ETV Bharat / state

ಡಿಕೆಶಿ ಕುಟುಂಬಕ್ಕೆ ಧೈರ್ಯ ಹೇಳಿದ ಕೋಳಿವಾಡ, ನಂಜಾವಧೂತ ಸ್ವಾಮೀಜಿ - ಡಿಕೆಶಿ ಕುಟುಂಬಕ್ಕೆ ಧೈರ್ಯ ಹೇಳಿದ ನಂಜಾವಧೂತ ಸ್ವಾಮೀಜಿ

ಇಡಿ ಬಲೆಯಲ್ಲಿ ಸಿಲುಕಿ ಬಂಧನದಲ್ಲಿರುವ ಡಿಕೆಶಿ ಕುಟುಂಬಕ್ಕೆ ಅನೇಕ ರಾಜಕಾರಣಿಗಳು ಮತ್ತು ಸ್ವಾಮೀಜಿಗಳು ಧೈರ್ಯ ತುಂಬಿದ್ದಾರೆ.

ಡಿಕೆಶಿ ಕುಟುಂಬಕ್ಕೆ ಧೈರ್ಯ ಹೇಳಿದ ಕೋಳಿವಾಡ
author img

By

Published : Sep 7, 2019, 2:45 AM IST

ಬೆಂಗಳೂರು : ನಗರದ ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸಕ್ಕೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ನಂಜಾವಧೂತ ಸ್ವಾಮೀಜಿ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಡಿ.ಕೆ. ಶಿವಕುಮಾರ್ ನಮ್ಮ ಕುಟುಂಬದವರಿದ್ದ ಹಾಗೆ. ದೇಶದಲ್ಲಿ ಉದ್ಯೋಗ ಸಮಸ್ಯೆ ಎದುರಾಗಿದ್ದು, ಜಿಡಿಪಿ ಕುಸಿದಿದೆ. ಅದರ ಬಗ್ಗೆ ಗಮನ ಕೊಡಬೇಕು. ಅದು ಬಿಟ್ಟು ದ್ವೇಷದ ರಾಜಕೀಯ ಮಾಡಬಾರದು ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಚಂದ್ರಯಾನ ವೀಕ್ಷಣೆಗೆ ರಾಜ್ಯಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಕೋರುತ್ತೇನೆ. ರಾಜ್ಯದಲ್ಲಿನ ನೆರೆ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.

ಇನ್ನು ನಂಜಾವಧೂತ ಸ್ವಾಮೀಜಿ ಮಾತನಾಡಿ, ಸಹಜವಾಗಿ ನೊಂದಿರುವವರನ್ನು ಭೇಟಿ ಮಾಡುತ್ತೇವೆ. ಅದು ನಮ್ಮ ಕರ್ತವ್ಯ ಕೂಡ. ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ದೊಡ್ಡ ನಾಯಕರಾಗಿದ್ದು, ಸಹಜವಾಗಿ ಮನೆಯವರಿಗೆ ಆಘಾತವಾಗುತ್ತದೆ. ಅವರ ಪತ್ನಿ, ಮಕ್ಕಳಿಗೆ ಧೈರ್ಯ ಹೇಳಿದ್ದೇನೆ ಎಂದರು. ಇನ್ನು ಮಾಜಿ ಡಿಸಿಎಂ ಜಿ.ಪರಮೇಶ್ವರ್​ ಮತ್ತು ಅನೇಕ ಸ್ವಾಮೀಜಿಗಳು ಸಹ ಡಿಕೆಶಿ ಕುಟುಂಬಕ್ಕೆ ಧೈರ್ಯ ಹೇಳುತ್ತಿದ್ದಾರೆ.

ಬೆಂಗಳೂರು : ನಗರದ ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸಕ್ಕೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ನಂಜಾವಧೂತ ಸ್ವಾಮೀಜಿ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಡಿ.ಕೆ. ಶಿವಕುಮಾರ್ ನಮ್ಮ ಕುಟುಂಬದವರಿದ್ದ ಹಾಗೆ. ದೇಶದಲ್ಲಿ ಉದ್ಯೋಗ ಸಮಸ್ಯೆ ಎದುರಾಗಿದ್ದು, ಜಿಡಿಪಿ ಕುಸಿದಿದೆ. ಅದರ ಬಗ್ಗೆ ಗಮನ ಕೊಡಬೇಕು. ಅದು ಬಿಟ್ಟು ದ್ವೇಷದ ರಾಜಕೀಯ ಮಾಡಬಾರದು ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಚಂದ್ರಯಾನ ವೀಕ್ಷಣೆಗೆ ರಾಜ್ಯಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಕೋರುತ್ತೇನೆ. ರಾಜ್ಯದಲ್ಲಿನ ನೆರೆ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.

ಇನ್ನು ನಂಜಾವಧೂತ ಸ್ವಾಮೀಜಿ ಮಾತನಾಡಿ, ಸಹಜವಾಗಿ ನೊಂದಿರುವವರನ್ನು ಭೇಟಿ ಮಾಡುತ್ತೇವೆ. ಅದು ನಮ್ಮ ಕರ್ತವ್ಯ ಕೂಡ. ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ದೊಡ್ಡ ನಾಯಕರಾಗಿದ್ದು, ಸಹಜವಾಗಿ ಮನೆಯವರಿಗೆ ಆಘಾತವಾಗುತ್ತದೆ. ಅವರ ಪತ್ನಿ, ಮಕ್ಕಳಿಗೆ ಧೈರ್ಯ ಹೇಳಿದ್ದೇನೆ ಎಂದರು. ಇನ್ನು ಮಾಜಿ ಡಿಸಿಎಂ ಜಿ.ಪರಮೇಶ್ವರ್​ ಮತ್ತು ಅನೇಕ ಸ್ವಾಮೀಜಿಗಳು ಸಹ ಡಿಕೆಶಿ ಕುಟುಂಬಕ್ಕೆ ಧೈರ್ಯ ಹೇಳುತ್ತಿದ್ದಾರೆ.

Intro:ಬೆಂಗಳೂರು : ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಹಿನ್ನೆಲೆಯಲ್ಲಿ ರಾಜಕಾರಣಿಗಳು, ಸ್ವಾಮೀಜಿಗಳು, ಡಿಕೆಶಿ ಕುಟುಂಬದವನ್ನು ಭೇಟಿ ಮಾಡಿ ಧೈರ್ಯ ಹೇಳುತ್ತಿದ್ದಾರೆ.Body:ಕನಕಪುರದ ದೊಡ್ಡ ಆಲಹಳ್ಳಿಗೆ ಇಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮೊನ್ನೆ ನಂಜಾವಧೂತ ಸ್ವಾಮೀಜಿ ಭೇಟಿ ನೀಡಿ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಅವರಿಗೆ ಸಮಾಧಾನ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದರೆ, ಇನ್ನೊಂದೆಡೆ ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸಕ್ಕೆ ಇಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಭೇಟಿ ಕೊಟ್ಟು, ಶಿವಕುಮಾರ್ ಅವರ ಪತ್ನಿ ಉಷಾ ಹಾಗೂ ಮಕ್ಕಳಿಗೆ ಧೈರ್ಯ ಹೇಳಿದರು. ಇದೇ ವೇಳೆ ನಂಜಾವಧೂತ ಸ್ವಾಮೀಜಿ ಸಹ ಭೇಟಿ ಮಾಡಿ ಡಿಕೆಶಿ ಕುಟುಂಬಕ್ಕೆ ಧೈರ್ಯ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು, ಡಿ.ಕೆ. ಶಿವಕುಮಾರ್ ಅವರು ನಮ್ಮ ಕುಟುಂಬದವರು ಇದ್ದಹಾಗೆ. ಈಗ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರ ಮನೆಯವರಿಗೆ ಧೈರ್ಯ ಹೇಳಲು ಬಂದಿದ್ದೆ ಎಂದರು.
ದೇಶದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಇದು ಆಗಬಾರದು. ದೇಶದಲ್ಲಿ ಉದ್ಯೋಗ ಸಮಸ್ಯೆ ಇದೆ. ಜಿಡಿಪಿ ಕುಸಿದಿದೆ. ಅದರ ಬಗ್ಗೆ ಗಮನ ಕೊಡಬೇಕು. ಅದು ಬಿಟ್ಟು ದ್ವೇಷದ ರಾಜಕೀಯ ಮಾಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದರು.
ಚಂದ್ರಯಾನ ವೀಕ್ಷಣೆ ಮಾಡಲು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬರುತ್ತಿದ್ದಾರೆ. ಅವರಿಗೆ ಸ್ವಾಗತ ಕೋರುತ್ತೇನೆ. ರಾಜ್ಯದಲ್ಲಿ ನೆರೆ, ಬರ ಬಂದಿದೆ. ಅದರ ಬಗ್ಗೆಯೂ ಗಮನಹರಿಸುವಂತೆ ಮನವಿ ಮಾಡಿದರು.
ರಾಜಕೀಯ ವೈಷಮ್ಯದ ಶಕ್ತಿ ಹೆಚ್ಚಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಗಂಡಾಂತರ ಹೆಚ್ಚಾಗಿದೆ. ಇದು ಹೀಗೆ ಮುಂದುವರೆದರೆ ಕಷ್ಟ. ಭಾವನಾತ್ಮಕವಾಗಿ ಜನರನ್ನು ಕೆರಳಿಸಲು ಮುಂದಾಗಿದ್ದಾರೆ. ಇದು ಆಗಬಾರದು ದೇಶದ ಆರ್ಥಿಕ ಪರಿಸ್ಥಿತಿ ಮುಂದುವರೆಯಬೇಕು. ಇಂದೆಂದೂ ಬರದಂತ ಕೆಳಗೆ ಜಿಡಿಪಿ ಬಂದಿದೆ. ಬಾಂಗ್ಲಾದೇಶ ದೇಶದ ಜಿಡಿಪಿ ಗಿಂತ ಕಡಿಮೆ ಆಗಿದೆ. ದೇಶದ ಪ್ರಗತಿ ಮುಖ್ಯ. ಮಾಜಿ ಪಿಎಂ ಮನಮೋಹನ್ ಸಿಂಗ್ ಅವರ ಸಲಹೆ ಬೇಕಾದರೆ ಮೋದಿಯವರು ಪಡೆಯಲಿ ಎಂದು ಸಲಹೆ ನೀಡಿದರು.
ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೋಳಿವಾಡ ಅವರು, ಇಡೀ ಪ್ರಪಂಚದಲ್ಲಿ ಇವತ್ತು ಚಂದ್ರಯಾನ ಹೆಸರು ಮಾಡಿದೆ. ಅದನ್ನು ವೀಕ್ಷಣೆ ಮಾಡಲು ಬರುತ್ತಿದ್ದಾರೆ ಅದಕ್ಕೆ ನಮ್ಮ ಆಕ್ಷೇಪ ಏನು ಇಲ್ಲ. ಆದರೆ, ರಾಜ್ಯದಲ್ಲಿ ಬರ, ನೆರೆ ಇದೆ. ಅದರ ಬಗ್ಗೆಯೂ ಗಮನ ಕೊಡಲಿ ಅಷ್ಟೇ. ಕೇಂದ್ರದಿಂದ ಒಂದು ರುಪಾಯಿ ಹಣ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ಮಹಾರಾಷ್ಟ್ರದಿಂದ ನೀರು ಪುನಃ ಬಿಡುತ್ತಿದ್ದಾರೆ. ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದೆ.  ತಗ್ಗು ಪ್ರದೇಶದಲ್ಲಿ ನೀರು ನುಗ್ಗುತ್ತದೆ. ಅದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನೀಲಿ ಚಿತ್ರ ವೀಕ್ಷಣೆ ಅಪರಾಧವಲ್ಲವೆಂದು ಸಚಿವ ಮಾಧುಸ್ವಾಮಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಹೇಳಿಕೆ ತಪ್ಪು. ನಾಲ್ಕು ಗೋಡೆ ಮದ್ಯ ನೋಡಲಿ. ಅದು ಬಿಟ್ಟು ಸದನದಲ್ಲಿ ನೋಡುವುದು ತಪ್ಪು. ಅಬ್ ಸೀನ್ ಅಂತ ಒಂದು ಕಾನೂನು ಇದೆ. ಅದರ ಬಗ್ಗೆ ಅರಿವು ಇರಲಿ. ಮಾಧುಸ್ವಾಮಿ ಅವರು ಇನ್ನೂ ಸಣ್ಣವರಿದ್ದಾರೆ. ರಾಜಕೀಯ ಭವಿಷ್ಯ ಇನ್ನೂ ಇದೆ. ಅವರು ತಿಳಿದು ಮಾತನಾಡಲಿ ಎಂದರು. 
ನಂಜಾವಧೂತ ಸ್ವಾಮೀಜಿ ಮಾತನಾಡಿ, ಸಹಜವಾಗಿ ನೊಂದಿರುವವರನ್ನು ಭೇಟಿ ಮಾಡುತ್ತೇವೆ. ಅದು ನಮ್ಮ ಕರ್ತವ್ಯ ಕೂಡ. ಶಿವಕುಮಾರ್ ಅವರು ಸಮುದಾಯದ ದೊಡ್ಡ ನಾಯಕರು ಎಂದರು.
ಸಹಜವಾಗಿ ಮನೆಯವರಿಗೆ ಆಘಾತ ಆಗುತ್ತದೆ. ಅವರ
ಪತ್ನಿ, ಮಕ್ಕಳಿಗೆ ಧೈರ್ಯ ಹೇಳಿದ್ದೇನೆ. ಅವರು ತುಂಬಾ ಧೈರ್ಯವಾಗಿದ್ದಾರೆ. ಎಲ್ಲವನ್ನು ಎದುರಿಸೋಣ ಎಂದು ಹೇಳಿದ್ದಾರೆ. ಜೀವನದಲ್ಲಿ ಎಲ್ಲವನ್ನು ಎದುರಿಸುತ್ತೇವೆ ಎಂದ್ರು ಸಮಾಧಾನ ಅನ್ನಿಸ್ತು. ಮೊನ್ನೆ ಶಿವಕುಮಾರ್ ಅವರ ತಾಯಿ ಅವರನ್ನು ಭೇಟಿ ಮಾಡಿದ್ದೆ ಅವರು ತುಂಬಾ ಧೈರ್ಯವಂತರು.
ಅವರ ತಾಯಿ ಬಹಳ ಸ್ಪೋಟಿವ್ ಆಗಿ ತಗೊಂಡಿದ್ದಾರೆ. ಭಗವಂತ ಏನ್ ಕೊಟ್ಟಿದ್ದಾನೆ ಅದನ್ನು ಅನುಭವಿಸಬೇಕು ಎಂದು ಹೇಳಿದ್ದಾರೆ ಎಂದ್ರು.
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.