ETV Bharat / state

ಕೆಎಂಎಫ್ ಅಧ್ಯಕ್ಷ ಗಾದಿಗಾಗಿ ನಿರ್ದೇಶಕರನ್ನೇ ಹೈಜಾಕ್​ ಮಾಡಿದ್ರಾ ರೇವಣ್ಣ? - ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ದೊಡ್ಡ ಬಿರುಕು

ಕಾಂಗ್ರೆಸ್ ನಿರ್ದೇಶಕರನ್ನು ರಾತ್ರೋ ರಾತ್ರಿ ಹೈದ್ರಾಬಾದ್‌ಗೆ ರವಾನೆ ಮಾಡಿದ ರೇವಣ್ಣ ನಿರ್ಧಾರಕ್ಕೆ ಈಗ ಕೈ ಪಾಳಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮಾತನ್ನೇ ಧಿಕ್ಕರಿಸಿ ಕಾಂಗ್ರೆಸ್ ನಿರ್ದೇಶಕರನ್ನೇ ರೆಸಾರ್ಟ್‌ಗೆ ರವಾನೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ರೇವಣ್ಣ
author img

By

Published : Jul 28, 2019, 1:05 PM IST

ಬೆಂಗಳೂರು: ಕೆಎಂಎಫ್ ಅಧ್ಯಕ್ಷರಾಗಲು ಕಾಂಗ್ರೆಸ್ ನಿರ್ದೇಶಕರನ್ನೇ ಹೈಜಾಕ್ ಮಾಡಿರುವ ಮಾಜಿ ಸಚಿವ ಹೆಚ್​ ಡಿ ರೇವಣ್ಣ ನಿರ್ಧಾರ ಇದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ದೊಡ್ಡ ಬಿರುಕು ಮೂಡಿಸುವ ಸಾಧ್ಯತೆ ಇದೆ.

ಕಾಂಗ್ರೆಸ್ ನಿರ್ದೇಶಕರನ್ನು ರಾತ್ರೋರಾತ್ರಿ ಹೈದ್ರಾಬಾದ್‌ಗೆ ರವಾನೆ ಮಾಡಿದ ರೇವಣ್ಣ ನಿರ್ಧಾರಕ್ಕೆ ಈಗ ಕೈ ಪಾಳಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮಾತನ್ನೇ ಧಿಕ್ಕರಿಸಿ ಕಾಂಗ್ರೆಸ್ ನಿರ್ದೇಶಕರನ್ನೇ ರೆಸಾರ್ಟ್‌ಗೆ ರವಾನೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಉಡುಪಿ ಕಾಪು ದಿವಾಕರ ಶೆಟ್ಟಿ, ಧಾರವಾಡ ಹಿರೇಗೌಡ, ಬಿಜಾಪುರದ ಶ್ರೀಶೈಲ, ಶಿವಮೊಗ್ಗದ ವೀರಭದ್ರ ಬಾಬು ಹೈಜಾಕ್ ಆಗಿದ್ದಾರೆ. ಈವರೆಗೂ ಅವರು ಎಲ್ಲಿದ್ದಾರೆ. ನಾಳೆ ಚುನಾವಣೆ ವೇಳೆಗೆ ಬರುತ್ತಾರಾ? ಇಲ್ಲವಾ? ಎನ್ನುವುದು ತಿಳಿಯುತ್ತಿಲ್ಲ. ಸದ್ಯ ಎಲ್ಲಾ ನಾಲ್ಕೂ ನಿರ್ದೇಶಕರು ಹೈದ್ರಾಬಾದ್‌ನ ಬಂಜಾರಾ ಹಿಲ್ಸ್ ಬಳಿಯ ರೆಸಾರ್ಟ್‌ನಲ್ಲಿ ರೇವಣ್ಣ ಜತೆ ಇದ್ದಾರೆ ಎನ್ನಲಾಗ್ತಿದೆ.

ಕಾಂಗ್ರೆಸ್‌ನ ಭೀಮಾ ನಾಯಕ್‌ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ತಪ್ಪಿಸಲು ಹೆಚ್‌ ಡಿ ರೇವಣ್ಣ ರೆಸಾರ್ಟ್ ರಾಜಕೀಯ ಮಾಡುತ್ತಿದ್ದಾರೆ. ಈಗಾಗಲೇ ತಮ್ಮ ವಿರುದ್ಧ ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿರುವ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಶಾಸಕರಾಗಿರುವ ಭೀಮಾ ನಾಯ್ಕ್‌ಗೆ ಅಧ್ಯಕ್ಷ ಪಟ್ಟ ಸಿಗದಂತೆ ಮಾಡಲು ರೆಸಾರ್ಟ್​ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

12 ನಿರ್ದೇಶಕರು ಇರುವ ಹಾಲು ಒಕ್ಕೂಟದಲ್ಲಿ ಕಾಂಗ್ರೆಸ್​ನ 9 ಹಾಗೂ ಜೆಡಿಎಸ್​ನ 3 ನಿರ್ದೇಶಕರು ಇದ್ದಾರೆ. ಇದರಿಂದಾಗಿ ಈ ಸಾರಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್‌ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ದೋಸ್ತಿ ನಾಯಕರ ನಡುವೆ ಮಾತುಕತೆ ನಡೆದಿತ್ತು. ಇದಕ್ಕೆ ಹೆಚ್​ಡಿಕೆ ಮತ್ತು ರೇವಣ್ಣ ಕೂಡ ಒಪ್ಪಿದ್ದರಂತೆ.

ಬೆಂಗಳೂರು: ಕೆಎಂಎಫ್ ಅಧ್ಯಕ್ಷರಾಗಲು ಕಾಂಗ್ರೆಸ್ ನಿರ್ದೇಶಕರನ್ನೇ ಹೈಜಾಕ್ ಮಾಡಿರುವ ಮಾಜಿ ಸಚಿವ ಹೆಚ್​ ಡಿ ರೇವಣ್ಣ ನಿರ್ಧಾರ ಇದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ದೊಡ್ಡ ಬಿರುಕು ಮೂಡಿಸುವ ಸಾಧ್ಯತೆ ಇದೆ.

ಕಾಂಗ್ರೆಸ್ ನಿರ್ದೇಶಕರನ್ನು ರಾತ್ರೋರಾತ್ರಿ ಹೈದ್ರಾಬಾದ್‌ಗೆ ರವಾನೆ ಮಾಡಿದ ರೇವಣ್ಣ ನಿರ್ಧಾರಕ್ಕೆ ಈಗ ಕೈ ಪಾಳಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮಾತನ್ನೇ ಧಿಕ್ಕರಿಸಿ ಕಾಂಗ್ರೆಸ್ ನಿರ್ದೇಶಕರನ್ನೇ ರೆಸಾರ್ಟ್‌ಗೆ ರವಾನೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಉಡುಪಿ ಕಾಪು ದಿವಾಕರ ಶೆಟ್ಟಿ, ಧಾರವಾಡ ಹಿರೇಗೌಡ, ಬಿಜಾಪುರದ ಶ್ರೀಶೈಲ, ಶಿವಮೊಗ್ಗದ ವೀರಭದ್ರ ಬಾಬು ಹೈಜಾಕ್ ಆಗಿದ್ದಾರೆ. ಈವರೆಗೂ ಅವರು ಎಲ್ಲಿದ್ದಾರೆ. ನಾಳೆ ಚುನಾವಣೆ ವೇಳೆಗೆ ಬರುತ್ತಾರಾ? ಇಲ್ಲವಾ? ಎನ್ನುವುದು ತಿಳಿಯುತ್ತಿಲ್ಲ. ಸದ್ಯ ಎಲ್ಲಾ ನಾಲ್ಕೂ ನಿರ್ದೇಶಕರು ಹೈದ್ರಾಬಾದ್‌ನ ಬಂಜಾರಾ ಹಿಲ್ಸ್ ಬಳಿಯ ರೆಸಾರ್ಟ್‌ನಲ್ಲಿ ರೇವಣ್ಣ ಜತೆ ಇದ್ದಾರೆ ಎನ್ನಲಾಗ್ತಿದೆ.

ಕಾಂಗ್ರೆಸ್‌ನ ಭೀಮಾ ನಾಯಕ್‌ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ತಪ್ಪಿಸಲು ಹೆಚ್‌ ಡಿ ರೇವಣ್ಣ ರೆಸಾರ್ಟ್ ರಾಜಕೀಯ ಮಾಡುತ್ತಿದ್ದಾರೆ. ಈಗಾಗಲೇ ತಮ್ಮ ವಿರುದ್ಧ ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿರುವ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಶಾಸಕರಾಗಿರುವ ಭೀಮಾ ನಾಯ್ಕ್‌ಗೆ ಅಧ್ಯಕ್ಷ ಪಟ್ಟ ಸಿಗದಂತೆ ಮಾಡಲು ರೆಸಾರ್ಟ್​ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

12 ನಿರ್ದೇಶಕರು ಇರುವ ಹಾಲು ಒಕ್ಕೂಟದಲ್ಲಿ ಕಾಂಗ್ರೆಸ್​ನ 9 ಹಾಗೂ ಜೆಡಿಎಸ್​ನ 3 ನಿರ್ದೇಶಕರು ಇದ್ದಾರೆ. ಇದರಿಂದಾಗಿ ಈ ಸಾರಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್‌ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ದೋಸ್ತಿ ನಾಯಕರ ನಡುವೆ ಮಾತುಕತೆ ನಡೆದಿತ್ತು. ಇದಕ್ಕೆ ಹೆಚ್​ಡಿಕೆ ಮತ್ತು ರೇವಣ್ಣ ಕೂಡ ಒಪ್ಪಿದ್ದರಂತೆ.

Intro:newsBody:ರೇವಣ್ಣ ಹೈಜಾಕ್ ನಡೆಗೆ, ಕೈ ನಾಯಕರಲ್ಲಿ ತೀವ್ರಗೊಂಡ ಅಸಮಾಧಾನ

ಬೆಂಗಳೂರು: ಕೆಎಂಎಫ್ ಅಧ್ಯಕ್ಷರಾಗಲು ಕಾಂಗ್ರೆಸ್ ನಿರ್ದೇಶಕರನ್ನೇ ಹೈಜಾಕ್ ಮಾಡಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ನಿರ್ಧಾರ ಇದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ದೊಡ್ಡ ಬಿರುಕು ಮೂಡಿಸುವ ಸಾಧ್ಯತೆ ಹೆಚ್ಚಾಗಿದೆ.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಾಳೆ ನಡೆಯಲಿದೆ. ಈ ಸಂದರ್ಭ ಹೆಚ್ಚು ನಿರ್ದೇಶಕರನ್ನು ಹೊಂದಿರುವ ತಾವು ಕೆಎಮ್ಎಫ್ ಅಧ್ಯಕ್ಷರಾಗಬೇಕು. ಮೈತ್ರಿ ಪಕ್ಷ ಜೆಡಿಎಸ್ ಸಹಕರಿಸಲಿದೆ ಎಂದೇ ಭಾವಿಸಲಾಗಿತ್ತು. ಅದಕ್ಕೆ ಸಂಬಂಧಿಸಿ ಮಾತುಕತೆ ಕೂಡ ನಡೆಸಲಾಗಿತ್ತು. ಅಂದು ಒಪ್ಪಿದ್ದ ಎಚ್.ಡಿ. ರೇವಣ್ಣ ಇದೀಗ ಏಕಾಏಕಿ ನಾಲ್ವರು ಕಾಂಗ್ರೆಸ್ ನಿರ್ದೇಶಕರನ್ನು ಹೈಜಾಕ್ ಮಾಡುವ ಮೂಲಕ ಮೈತ್ರಿ ಧರ್ಮ ಮುರಿದಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಕಾಂಗ್ರೆಸ್ ನಿರ್ದೇಶಕರನ್ನು ರಾತ್ರೋ ರಾತ್ರಿ ಹೈದ್ರಾಬಾದ್ ಗೆ ರವಾನೆ ಮಾಡಿದ ರೇವಣ್ಣ ನಿರ್ಧಾರಕ್ಕೆ ಈಗ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಬೇಸರ ಹಾಗೂ ಅಸಮಾಧಾನ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ, ಡಿಕೆಶಿವಕುಮಾರ್ ಮಾತನ್ನೇ ಧಿಕ್ಕರಿಸಿ ಕಾಂಗ್ರೆಸ್ ನಿರ್ದೇಶಕರನ್ನೇ ರೆಸಾರ್ಟ್ ಗೆ ರವಾನೆ ಮಾಡಲಾಗಿದೆ. ಮೈತ್ರಿ ವಿಚಾರದಲ್ಲಿ ರೇವಣ್ಣ ಕಿಂಚಿತ್ ಬೆಲೆ ಕೊಟ್ಟಿಲ್ಲ, ಅವರಿಗೆ ಅಧಿಕಾರವೇ ಹೆಚ್ಚಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಉಡುಪಿ ಕಾಪು ದಿವಾಕರ ಶೆಟ್ಟಿ, ಧಾರವಾಡ ಹಿರೇಗೌಡ, ಬಿಜಾಪುರದ ಶ್ರೀಶೈಲ, ಶಿವಮೊಗ್ಗದ ವೀರಭದ್ರ ಬಾಬು ಹೈಜಾಕ್ ಆಗಿದ್ದು, ಇದುವರೆಗೂ ಅವರು ಎಲ್ಲಿದ್ದಾರೆ. ನಾಳೆ ಚುನಾವಣೆ ವೇಳೆಗೆ ಬರುತ್ತಾರಾ? ಇಲ್ಲವಾ? ಎನ್ನುವುದು ತಿಳಿಯುತ್ತಿಲ್ಲ. ಸದ್ಯ ಎಲ್ಲಾ ನಾಲ್ಕೂ ನಿರ್ದೇಶಕರು ಹೈದ್ರಾಬಾದ್ ನ ಬಂಜಾರಾ ಹಿಲ್ಸ್ ಬಳಿಯ ರೆಸಾರ್ಟ್ ನಲ್ಲಿ ರೇವಣ್ಣ ಜತೆ ಇದ್ದಾರೆ ಎಂಬ ಮಾಹಿತಿ ಇದ್ದು, ಹಿಂತಿರುಗುವ ಸಾಧ್ಯತೆ ನಾಳೆ ಎನ್ನಲಾಗುತ್ತಿದೆ.
ಭೀಮಾ ನಾಯ್ಕ್ಗೆ ನಿರಾಸೆ
ಕಾಂಗ್ರೆಸ್ ನ ಭೀಮಾ ನಾಯಕ್ ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ತಪ್ಪಿಸಲು ರೇವಣ್ಣ ರೆಸಾರ್ಟ್ ರಾಜಕೀಯ ಮಾಡಿದ್ದಾರೆ. ಜತೆಗೆ ತಾವೇ ಅಧ್ಯಕ್ಷರಾಗಬೇಕೆನ್ನುವುದು ರೇವಣ್ಣ ಹಠವಾಗಿದೆ. ಈಗಾಗಲೇ ತಮ್ಮ ವಿರುದ್ಧ ಹಲವು ಸಾರಿ ಆಕ್ರೋಶ ವ್ಯಕ್ತಪಡಿಸಿರುವ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಶಾಸಕರಾಗಿರುವ ಭೀಮಾ ನಾಯ್ಕ್ ಗೆ ಅಧ್ಯಕ್ಷ ಪಟ್ಟ ಸಿಗದಂತೆ ನೋಡಿಕೊಳ್ಳಬೇಕೆನ್ನುವುದು ಇಲ್ಲಿ ರೇವಣ್ಣ ಮನದಾಸೆಯಾಗಿದೆ.
ಒಟ್ಟು 12 ಹಾಲೂ ಒಕ್ಕೂಟಗಳ ನಿರ್ದೇಶಕರು ಇರುವ ಹಾಲು ಒಕ್ಕೂಟದಲ್ಲಿ ಕಾಂಗ್ರೆಸ್ನ 9 ಹಾಗೂ ಜೆಡಿಎಸ್ನ ಮೂವರು ನಿರ್ದೇಶಕರು ಇದ್ದಾರೆ. ಇದರಿಂದಾಗಿ ಈ ಸಾರಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯಕ್ ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ದೋಸ್ತಿ ನಾಯಕರ ನಡುವೆ ಮಾತುಕತೆ ನಡೆದಿತ್ತು. ಇದಕ್ಕೆ ಎಚ್ಡಿಕೆ ಮತ್ತು ರೇವಣ್ಣ ಕೂಡ ಒಪ್ಪಿದ್ದರು. ಇದೀಗ ಜೆಡಿಎಸ್ ಗೆ ಸ್ಥಾನ ಪಡೆದುಕೊಳ್ಳುವುದಕ್ಕಾಗಿ ಕಾಂಗ್ರೆಸ್ ಕಡೆಯ ನಾಲ್ವರು ನಿರ್ದೇಶಕರನ್ನೇ ಆಪರೇಷನ್ ಕೆಎಂಎಫ್ ಮಾಡಿದ ರೇವಣ್ಣ ದೊಡ್ಡ ವಿಲನ್ ರೀತಿ ಕೈ ನಾಯಕರಿಗೆ ಗೋಚರಿಸುತ್ತಿದ್ದಾರೆ.
ಸರ್ಕಾರ ಪಥನಗೊಳ್ಳುತ್ತಿದ್ದಂತೆ ರೇವಣ್ಣ ಕೈಗೊಂಡ ಈ ನಡೆ ಕಾಂಗ್ರೆಸ್ ನಾಯಕರಲ್ಲಿ ಸಹಜವಾಗಿ ಬೇಸರ ಮೂಡಿಸಿದ್ದು, ನಾವೇಕೆ ಮೈತ್ರಿ ಮುಂದುವರಿಸಬೇಕು, ಮುರಿದುಕೊಳ‍್ಳೋಣ ಎಂಬ ಮಾತನ್ನಾಡುತ್ತಿದ್ದಾರೆ.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.