ETV Bharat / state

ಸಿಲಿಕಾನ್​ ಸಿಟಿಗೆ 148 ಕಿ.ಮೀ ವಿಸ್ತೀರ್ಣದ ಉಪನಗರ ರೈಲ್ವೆ ವ್ಯವಸ್ಥೆ: ಬಿಎಸ್​ವೈ

author img

By

Published : Feb 2, 2020, 7:53 PM IST

Updated : Feb 2, 2020, 10:52 PM IST

2020-21ರ ಕೇಂದ್ರ ಬಜೆಟ್​ನಲ್ಲಿ ಬೆಂಗಳೂರಿನಲ್ಲಿ ಉಪನಗರ ರೈಲ್ವೆ ವ್ಯವಸ್ಥೆ ಜಾರಿಗೊಳಿಸುವುದಾಗಿ ಘೋಷಿಸಲಾಗಿದ್ದು, 148.17 ಕಿ.ಮೀ. ವಿಸ್ತೀರ್ಣದ 4 ಕಾರಿಡಾರ್​ ಮೂಲಕ ಈ ನೆಟ್​ವರ್ಕ್​ ಕಾರ್ಯನಿರ್ವಹಿಸಲಿದೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Sub-Urban Railway network in  Bengaluru
ಸಿಲಿಕಾನ್​ ಸಿಟಿಗೆ 148 ಕಿ.ಮೀ ವಿಸ್ತೀರ್ಣದ ಉಪನಗರ ರೈಲ್ವೆ ವ್ಯವಸ್ಥೆ

ಬೆಂಗಳೂರು: 2020-21ರ ಕೇಂದ್ರ ಬಜೆಟ್​ನಲ್ಲಿ ಬೆಂಗಳೂರಿನಲ್ಲಿ ಉಪನಗರ ರೈಲ್ವೆ ವ್ಯವಸ್ಥೆ ಜಾರಿಗೊಳಿಸುವುದಾಗಿ ಘೋಷಿಸಲಾಗಿದ್ದು, 148.17 ಕಿ.ಮೀ ವಿಸ್ತೀರ್ಣದ 4 ಕಾರಿಡಾರ್​ ಮೂಲಕ ಈ ನೆಟ್​ವರ್ಕ್​ ಕಾರ್ಯನಿರ್ವಹಿಸಲಿದೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರಿಡಾರ್ ಒಂದು ಕೆಂಗೇರಿಯಿಂದ ವೈಟ್‌ಫೀಲ್ಡ್, ಕಾರಿಡಾರ್​ ಎರಡು ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಯಶವಂತಪುರ ಮೂಲಕ ದೇವನಹಳ್ಳಿಗೆ, (ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಾಗುವುದು), ಕಾರಿಡಾರ್​ ಮೂರು ಚಿಕ್ಕಬಾಣಾವಾರದಿಂದ ಬೈಯಪ್ಪನಹಳ್ಳಿ, ನಾಲ್ಕನೆಯದಾಗಿ ಹೀಲಲಿಗೆಯಿಂದ ರಾಜಾನುಕುಂಟೆವರೆಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ ಎಂದರು.

ಸಿಲಿಕಾನ್​ ಸಿಟಿಗೆ 148 ಕಿ.ಮೀ ವಿಸ್ತೀರ್ಣದ ಉಪನಗರ ರೈಲ್ವೆ ವ್ಯವಸ್ಥೆ

ಈ ಯೋಜನೆಯ ಅಂದಾಜು ವೆಚ್ಚ ₹18,600 ಕೋಟಿ ಹಾಗೂ 3 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ" ಎಂದು ಹೇಳಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ 20ರಷ್ಟು ವೆಚ್ಚವನ್ನು ಬರಿಸಲಿದ್ದು, ಉಳಿದ ಶೇಕಡಾ 60ರಷ್ಟು ಅನುದಾನವನ್ನು ಸಾಂಸ್ಥಿಕ ಸಾಲವಾಗಿ ಪಡೆಯಲಾಗುತ್ತದೆ. ಈ ಯೋಜನೆ ಅಡಿ ಬೆಂಗಳೂರಿನ 57 ಪ್ರಮುಖ ಸ್ಥಳಗಳಲ್ಲಿ ಉಪನಗರ ರೈಲ್ವೆ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಹವಾನಿಯಂತ್ರಿತ ರೈಲು ಬೋಗಿಗಳನ್ನು ಅಳವಡಿಸುವ ಯೋಜನೆ ಇದಾಗಿದೆ. ಇದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.

Sub-Urban Railway network in  Bengaluru
ಸಿಲಿಕಾನ್​ ಸಿಟಿಗೆ 148 ಕಿ.ಮೀ ವಿಸ್ತೀರ್ಣದ ಉಪನಗರ ರೈಲ್ವೆ ವ್ಯವಸ್ಥೆ

ಉಪನಗರ ರೈಲ್ವೆ ವ್ಯವಸ್ಥೆಯು ಬೆಳಗ್ಗೆ 5ರಿಂದ ಮಧ್ಯರಾತ್ರಿಯವರೆಗೆ ಕಾರ್ಯನಿರ್ವಹಿಸಲಿದ್ದು, ಭಾರತೀಯ ರೈಲ್ವೆ ಮತ್ತು ನಮ್ಮ ಮೆಟ್ರೋ (ಬಿಎಂಆರ್​ಸಿಎಲ್) ನಿಲ್ದಾಣಗಳೊಂದಿಗೆ ಒಳಸಂಪರ್ಕವನ್ನು ಹೊಂದಿರುತ್ತದೆ. ಬೆಂಗಳೂರಿಗೆ ಮಾದರಿ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.

ನಗರದ ಜನದಟ್ಟಣೆ ಕಡಿಮೆಯಾಗಲಿದ್ದು, ನಿಗದಿತ ಸಮಯದೊಳಗೆ ವೇಗವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ. ಇದರಿಂದ ಪರಿಸರ ಮಾಲಿನ್ಯ ಕಡಿಮೆಗೊಳಿಸಲು ಸಹಾಯವಾಗುತ್ತದೆ.

ಬೆಂಗಳೂರು: 2020-21ರ ಕೇಂದ್ರ ಬಜೆಟ್​ನಲ್ಲಿ ಬೆಂಗಳೂರಿನಲ್ಲಿ ಉಪನಗರ ರೈಲ್ವೆ ವ್ಯವಸ್ಥೆ ಜಾರಿಗೊಳಿಸುವುದಾಗಿ ಘೋಷಿಸಲಾಗಿದ್ದು, 148.17 ಕಿ.ಮೀ ವಿಸ್ತೀರ್ಣದ 4 ಕಾರಿಡಾರ್​ ಮೂಲಕ ಈ ನೆಟ್​ವರ್ಕ್​ ಕಾರ್ಯನಿರ್ವಹಿಸಲಿದೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರಿಡಾರ್ ಒಂದು ಕೆಂಗೇರಿಯಿಂದ ವೈಟ್‌ಫೀಲ್ಡ್, ಕಾರಿಡಾರ್​ ಎರಡು ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಯಶವಂತಪುರ ಮೂಲಕ ದೇವನಹಳ್ಳಿಗೆ, (ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಾಗುವುದು), ಕಾರಿಡಾರ್​ ಮೂರು ಚಿಕ್ಕಬಾಣಾವಾರದಿಂದ ಬೈಯಪ್ಪನಹಳ್ಳಿ, ನಾಲ್ಕನೆಯದಾಗಿ ಹೀಲಲಿಗೆಯಿಂದ ರಾಜಾನುಕುಂಟೆವರೆಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ ಎಂದರು.

ಸಿಲಿಕಾನ್​ ಸಿಟಿಗೆ 148 ಕಿ.ಮೀ ವಿಸ್ತೀರ್ಣದ ಉಪನಗರ ರೈಲ್ವೆ ವ್ಯವಸ್ಥೆ

ಈ ಯೋಜನೆಯ ಅಂದಾಜು ವೆಚ್ಚ ₹18,600 ಕೋಟಿ ಹಾಗೂ 3 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ" ಎಂದು ಹೇಳಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ 20ರಷ್ಟು ವೆಚ್ಚವನ್ನು ಬರಿಸಲಿದ್ದು, ಉಳಿದ ಶೇಕಡಾ 60ರಷ್ಟು ಅನುದಾನವನ್ನು ಸಾಂಸ್ಥಿಕ ಸಾಲವಾಗಿ ಪಡೆಯಲಾಗುತ್ತದೆ. ಈ ಯೋಜನೆ ಅಡಿ ಬೆಂಗಳೂರಿನ 57 ಪ್ರಮುಖ ಸ್ಥಳಗಳಲ್ಲಿ ಉಪನಗರ ರೈಲ್ವೆ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಹವಾನಿಯಂತ್ರಿತ ರೈಲು ಬೋಗಿಗಳನ್ನು ಅಳವಡಿಸುವ ಯೋಜನೆ ಇದಾಗಿದೆ. ಇದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.

Sub-Urban Railway network in  Bengaluru
ಸಿಲಿಕಾನ್​ ಸಿಟಿಗೆ 148 ಕಿ.ಮೀ ವಿಸ್ತೀರ್ಣದ ಉಪನಗರ ರೈಲ್ವೆ ವ್ಯವಸ್ಥೆ

ಉಪನಗರ ರೈಲ್ವೆ ವ್ಯವಸ್ಥೆಯು ಬೆಳಗ್ಗೆ 5ರಿಂದ ಮಧ್ಯರಾತ್ರಿಯವರೆಗೆ ಕಾರ್ಯನಿರ್ವಹಿಸಲಿದ್ದು, ಭಾರತೀಯ ರೈಲ್ವೆ ಮತ್ತು ನಮ್ಮ ಮೆಟ್ರೋ (ಬಿಎಂಆರ್​ಸಿಎಲ್) ನಿಲ್ದಾಣಗಳೊಂದಿಗೆ ಒಳಸಂಪರ್ಕವನ್ನು ಹೊಂದಿರುತ್ತದೆ. ಬೆಂಗಳೂರಿಗೆ ಮಾದರಿ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.

ನಗರದ ಜನದಟ್ಟಣೆ ಕಡಿಮೆಯಾಗಲಿದ್ದು, ನಿಗದಿತ ಸಮಯದೊಳಗೆ ವೇಗವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ. ಇದರಿಂದ ಪರಿಸರ ಮಾಲಿನ್ಯ ಕಡಿಮೆಗೊಳಿಸಲು ಸಹಾಯವಾಗುತ್ತದೆ.

Last Updated : Feb 2, 2020, 10:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.