ETV Bharat / state

ಬೆಂಗಳೂರು : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ‌ ಬರ್ಬರ ಹತ್ಯೆ.. - Youth killed in Bangalore's Viruswamy layout

ಹೊರಗಡೆ ಹೊರಟಾಗ ಆತನ ಬೈಕ್ ಹಿಂಬಾಲಿಸಿ ಬಂದ ಹಂತಕರು ಚಾಕುವಿನಿಂದ ಇರಿದು ರಾಜೇಶ್​ನನ್ನು ಕೊಲೆಗೈದಿದ್ದಾರೆ. ಬಳಿಕ‌ ಅಲ್ಲಿಂದ ತಲೆಮರೆಸಿಕೊಂಡಿದ್ದಾರೆ..

Terrifying murder of youth in Bengaluru
ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ‌ ಬರ್ಬರ ಹತ್ಯೆ...
author img

By

Published : Sep 20, 2020, 9:33 PM IST

ಬೆಂಗಳೂರು : ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ವೀರಸ್ವಾಮಿ ಲೇಔಟ್‌ನಲ್ಲಿ ನಡೆದಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ‌ ಬರ್ಬರ ಹತ್ಯೆ..

35 ವರ್ಷದ ರಾಜೇಶ್ ಎಂಬಾತ ಕೊಲೆಯಾದವರು ಎಂದು ತಿಳಿದು ಬಂದಿದೆ. ಹೆಚ್ಎ‌ಎಲ್‌ನಲ್ಲಿ‌ ಕೆಲಸ ಮಾಡುತ್ತಿದ್ದ ರಾಜೇಶ್ ಇಂದು ರಜೆಯಿದ್ದ ಹಿನ್ನೆಲೆ ಮನೆಯಲ್ಲೇ‌ ಉಳಿದುಕೊಂಡಿದ್ದರು. ಹೊರಗಡೆ ಹೊರಟಾಗ ಆತನ ಬೈಕ್ ಹಿಂಬಾಲಿಸಿ ಬಂದ ಹಂತಕರು ಚಾಕುವಿನಿಂದ ಇರಿದು ರಾಜೇಶ್​ನನ್ನು ಕೊಲೆಗೈದಿದ್ದಾರೆ. ಬಳಿಕ‌ ಅಲ್ಲಿಂದ ತಲೆಮರೆಸಿಕೊಂಡಿದ್ದಾರೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕಾಗಮಿಸಿದ ಕಾಡುಗೋಡಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.

ಬೆಂಗಳೂರು : ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ವೀರಸ್ವಾಮಿ ಲೇಔಟ್‌ನಲ್ಲಿ ನಡೆದಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ‌ ಬರ್ಬರ ಹತ್ಯೆ..

35 ವರ್ಷದ ರಾಜೇಶ್ ಎಂಬಾತ ಕೊಲೆಯಾದವರು ಎಂದು ತಿಳಿದು ಬಂದಿದೆ. ಹೆಚ್ಎ‌ಎಲ್‌ನಲ್ಲಿ‌ ಕೆಲಸ ಮಾಡುತ್ತಿದ್ದ ರಾಜೇಶ್ ಇಂದು ರಜೆಯಿದ್ದ ಹಿನ್ನೆಲೆ ಮನೆಯಲ್ಲೇ‌ ಉಳಿದುಕೊಂಡಿದ್ದರು. ಹೊರಗಡೆ ಹೊರಟಾಗ ಆತನ ಬೈಕ್ ಹಿಂಬಾಲಿಸಿ ಬಂದ ಹಂತಕರು ಚಾಕುವಿನಿಂದ ಇರಿದು ರಾಜೇಶ್​ನನ್ನು ಕೊಲೆಗೈದಿದ್ದಾರೆ. ಬಳಿಕ‌ ಅಲ್ಲಿಂದ ತಲೆಮರೆಸಿಕೊಂಡಿದ್ದಾರೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕಾಗಮಿಸಿದ ಕಾಡುಗೋಡಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.