ETV Bharat / state

ಸಂಘದಿಂದ ಸಂಘಟನೆಗೆ ಸರ್ಜರಿ: ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ನೇಮಕ

author img

By

Published : Jul 19, 2022, 10:35 PM IST

ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಆಗಿ ಕಳೆದ ಆರು ವರ್ಷಗಳಿಂದ ಇದ್ದ ಅರುಣ್ ಕುಮಾರ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾಗಿ ನಿಯುಕ್ತಗೊಂಡ ಹಿನ್ನೆಲೆ ಅವರ ಜಾಗಕ್ಕೆ ಪುತ್ತೂರು ಮೂಲಕ ರಾಜೇಶ್ ಅವರನ್ನು ನೇಮಿಸಲಾಗಿದೆ.

ರಾಜೇಶ್
ರಾಜೇಶ್

ಬೆಂಗಳೂರು: ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಆರ್.ಎಸ್.ಎಸ್ ಪ್ರಚಾರಕ ರಾಜೇಶ್ (ಪದ್ಮಾರ್ )ಅವರನ್ನು ನೇಮಕ ಮಾಡಲಾಗಿದೆ.

ಪಕ್ಷ ಸಂಘಟನೆ ನೇತೃತ್ವ ವಹಿಸಿಕೊಳ್ಳಲು ಸಂಘ ಪರಿವಾರ ನೇಮಕ ಮಾಡುವ ಮಹತ್ವದ ಹುದ್ದೆಯಾಗಿರುವ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತುಮಕೂರು ವಿಭಾಗ ಪ್ರಚಾರಕ ಆಗಿದ್ದ ರಾಜೇಶ್ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಆಗಿ ಕಳೆದ ಆರು ವರ್ಷಗಳಿಂದ ಇದ್ದ ಅರುಣ್ ಕುಮಾರ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾಗಿ ನಿಯುಕ್ತಗೊಂಡ ಹಿನ್ನೆಲೆಯಲ್ಲಿ ಅವರ ಜಾಗಕ್ಕೆ ಪುತ್ತೂರು ಮೂಲಕ ರಾಜೇಶ್ ಅವರನ್ನು ನೇಮಿಸಲಾಗಿದೆ.

ಬಿ. ಎಲ್ ಸಂತೋಷ್ ಕೇಂದ್ರ ಸಂಘಟನೆಗೆ ಹೋಗುತ್ತಿದ್ದಂತೆ ಅವರ ಜಾಗಕ್ಕೆ ಅರುಣ್ ಕುಮಾರ್ ನೇಮಕವಾಗಿತ್ತು. ಇದೀಗ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು, ಅವರ ಜಾಗಕ್ಕೆ ರಾಜೇಶ್ ಬಂದಿದ್ದಾರೆ.

ಪ್ರಚಾರಕರಿಗೆ ಆರ್.ಎಸ್.ಎಸ್ ವಹಿಸಿದ ನೂತನ ಜವಾಬ್ದಾರಿಗಳು: ಗ.ರಾ. ಸುರೇಶ್ - ಸಾಮರಸ್ಯ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಟೋಳಿ ಸದಸ್ಯರು. ಹಾಗೂ ಘುಮಂತು (ಅಲೆಮಾರಿ ಸಮುದಾಯ) ಕಾರ್ಯದ ಕರ್ನಾಟಕ ರಾಜ್ಯ ಪ್ರಮುಖರು.

ಶಿ. ಲ. ಕೃಷ್ಣಮೂರ್ತಿ - ಹಿಂದೂ ಸೇವಾ ಪ್ರತಿಷ್ಠಾನ

ಮನೋಹರ್ ಮಠದ್ - ಕರ್ನಾಟಕ ದೇವಸ್ಥಾನ ಸಂವರ್ಧನ ಸಮಿತಿ ರಾಜ್ಯ ಸಂಯೋಜಕರು

ಅರುಣ್ ಕುಮಾರ್ - ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರು

ರಾಜೇಶ್ - ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಜನೈತಿಕ ಕ್ಷೇತ್ರ

ಓದಿ: ಮತ ಮಾರಾಟಕ್ಕಿಲ್ಲವೆಂದು ಯುವಕರು ಸಂಕಲ್ಪ ಮಾಡ್ಬೇಕು, ಇಲ್ಲವಾದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತೆ: ಸ್ಪೀಕರ್ ಕಾಗೇರಿ

ಬೆಂಗಳೂರು: ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಆರ್.ಎಸ್.ಎಸ್ ಪ್ರಚಾರಕ ರಾಜೇಶ್ (ಪದ್ಮಾರ್ )ಅವರನ್ನು ನೇಮಕ ಮಾಡಲಾಗಿದೆ.

ಪಕ್ಷ ಸಂಘಟನೆ ನೇತೃತ್ವ ವಹಿಸಿಕೊಳ್ಳಲು ಸಂಘ ಪರಿವಾರ ನೇಮಕ ಮಾಡುವ ಮಹತ್ವದ ಹುದ್ದೆಯಾಗಿರುವ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತುಮಕೂರು ವಿಭಾಗ ಪ್ರಚಾರಕ ಆಗಿದ್ದ ರಾಜೇಶ್ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಆಗಿ ಕಳೆದ ಆರು ವರ್ಷಗಳಿಂದ ಇದ್ದ ಅರುಣ್ ಕುಮಾರ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾಗಿ ನಿಯುಕ್ತಗೊಂಡ ಹಿನ್ನೆಲೆಯಲ್ಲಿ ಅವರ ಜಾಗಕ್ಕೆ ಪುತ್ತೂರು ಮೂಲಕ ರಾಜೇಶ್ ಅವರನ್ನು ನೇಮಿಸಲಾಗಿದೆ.

ಬಿ. ಎಲ್ ಸಂತೋಷ್ ಕೇಂದ್ರ ಸಂಘಟನೆಗೆ ಹೋಗುತ್ತಿದ್ದಂತೆ ಅವರ ಜಾಗಕ್ಕೆ ಅರುಣ್ ಕುಮಾರ್ ನೇಮಕವಾಗಿತ್ತು. ಇದೀಗ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು, ಅವರ ಜಾಗಕ್ಕೆ ರಾಜೇಶ್ ಬಂದಿದ್ದಾರೆ.

ಪ್ರಚಾರಕರಿಗೆ ಆರ್.ಎಸ್.ಎಸ್ ವಹಿಸಿದ ನೂತನ ಜವಾಬ್ದಾರಿಗಳು: ಗ.ರಾ. ಸುರೇಶ್ - ಸಾಮರಸ್ಯ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಟೋಳಿ ಸದಸ್ಯರು. ಹಾಗೂ ಘುಮಂತು (ಅಲೆಮಾರಿ ಸಮುದಾಯ) ಕಾರ್ಯದ ಕರ್ನಾಟಕ ರಾಜ್ಯ ಪ್ರಮುಖರು.

ಶಿ. ಲ. ಕೃಷ್ಣಮೂರ್ತಿ - ಹಿಂದೂ ಸೇವಾ ಪ್ರತಿಷ್ಠಾನ

ಮನೋಹರ್ ಮಠದ್ - ಕರ್ನಾಟಕ ದೇವಸ್ಥಾನ ಸಂವರ್ಧನ ಸಮಿತಿ ರಾಜ್ಯ ಸಂಯೋಜಕರು

ಅರುಣ್ ಕುಮಾರ್ - ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರು

ರಾಜೇಶ್ - ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಜನೈತಿಕ ಕ್ಷೇತ್ರ

ಓದಿ: ಮತ ಮಾರಾಟಕ್ಕಿಲ್ಲವೆಂದು ಯುವಕರು ಸಂಕಲ್ಪ ಮಾಡ್ಬೇಕು, ಇಲ್ಲವಾದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತೆ: ಸ್ಪೀಕರ್ ಕಾಗೇರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.