ETV Bharat / state

ಬೆಂಗಳೂರಿನಲ್ಲಿ ಮಹಿಳೆ‌ ಮೇಲೆ ಹಲ್ಲೆ ಆರೋಪ: ತನಿಖೆ ಪ್ರಾರಂಭಿಸಿದ ಪೊಲೀಸರು

ಕೊರೊನಾ ವೈರಸ್​ ತಡೆ ನಿಟ್ಟಿನಲ್ಲಿ ದೇಶಾದ್ಯಂತ ಕರೆನೀಡಿರುವ ಲಾಕ್​ಡೌನ್​ ಹಿನ್ನೆಲೆ ಬಡವರಿಗೆ ಊಟ ಕೊಡುವ ಸಂದರ್ಭದಲ್ಲಿ ಮಹಿಳೆ ಹಾಗೂ ಇತರರ ಮೇಲೆ ಸಂಘಟನೆಯೊಂದರ ಸದಸ್ಯರು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

author img

By

Published : Apr 7, 2020, 11:15 AM IST

Updated : Apr 7, 2020, 12:32 PM IST

assault
ಬೆಂಗಳೂರಿನಲ್ಲಿ ಮಹಿಳೆ‌ ಮೇಲೆ ಹಲ್ಲೆ ಆರೋಪ

ಬೆಂಗಳೂರು : ಲಾಕ್​ಡೌನ್​ ಹಿನ್ನೆಲೆ ಬಡವರಿಗೆ ಊಟ ಹಂಚುವ ಸಂದರ್ಭದಲ್ಲಿ ಮಹಿಳೆ ಹಾಗೂ ಇತರರ ಮೇಲೆ ಸಂಘಟನೆಯೊಂದರ ಸದಸ್ಯರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

letter
ಎಫ್ಐಆರ್‌ ಪ್ರತಿ

ಅಮೃತಹಳ್ಳಿ ಬಳಿ ಇರುವ ದಾಸರಹಳ್ಳಿಯಲ್ಲಿ‌ ಮಹಿಳೆ ಊಟ ಹಂಚುತ್ತಿದ್ದರು. ಆದರೆ, ಇದನ್ನು ತಪ್ಪಾಗಿ ಭಾವಿಸಿಕೊಂಡು ಸಂಘಟನೆಯ ಕೆಲವರು ಹಲ್ಲೆ ಮಾಡಿದ್ದಾರೆ‌ಂದು ಮಹಿಳೆ‌ ಆರೋಪಿಸಿದ್ದಾರೆ. ಸದ್ಯ ಈ ಬಗ್ಗೆ ಅಮೃತಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಈ ಕುರಿತು ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ಮಾತನಾಡಿ, ಮಹಿಳೆ ಮೇಲೆ ಹಲ್ಲೆ ನಡೆಸಿರೋದು ತಪ್ಪು. ಈ ಬಗ್ಗೆ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತೆ, ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು : ಲಾಕ್​ಡೌನ್​ ಹಿನ್ನೆಲೆ ಬಡವರಿಗೆ ಊಟ ಹಂಚುವ ಸಂದರ್ಭದಲ್ಲಿ ಮಹಿಳೆ ಹಾಗೂ ಇತರರ ಮೇಲೆ ಸಂಘಟನೆಯೊಂದರ ಸದಸ್ಯರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

letter
ಎಫ್ಐಆರ್‌ ಪ್ರತಿ

ಅಮೃತಹಳ್ಳಿ ಬಳಿ ಇರುವ ದಾಸರಹಳ್ಳಿಯಲ್ಲಿ‌ ಮಹಿಳೆ ಊಟ ಹಂಚುತ್ತಿದ್ದರು. ಆದರೆ, ಇದನ್ನು ತಪ್ಪಾಗಿ ಭಾವಿಸಿಕೊಂಡು ಸಂಘಟನೆಯ ಕೆಲವರು ಹಲ್ಲೆ ಮಾಡಿದ್ದಾರೆ‌ಂದು ಮಹಿಳೆ‌ ಆರೋಪಿಸಿದ್ದಾರೆ. ಸದ್ಯ ಈ ಬಗ್ಗೆ ಅಮೃತಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಈ ಕುರಿತು ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ಮಾತನಾಡಿ, ಮಹಿಳೆ ಮೇಲೆ ಹಲ್ಲೆ ನಡೆಸಿರೋದು ತಪ್ಪು. ಈ ಬಗ್ಗೆ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತೆ, ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

Last Updated : Apr 7, 2020, 12:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.