂತದಲ್ಲಿ ಈ ಒಂದು ಘಂಟೆಹಳ ಹಿಂದೆ ಈ ದುರಂತ ಸಂಭವಿಸಿದೆ.
ಪುಟ್ಟೇನಹಳ್ಳಿಯ ವಿವೇಕಾನಂದ ಕಾಲೋನಿ ಬಳಿ‌ ಮೂರು ಅಂತಸ್ತಿನ ಕಟ್ಟಡದ ನೆಲ ಅಂತಸ್ತು ಉರುಳಿಬಿದ್ದಿದೆ.
ಕಟ್ಟಡ ಮೊದಲ ಎರಡು ಅಂತಸ್ತಿನಲ್ಲಿ ಮನೆಗಳಿದ್ದರೆ ಕೆಳ ಮಹಡಿಯಲ್ಲಿ ಅಂಗಡಿಗಳಿದ್ದವು. ಕೆಳ‌ಮಹಡಿಯು ಇದಕ್ಕಿಂದ್ದಂತೆ ಕುಸಿದಿದ್ದು ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಜೆ‌.ಪಿ.ನಗರ ಪೊಲೀಸರು ಸ್ಥಳಕ್ಕೆ ದೌಡಾಯಿದ್ದಾರೆ.
ಕಟ್ಟಡ ಕುಸಿತದಿಂದ ಪಕ್ಕದಲ್ಲೇ ಇದ್ದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದೆ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.