ETV Bharat / state

ಶೇ.50ರಷ್ಟು ಮಿತಿ ಆದೇಶ ಹಿಂಪಡೆಯುವಂತೆ ಚಿತ್ರರಂಗ ನಿಯೋಗದಿಂದ ಸಿಎಂಗೆ ಮನವಿ

author img

By

Published : Apr 3, 2021, 5:51 PM IST

ಈಗಾಗಲೇ ಲಾಕ್‌ಡೌನ್ ಹಿನ್ನೆಲೆ ಚಿತ್ರರಂಗ ನಷ್ಟ ಅನುಭವಿಸುತ್ತಿದೆ. ಇತ್ತೀಚೆಗಷ್ಟೇ ಚೇತರಿಕೆ ಕಾಣುತ್ತಿದೆ. ಈಗ ಏಕಾಏಕಿ ಶೇ.50ರಷ್ಟು ಮಿತಿ ಹೇರಿದರೆ ಚಿತ್ರರಂಗ ದೊಡ್ಡ ನಷ್ಟ ಅನುಭವಿಸಲಿದೆ..

The Film Commission has requested CM to withdraw the 50% limit
ಶೇ.50ರಷ್ಟು ಮಿತಿ ಆದೇಶ ಹಿಂಪಡೆಯುವಂತೆ ಚಿತ್ರರಂಗ ನಿಯೋಗದಿಂದ ಸಿಎಂಗೆ ಮನವಿ

ಬೆಂಗಳೂರು : ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಿತಿ ಹೇರಿ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಕೋರಿ ಫಿಲ್ಮ್ ಚೇಂಬರ್ ನಿಯೋಗ ಸಿಎಂಗೆ ಮನವಿ ಸಲ್ಲಿಸಿದೆ. ಸಿಎಂ ಬಿಎಸ್​ವೈ ಭೇಟಿ‌ ಮಾಡಿದ ಚಿತ್ರರಂಗದ ನಿಯೋಗ, ಥಿಯೇಟರ್​​ಗಳಲ್ಲಿ ಪೂರ್ಣ ಪ್ರಮಾಣದ ಪ್ರೇಕ್ಷಕರ ಭರ್ತಿಗೆ ಮನವಿ ಮಾಡಿತು.

ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ನೇತೃತ್ವದ ನಿಯೋಗ ಸಿಎಂರನ್ನು ಭೇಟಿ ಮಾಡಿ ಶೇ.50ರಷ್ಟು ಮಾತ್ರ ಅವಕಾಶ ನೀಡಿದರೆ ನಿರ್ಮಾಪಕರಿಗೆ ನಷ್ಟವಾಗಲಿದೆ. ಹೀಗಾಗಿ, ಪೂರ್ಣ ಪ್ರಮಾಣದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಈಗಾಗಲೇ ಲಾಕ್‌ಡೌನ್ ಹಿನ್ನೆಲೆ ಚಿತ್ರರಂಗ ನಷ್ಟ ಅನುಭವಿಸುತ್ತಿದೆ. ಇತ್ತೀಚೆಗಷ್ಟೇ ಚೇತರಿಕೆ ಕಾಣುತ್ತಿದೆ. ಈಗ ಏಕಾಏಕಿ ಶೇ.50ರಷ್ಟು ಮಿತಿ ಹೇರಿದರೆ ಚಿತ್ರರಂಗ ದೊಡ್ಡ ನಷ್ಟ ಅನುಭವಿಸಲಿದೆ. ಹೀಗಾಗಿ, ಈ ಆದೇಶವನ್ನು ಹಿಂಪಡೆಯುವಂತೆ ಸಿಎಂಗೆ ಮನವಿ ಮಾಡಿದರು.

ಇದನ್ನೂ ಓದಿ: ಮೊದಲೇ ಶೇ.50ರಷ್ಟು ಮಾತ್ರ ಅವಕಾಶ ಎಂದಿದ್ರೆ ಯುವರತ್ನ ರಿಲೀಸ್​ ಆಗ್ತಿರಲಿಲ್ಲ : ಜಯರಾಜ್

ಬೆಂಗಳೂರು : ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಿತಿ ಹೇರಿ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಕೋರಿ ಫಿಲ್ಮ್ ಚೇಂಬರ್ ನಿಯೋಗ ಸಿಎಂಗೆ ಮನವಿ ಸಲ್ಲಿಸಿದೆ. ಸಿಎಂ ಬಿಎಸ್​ವೈ ಭೇಟಿ‌ ಮಾಡಿದ ಚಿತ್ರರಂಗದ ನಿಯೋಗ, ಥಿಯೇಟರ್​​ಗಳಲ್ಲಿ ಪೂರ್ಣ ಪ್ರಮಾಣದ ಪ್ರೇಕ್ಷಕರ ಭರ್ತಿಗೆ ಮನವಿ ಮಾಡಿತು.

ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ನೇತೃತ್ವದ ನಿಯೋಗ ಸಿಎಂರನ್ನು ಭೇಟಿ ಮಾಡಿ ಶೇ.50ರಷ್ಟು ಮಾತ್ರ ಅವಕಾಶ ನೀಡಿದರೆ ನಿರ್ಮಾಪಕರಿಗೆ ನಷ್ಟವಾಗಲಿದೆ. ಹೀಗಾಗಿ, ಪೂರ್ಣ ಪ್ರಮಾಣದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಈಗಾಗಲೇ ಲಾಕ್‌ಡೌನ್ ಹಿನ್ನೆಲೆ ಚಿತ್ರರಂಗ ನಷ್ಟ ಅನುಭವಿಸುತ್ತಿದೆ. ಇತ್ತೀಚೆಗಷ್ಟೇ ಚೇತರಿಕೆ ಕಾಣುತ್ತಿದೆ. ಈಗ ಏಕಾಏಕಿ ಶೇ.50ರಷ್ಟು ಮಿತಿ ಹೇರಿದರೆ ಚಿತ್ರರಂಗ ದೊಡ್ಡ ನಷ್ಟ ಅನುಭವಿಸಲಿದೆ. ಹೀಗಾಗಿ, ಈ ಆದೇಶವನ್ನು ಹಿಂಪಡೆಯುವಂತೆ ಸಿಎಂಗೆ ಮನವಿ ಮಾಡಿದರು.

ಇದನ್ನೂ ಓದಿ: ಮೊದಲೇ ಶೇ.50ರಷ್ಟು ಮಾತ್ರ ಅವಕಾಶ ಎಂದಿದ್ರೆ ಯುವರತ್ನ ರಿಲೀಸ್​ ಆಗ್ತಿರಲಿಲ್ಲ : ಜಯರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.