ಬೆಂಗಳೂರು: ಕೋವಿಡ್ ಕಾರಣದಿಂದ ಸರಳವಾಗಿ ಸ್ವಾತಂತ್ಯ ದಿನವನ್ನು ಆಚರಿಸಲಾಗಿದೆ. ಆದರೆ ಇತ್ತ ಅದ್ಧೂರಿ ಆಚರಣೆ ಆಗದೇ ಇದ್ದರೇನಂತೆ ಭಾರತಾಂಬೆಗೆ ಜೈಕಾರ ಹಾಕಿ ಸಂಭ್ರಮಿಸಲಾಯಿತು.
ಬೆಂಗಳೂರಿನಿಂದ ಅಸ್ಸೋಂನ ಗುವಾಹಟಿಗೆ ಸುಮಾರು 976 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ 267ನೇ ವಿಶೇಷ ಶ್ರಮಿಕ್ ರೈಲು ಇಂದು ಸಂಜೆ 7 ಕ್ಕೆ ಹೊರಡಿತು. ಈ ವೇಳೆ ರೈಲ್ವೆ ಸಿಬ್ಬಂದಿ, ಪ್ರಯಾಣಿಕರಿಗೆ ಚಪ್ಪಾಳೆಯ ಮೂಲಕ ಬೀಳ್ಕೊಟ್ಟರು. ಬಳಿಕ ಪ್ರಯಾಣಿಕರು ಹಾಗೂ ಸಿಬ್ಬಂದಿ ಭಾರತಾಂಬೆಗೆ ಜೈಕಾರ ಹಾಕಿ ಸಂಭ್ರಮಿಸಿದರು.