ETV Bharat / state

ತಲೆಮರೆಸಿಕೊಳ್ಳೋ ಮುನ್ನ ವಂಚಕ ಮನ್ಸೂರ್​ ಮಾಡಿದ್ದನಂತೆ ಈ ಬಿಗ್​ ಪ್ಲಾನ್​...! - undefined

ಪೊಲೀಸರು ದಾಳಿ ಮಾಡಿ ಬಂಧಿಸಬಹುದೆಂದು ಮೊದಲೇ ಊಹಿಸಿದ್ದ ಐಎಂಎ ಜ್ಯುವೆಲ್ಲರಿ ಮುಖ್ಯಸ್ಥ ತನ್ನ ಆಸ್ತಿಯನ್ನು ಬೇನಾಮಿ ಹೆಸರುಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕ, ಗಲ್ಫ್ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿದ್ದ ಅನ್ನೋ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.

ತಲೆಮರೆಸಿಕೊಳ್ಳೋ ಮುನ್ನ ಮನ್ಸೂರ್​ ಮಾಡಿದ್ದೇನು ಗೊತ್ತಾ!?
author img

By

Published : Jun 21, 2019, 10:35 PM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣದ‌ ತನಿಖೆ ಚುರುಕುಗೊಳಿಸಿರುವ ಎಸ್​ಐಟಿ, ಆರೋಪಿ ಮೊಹಮ್ಮದ್ ಮನ್ಸೂರ್ ಸಂಬಂಧಿಕರ ಮನೆಗಳ ಮೇಲೆ ದಾಳಿ‌ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದೆ.

ಮೊದಲೇ ದೇಶ ತೊರೆಯಲು ನಿರ್ಧರಿಸಿದ್ದ ಮನ್ಸೂರ್ ಕಳೆದ 6 ತಿಂಗಳಿಂದ 5 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಫ್ರೀ ಚೆಕ್ ಮತ್ತು ಬೇನಾಮಿ ಹೆಸರುಗಳಲ್ಲಿ ಡ್ರಾ ಮಾಡಿಕೊಂಡಿದ್ದಾನೆ ಎಂದು ಎಸ್ಐಟಿ‌ ಮೂಲಗಳು ತಿಳಿಸಿವೆ.

ಇಂದು ಸಹ ಎಸ್​ಐಟಿ ಅಧಿಕಾರಿಗಳು ಶಿವಾಜಿನಗರದಲ್ಲಿರುವ ಮನ್ಸೂರ್ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಬೆನ್ನು ಬಿದ್ದಿದ್ದ ವಿಷಯ ಗೊತ್ತಾಗುತ್ತಿದ್ದಂತೆ ಮನ್ಸೂರ್ ದೇಶ ಬಿಟ್ಟು ಹೋಗಲು‌ ನಿರ್ಧರಿಸಿದ್ದ. ಈ ಕಾರಣಕ್ಕಾಗೇ ಬ್ಯಾಂಕುಗಳಲ್ಲಿದ್ದ ಹಣವನ್ನು ಫ್ರೀ ಚೆಕ್​ ನೀಡಿ ‌ಡ್ರಾ ಮಾಡಿಕೊಂಡಿದ್ದಾನೆ.

ಆ್ಯಂಬಿಡೆಂಟ್ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಂದಿನಿಂದ ಮನ್ಸೂರ್ ಎಚ್ಚೆತ್ತುಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ದಾಳಿ ಮಾಡಿ ಬಂಧಿಸಬಹುದೆಂದು ಊಹಿಸಿದ್ದ ಆತ ಆಸ್ತಿಯನ್ನು ಬೇನಾಮಿ ಹೆಸರುಗಳಲ್ಲಿ ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕ, ಗಲ್ಫ್ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿದ್ದನಂತೆ.

ನೂರಾರು ಕೋಟಿ ವಹಿವಾಟು ನಡೆಸುತ್ತಿದ್ದಾನೆ ಎಂದು ಗೊತ್ತಾದ ಕೂಡಲೇ ಈತನ‌ ಹಣದ ವ್ಯವಹಾರದ ಮೇಲೆ ಭೂಗತ ಪಾತಕಿಗಳು ಮತ್ತು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಸದ್ಯ ದುಬೈ ಅಥವಾ ಇಂಗ್ಲೆಂಡ್​ನಲ್ಲಿ‌ ತಲೆಮರೆಸಿಕೊಂಡಿರುವ ಆರೋಪಿ ಬಲೆಗೆ ಇಂಟರ್ ಪೋಲ್ ಮೂಲಕ ರಾಜ್ಯ ಮತ್ತು‌ ಗೃಹ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳುತ್ತಿವೆ ಎಂದು ತಿಳಿದುಬಂದಿದೆ.

ಬೆಂಗಳೂರು: ಐಎಂಎ ವಂಚನೆ ಪ್ರಕರಣದ‌ ತನಿಖೆ ಚುರುಕುಗೊಳಿಸಿರುವ ಎಸ್​ಐಟಿ, ಆರೋಪಿ ಮೊಹಮ್ಮದ್ ಮನ್ಸೂರ್ ಸಂಬಂಧಿಕರ ಮನೆಗಳ ಮೇಲೆ ದಾಳಿ‌ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದೆ.

ಮೊದಲೇ ದೇಶ ತೊರೆಯಲು ನಿರ್ಧರಿಸಿದ್ದ ಮನ್ಸೂರ್ ಕಳೆದ 6 ತಿಂಗಳಿಂದ 5 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಫ್ರೀ ಚೆಕ್ ಮತ್ತು ಬೇನಾಮಿ ಹೆಸರುಗಳಲ್ಲಿ ಡ್ರಾ ಮಾಡಿಕೊಂಡಿದ್ದಾನೆ ಎಂದು ಎಸ್ಐಟಿ‌ ಮೂಲಗಳು ತಿಳಿಸಿವೆ.

ಇಂದು ಸಹ ಎಸ್​ಐಟಿ ಅಧಿಕಾರಿಗಳು ಶಿವಾಜಿನಗರದಲ್ಲಿರುವ ಮನ್ಸೂರ್ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಬೆನ್ನು ಬಿದ್ದಿದ್ದ ವಿಷಯ ಗೊತ್ತಾಗುತ್ತಿದ್ದಂತೆ ಮನ್ಸೂರ್ ದೇಶ ಬಿಟ್ಟು ಹೋಗಲು‌ ನಿರ್ಧರಿಸಿದ್ದ. ಈ ಕಾರಣಕ್ಕಾಗೇ ಬ್ಯಾಂಕುಗಳಲ್ಲಿದ್ದ ಹಣವನ್ನು ಫ್ರೀ ಚೆಕ್​ ನೀಡಿ ‌ಡ್ರಾ ಮಾಡಿಕೊಂಡಿದ್ದಾನೆ.

ಆ್ಯಂಬಿಡೆಂಟ್ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಂದಿನಿಂದ ಮನ್ಸೂರ್ ಎಚ್ಚೆತ್ತುಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ದಾಳಿ ಮಾಡಿ ಬಂಧಿಸಬಹುದೆಂದು ಊಹಿಸಿದ್ದ ಆತ ಆಸ್ತಿಯನ್ನು ಬೇನಾಮಿ ಹೆಸರುಗಳಲ್ಲಿ ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕ, ಗಲ್ಫ್ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿದ್ದನಂತೆ.

ನೂರಾರು ಕೋಟಿ ವಹಿವಾಟು ನಡೆಸುತ್ತಿದ್ದಾನೆ ಎಂದು ಗೊತ್ತಾದ ಕೂಡಲೇ ಈತನ‌ ಹಣದ ವ್ಯವಹಾರದ ಮೇಲೆ ಭೂಗತ ಪಾತಕಿಗಳು ಮತ್ತು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಸದ್ಯ ದುಬೈ ಅಥವಾ ಇಂಗ್ಲೆಂಡ್​ನಲ್ಲಿ‌ ತಲೆಮರೆಸಿಕೊಂಡಿರುವ ಆರೋಪಿ ಬಲೆಗೆ ಇಂಟರ್ ಪೋಲ್ ಮೂಲಕ ರಾಜ್ಯ ಮತ್ತು‌ ಗೃಹ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳುತ್ತಿವೆ ಎಂದು ತಿಳಿದುಬಂದಿದೆ.

Intro:nullBody:6 ತಿಂಗಳಲ್ಲಿ ಮನ್ಸೂರ್ ಬೇನಾಮಿ ಹೆಸರಿನಲ್ಲಿ 5 ಕೋಟಿಗೂ ಅಧಿಕ ಹಣ ಡ್ರಾ..!

ಬೆಂಗಳೂರು: ಐಎಂಎ ವಂಚನೆ ಪ್ರಕರಣದ‌ ತನಿಖೆ ಚುರುಕುಗೊಳಿಸಿರುವ ಎಸ್ ಐಟಿ ಆರೋಪಿ ಮೊಹಮದ್ ಮನ್ಸೂರ್ ಸಂಬಂಧಿಕರ ಮನೆಗಳ ಮೇಲೆ ದಾಳಿ‌ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದೆ.

ದೇಶ ತೊರೆಯಲು ನಿರ್ಧರಿಸಿದ್ದ ಮನ್ಸೂರ್ ಕಳೆದ 6 ತಿಂಗಳಿಂದ 5 ಕೋಟಿ ರೂ. ಅಧಿಕ ಹಣವನ್ನು ಫ್ರೀಚಕ್ ಮತ್ತು ಬೇನಾಮಿ ಹೆಸರುಗಳಲ್ಲಿ ಡ್ರಾಮಾಡಿಕೊಂಡಿದ್ದಾನೆ ಅಲ್ಲದೆ ಜನರು ಐಎಂಎನಲ್ಲಿ ಹೂಡಿಕೆಯಾದ ಹಣವನ್ನೆಲ್ಲಾ ಮನ್ಸೂರ್ ಬೇನಾಮಿ ಹೆಸರಿನಲ್ಲಿ‌ ಹಣ ಸುರಿದಿದ್ದಾನೆ ಎಂದು ಎಸ್ಐಟಿ‌ ಮೂಲಗಳು ತಿಳಿಸಿವೆ.

ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಿ ಇಂದು ಮನ್ಸೂರ್ ಸಂಬಂಧಿಕರ ಶಿವಾಜಿನಗರದ ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ. ಯಾವಾಗ ಪೊಲೀಸರು ಬೆನ್ನು ಬಿದ್ದಿದ್ದಾರೊ ಅಂತ ಗೊತ್ತಾಗುತ್ತಿದ್ದಂತೆ ಮನ್ಸೂರ್ ದೇಶ ಬಿಟ್ಟುಹೋಗಲು‌ ನಿರ್ಧರಿಸಿದ್ದ. ಹಾಗಾಗಿ ಬ್ಯಾಂಕುಗಳಲ್ಲಿದ್ದ ಹಣವನ್ನು ಬೇನಾಮಿ ಹೆಸರುಗಳಲ್ಲಿ ಫ್ರೀ ಚಕ್ಸ್ ನೀಡಿ ಸುಮಾರು 5 ಕೋಟಿಗೂ ಅಧಿಕ ಹಣವನ್ನು ‌ಡ್ರಾ ಮಾಡಿಕೊಂಡಿದ್ದಾನೆ. ಈ ಹಣವನ್ನು ಸಂಬಂಧಿಕರ ಬೇನಾಮಿ ಹೆಸರುಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದೆ.
ಆ್ಯಂಬಿಡೆಂಟ್ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಂದಿನಿಂದ ಮನ್ಸೂರ್ ಎಚ್ಚೆತ್ತುಕೊಂಡಿದ್ದ.
ಪೊಲೀಸರು ದಾಳಿ ಮಾಡಿ ಬಂಧಿಸಬಹುದೆಂದು ಊಹಿಸಿ ಮಾಡಿ ದೇಶ ತೊರೆಯಲು ನಿರ್ಧರಿಸಿದ್ದ. ಇನ್ನೂ ಇಲ್ಲಿನ ಆಸ್ತಿಯನ್ನು ಬೇನಾಮಿ ಹೆಸರುಗಳಲ್ಲಿ, ಆಂಧ್ರ ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕ, ಗಲ್ಫ್ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದೆ.. ನೂರಾರು ಕೋಟಿ ವಹಿವಾಟು ನಡೆಸುತ್ತಿದ್ದಾನೆ ಎಂದು ಗೊತ್ತಾದ ಕೂಡಲೆ ಈತನ‌ ಹಣದ ವ್ಯವಹಾರದ ಮೇಲೆ ಭೂಗತ ಪಾತಕಿಗಳು ಮತ್ತು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಸದ್ಯ ದುಬೈ ಅಥವಾ ಇಂಗ್ಲೆಂಡ್ ನಲ್ಲಿ‌ ತಲೆಮರೆಸಿಕೊಂಡಿರುವ ಆರೋಪಿ ಬಲೆಗೆ ಇಂಟರ್ ಪೋಲ್ ಮೂಲಕ ರಾಜ್ಯ ಮತ್ತು‌ ಗೃಹ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳುತ್ತಿದೆ.Conclusion:null

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.