ETV Bharat / state

ಮೊದಲ ತ್ರೈಮಾಸಿಕದಲ್ಲಿ ಗುರಿ ಮೀರಿ ಭರ್ಜರಿ ಆದಾಯ ಸಂಗ್ರಹ.. ಮುಂದಿನ ತ್ರೈಮಾಸಿಕದಲ್ಲೂ ಸಾಲ ಮಾಡದಿರಲು ನಿರ್ಧಾರ

author img

By

Published : Jul 3, 2022, 8:36 PM IST

ಮೊದಲ ತ್ರೈ ಮಾಸಿಕದಲ್ಲಿ ತೆರಿಗೆ ಮೂಲಗಳಿಂದ ಸಂಗ್ರಹವಾಗಿರುವ ಆದಾಯ ನಿರೀಕ್ಷಿತ ಗುರಿಯನ್ನು ಮೀರಿದೆ. ಆ ಮೂಲಕ ಎರಡು ವರ್ಷಗಳಿಂದ ಸೊರಗಿದ್ದ ಆದಾಯ ಮೂಲಗಳು ಈ ಆರ್ಥಿಕ ವರ್ಷದ ಆರಂಭದಲ್ಲೇ ಶುಭ ಸೂಚನೆ ನೀಡುತ್ತಿದೆ.

Huge revenue collection over target in first quarter
ಸರ್ಕಾರ

ಬೆಂಗಳೂರು : 2022-23ರ ಆರ್ಥಿಕ ವರ್ಷದ ಮೊದಲ‌ ತ್ರೈಮಾಸಿಕದಲ್ಲಿ ತೆರಿಗೆ ಮೂಲಗಳಿಂದ ನಿರೀಕ್ಷಿತ ಗುರಿಗಿಂತ ಉತ್ತಮ ಆದಾಯ ಸಂಗ್ರಹವಾಗುತ್ತಿದೆ. ಉತ್ತಮ ಆದಾಯ ಸಂಗ್ರಹದ ಹಿನ್ನೆಲೆ ರಾಜ್ಯ ಸರ್ಕಾರ ಮುಂದಿನ ತ್ರೈ ಮಾಸಿಕದಲ್ಲೂ ಸಾಲ ಎತ್ತುವಳಿ ಮಾಡದಿರಲು ನಿರ್ಧರಿಸಿದೆ. ಕೋವಿಡ್-ಲಾಕ್ ಡೌನ್​ನಿಂದ ಕಳೆದ ಎರಡು ವರ್ಷಗಳಿಂದ ಸೊರಗಿ ಹೋಗಿದ್ದ ರಾಜ್ಯದ ಖಜಾನೆಗೆ ಈ ಆರ್ಥಿಕ ವರ್ಷದ ಆರಂಭದಲ್ಲೇ ಉತ್ತಮ ಚೇತರಿಕೆ ಕಾಣುತ್ತಿದೆ.

ಮೊದಲ ತ್ರೈ ಮಾಸಿಕದಲ್ಲಿ ತೆರಿಗೆ ಮೂಲಗಳಿಂದ ಸಂಗ್ರಹವಾಗಿರುವ ಆದಾಯ ನಿರೀಕ್ಷಿತ ಗುರಿಯನ್ನು ಮೀರಿದೆ. ಆ ಮೂಲಕ ಎರಡು ವರ್ಷಗಳಿಂದ ಸೊರಗಿದ್ದ ಆದಾಯ ಮೂಲಗಳು ಈ ಆರ್ಥಿಕ ವರ್ಷದ ಆರಂಭದಲ್ಲೇ ಶುಭ ಸೂಚನೆ ನೀಡುತ್ತಿದೆ.

ಮೊದಲ ತ್ರೈ ಮಾಸಿಕದಲ್ಲಿ ಭರ್ಜರಿ ತೆರಿಗೆ ಸಂಗ್ರಹ: ರಾಜ್ಯದಲ್ಲಿ ಈ ಆರ್ಥಿಕ ವರ್ಷದಲ್ಲಿ ಬೊಕ್ಕಸಕ್ಕೆ ನಿರೀಕ್ಷಿತ ಗುರಿ ಮೀರಿ ತೆರಿಗೆಗಳ ಮೂಲಕ ಆದಾಯ ಸಂಗ್ರಹವಾಗಿದೆ. ಏಪ್ರಿಲ್-ಜೂನ್ ವರೆಗಿನ ಮೊದಲ ತ್ರೈಮಾಸಿಕದಲ್ಲಿ ಪ್ರಮುಖ ತೆರಿಗೆ ಸಂಗ್ರಹ ಇಲಾಖೆಗಳು ಗುರಿ ಮೀರಿ ಆದಾಯ ಸಂಗ್ರಹಿಸಿರುವುದು ರಾಜ್ಯ ಸರ್ಕಾರಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

ಅದರಲ್ಲೂ ವಾಣಿಜ್ಯ ಇಲಾಖೆ ಭರ್ಜರಿ ತೆರಿಗೆ ಸಂಗ್ರಹ ಮಾಡಿದೆ. ಮೊದಲ ತ್ರೈಮಾಸಿಕದಲ್ಲಿ 21,235 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಿದೆ. ತ್ರೈಮಾಸಿಕ ಗುರಿ ಇದ್ದಿದ್ದು 19,259 ಕೋಟಿ ರೂ. ಆದರೆ, ವಾಣಿಜ್ಯ ಇಲಾಖೆ ಹೆಚ್ಚುವರಿ ತೆರಿಗೆ ಸಂಗ್ರಹ ಮಾಡಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ 50%ಗೂ ಅಧಿಕ ವಾಣಿಜ್ಯ ತೆರಿಗೆ ಸಂಗ್ರಹಿಸಿದೆ.

ನೋಂದಣಿ ಹಾಗೂ ಮುದ್ರಾಂಕ ಇಲಾಖೆ: ಇತ್ತ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯೂ ತ್ರೈಮಾಸಿಕ ಗುರಿ ಮೀರಿ ತೆರಿಗೆ ಸಂಗ್ರಹಿಸಿದೆ. ಮೊದಲ ತ್ರೈಮಾಸಿಕದಲ್ಲಿ 3,897 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. 2,962 ಕೋಟಿ ರೂ. ತ್ರೈಮಾಸಿಕ ಗುರಿಗಿಂತ 934 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹಿಸಲಾಗಿದೆ.

ಅಬಕಾರಿ ಇಲಾಖೆ: ಅಬಕಾರಿ ಇಲಾಖೆ ಎಂದಿನಂತೆ ಗುರಿ ಮೀರಿ ಭರ್ಜರಿ ಆದಾಯ ಸಂಗ್ರಹಿಸಿದೆ. ಮೊದಲ ತ್ರೈಮಾಸಿಕದಲ್ಲಿ ನಿಗದಿಯಾಗಿದ್ದ 7,250 ಕೋಟಿ ರೂ. ಗುರಿಯನ್ನು ಮೀರಿ ಒಟ್ಟು 7,574 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹ ಮಾಡಿದೆ.

ಮೋಟಾರ್ ವಾಹನ ತೆರಿಗೆ: ಇತ್ತ ಮೋಟಾರ್ ವಾಹನ ತೆರಿಗೆ ಸಂಗ್ರಹವೂ ಗುರಿ ದಾಟಿದೆ. ಮೊದಲ ತ್ರೈಮಾಸಿಕದಲ್ಲಿ 2,046 ಮೋಟಾರ್ ವಾಹನ ತೆರಿಗೆ ಸಂಗ್ರಹ ಮಾಡಿದೆ. ತ್ರೈ ಮಾಸಿಕ ಗುರಿ ಇದ್ದಿದ್ದು 1,980 ಕೋಟಿ ರೂ. ಕಳೆದ ಎರಡು ವರ್ಷದಿಂದ ಗುರಿ ಮುಟ್ಟದೇ ಸೊರಗಿದ್ದ ಮೋಟಾರ್ ವಾಹನ ತೆರಿಗೆ ಈ ಆರ್ಥಿಕ ವರ್ಷ ಗಣನೀಯ ಚೇತರಿಕೆ ಕಂಡಿದೆ.

ಸಾಲ ಎತ್ತುವಳಿ ಮಾಡದಿರಲು ಸರ್ಕಾರ ನಿರ್ಧಾರ: ಮೊದಲ ತ್ರೈಮಾಸಿಕದಲ್ಲಿ ಗುರಿ ಮೀರಿ ಭರ್ಜರಿ ತೆರಿಗೆ ಸಂಗ್ರಹವಾಗಿರುವುದರಿಂದ ರಾಜ್ಯ ಸರ್ಕಾರ ಎರಡನೇ ತ್ರೈ ಮಾಸಿಕದಲ್ಲೂ ಸಾಲ ಎತ್ತುವಳಿ ಮಾಡದಿರಲು ನಿರ್ಧರಿಸಿದೆ.

ಈ ಬಾರಿ ಒಟ್ಟು 72,089 ಕೋಟಿ ಸಾಲ ಮಾಡಲು ಯೋಜಿಸಿದೆ. ಆ ಪೈಕಿ 67,911 ಕೋಟಿ ರೂ. ಮುಕ್ತ ಮಾರುಕಟ್ಟೆ ಮೂಲಕ ಸಾಲ ಮಾಡಲು ಮುಂದಾಗಿದೆ. ಏಪ್ರಿಲ್-ಜೂನ್ ಮುಗಿಯಲಿರುವ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿ ಮಾಡಿರಲಿಲ್ಲ. ಇದೀಗ ಉತ್ತಮ ಆದಾಯ ಸಂಗ್ರಹಿಸಿದ ಕಾರಣ ಜುಲೈ-ಸೆಪ್ಟೆಂಬರ್ ವರೆಗಿನ ಎರಡನೇ ತ್ರೈಮಾಸಿಕದಲ್ಲೂ ಆರ್​ಬಿಐ ಮೂಲಕ ಸಾಲ ಮಾಡದಿರಲು ನಿರ್ಧರಿಸಿದೆ.

ಇದನ್ನೂ ಓದಿ: ವಿದ್ಯುತ್‌ ಚಾಲಿತ ವಾಹನಗಳ ಮೇಳ ಮುಕ್ತಾಯ: ಗಮನ ಸೆಳೆದ ಇವಿ ಟ್ರ್ಯಾಕ್ಟರ್​, ಸಾವಿರಾರು ವಾಹನ ಸ್ಥಳದಲ್ಲೇ ಬುಕ್ಕಿಂಗ್​

ಬೆಂಗಳೂರು : 2022-23ರ ಆರ್ಥಿಕ ವರ್ಷದ ಮೊದಲ‌ ತ್ರೈಮಾಸಿಕದಲ್ಲಿ ತೆರಿಗೆ ಮೂಲಗಳಿಂದ ನಿರೀಕ್ಷಿತ ಗುರಿಗಿಂತ ಉತ್ತಮ ಆದಾಯ ಸಂಗ್ರಹವಾಗುತ್ತಿದೆ. ಉತ್ತಮ ಆದಾಯ ಸಂಗ್ರಹದ ಹಿನ್ನೆಲೆ ರಾಜ್ಯ ಸರ್ಕಾರ ಮುಂದಿನ ತ್ರೈ ಮಾಸಿಕದಲ್ಲೂ ಸಾಲ ಎತ್ತುವಳಿ ಮಾಡದಿರಲು ನಿರ್ಧರಿಸಿದೆ. ಕೋವಿಡ್-ಲಾಕ್ ಡೌನ್​ನಿಂದ ಕಳೆದ ಎರಡು ವರ್ಷಗಳಿಂದ ಸೊರಗಿ ಹೋಗಿದ್ದ ರಾಜ್ಯದ ಖಜಾನೆಗೆ ಈ ಆರ್ಥಿಕ ವರ್ಷದ ಆರಂಭದಲ್ಲೇ ಉತ್ತಮ ಚೇತರಿಕೆ ಕಾಣುತ್ತಿದೆ.

ಮೊದಲ ತ್ರೈ ಮಾಸಿಕದಲ್ಲಿ ತೆರಿಗೆ ಮೂಲಗಳಿಂದ ಸಂಗ್ರಹವಾಗಿರುವ ಆದಾಯ ನಿರೀಕ್ಷಿತ ಗುರಿಯನ್ನು ಮೀರಿದೆ. ಆ ಮೂಲಕ ಎರಡು ವರ್ಷಗಳಿಂದ ಸೊರಗಿದ್ದ ಆದಾಯ ಮೂಲಗಳು ಈ ಆರ್ಥಿಕ ವರ್ಷದ ಆರಂಭದಲ್ಲೇ ಶುಭ ಸೂಚನೆ ನೀಡುತ್ತಿದೆ.

ಮೊದಲ ತ್ರೈ ಮಾಸಿಕದಲ್ಲಿ ಭರ್ಜರಿ ತೆರಿಗೆ ಸಂಗ್ರಹ: ರಾಜ್ಯದಲ್ಲಿ ಈ ಆರ್ಥಿಕ ವರ್ಷದಲ್ಲಿ ಬೊಕ್ಕಸಕ್ಕೆ ನಿರೀಕ್ಷಿತ ಗುರಿ ಮೀರಿ ತೆರಿಗೆಗಳ ಮೂಲಕ ಆದಾಯ ಸಂಗ್ರಹವಾಗಿದೆ. ಏಪ್ರಿಲ್-ಜೂನ್ ವರೆಗಿನ ಮೊದಲ ತ್ರೈಮಾಸಿಕದಲ್ಲಿ ಪ್ರಮುಖ ತೆರಿಗೆ ಸಂಗ್ರಹ ಇಲಾಖೆಗಳು ಗುರಿ ಮೀರಿ ಆದಾಯ ಸಂಗ್ರಹಿಸಿರುವುದು ರಾಜ್ಯ ಸರ್ಕಾರಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

ಅದರಲ್ಲೂ ವಾಣಿಜ್ಯ ಇಲಾಖೆ ಭರ್ಜರಿ ತೆರಿಗೆ ಸಂಗ್ರಹ ಮಾಡಿದೆ. ಮೊದಲ ತ್ರೈಮಾಸಿಕದಲ್ಲಿ 21,235 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಿದೆ. ತ್ರೈಮಾಸಿಕ ಗುರಿ ಇದ್ದಿದ್ದು 19,259 ಕೋಟಿ ರೂ. ಆದರೆ, ವಾಣಿಜ್ಯ ಇಲಾಖೆ ಹೆಚ್ಚುವರಿ ತೆರಿಗೆ ಸಂಗ್ರಹ ಮಾಡಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ 50%ಗೂ ಅಧಿಕ ವಾಣಿಜ್ಯ ತೆರಿಗೆ ಸಂಗ್ರಹಿಸಿದೆ.

ನೋಂದಣಿ ಹಾಗೂ ಮುದ್ರಾಂಕ ಇಲಾಖೆ: ಇತ್ತ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯೂ ತ್ರೈಮಾಸಿಕ ಗುರಿ ಮೀರಿ ತೆರಿಗೆ ಸಂಗ್ರಹಿಸಿದೆ. ಮೊದಲ ತ್ರೈಮಾಸಿಕದಲ್ಲಿ 3,897 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. 2,962 ಕೋಟಿ ರೂ. ತ್ರೈಮಾಸಿಕ ಗುರಿಗಿಂತ 934 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹಿಸಲಾಗಿದೆ.

ಅಬಕಾರಿ ಇಲಾಖೆ: ಅಬಕಾರಿ ಇಲಾಖೆ ಎಂದಿನಂತೆ ಗುರಿ ಮೀರಿ ಭರ್ಜರಿ ಆದಾಯ ಸಂಗ್ರಹಿಸಿದೆ. ಮೊದಲ ತ್ರೈಮಾಸಿಕದಲ್ಲಿ ನಿಗದಿಯಾಗಿದ್ದ 7,250 ಕೋಟಿ ರೂ. ಗುರಿಯನ್ನು ಮೀರಿ ಒಟ್ಟು 7,574 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹ ಮಾಡಿದೆ.

ಮೋಟಾರ್ ವಾಹನ ತೆರಿಗೆ: ಇತ್ತ ಮೋಟಾರ್ ವಾಹನ ತೆರಿಗೆ ಸಂಗ್ರಹವೂ ಗುರಿ ದಾಟಿದೆ. ಮೊದಲ ತ್ರೈಮಾಸಿಕದಲ್ಲಿ 2,046 ಮೋಟಾರ್ ವಾಹನ ತೆರಿಗೆ ಸಂಗ್ರಹ ಮಾಡಿದೆ. ತ್ರೈ ಮಾಸಿಕ ಗುರಿ ಇದ್ದಿದ್ದು 1,980 ಕೋಟಿ ರೂ. ಕಳೆದ ಎರಡು ವರ್ಷದಿಂದ ಗುರಿ ಮುಟ್ಟದೇ ಸೊರಗಿದ್ದ ಮೋಟಾರ್ ವಾಹನ ತೆರಿಗೆ ಈ ಆರ್ಥಿಕ ವರ್ಷ ಗಣನೀಯ ಚೇತರಿಕೆ ಕಂಡಿದೆ.

ಸಾಲ ಎತ್ತುವಳಿ ಮಾಡದಿರಲು ಸರ್ಕಾರ ನಿರ್ಧಾರ: ಮೊದಲ ತ್ರೈಮಾಸಿಕದಲ್ಲಿ ಗುರಿ ಮೀರಿ ಭರ್ಜರಿ ತೆರಿಗೆ ಸಂಗ್ರಹವಾಗಿರುವುದರಿಂದ ರಾಜ್ಯ ಸರ್ಕಾರ ಎರಡನೇ ತ್ರೈ ಮಾಸಿಕದಲ್ಲೂ ಸಾಲ ಎತ್ತುವಳಿ ಮಾಡದಿರಲು ನಿರ್ಧರಿಸಿದೆ.

ಈ ಬಾರಿ ಒಟ್ಟು 72,089 ಕೋಟಿ ಸಾಲ ಮಾಡಲು ಯೋಜಿಸಿದೆ. ಆ ಪೈಕಿ 67,911 ಕೋಟಿ ರೂ. ಮುಕ್ತ ಮಾರುಕಟ್ಟೆ ಮೂಲಕ ಸಾಲ ಮಾಡಲು ಮುಂದಾಗಿದೆ. ಏಪ್ರಿಲ್-ಜೂನ್ ಮುಗಿಯಲಿರುವ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿ ಮಾಡಿರಲಿಲ್ಲ. ಇದೀಗ ಉತ್ತಮ ಆದಾಯ ಸಂಗ್ರಹಿಸಿದ ಕಾರಣ ಜುಲೈ-ಸೆಪ್ಟೆಂಬರ್ ವರೆಗಿನ ಎರಡನೇ ತ್ರೈಮಾಸಿಕದಲ್ಲೂ ಆರ್​ಬಿಐ ಮೂಲಕ ಸಾಲ ಮಾಡದಿರಲು ನಿರ್ಧರಿಸಿದೆ.

ಇದನ್ನೂ ಓದಿ: ವಿದ್ಯುತ್‌ ಚಾಲಿತ ವಾಹನಗಳ ಮೇಳ ಮುಕ್ತಾಯ: ಗಮನ ಸೆಳೆದ ಇವಿ ಟ್ರ್ಯಾಕ್ಟರ್​, ಸಾವಿರಾರು ವಾಹನ ಸ್ಥಳದಲ್ಲೇ ಬುಕ್ಕಿಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.