ಬೆಂಗಳೂರು : ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಲಾಕ್ಡೌನ್ ಸಂತ್ರಸ್ತರಿಗೆ ಆಹಾರ ವಿತರಿಸಿದರು.
![Rizwan arshad distributed food to Shivajinagar lockdown victims](https://etvbharatimages.akamaized.net/etvbharat/prod-images/kn-bng-01-congress-tweet-script-7208077_09052020084644_0905f_1588994204_618.jpg)
ಸಂಕಷ್ಟದಲ್ಲಿರುವ ಜನತೆಯೊಂದಿಗೆ ಕಾಂಗ್ರೆಸ್ ಘೋಷಣೆ ಅಡಿ ರಾಜ್ಯದ ವಿವಿಧೆಡೆ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಶಿವಾಜಿನಗರದಲ್ಲಿ ರಿಜ್ವಾನ್ರಿಂದಲೂ ಈ ಕಾರ್ಯ ನಡೆದಿದೆ.
ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಶಿವಾಜಿನಗರದ ಚಾಂದನಿ ಚೌಕ್ ಸುತ್ತಲಿನ ಭಾಗ ಸೀಲ್ಡೌನ್ ಆಗಿದೆ. ಇಲ್ಲಿನ ಜುಮ್ಮಾ ಮಸೀದಿ ರಸ್ತೆ ಇಬಿ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ರಸೆಲ್ ಮಾರ್ಕೆಟ್ ಹಾಗೂ ಬ್ರಾಡ್ವೇ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ವಿಭಾಗದಲ್ಲಿ ರಿಜ್ವಾನ್ ಅರ್ಷದ್ ಆಹಾರ ವಿತರಿಸಿ ಬಡವರಿಗೆ ನೆರವಾದರು.