ETV Bharat / state

ಪಾದರಾಯನಪುರದಲ್ಲಿ ಕೊರೊನಾ ಪರೀಕ್ಷೆಗೆ ಹಬ್ಬದ ನೆಪ! - ರಂಜಾನ್ ಹಬ್ಬ ಹಿನ್ನೆಲೆ

ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನರ ಪರೀಕ್ಷೆ ನಡೆಸಲಾಗುತ್ತಿದೆ. ಜನರು ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಬರುವ ಭಾನುವಾರ ರಂಜಾನ್​ ಇದ್ದು, ಜನರು ಪರೀಕ್ಷೆಗೆ ಬರುವುದು ಅನುಮಾನವಾಗಿದೆ.

padarayanapura people are not come corona test
ಪಾದರಾಯನಪುರ ಕೊರೊನಾ ಪರೀಕ್ಷೆಗೆ ಹಬ್ಬದ ನೆಪ
author img

By

Published : May 21, 2020, 11:19 AM IST

ಬೆಂಗಳೂರು: ಪಾದರಾಯಪುರದಲ್ಲಿ ಸುಮಾರು 54 ಕೊರೊನಾ ಪಾಸಿಟಿವ್​ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ರ್ಯಾಂಡಮ್​​ ಪರೀಕ್ಷೆ ನಡೆಸಲು ಆರೋಗ್ಯಾಧಿಕಾರಿಗಳು ಮುಂದಾಗಿದ್ದು, ಎರಡು ಮೂರು ದಿನ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮುಂದಿನ ದಿನಗಳಲ್ಲಿ ಜನರು ಪರೀಕ್ಷೆಗೆ ಬರುವುದು ಅನುಮಾನ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

padarayanapura people are not come corona test
ಪಾದರಾಯನಪುರ ಕೊರೊನಾ ಪರೀಕ್ಷೆಗೆ ಹಬ್ಬದ ನೆಪ

ಪಾದರಾಯನಪುರದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಸಂಬಂಧ ಅಲ್ಲಿನ ಜನರ ಪರೀಕ್ಷೆ ನಡೆಸಲಾಗುತ್ತಿದೆ. ಜನರು ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಬರುವ ಭಾನುವಾರ ರಂಜಾನ್​ ಇದ್ದು, ಜನರು ಪರೀಕ್ಷೆಗೆ ಬರುವುದು ಅನುಮಾನವಾಗಿದೆ. ನಿನ್ನೆ ಜಾಗರಣ್ ಹಬ್ಬ ಇದ್ದ ಕಾರಣ ಕೇವಲ 39 ಜನರು ಮಾತ್ರ ಬಂದಿದ್ದರು. ಇನ್ನುಳಿದ ನಾಲ್ಕು ದಿನವೂ ಆರೋಗ್ಯ ಪರೀಕ್ಷೆಗೆ ಬರೋದು ಅನುಮಾನವಾಗಿದೆ.

ಯಾರನ್ನೂ ಒತ್ತಾಯಪೂರ್ವಕವಾಗಿ ಕರೆಸಿಕೊಳ್ಳಲು ಸಾಧ್ಯವಿಲ್ಲ. ಅವರೇ ಸ್ವಯಂಪ್ರೇರಿತರಾಗಿ ಬಂದರೆ ಅಷ್ಟೇ ಬೇಗ ಬೇಗ ಪರೀಕ್ಷೆ ನಡೆಸಲು ಸಾಧ್ಯ. ಮನವೊಲಿಸಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಆರೋಗ್ಯಾಧಿಕಾರಿ ಡಾ‌. ಮನೋರಂಜನ್ ಹೆಗಡೆ ಮಾಹಿತಿ ನೀಡಿದರು.

ಈ ಹಿಂದೆ ಕ್ವಾರಂಟೈನ್ ಮಾಡಲು ಮುಂದಾದ ವೇಳೆ ಜನರು ಗಲಭೆ ನಡೆಸಿದ ಕಹಿ ಘಟನೆ ಇರುವಾಗ ಆರೋಗ್ಯ ಪರೀಕ್ಷೆಗೆ ಒತ್ತಾಯ ಮಾಡಲು ಆರೋಗ್ಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಪ್ರತಿದಿನ ನಡೆದ ಆರೋಗ್ಯ ಪರೀಕ್ಷೆಯ ಅಂಕಿ-ಅಂಶ ಹೀಗಿದೆ.

ಸೋಮವಾರ (18-06-2020) ಸ್ಯಾಂಪಲ್ ಪರೀಕ್ಷೆ

  • ಮೊಬೈಲ್ ಬಸ್ -30
  • ಕಿಯೋಸ್ಕ್ - 67
  • ಒಟ್ಟು-97

ಮಂಗಳವಾರ (19-06-2020) ಸ್ಯಾಂಪಲ್ ಪರೀಕ್ಷೆ

  • ಮೊಬೈಲ್ ಬಸ್-31
  • ಕಿಯೋಸ್ಕ್ - 55
  • ಒಟ್ಟು - 86

ಬುಧವಾರ (20-06-2020 )

  • ಮೊಬೈಲ್ ಬಸ್-20
  • ಕಿಯೋಸ್ಕ್ -19
  • ಒಟ್ಟು -39

ಅಂದಾಜು ನೂರು ಜನ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದವರ ಸಂಖ್ಯೆ ಈಗ 39ಕ್ಕೆ ಇಳಿದಿದೆ. ಸರ್ಕಾರ ಉಚಿತವಾಗಿ ಹೆಲ್ತ್ ಚೆಕಪ್ ಮಾಡಿ ಕೊಡುತ್ತಿದ್ದರೂ ಪಾದರಾಯನಪುರದ ಜನ ಹಿಂದೇಟು ಹಾಕುತ್ತಿದ್ದಾರೆ.

ಬೆಂಗಳೂರು: ಪಾದರಾಯಪುರದಲ್ಲಿ ಸುಮಾರು 54 ಕೊರೊನಾ ಪಾಸಿಟಿವ್​ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ರ್ಯಾಂಡಮ್​​ ಪರೀಕ್ಷೆ ನಡೆಸಲು ಆರೋಗ್ಯಾಧಿಕಾರಿಗಳು ಮುಂದಾಗಿದ್ದು, ಎರಡು ಮೂರು ದಿನ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮುಂದಿನ ದಿನಗಳಲ್ಲಿ ಜನರು ಪರೀಕ್ಷೆಗೆ ಬರುವುದು ಅನುಮಾನ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

padarayanapura people are not come corona test
ಪಾದರಾಯನಪುರ ಕೊರೊನಾ ಪರೀಕ್ಷೆಗೆ ಹಬ್ಬದ ನೆಪ

ಪಾದರಾಯನಪುರದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಸಂಬಂಧ ಅಲ್ಲಿನ ಜನರ ಪರೀಕ್ಷೆ ನಡೆಸಲಾಗುತ್ತಿದೆ. ಜನರು ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಬರುವ ಭಾನುವಾರ ರಂಜಾನ್​ ಇದ್ದು, ಜನರು ಪರೀಕ್ಷೆಗೆ ಬರುವುದು ಅನುಮಾನವಾಗಿದೆ. ನಿನ್ನೆ ಜಾಗರಣ್ ಹಬ್ಬ ಇದ್ದ ಕಾರಣ ಕೇವಲ 39 ಜನರು ಮಾತ್ರ ಬಂದಿದ್ದರು. ಇನ್ನುಳಿದ ನಾಲ್ಕು ದಿನವೂ ಆರೋಗ್ಯ ಪರೀಕ್ಷೆಗೆ ಬರೋದು ಅನುಮಾನವಾಗಿದೆ.

ಯಾರನ್ನೂ ಒತ್ತಾಯಪೂರ್ವಕವಾಗಿ ಕರೆಸಿಕೊಳ್ಳಲು ಸಾಧ್ಯವಿಲ್ಲ. ಅವರೇ ಸ್ವಯಂಪ್ರೇರಿತರಾಗಿ ಬಂದರೆ ಅಷ್ಟೇ ಬೇಗ ಬೇಗ ಪರೀಕ್ಷೆ ನಡೆಸಲು ಸಾಧ್ಯ. ಮನವೊಲಿಸಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಆರೋಗ್ಯಾಧಿಕಾರಿ ಡಾ‌. ಮನೋರಂಜನ್ ಹೆಗಡೆ ಮಾಹಿತಿ ನೀಡಿದರು.

ಈ ಹಿಂದೆ ಕ್ವಾರಂಟೈನ್ ಮಾಡಲು ಮುಂದಾದ ವೇಳೆ ಜನರು ಗಲಭೆ ನಡೆಸಿದ ಕಹಿ ಘಟನೆ ಇರುವಾಗ ಆರೋಗ್ಯ ಪರೀಕ್ಷೆಗೆ ಒತ್ತಾಯ ಮಾಡಲು ಆರೋಗ್ಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಪ್ರತಿದಿನ ನಡೆದ ಆರೋಗ್ಯ ಪರೀಕ್ಷೆಯ ಅಂಕಿ-ಅಂಶ ಹೀಗಿದೆ.

ಸೋಮವಾರ (18-06-2020) ಸ್ಯಾಂಪಲ್ ಪರೀಕ್ಷೆ

  • ಮೊಬೈಲ್ ಬಸ್ -30
  • ಕಿಯೋಸ್ಕ್ - 67
  • ಒಟ್ಟು-97

ಮಂಗಳವಾರ (19-06-2020) ಸ್ಯಾಂಪಲ್ ಪರೀಕ್ಷೆ

  • ಮೊಬೈಲ್ ಬಸ್-31
  • ಕಿಯೋಸ್ಕ್ - 55
  • ಒಟ್ಟು - 86

ಬುಧವಾರ (20-06-2020 )

  • ಮೊಬೈಲ್ ಬಸ್-20
  • ಕಿಯೋಸ್ಕ್ -19
  • ಒಟ್ಟು -39

ಅಂದಾಜು ನೂರು ಜನ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದವರ ಸಂಖ್ಯೆ ಈಗ 39ಕ್ಕೆ ಇಳಿದಿದೆ. ಸರ್ಕಾರ ಉಚಿತವಾಗಿ ಹೆಲ್ತ್ ಚೆಕಪ್ ಮಾಡಿ ಕೊಡುತ್ತಿದ್ದರೂ ಪಾದರಾಯನಪುರದ ಜನ ಹಿಂದೇಟು ಹಾಕುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.