ETV Bharat / state

ಸಬ್​ ಅರ್ಬನ್​ ರೈಲ್ವೆ ಯೋಜನೆಗೆ ಅನುಮೋದನೆ ಸಿಕ್ಕಿರುವುದು ಒಂದು ಮೈಲಿಗಲ್ಲು: ತೇಜಸ್ವಿ ಸೂರ್ಯ - ರೈಲ್ವೆ ಬೋರ್ಡ್​ನ ಸಬ್ ಅರ್ಬನ್ ಅನುಮೋದನೆ ವಿಚಾರ

ಸಬ್ ಅರ್ಬನ್ ರೈಲ್ವೆ ಜಾಲವನ್ನು ಹೊಂದಿರದ ಏಕೈಕ ಮೆಟ್ರೋ ನಮ್ಮ ನಗರವಾಗಿದೆ. ನಗರ ಸಂಚಾರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ನೀತಿ ಆಯೋಗ, ರೈಲ್ವೆ ಸಚಿವಾಲಯ, ಯೋಜನಾ ಮತ್ತು ಅಂಕಿಅಂಶ ಹಾಗೂ ಹಣಕಾಸು ಸಚಿವಾಲಯ ಸಬ್ ಅರ್ಬನ್ ಯೋಜನೆಗೆ ಅನುಮೋದನೆ ನೀಡಿದ್ದು, ಸಬ್ ಅರ್ಬನ್ ರೈಲ್ವೆಗಿದ್ದ ಅಡೆತಡೆಗಳನ್ನು ತೆರವುಗೊಳಿಸಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

MP Tejasvi Surya
author img

By

Published : Nov 4, 2019, 10:06 PM IST

ಬೆಂಗಳೂರು: ನಗರ ಸಂಚಾರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ನೀತಿ ಆಯೋಗ, ರೈಲ್ವೆ ಸಚಿವಾಲಯ, ಯೋಜನಾ ಮತ್ತು ಅಂಕಿ ಅಂಶ ಹಾಗೂ ಹಣಕಾಸು ಸಚಿವಾಲಯ ಸಬ್ ಅರ್ಬನ್ ಯೋಜನೆಗೆ ಅನುಮೋದನೆ ನೀಡಿದ್ದು, ಅಡೆತಡೆಗಳನ್ನು ತೆರವುಗೊಳಿಸಿದೆ. ಈ ಯೋಜನೆಯನ್ನು ಅಂತಿಮ ಅನುಮೋದನೆಗಾಗಿ ಕ್ಯಾಬಿನೆಟ್ ಮುಂದೆ ಇರಿಸಲಾಗುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಬ್ ಅರ್ಬನ್ ರೈಲ್ವೆ ಜಾಲವನ್ನು ಹೊಂದಿರದ ಏಕೈಕ ಮೆಟ್ರೋ ನಗರ ನಮ್ಮದು. ಕಳೆದ 33 ವರ್ಷಗಳಿಂದ ಬೆಂಗಳೂರು ನಾಗರಿಕರು ಸಬ್ ಅರ್ಬನ್ ರೈಲ್ವೆಗಾಗಿ ಒತ್ತಾಯಿಸುತ್ತಿದ್ದರು. ಈ ವರ್ಷದ ಆರಂಭದಲ್ಲಿ ಪ್ರಸ್ತಾವಿತ ಯೋಜನೆಯು ನೀತಿ ಆಯೋಗದಲ್ಲಿ ತಡೆ ಹಿಡಿಯಲಾಗಿತ್ತು. ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಸ್ಟ್‌ನಲ್ಲಿ ಅನುಮೋದನೆ ನೀಡಿದ್ದು, ಕಳೆದ ವಾರ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಬೆಂಗಳೂರಿನ ಸಂಚಾರ ದಟ್ಟಣೆಯಿಂದ ಮುಕ್ತಿಗಾಗಿ ಸಬ್ ಅರ್ಬನ್ ರೈಲ್ವೆಯ ಮಹತ್ವವನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದರು.

ಬೆಂಗಳೂರಿನ ಎಲ್ಲ ಸಂಸತ್ ಸದಸ್ಯರು, ಪಿಸಿ ಮೋಹನ್ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಪ್ರಯತ್ನಗಳು ಇಂದು ಫಲ ನೀಡಿದ್ದು, ಇದು ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಅನುಮೋದನೆಗೆ ಬರಲಿದ್ದು, ಶೀಘ್ರವೇ ರಾಜ್ಯದ ಎಲ್ಲ ಸಂಸತ್ ಸದಸ್ಯರು ಪ್ರಧಾನಿಯನ್ನು ಭೇಟಿ ಮಾಡಿ ಯೋಜನೆಯನ್ನು ಅನುಮೋದಿಸುವಂತೆ ವಿನಂತಿಸುತ್ತೇವೆ ಎಂದರು.

ಬೆಂಗಳೂರು: ನಗರ ಸಂಚಾರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ನೀತಿ ಆಯೋಗ, ರೈಲ್ವೆ ಸಚಿವಾಲಯ, ಯೋಜನಾ ಮತ್ತು ಅಂಕಿ ಅಂಶ ಹಾಗೂ ಹಣಕಾಸು ಸಚಿವಾಲಯ ಸಬ್ ಅರ್ಬನ್ ಯೋಜನೆಗೆ ಅನುಮೋದನೆ ನೀಡಿದ್ದು, ಅಡೆತಡೆಗಳನ್ನು ತೆರವುಗೊಳಿಸಿದೆ. ಈ ಯೋಜನೆಯನ್ನು ಅಂತಿಮ ಅನುಮೋದನೆಗಾಗಿ ಕ್ಯಾಬಿನೆಟ್ ಮುಂದೆ ಇರಿಸಲಾಗುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಬ್ ಅರ್ಬನ್ ರೈಲ್ವೆ ಜಾಲವನ್ನು ಹೊಂದಿರದ ಏಕೈಕ ಮೆಟ್ರೋ ನಗರ ನಮ್ಮದು. ಕಳೆದ 33 ವರ್ಷಗಳಿಂದ ಬೆಂಗಳೂರು ನಾಗರಿಕರು ಸಬ್ ಅರ್ಬನ್ ರೈಲ್ವೆಗಾಗಿ ಒತ್ತಾಯಿಸುತ್ತಿದ್ದರು. ಈ ವರ್ಷದ ಆರಂಭದಲ್ಲಿ ಪ್ರಸ್ತಾವಿತ ಯೋಜನೆಯು ನೀತಿ ಆಯೋಗದಲ್ಲಿ ತಡೆ ಹಿಡಿಯಲಾಗಿತ್ತು. ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಸ್ಟ್‌ನಲ್ಲಿ ಅನುಮೋದನೆ ನೀಡಿದ್ದು, ಕಳೆದ ವಾರ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಬೆಂಗಳೂರಿನ ಸಂಚಾರ ದಟ್ಟಣೆಯಿಂದ ಮುಕ್ತಿಗಾಗಿ ಸಬ್ ಅರ್ಬನ್ ರೈಲ್ವೆಯ ಮಹತ್ವವನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದರು.

ಬೆಂಗಳೂರಿನ ಎಲ್ಲ ಸಂಸತ್ ಸದಸ್ಯರು, ಪಿಸಿ ಮೋಹನ್ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಪ್ರಯತ್ನಗಳು ಇಂದು ಫಲ ನೀಡಿದ್ದು, ಇದು ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಅನುಮೋದನೆಗೆ ಬರಲಿದ್ದು, ಶೀಘ್ರವೇ ರಾಜ್ಯದ ಎಲ್ಲ ಸಂಸತ್ ಸದಸ್ಯರು ಪ್ರಧಾನಿಯನ್ನು ಭೇಟಿ ಮಾಡಿ ಯೋಜನೆಯನ್ನು ಅನುಮೋದಿಸುವಂತೆ ವಿನಂತಿಸುತ್ತೇವೆ ಎಂದರು.

Intro:‌ರೈಲ್ವೆ ಬೋರ್ಡ್ ನ ಸಬ್ ಅರ್ಬನ್ ರೈಲು ಅನುಮೋದನೆ ಬೆಂಗಳೂರಿಗೆ ಒಂದು ಮೈಲಿಗಲ್ಲು- ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರು ನಗರದ ಸಂಚಾರದ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ನೀತಿ ಆಯೋಗ ರೈಲ್ವೆ ಸಚಿವಾಲಯ, ಯೋಜನಾ ಮತ್ತು ಅಂಕಿಅಂಶ ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ ರೈಲ್ವೆ ಮಂಡಳಿ ಸಭೆಯು ಸಬ್ ಅರ್ಬನ್ ಯೋಜನೆಗೆ ಅನುಮೋದನೆ ನೀಡಿದ್ದರಿಂದ ಬೆಂಗಳೂರಿನ ಸಬ್ ಅರ್ಬನ್ ರೈಲ್ವೆಗೆ ಇದ್ದ ಅಡೆತಡೆಗಳನ್ನು ತೆರವುಗೊಳಿಸಿದ್ದು, ಈ ಯೋಜನೆಯನ್ನು ಅಂತಿಮ ಅನುಮೋದನೆಗಾಗಿ ಕ್ಯಾಬಿನೆಟ್ ಮುಂದೆ ಇರಿಸಲಾಗುತ್ತದೆ ಅಂತ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು..‌

ಸಬ್ ಅರ್ಬನ್ ರೈಲ್ವೆ ಜಾಲವನ್ನು ಹೊಂದಿರದ ಏಕೈಕ ಮೆಟ್ರೋ ನಮ್ಮ ನಗರವಾಗಿದೆ. ಕಳೆದ 33 ವರ್ಷಗಳಿಂದ ಬೆಂಗಳೂರು ನಾಗರಿಕರು ಸಬ್ ಅರ್ಬನ್ ರೈಲ್ವೆಗಾಗಿ ಒತ್ತಾಯಿಸುತ್ತಿದ್ದರು.
ಈ ವರ್ಷದ ಆರಂಭದಲ್ಲಿ ಪ್ರಸ್ತಾವಿತ ಯೋಜನೆಯು ನೀತಿ ಆಯೋಗ್‌ನಲ್ಲಿ ತಡೆ ಹಿಡಿಯಲಾಗಿತ್ತು..

ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಸ್ಟ್‌ನಲ್ಲಿ ಅನುಮೋದನೆ ನೀಡಿದ್ದರು.. ಕಳೆದ ವಾರ ಕೇಂದ್ರ ರೈಲ್ವೆ ಸಚಿವರನ್ನೂ ಭೇಟಿಯಾಗಿ ಬೆಂಗಳೂರಿನ ಸಂಚಾರ ದಟ್ಟಣೆಯಿಂದ ಮುಕ್ತಿಗಾಗಿ ಸಬ್ ಅರ್ಬನ್ ರೈಲ್ವೆಯ ಮಹತ್ವವನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದರು..

ಬೆಂಗಳೂರಿನ ಎಲ್ಲ ಸಂಸತ್ ಸದಸ್ಯರು, ಪಿಸಿ ಮೋಹನ್ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಪ್ರಯತ್ನಗಳು ಇಂದು ಫಲ ನೀಡಿದ್ದು, ಇದು ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಅನುಮೋದನೆಗೆ ಬರಲಿದ್ದು, ಶೀಘ್ರವೇ ರಾಜ್ಯದ ಎಲ್ಲ ಸಂಸತ್ ಸದಸ್ಯರು ಪ್ರಧಾನಿಯನ್ನು ಭೇಟಿ ಮಾಡಿ ಯೋಜನೆಯನ್ನು ಅನುಮೋದಿಸುವಂತೆ ವಿನಂತಿಸುತ್ತೇವೆ ಎಂದು ಯುವ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

KN_BNG_4_SUBURBAN_RAILWAY_SCRIPT1_7201801

Body:ಎರಡನೇ ಸ್ಕ್ರಿಪ್ಟ್ ಪರಿಗಣಿಸಿ ಮೊದಲನೆಯ ಸ್ಕ್ರಿಪ್ಟ್ ಬೇಡConclusion:ಎರಡನೇ ಸ್ಕ್ರಿಪ್ಟ್ ಪರಿಗಣಿಸಿ ಮೊದಲನೆಯ ಸ್ಕ್ರಿಪ್ಟ್ ಬೇಡ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.