ಬೆಂಗಳೂರು: ಬಿಹಾರ ರಾಜ್ಯದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಇಂದು ಬೆಂಗಳೂರಿಗೆ ಆಗಮಿಸಿ ಜಿಎಸ್ಟಿ ಬಗ್ಗೆ ಸಹಕಾರಿ ಸಚಿವರಾದ ಬಂಡೆಪ್ಪ ಕಾಶಪ್ಪನವರ್ ಜೊತೆ ವಿಸ್ತೃತವಾಗಿ ಚರ್ಚೆ ನಡೆಸಿದರು.
![bangalore](https://etvbharatimages.akamaized.net/etvbharat/prod-images/shushilkumarmodiinbangalore_29062019211509_2906f_1561823109_310.jpg)
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಬಿಹಾರ ರಾಜ್ಯದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಜುಲೈ 1 ಕ್ಕೆ ಜಿಎಸ್ಟಿ ಜಾರಿಯಾಗಿ ಎರಡು ವರ್ಷ ಆಗಲಿದೆ, ಜಿಎಸ್ಟಿಯ ಎರಡನೇ ಸಂವತ್ಸರಕ್ಕೆ ಸರಳತೆ ಹಾಗೂ ಅನುಸರಣೆಯ ಬಗ್ಗೆ ಒತ್ತು ನೀಡಲಾಗುವುದು, ಐ ಟಿ ಸಂಸ್ಥೆಗಳು ಹೊಸ ಮಾದರಿಯ ತೆರಿಗೆ ಪಾವತಿಯನ್ನು ಕಂಡುಹಿಡಿದಿದ್ದಾರೆ. ಇದೆ ಅನುಸಾರದಂತೆ ಇನ್ಫೋಸಿಸ್ ಸಂಸ್ಥೆ ತೆರಿಗೆ ಪಾವತಿ ಬಗ್ಗೆ ಪ್ರೋಟೋಟೈಪ್ಸ್ ತಯಾರಿಸಿದ್ದಾರೆ, ಅದನ್ನು ಜುಲೈ 1 ಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ಸುಶೀಲ್ ಕುಮಾರ್ ಮೋದಿ ತಿಳಿಸಿದರು.
![bangalore](https://etvbharatimages.akamaized.net/etvbharat/prod-images/shushilkumarmodiinbangalore_29062019211509_2906f_1561823109_343.jpg)
ಪೂರ್ಣಪ್ರಮಾಣದಲ್ಲಿ ಆನ್ಲೈನ್ನಲ್ಲಿ ತೆರಿಗೆ ಪಾವತಿ ಹಾಗೂ ತೆರಿಗೆ ರಿಟರ್ನ್ಸ್ ಅಳವಡಿಸಲಿದ್ದೇವೆ. ಈಗಾಗಲೇ ಮೂರು ರಾಜ್ಯಗಳು ವಾಹನಗಳಿಗೆ ಆರ್ ಎಫ್ ಐ ಡಿ ಪ್ರಯೋಗಿಸಿದ್ದಾರೆ ಹಾಗೂ ಅದು ಯಶಸ್ವಿಯಾಗಿದೆ. ಇದನ್ನು ಎಲ್ಲಾ ರಾಜ್ಯಗಳಿಗೆ ಕೂಲಂಕುಶವಾಗಿ ಪರಿಶೀಲಿಸಿ ಮೂಡಿಸಲಿದ್ದೇವೆ ಎಂದು ತಿಳಿಸಿದರು.
ಆರ್ ಎಫ್ ಐ ಡಿ ಅಳವಡಿಕೆಯಿಂದ ಕಳ್ಳ ರಸೀದಿಗಳು ನಿಯಂತ್ರಣವಾಗಲಿದೆ. ವ್ಯಾಟ್ ತೆರಿಗೆಯಿಂದ ಸರ್ಕಾರದ ಆದಾಯದಲ್ಲಿ ಏರುಪೇರು ಕಾಣುತ್ತಿತ್ತು. ಆದರೆ ಜಿ ಎಸ್ ಟಿ ಬಂದ ಮೇಲೆ ಶೇಕಡಾ 14 ರಷ್ಟು ಪ್ರಗತಿ ಕಾಣುತ್ತಿದೆ ಎಂದು ಹೇಳಿದರು.