ETV Bharat / state

ಜೆಡಿಎಸ್,ಕಾಂಗ್ರೆಸ್ ಶಾಸಕರಿಗೆ ರಾಜೀನಾಮೆ ನೀಡದಂತೆ ಸಲಹೆ ಕೊಟ್ಟಿದ್ದೇನೆ: ಎಸ್.ಟಿ.ಸೋಮಶೇಖರ್ - ಯಶವಂತಪುರ ಕ್ಷೇತ್ರ ಅಭ್ಯರ್ಥಿ ಎಸ್.ಟಿ.ಸೋಮಶೇಖರ್

ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ರಾಜೀನಾಮೆ ಕೊಡುವುದು ಬೇಡ ಎಂದು ಸಲಹೆ ನೀಡಿರುವುದಾಗಿ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

SOMASHEKAR
ಎಸ್.ಟಿ.ಸೋಮಶೇಖರ್
author img

By

Published : Dec 8, 2019, 5:46 PM IST

ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ರಾಜೀನಾಮೆ ಕೊಡುವುದು ಬೇಡವೆಂದು ಸಲಹೆ ನೀಡಿರುವುದಾಗಿ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಕನಕಪುರ ರಸ್ತೆಯಲ್ಲಿರುವ ಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಮಾತನಾಡಿದ ಅವರು, ನಾವು ರಾಜೀನಾಮೆ ಕೊಟ್ಟು ಮೂರು ತಿಂಗಳು ಸಾಕಷ್ಟು ನೋವು ಅನುಭವಿಸಿದ್ದೇವೆ. ರಾಜೀನಾಮೆ ಕೊಟ್ಟರೆ ರಾಜಕೀಯವಾಗಿ ಹಾಗು ಕ್ಷೇತ್ರದಲ್ಲೂ ಸಾಕಷ್ಟು ಡ್ಯಾಮೇಜ್ ಮಾಡುತ್ತಾರೆ. ಇದಕ್ಕೆಲ್ಲಾ ನೀವು ಸಿದ್ಧರಿದ್ದರೆ ಅಂಥ ಕೆಲಸಕ್ಕೆ ಕೈ ಹಾಕಿ ಎಂದರು.

ಎಸ್.ಟಿ.ಸೋಮಶೇಖರ್

ಈ ಹಿಂದೆ ನನ್ನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಸಾಕಷ್ಟು ವಿಚಾರಗಳನ್ನು ಹರಿಬಿಟ್ಟಿದ್ದಾರೆ. ಅಣ್ಣಾ ಹಜಾರೆಯವರು ಅನರ್ಹ ಶಾಸಕರನ್ನು ಸೋಲಿಸಲು ಕರೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿದರು. ಇಷ್ಟಕ್ಕೂ ಅಣ್ಣಾ ಹಜಾರೆಯವರಿಗೂ ಕರ್ನಾಟಕಕ್ಕೂ ಏನು ಸಂಬಂಧ? ಎಂದರು.

ಇನ್ನು, ಕ್ಷೇತ್ರದ ಅಭಿವೃದ್ಧಿಗಷ್ಟೇ ನನ್ನ ಗಮ‌ನವಿದೆ. ನಾವೇನೂ ಮಂತ್ರಿಯಾಗೋ ಆಸೆಯಿಂದ ಬಿಜೆಪಿ ಸೇರಲಿಲ್ಲ. ಮಂತ್ರಿ ಮಾಡದೇ ಇದ್ದರೂ ಕೂಡ ನಾನು ಕ್ಷೇತ್ರದ ಕೆಲಸ ಮಾಡುತ್ತೇನೆ. ಮಂತ್ರಿಗಿರಿ ಕೊಡಿ ಅಂತ ಸಿಎಂ ಬಳಿ ಕೇಳಿಯೂ ಇಲ್ಲ. ಕೊಡದಿದ್ದರೂ ನಾನು ಲಾಬಿ ಮಾಡಲು ಹೋಗಲ್ಲ ಎಂದು ಸ್ಪಷ್ಟಪಡಿಸಿದ್ರು.

ಡಿಕೆಶಿಗೆ ಸೋಮಶೇಖರ್‌ ಟಾಂಗ್:

ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ವಿಧಾನಸಭೆ ಉಪಸಮರದಲ್ಲಿ 'ನೀವೆಲ್ಲಾ ಸಮಾಧಿ ಆಗಿ ಹೋಗುತ್ತೀರಿ' ಎಂದಿದ್ದ ಮಾತಿಗೆ ಪ್ರತಿಕ್ರಿಯಿಸುತ್ತಾ, ಶಿವಕುಮಾರ್ ರಾಜ್ಯ ಮಟ್ಟದ ನಾಯಕರು. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ.ಏನೋ ಅವರು ದೊಡ್ಡವರು ಆ ರೀತಿ ಹೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್‌ ಕೊಟ್ಟರು.

ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ರಾಜೀನಾಮೆ ಕೊಡುವುದು ಬೇಡವೆಂದು ಸಲಹೆ ನೀಡಿರುವುದಾಗಿ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಕನಕಪುರ ರಸ್ತೆಯಲ್ಲಿರುವ ಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಮಾತನಾಡಿದ ಅವರು, ನಾವು ರಾಜೀನಾಮೆ ಕೊಟ್ಟು ಮೂರು ತಿಂಗಳು ಸಾಕಷ್ಟು ನೋವು ಅನುಭವಿಸಿದ್ದೇವೆ. ರಾಜೀನಾಮೆ ಕೊಟ್ಟರೆ ರಾಜಕೀಯವಾಗಿ ಹಾಗು ಕ್ಷೇತ್ರದಲ್ಲೂ ಸಾಕಷ್ಟು ಡ್ಯಾಮೇಜ್ ಮಾಡುತ್ತಾರೆ. ಇದಕ್ಕೆಲ್ಲಾ ನೀವು ಸಿದ್ಧರಿದ್ದರೆ ಅಂಥ ಕೆಲಸಕ್ಕೆ ಕೈ ಹಾಕಿ ಎಂದರು.

ಎಸ್.ಟಿ.ಸೋಮಶೇಖರ್

ಈ ಹಿಂದೆ ನನ್ನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಸಾಕಷ್ಟು ವಿಚಾರಗಳನ್ನು ಹರಿಬಿಟ್ಟಿದ್ದಾರೆ. ಅಣ್ಣಾ ಹಜಾರೆಯವರು ಅನರ್ಹ ಶಾಸಕರನ್ನು ಸೋಲಿಸಲು ಕರೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿದರು. ಇಷ್ಟಕ್ಕೂ ಅಣ್ಣಾ ಹಜಾರೆಯವರಿಗೂ ಕರ್ನಾಟಕಕ್ಕೂ ಏನು ಸಂಬಂಧ? ಎಂದರು.

ಇನ್ನು, ಕ್ಷೇತ್ರದ ಅಭಿವೃದ್ಧಿಗಷ್ಟೇ ನನ್ನ ಗಮ‌ನವಿದೆ. ನಾವೇನೂ ಮಂತ್ರಿಯಾಗೋ ಆಸೆಯಿಂದ ಬಿಜೆಪಿ ಸೇರಲಿಲ್ಲ. ಮಂತ್ರಿ ಮಾಡದೇ ಇದ್ದರೂ ಕೂಡ ನಾನು ಕ್ಷೇತ್ರದ ಕೆಲಸ ಮಾಡುತ್ತೇನೆ. ಮಂತ್ರಿಗಿರಿ ಕೊಡಿ ಅಂತ ಸಿಎಂ ಬಳಿ ಕೇಳಿಯೂ ಇಲ್ಲ. ಕೊಡದಿದ್ದರೂ ನಾನು ಲಾಬಿ ಮಾಡಲು ಹೋಗಲ್ಲ ಎಂದು ಸ್ಪಷ್ಟಪಡಿಸಿದ್ರು.

ಡಿಕೆಶಿಗೆ ಸೋಮಶೇಖರ್‌ ಟಾಂಗ್:

ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ವಿಧಾನಸಭೆ ಉಪಸಮರದಲ್ಲಿ 'ನೀವೆಲ್ಲಾ ಸಮಾಧಿ ಆಗಿ ಹೋಗುತ್ತೀರಿ' ಎಂದಿದ್ದ ಮಾತಿಗೆ ಪ್ರತಿಕ್ರಿಯಿಸುತ್ತಾ, ಶಿವಕುಮಾರ್ ರಾಜ್ಯ ಮಟ್ಟದ ನಾಯಕರು. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ.ಏನೋ ಅವರು ದೊಡ್ಡವರು ಆ ರೀತಿ ಹೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್‌ ಕೊಟ್ಟರು.

Intro:Body:KN_BNG_02_STSOMASHEKAR_PRESSMEET_SCRIPT_7201951

ಜೆಡಿಎಸ್, ಕೈ ಶಾಸಕರಿಗೆ ರಾಜೀನಾಮೆ ನೀಡದಂತೆ ಸಲಹೆ ಕೊಟ್ಟಿದ್ದೇನೆ: ಎಸ್.ಟಿ.ಸೋಮಶೇಖರ್

ಬೆಂಗಳೂರು: ಜೆಡಿಎಸ್ ಹಾಗು ಕಾಂಗ್ರೆಸ್ ಶಾಸಕರು ನನ್ನ‌ ಜೊತೆ ಸಂಪರ್ಕದಲ್ಲಿ‌ದ್ದು, ರಾಜೀನಾಮೆ ಕೊಡುವುದು ಬೇಡವೆಂದು ಸಲಹೆ ನೀಡಿದ್ದೇನೆ ಎಂದು ಯಶವಂತಪುರ ಕ್ಷೇತ್ರ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಕನಕಪುರ ರಸ್ತೆಯಲ್ಲಿರುವ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಮಾತನಾಡಿದ ಅವರು,
ಜೆಡಿಎಅ್ ನ 9 ಹಾಗು ಕಾಂಗ್ರೆಸ್ ನ 3 ಶಾಸಕರು ಸಂಪರ್ಕದಲ್ಲಿದ್ದಾರೆ. ಅವರಿಗೆ ರಾಜೀನಾಮೆ ಕೊಡುವುದು ಬೇಡ ಅಂತ ಹೇಳಿದ್ದೇನೆ. ನಾವು ರಾಜೀನಾಮೆ ಕೊಟ್ಟು ಮೂರು ತಿಂಗಳು ಸಾಕಷ್ಟು ಸಫರ್ ಪಟ್ಟಿದ್ದೇವೆ. ರಾಜೀನಾಮೆ ಕೊಟ್ಟರೆ ರಾಜಕೀಯವಾಗಿ, ಕ್ಷೇತ್ರದಲ್ಲಿ ಸಾಕಷ್ಟು ಡ್ಯಾಮೇಜ್ ಮಾಡುತ್ತಾರೆ ಅಂತ ಹೇಳಿದ್ದೇನೆ. ಇದಕ್ಕೆಲ್ಲಾ ನೀವು ಸಿದ್ಧರಿದ್ದರೆ ರಾಜೀನಾಮೆ ನೀಡಿ ಅಂತ ಸಲಹೆ ನೀಡಿದ್ದೇನೆ ಎಂದರು.

ಮತ್ತೆ ಆಪರೇಷನ್ ಕಮಲ ಮಾಡುವ ಅಗತ್ಯವಿಲ್ಲ. ಬಿಜೆಪಿ ಸರ್ಕಾರ ಸುಭದ್ರವಾಗಿರುತ್ತದೆ.
ಅಗತ್ಯಕ್ಕಿಂತ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಲ್ಲಿದ್ದಿದ್ದರೆ, ಸಮಾಧಿ ಆಗುತ್ತಿದ್ದೆವು:

ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ನಾವು ಸಮಾಧಿ ಆಗುತ್ತಿದ್ದೆವು‌ ನಾವು ಕಾಂಗ್ರೆಸ್ ನಿಂದ ಹೊರ ಬಂದು ಸಮಾಧಿ ಆಗೋದರಿಂದ ತಪ್ಪಿಸಿಕೊಂಡಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

ಕಾಂಗ್ರೆಸ್ ನಾಯಕರಿಗೆ ಪಕ್ಷವನ್ನು ಬೆಳೆಸುವ ಉದ್ದೇಶ ಇರಲೇ ಇಲ್ಲ. ಕಾಂಗ್ರೆಸ್ ನಾಯಕರೇ ಪಕ್ಷವನ್ನು ಹಾಳು ಮಾಡಿದರು ಎಂದು ಸೋಮಶೇಖರ್, ಕ್ಷೇತ್ರದ ಅಭಿವೃದ್ಧಿಗಷ್ಟೇ ನನ್ನ ಗಮ‌ನ ಇರುವುದು. ನಾವೇನೂ ಮಂತ್ರಿಯಾಗೋ ಆಸೆಯಿಂದ ಬಿಜೆಪಿ ಸೇರಲಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಮಂತ್ರಿ ಮಾಡದೇ ಇದ್ದರೂ ಕೂಡ ನಾನು ಕ್ಷೇತ್ರದ ಕೆಲಸ ಮಾಡುತ್ತೇನೆ. ಮಂತ್ರಿಗಿರಿ ಕೊಡಿ ಅಂತ ಸಿಎಂ ಬಳಿ ಕೇಳಲೂ ಇಲ್ಲ ಎಂದು ತಿಳಿಸಿದರು.

ಬಿಜೆಪಿ ಅನರ್ಹರಿಗೆ ಮೋಸ‌ ಮಾಡಿಲ್ಲ:

ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ನ ಆದೇಶದ ಪ್ರಕಾರ ಸೋತವರಿಗೆ ಸಚಿವ ಸ್ಥಾನ ನೀಡುವುದಕ್ಕಾಗುವುದಿಲ್ಲ. ಪರಿಷತ್ ಸ್ಥಾನವನ್ನು ಕೊಡಿ ಅಂತ ಯಾರೂ ಕೂಡ ಕೇಳಿಲ್ಲ. ಎಚ್.ವಿಶ್ವನಾಥ್ ಗೆ ಚುನಾವಣೆಗೆ ನಿಲ್ಲಬೇಡಿ ಅಂದಿದ್ದರು. ಆದರೆ ಅವರು ಚುನಾವಣಾ ಸ್ಪರ್ಧೆ ಮಾಡುತ್ತೇನೆ ಅಂದ್ರು. ಸ್ಪರ್ಧೆ ಮಾಡಿದ್ದಾರೆ ಎಂದು ವಿವರಿಸಿದರು.

ನಾಡಿದ್ದು ನಾವು 17 ಜನ ಒಟ್ಟಿಗೆ ಸೇರಿ ಸಭೆ ನಡೆಸುತ್ತೇವೆ. ಬಿಜೆಪಿ ಯಾವ ಅನರ್ಹ ಶಾಸಕರಿಗೂ ಕೂಡ ಮೋಸ ಮಾಡಿಲ್ಲ ಎಂದು ತಿಳಿಸಿದರು.

ಡಿಕೆಶಿಗೆ ಟಾಂಗ್:

ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆ ಉಪಸಮರದಲ್ಲಿ ನೀವೆಲ್ಲಾ ಸಮಾಧಿ ಆಗಿ ಹೋಗುತ್ತೀರಿ ಅಂದಿದ್ರು, ಆದರೆ ನಾವು ಕಾಂಗ್ರೆಸ್ ನಲ್ಲೇ ಇದ್ದಿದ್ದರೆ ಸಮಾಧಿ ಆಗುತ್ತಿದ್ದೆವು ಎಂದು ಟಾಂಗ್ ನೀಡಿದರು.

ಡಿ.ಕೆ.ಶಿವಕುಮಾರ್ ರಾಜ್ಯ ಮಟ್ಟದ ನಾಯಕರು. ನಮ್ಮ ನಾಯಕರು. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಕ್ಷೇತ್ರದಲ್ಲಿ ಏನೆಲ್ಲಾ ಅಪಪ್ರಚಾರ, ಅವಮಾನಗಳನ್ನು ಮಾಡಿದರು. ಆದರೆ, ಎಲ್ಲವನ್ನೂ ಯಶವಂತಪುರ ಕ್ಷೇತ್ರದ ಜನ ಸಹಿಸಿಕೊಂಡು ಯಾವುದೇ ಗಲಾಟೆ ಇಲ್ಲದೆ ಮತದಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.