ETV Bharat / state

ಅಪ್ಪನ ಚಿತೆಗೆ ಅಗ್ನಿ ಸ್ಪರ್ಶ ನೀಡಿದ ಪುತ್ರ ಕರ್ಣ.. ಅಕ್ಷರಗಳಲ್ಲಿ ರವಿ ಬೆಳಗೆರೆ ಜೀವಂತ

author img

By

Published : Nov 13, 2020, 5:36 PM IST

Updated : Nov 13, 2020, 7:34 PM IST

ಹಿರಿಯ ಪತ್ರಕರ್ತ ಹಾಗೂ ಕಾದಂಬರಿಕಾರ ರವಿ ಬೆಳಗೆರೆ ಇಂದು ಮುಂಜಾನೆ ಅಸುನೀಗಿದ್ದು, ಬೆಂಗಳೂರಿನ ಬನಶಂಕರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು..

Senior Journalist Ravi Belagere
ಪಂಚಭೂತದಲ್ಲಿ ಅಸ್ತಂಗತನಾದ 'ರವಿ'

ಬೆಂಗಳೂರು: ಹೃದಯಾಘಾತದಿಂದ ಇಂದು ಬೆಳಗ್ಗೆ ಮೃತಪಟ್ಟಿದ್ದ ಅಕ್ಷರ ಮಾಂತ್ರಿಕ ರವಿ ಬೆಳೆಗೆರೆಯ ಅಂತ್ಯಸಂಸ್ಕಾರ ಇಂದು ಸಂಜೆ ಜರುಗಿತು. ಬನಶಂಕರಿಯ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರೆವೇರಿಸಲಾಯಿತು.

ರವಿ ಬೆಳೆಗೆರೆ ಅಂತ್ಯಕ್ರಿಯೆ

ಜೇಷ್ಠ ಪುತ್ರ ಕರ್ಣ ಹಾಗೂ ಹಿಮವಂತ್​​ ತಂದೆಯ ಅಂತ್ಯ ಸಂಸ್ಕಾರದ ಕಾರ್ಯ ನೆರವೇರಿಸಿದ್ದು, ತೇಗ, ಮಾವು ಸೇರಿದಂತೆ ವಿವಿಧ 1 ಟನ್‍ಗೂ ಹೆಚ್ಚು ಮರದ ಸೌದೆಗಳನ್ನು ಅಂತ್ಯ ಸಂಸ್ಕಾರದ ವೇಳೆ ಬಳಸಲಾಗಿತ್ತು. ಇದಕ್ಕೂ ಮುನ್ನ ಪಾರ್ಥಿವ ಶರೀರವನ್ನು ಪ್ರಾರ್ಥನಾ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಬೆಳಗೆರೆ ಪ್ರಾರ್ಥಿವ ಶರೀರದ ದರ್ಶನ ಪಡೆಯಲು ಹಲವು ನಟ-ನಟಿಯರು ಸೇರಿದಂತೆ ಗಣ್ಯರು ಆಗಮಿಸಿದ್ದು, ಹಿರಿಯ ನಟಿ ಲೀಲಾವತಿ, ಸಚಿವ ಆರ್.ಅಶೋಕ್, ನಟ ವಿನೋದ್ ರಾಜ್, ಹೆಚ್.ವಿಶ್ವನಾಥ್, ಸಾರಾ ಗೋವಿಂದು, ಯೋಗರಾಜ್​ ಭಟ್​ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ಬೆಂಗಳೂರು: ಹೃದಯಾಘಾತದಿಂದ ಇಂದು ಬೆಳಗ್ಗೆ ಮೃತಪಟ್ಟಿದ್ದ ಅಕ್ಷರ ಮಾಂತ್ರಿಕ ರವಿ ಬೆಳೆಗೆರೆಯ ಅಂತ್ಯಸಂಸ್ಕಾರ ಇಂದು ಸಂಜೆ ಜರುಗಿತು. ಬನಶಂಕರಿಯ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರೆವೇರಿಸಲಾಯಿತು.

ರವಿ ಬೆಳೆಗೆರೆ ಅಂತ್ಯಕ್ರಿಯೆ

ಜೇಷ್ಠ ಪುತ್ರ ಕರ್ಣ ಹಾಗೂ ಹಿಮವಂತ್​​ ತಂದೆಯ ಅಂತ್ಯ ಸಂಸ್ಕಾರದ ಕಾರ್ಯ ನೆರವೇರಿಸಿದ್ದು, ತೇಗ, ಮಾವು ಸೇರಿದಂತೆ ವಿವಿಧ 1 ಟನ್‍ಗೂ ಹೆಚ್ಚು ಮರದ ಸೌದೆಗಳನ್ನು ಅಂತ್ಯ ಸಂಸ್ಕಾರದ ವೇಳೆ ಬಳಸಲಾಗಿತ್ತು. ಇದಕ್ಕೂ ಮುನ್ನ ಪಾರ್ಥಿವ ಶರೀರವನ್ನು ಪ್ರಾರ್ಥನಾ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಬೆಳಗೆರೆ ಪ್ರಾರ್ಥಿವ ಶರೀರದ ದರ್ಶನ ಪಡೆಯಲು ಹಲವು ನಟ-ನಟಿಯರು ಸೇರಿದಂತೆ ಗಣ್ಯರು ಆಗಮಿಸಿದ್ದು, ಹಿರಿಯ ನಟಿ ಲೀಲಾವತಿ, ಸಚಿವ ಆರ್.ಅಶೋಕ್, ನಟ ವಿನೋದ್ ರಾಜ್, ಹೆಚ್.ವಿಶ್ವನಾಥ್, ಸಾರಾ ಗೋವಿಂದು, ಯೋಗರಾಜ್​ ಭಟ್​ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

Last Updated : Nov 13, 2020, 7:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.