ETV Bharat / state

ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಬಿಯರ್ ಬಾಟಲ್​ನಿಂದ ಹಲ್ಲೆ

author img

By

Published : Aug 27, 2020, 4:21 PM IST

ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಬಿಯರ್ ಬಾಟಲ್​ನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಪಿ. ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Sliced ​​from a beer bottle on a young man
ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಬಿಯರ್ ಬಾಟಲ್​ನಿಂದ ಹಲ್ಲೆ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಬಿಯರ್ ಬಾಟಲ್​ನಿಂದ ಹಲ್ಲೆ ಮಾಡಿರುವ ಘಟನೆ ಕೆ.ಪಿ. ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಕೇಶ್ ಹಲ್ಲೆಗೊಳಗಾದ ಯುವಕ. ಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಗಾಯಾಳು ರಾಕೇಶ್, ಕಳೆದ ಆಗಸ್ಟ್​ 24ರ ರಾತ್ರಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ. ಈ ‌ವೇಳೆ ಚೋಳರಪಾಳ್ಯ ಬಳಿ ನಿಂತಿದ್ದ ಆರೋಪಿ ಶರತ್ ಎಂಬಾತ ರಾಕೇಶ್​ನನ್ನು ನೋಡಿ ಏನೋ ನನ್ನ ನೋಡಿ ಹಾಗೇ ಹೋಗ್ತಿದ್ಯಾ... ಬಾರೋ ಇಲ್ಲಿ ಎಂದಿದ್ದಾನೆ.

ಆದರೆ, ರಾಕೇಶ್​ ಶರತ್ ಬಳಿ ತೆರಳದೇ ಮನೆ ಕಡೆ ಹೆಜ್ಜೆ ಹಾಕಿದ್ದ. ಇದರಿಂದ ಕುಪಿತನಾದ ಶರತ್, ಡಿಯೋ ಬೈಕ್​ನಲ್ಲಿ ಹಿಂಬದಿಯಿಂದ ಬಂದು ಬಿಯರ್ ಬಾಟಲ್​ನಲ್ಲಿ ರಾಕೇಶ್​​ನ ತಲೆ, ಹಣೆ ಹಾಗೂ ಭುಜಕ್ಕೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ‌.

ಗಾಯಾಳು ರಾಕೇಶ್​ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣ ಸಂಬಂಧ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದಾನೆ.

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಬಿಯರ್ ಬಾಟಲ್​ನಿಂದ ಹಲ್ಲೆ ಮಾಡಿರುವ ಘಟನೆ ಕೆ.ಪಿ. ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಕೇಶ್ ಹಲ್ಲೆಗೊಳಗಾದ ಯುವಕ. ಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಗಾಯಾಳು ರಾಕೇಶ್, ಕಳೆದ ಆಗಸ್ಟ್​ 24ರ ರಾತ್ರಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ. ಈ ‌ವೇಳೆ ಚೋಳರಪಾಳ್ಯ ಬಳಿ ನಿಂತಿದ್ದ ಆರೋಪಿ ಶರತ್ ಎಂಬಾತ ರಾಕೇಶ್​ನನ್ನು ನೋಡಿ ಏನೋ ನನ್ನ ನೋಡಿ ಹಾಗೇ ಹೋಗ್ತಿದ್ಯಾ... ಬಾರೋ ಇಲ್ಲಿ ಎಂದಿದ್ದಾನೆ.

ಆದರೆ, ರಾಕೇಶ್​ ಶರತ್ ಬಳಿ ತೆರಳದೇ ಮನೆ ಕಡೆ ಹೆಜ್ಜೆ ಹಾಕಿದ್ದ. ಇದರಿಂದ ಕುಪಿತನಾದ ಶರತ್, ಡಿಯೋ ಬೈಕ್​ನಲ್ಲಿ ಹಿಂಬದಿಯಿಂದ ಬಂದು ಬಿಯರ್ ಬಾಟಲ್​ನಲ್ಲಿ ರಾಕೇಶ್​​ನ ತಲೆ, ಹಣೆ ಹಾಗೂ ಭುಜಕ್ಕೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ‌.

ಗಾಯಾಳು ರಾಕೇಶ್​ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣ ಸಂಬಂಧ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.