ETV Bharat / state

1 ಟ್ರಿಲಿಯನ್ ಡಾಲರ್​ನ ಐಟಿ​ ಮಾರ್ಕೆಟ್​​: ಶೇ.40ರಷ್ಟು ಪಾಲು ಹೊಂದುವ ಗುರಿ- ಡಿಸಿಎಂ

author img

By

Published : Sep 19, 2019, 8:51 PM IST

ಐಟಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಕ್ಕೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ಪೂರಕ ತಯಾರಿ, ಯೋಜನೆಗಳನ್ನು ಹಾಕಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ಐಟಿ ಕ್ಷೇತ್ರದಲ್ಲಿ ಉನ್ನತ ಹಂತ ತಲುಪಲಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ್ ಹೇಳಿದರು.

ಸಚಿವ ಡಾ.ಅಶ್ವತ್ಥನಾರಾಯಣ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ದೇಶದ ಐಟಿ ಕ್ಷೇತ್ರ 1 ಟ್ರಿಲಿಯನ್ ಡಾಲರ್​ ಮಾರ್ಕೆಟ್ ಗುರಿ ಮುಟ್ಟಿದಾಗ, ಅದರಲ್ಲಿ ಶೇ.40 ರಷ್ಟು ಪಾಲು ಕರ್ನಾಟಕದ್ದೇ ಇರಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಐಟಿ, ಬಿಟಿ ಸಚಿವ ಡಾ.‌ ಅಶ್ವತ್ಥನಾರಾಯಣ ಹೇಳಿದರು.

ಸಚಿವ ಡಾ.ಅಶ್ವತ್ಥನಾರಾಯಣ

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಐಟಿ, ಬಿಟಿಯಲ್ಲಿ ಹಿಡಿತ ಸಾಧಿಸಲು ಪ್ರತಿ ರಾಜ್ಯ, ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಕಾನೂನಿನಲ್ಲಿ ಬದಲಾವಣೆ ಸೇರಿದಂತೆ ಹಲವು ಸುಧಾರಣೆ ತರಲು ಸರ್ಕಾರದ ಹಾಗೂ ನಮ್ಮ ಐಟಿ, ಬಿಟಿ ಇಲಾಖೆ ಸಜ್ಜಾಗಿದೆ ಎಂದರು.

ಇನ್ನು, ಇನೋವೇಷನ್ ಅಥಾರಿಟಿ ಕಾರ್ಯರೂಪಕ್ಕೆ ತರಲು ಕರ್ನಾಟಕ ಮುನ್ನುಡಿ ಬರೆಯುತ್ತಿದೆ. ಅದರ ಹೆಗ್ಗಳಿಕೆ ಕೂಡ ನಮ್ಮ ಕರ್ನಾಟಕ ಸರ್ಕಾರದ್ದು. ಸ್ಟಾರ್ಟ್ ಅಪ್, ಐಟಿ ಕಾಯ್ದೆಯಲ್ಲಿ ಬದಲಾವಣೆ ತರುವ ಪ್ರಯತ್ನ ಕೂಡ ನಮ್ಮದೇ. ಡಿಜಿಟಲ್ ಎಕಾನಮಿ ಶೇ.20 ಇದ್ದು, ಹೊಸ ಆವಿಷ್ಕಾರ ರೂಪಿಸಲು ಇಲಾಖೆ ಕಾರ್ಯೋನ್ಮುಖವಾಗಲಿದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ಇಂದು ಐಟಿ, ಬಿಟಿಯಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಅದನ್ನ ಇನ್ನಷ್ಟು ಮುಂದುವರಿಸಲು ಚಿಂತನೆ ನಡೆದಿದೆ. ಶೇ.40 ರಷ್ಟು ಪ್ರಮಾಣದಲ್ಲಿ ಈಗ ಐಟಿಬಿಟಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗಿದ್ದು, ಸ್ಥಳೀಯರಿಗೇ ಉದ್ಯೋಗವಕಾಶ ನೀಡಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

ನವೆಂಬರ್​ನಲ್ಲಿ ಟೆಕ್ ಸಮ್ಮೇಳನ: ನವೆಂಬರ್ 18ರಿಂದ 20ರವರೆಗೆ ಬೆಂಗಳೂರು ತಂತ್ರಜ್ಞಾನ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಅದಕ್ಕಾಗಿ ರಾಜ್ಯದ ಹಲವೆಡೆ ರೋಡ್ ಶೋ ನಡೆಸಲಾಗುವುದು. ದೆಹಲಿಯಲ್ಲಿ ಅಕ್ಟೋಬರ್ 4ರಂದು ರೋಡ್ ಶೋ ನಡೆಯಲಿದೆ. ಈ ಸಮ್ಮೇಳನ ಹಿನ್ನೆಲೆಯಲ್ಲಿ ಟ್ಯಾಲೆಂಟ್ ಎಕ್ಸಲೇಟರ್ ಕಾರ್ಯಕ್ರಮ ಹೆಚ್ಚಿಸಲಾಗುವುದು ಎಂದು ಡಿಸಿಎಂ ಅಶ್ವತ್ಥನಾರಾಯಣ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ದೇಶದ ಐಟಿ ಕ್ಷೇತ್ರ 1 ಟ್ರಿಲಿಯನ್ ಡಾಲರ್​ ಮಾರ್ಕೆಟ್ ಗುರಿ ಮುಟ್ಟಿದಾಗ, ಅದರಲ್ಲಿ ಶೇ.40 ರಷ್ಟು ಪಾಲು ಕರ್ನಾಟಕದ್ದೇ ಇರಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಐಟಿ, ಬಿಟಿ ಸಚಿವ ಡಾ.‌ ಅಶ್ವತ್ಥನಾರಾಯಣ ಹೇಳಿದರು.

ಸಚಿವ ಡಾ.ಅಶ್ವತ್ಥನಾರಾಯಣ

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಐಟಿ, ಬಿಟಿಯಲ್ಲಿ ಹಿಡಿತ ಸಾಧಿಸಲು ಪ್ರತಿ ರಾಜ್ಯ, ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಕಾನೂನಿನಲ್ಲಿ ಬದಲಾವಣೆ ಸೇರಿದಂತೆ ಹಲವು ಸುಧಾರಣೆ ತರಲು ಸರ್ಕಾರದ ಹಾಗೂ ನಮ್ಮ ಐಟಿ, ಬಿಟಿ ಇಲಾಖೆ ಸಜ್ಜಾಗಿದೆ ಎಂದರು.

ಇನ್ನು, ಇನೋವೇಷನ್ ಅಥಾರಿಟಿ ಕಾರ್ಯರೂಪಕ್ಕೆ ತರಲು ಕರ್ನಾಟಕ ಮುನ್ನುಡಿ ಬರೆಯುತ್ತಿದೆ. ಅದರ ಹೆಗ್ಗಳಿಕೆ ಕೂಡ ನಮ್ಮ ಕರ್ನಾಟಕ ಸರ್ಕಾರದ್ದು. ಸ್ಟಾರ್ಟ್ ಅಪ್, ಐಟಿ ಕಾಯ್ದೆಯಲ್ಲಿ ಬದಲಾವಣೆ ತರುವ ಪ್ರಯತ್ನ ಕೂಡ ನಮ್ಮದೇ. ಡಿಜಿಟಲ್ ಎಕಾನಮಿ ಶೇ.20 ಇದ್ದು, ಹೊಸ ಆವಿಷ್ಕಾರ ರೂಪಿಸಲು ಇಲಾಖೆ ಕಾರ್ಯೋನ್ಮುಖವಾಗಲಿದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ಇಂದು ಐಟಿ, ಬಿಟಿಯಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಅದನ್ನ ಇನ್ನಷ್ಟು ಮುಂದುವರಿಸಲು ಚಿಂತನೆ ನಡೆದಿದೆ. ಶೇ.40 ರಷ್ಟು ಪ್ರಮಾಣದಲ್ಲಿ ಈಗ ಐಟಿಬಿಟಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗಿದ್ದು, ಸ್ಥಳೀಯರಿಗೇ ಉದ್ಯೋಗವಕಾಶ ನೀಡಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

ನವೆಂಬರ್​ನಲ್ಲಿ ಟೆಕ್ ಸಮ್ಮೇಳನ: ನವೆಂಬರ್ 18ರಿಂದ 20ರವರೆಗೆ ಬೆಂಗಳೂರು ತಂತ್ರಜ್ಞಾನ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಅದಕ್ಕಾಗಿ ರಾಜ್ಯದ ಹಲವೆಡೆ ರೋಡ್ ಶೋ ನಡೆಸಲಾಗುವುದು. ದೆಹಲಿಯಲ್ಲಿ ಅಕ್ಟೋಬರ್ 4ರಂದು ರೋಡ್ ಶೋ ನಡೆಯಲಿದೆ. ಈ ಸಮ್ಮೇಳನ ಹಿನ್ನೆಲೆಯಲ್ಲಿ ಟ್ಯಾಲೆಂಟ್ ಎಕ್ಸಲೇಟರ್ ಕಾರ್ಯಕ್ರಮ ಹೆಚ್ಚಿಸಲಾಗುವುದು ಎಂದು ಡಿಸಿಎಂ ಅಶ್ವತ್ಥನಾರಾಯಣ್ ಇದೇ ಸಂದರ್ಭದಲ್ಲಿ ತಿಳಿಸಿದರು.

Intro:KN_BNG_01_DCM_PC_ON_ITBT_MEETING_SCRIPT_9921933


ಐಟಿ ಕ್ಷೇತ್ರದ 1 ಟ್ರಿಲಿಯನ್ ಮಾರ್ಕೆಟ್ ನಲ್ಲಿ ಶೇ.40 ರ ಪಾಲು ನಮ್ಮ ಗುರಿ: ಡಿಸಿಎಂ ಅಶ್ವತ್ಥನಾರಾಯಣ್


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ದೇಶದ ಐಟಿ ಕ್ಷೇತ್ರ 1 ಟ್ರಿಲಿಯನ್ ಮಾರ್ಕೆಟ್ ಗುರಿ ಮುಟ್ಟಿದಾಗ ಅದರಲ್ಲಿ ಶೇ.40 ರಷ್ಟು ಪಾಲು ಕರ್ನಾಟಕದ್ದೇ ಇರಬೇಕು ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಡಿಸಿಎಂ ಹಾಗೂ ಐಟಿ, ಬಿಟಿ ಸಚಿವ ಡಾ.‌ಅಶ್ವತ್ಥನಾರಾಯಣ ಹೇಳಿದ್ದಾರೆ.

ನಗರದ ಖಾಸಗಿ ತಾರಾ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇವತ್ತು ಐಟಿ, ಬಿಟಿ ಸಂಸ್ಥಾಪರ ಜೊತೆಗೆ ಸ್ನೇಹ ಕೂಟ ಆಯೋಜಿಸಲಾಗಿತ್ತು.ಮುಖ್ಯಮಂತ್ರಿ ಯಡಿಯೂರಪ್ಪ ಈ ಸಭೆ ನಡೆಸಿದರು.ವಿಶ್ವಕ್ಕೇ ಅನ್ವಯವಾಗುವ ರೀತಿ ಪರಿಹಾರ ಕೊಡುವ ತಂತ್ರಜ್ಞಾನ ಇಂದು ಇದೆ. ಇದರಲ್ಲಿ ಹೆಚ್ಚಿನ ಅನುಕೂಲಕರವಾಗುವ ರೀತಿ ಪೈಪೋಟಿ ಇದೆ.ಐಟಿ, ಬಿಟಿಯಲ್ಲಿ ಮುನ್ನೆಲೆಗೆ ಬರಲು ಪ್ರತಿ ರಾಜ್ಯ, ರಾಷ್ಟ್ರಗಳು ಪ್ರಯತ್ನಿಸುತ್ತಿವೆ.ಯಾರು ಮುಂದೆ ಇರ್ತಾರೋ ಅವರಿಗೆ ಭವಿಷ್ಯ ಇದೆ ಎಂಬ ಚಿಂತನೆ ಶುರುವಾಗಿದೆ.ಅವರ ಯೋಜನೆಗೆ ಪೂರಕವಾದ ರೀತಿ ಸರ್ಕಾರದ ಸಹಕಾರದ ಬಗ್ಗೆ ಚರ್ಚೆ ನಡೆಸಲಾಯಿತು.ಕಾನೂನಿನಲ್ಲಿ ಬದಲಾವಣೆ ಸೇರಿದಂತೆ ಹಲವು ಸುಧಾರಣೆ ತರಲು ಸರ್ಕಾರದ ನಮ್ಮ ಐಟಿ, ಬಿಟಿ ಇಲಾಖೆ ಸಜ್ಜಾಗಿದೆ ಎಂದರು.

ಇನೋವೇಷನ್ ಅಥಾರಿಟಿ ಕಾರ್ಯರೂಪಕ್ಕೆ ತರಲು ಕರ್ನಾಟಕ ಮುನ್ನುಡಿ ಬರೆಯುತ್ತಿದೆ ಅದರ ಹೆಗ್ಗಳಿಕೆ ಕೂಡ ನಮ್ಮ ಕರ್ನಾಟಕ ಸರ್ಕಾರದ್ದು.ಸ್ಟಾರ್ಟ್ ಅಪ್, ಐಟಿ ಕಾಯ್ದೆಯಲ್ಲಿ ಬದಲಾವಣೆ ತರುವ ಪ್ರಯತ್ನ ಕೂಡ ನಮ್ಮದು. ಡಿಜಿಟಲ್ ಎಕಾನಮಿ ಶೇ.20 ಇದೆ.100 ಬಿಲಿನಿಯನ್ ಮಾರ್ಕೆಟ್ ಕರ್ನಾಟಕದ್ದೇ ಇದೆ.1 ಟ್ರಿಲಿಯನ್ ಮಾರ್ಕೆಟ್ ನಲ್ಲಿ ಶೇ.40 ಕರ್ನಾಟಕದು ಇರಬೇಕು,ಮುಂದಿನ ದಿನಗಳಲ್ಲಿ ಐಟಿ ಮಾರ್ಕೆಟ್ ನಲ್ಲಿ 400 ಬಿಲಿಯನ್ ಕರ್ನಾಟಕದ ಮಾರ್ಕೆಟ್ ರೂಪಿಸಲು ಚಿಂತನೆ ಮಾಡಲಾಗಿದೆ,2023 ಕ್ಕೆ ಈ ಗುರಿ ತಲುಪುವ ನಿರೀಕ್ಷೆ ಇದೆ ಹೀಗಾಗಿ ಹೊಸ ಆವಿಷ್ಕಾರ ರೂಪಿಸಲು ಇಲಾಖೆ ಕಾರ್ಯೋನ್ಮುಖವಾಗಲಿದೆ.ಕರ್ನಾಟಕ ಇಂದು ಐಟಿ, ಬಿಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದೇವೆ.ವಿಶ್ವದಲ್ಲಿ ನಾಲ್ಲನೇ ಸ್ಥಾನದಲ್ಲಿದ್ದೇವೆ. ಅದನ್ನ ಇನ್ನಷ್ಟು ಮುಂದುವರಿಸಲು ಚಿಂತನೆ ಮಾಡುತ್ತಿದ್ದೇವೆ ಎಂದರು.

ಶೇ.40 ರಷ್ಟು ಪ್ರಮಾಣದಲ್ಲಿ ಈಗ ಐಟಿಬಿಟಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ.ಇನ್ನಷ್ಟು ಸ್ಥಳೀಯರಿಗೆ ಉದ್ಯೋಗವಕಾಶ ನೀಡಲು ಚಿಂತನೆ ನಡೆಸಲಾಗಿದೆ ಈ ಕ್ಷೇತ್ರಕ್ಕೆ ಹೆಚ್ಚಿನ ಹಣ ನಿಯೋಗಿಸಲು‌ ಕೂಡ ಚಿಂತನೆ ಮಾಡಿದ್ದೇವೆ.ಈ ಐಟಿ ಸ್ಪರ್ಧೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಗುಣಮಟ್ಟ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ದೇಶಾದ್ಯಂತ ಐಟಿ‌ ಕ್ಷೇತ್ರದಲ್ಲಿ ಕೌಶಲ್ಯದ ಕೊರತೆ ಇದೆ. ಅದನ್ನ ವೃದ್ದಿಸುವ ಕೆಲಸ ಮಾಡಬೇಕಿದೆ.ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಯತ್ನ ಮಾಡಲಿದೆ ಎಂದರು.

ನವೆಂಬರ್ ನಲ್ಲಿ ಟೆಕ್ ಸಮಿತ್:

ನ.18ರಿಂದ 20ರ ವರೆಗೆ ಬೆಂಗಳೂರು ಟೆಕ್ ಸಮಿತ್ ಆಯೋಜನೆ ಮಾಡಲಾಗಿದೆ ಅದಕ್ಕಾಗಿ ರಾಜ್ಯದ ಹಲವೆಡೆ ರೋಡ್ ಶೋ ನಡೆಸಲಾಗುವುದು.ದೆಹಲಿಯಲ್ಲಿ ಅ. 4 ರಂದು ರೋಡ್ ಶೋ ನಡೆಯಲಿದೆ.ಈ ಸಮಿತ್ ಹಿನ್ನೆಲೆಯಲ್ಲಿ ಟ್ಯಾಲೆಂಟ್ ಎಕ್ಸಲೇಟರ್ ಕಾರ್ಯಕ್ರಮ ಹೆಚ್ಚಿಸಲಾಗುವುದು ಎಂದು ಡಿಸಿಎಂ ಅಶ್ವತ್ಥನಾರಾಯಣ್ ತಿಳಿಸಿದರು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.