ETV Bharat / state

ಫೀಲ್ಡಿಗಿಳಿದ ಖಾಕಿ : ಕೋವಿಡ್​ ನಿಯಮ ಮೀರಿದವರಿಗೆ ಲಾಠಿ ರುಚಿ

author img

By

Published : May 9, 2021, 1:23 PM IST

ರಾಜ್ಯದಲ್ಲಿ ಕಠಿಣ ಕರ್ಫ್ಯೂ ಇದ್ದು, ನಾಳೆಯಿಂದ ಲಾಕ್​ ಡೌನ್​ ಜಾರಿಯಾಗಲಿದೆ. ಈ ನಡುವೆ ಸಿಲಿಕಾನ್​ ಸಿಟಿಯಲ್ಲಿ ಇಂದಿನಿಂದಲೇ ಪೊಲೀಸರು ಫೀಲ್ಡಿಗಿಳಿದಿದ್ದು, ನಿಯಮ ಮೀರುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

police warns to Covid Guidelines violators
ಸಿಲಿಕಾನ್ ಸಿಟಿಯಲ್ಲಿ ಫೀಲ್ಡಿಗಿಳಿದ ಖಾಕಿ

ಬೆಂಗಳೂರು : ನಾಳೆಯಿಂದ ರಾಜ್ಯದಲ್ಲಿ ಲಾಕ್​ ಡೌನ್‌ ಜಾರಿಯಾಗಲಿದ್ದು, ಇಂದಿನಿಂದಲೇ ಫೀಲ್ಡಿಗಿಳಿದಿರುವ ನಗರ ಪೊಲೀಸರು‌ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದಾರೆ.

ಇಂದು ಭಾನುವಾರವಾದ್ದರಿಂದ ಮಾಂಸದಂಗಡಿಗಳ ಮುಂದೆ ಜನ ಜಂಗುಳಿ ಕಂಡುಬಂತು. ಲಾಕ್​ ಡೌನ್ ಜಾರಿಯಾಗಲಿರುವುದರಿಂದ ಅಗತ್ಯ ಸಾಮಾಗ್ರಿಗಳ ಖರೀದಿಗೂ ಜನ ಮುಗಿಬಿದ್ದಿದ್ದರು. ಹೀಗಾಗಿ, ನಗರದ ಕೆ.ಆರ್ ಮಾರ್ಕೆಟ್, ಮಲ್ಲೇಶ್ವರ, ಯಶವಂತಪುರ ಸೇರಿದಂತೆ ಹಲವು ಕಡೆಗಳಲ್ಲಿ ಜನಸಾಗರ ಕಂಡು ಬಂತು. ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್‌ ಹಾಕದವರಿಗೆ ಬಿಬಿಎಂಪಿ ಮಾರ್ಷಲ್​ಗಳು ದಂಡ ವಿಧಿಸಿದರು.

ಸಿಲಿಕಾನ್ ಸಿಟಿಯಲ್ಲಿ ಫೀಲ್ಡಿಗಿಳಿದ ಖಾಕಿ

ಓದಿ : ಬೆಂಗಳೂರಲ್ಲಿ ಮೇ 1 - 24 ರವರೆಗೆ 144 ಸೆಕ್ಷನ್ ಜಾರಿ: ನಗರ ಪೊಲೀಸ್ ಆಯುಕ್ತರಿಂದ ಆದೇಶ

10 ಗಂಟೆ ಬಳಿಕ ಹೊಯ್ಸಳ ವಾಹನದ ಮೂಲಕ ಸಿಟಿ ರೌಂಡ್​ ಹೊಡೆದ ಪೊಲೀಸರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಅವಧಿ ಮೀರಿಯೂ ವ್ಯಾಪಾರ ನಡೆಸುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

ಬೊಮ್ಮನಹಳ್ಳಿ, ತುಮಕೂರು ರಸ್ತೆ, ಹಳೆ ಮದ್ರಾಸ್ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಯೊಂದು ವಾಹನಗಳನ್ನು ಪೊಲೀಸರು ತಪಾಸಣೆಗೊಳಪಡಿಸುತ್ತಿದ್ದಾರೆ. ಈ ವೇಳೆ‌ ಕೆಲ ವಾಹನ ಸವಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವುದು ಕಂಡು ಬಂತು. ಅನಗತ್ಯವಾಗಿ ಓಡಾಡುವುದಲ್ಲದೆ ವಾಗ್ವಾದ ನಡೆಸಿದವರಿಗೂ ಪೊಲೀಸರು ಲಾಠಿಯಿಂದ ಪಾಠ ಹೇಳಿದರು.

ಬೆಂಗಳೂರು : ನಾಳೆಯಿಂದ ರಾಜ್ಯದಲ್ಲಿ ಲಾಕ್​ ಡೌನ್‌ ಜಾರಿಯಾಗಲಿದ್ದು, ಇಂದಿನಿಂದಲೇ ಫೀಲ್ಡಿಗಿಳಿದಿರುವ ನಗರ ಪೊಲೀಸರು‌ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದಾರೆ.

ಇಂದು ಭಾನುವಾರವಾದ್ದರಿಂದ ಮಾಂಸದಂಗಡಿಗಳ ಮುಂದೆ ಜನ ಜಂಗುಳಿ ಕಂಡುಬಂತು. ಲಾಕ್​ ಡೌನ್ ಜಾರಿಯಾಗಲಿರುವುದರಿಂದ ಅಗತ್ಯ ಸಾಮಾಗ್ರಿಗಳ ಖರೀದಿಗೂ ಜನ ಮುಗಿಬಿದ್ದಿದ್ದರು. ಹೀಗಾಗಿ, ನಗರದ ಕೆ.ಆರ್ ಮಾರ್ಕೆಟ್, ಮಲ್ಲೇಶ್ವರ, ಯಶವಂತಪುರ ಸೇರಿದಂತೆ ಹಲವು ಕಡೆಗಳಲ್ಲಿ ಜನಸಾಗರ ಕಂಡು ಬಂತು. ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್‌ ಹಾಕದವರಿಗೆ ಬಿಬಿಎಂಪಿ ಮಾರ್ಷಲ್​ಗಳು ದಂಡ ವಿಧಿಸಿದರು.

ಸಿಲಿಕಾನ್ ಸಿಟಿಯಲ್ಲಿ ಫೀಲ್ಡಿಗಿಳಿದ ಖಾಕಿ

ಓದಿ : ಬೆಂಗಳೂರಲ್ಲಿ ಮೇ 1 - 24 ರವರೆಗೆ 144 ಸೆಕ್ಷನ್ ಜಾರಿ: ನಗರ ಪೊಲೀಸ್ ಆಯುಕ್ತರಿಂದ ಆದೇಶ

10 ಗಂಟೆ ಬಳಿಕ ಹೊಯ್ಸಳ ವಾಹನದ ಮೂಲಕ ಸಿಟಿ ರೌಂಡ್​ ಹೊಡೆದ ಪೊಲೀಸರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಅವಧಿ ಮೀರಿಯೂ ವ್ಯಾಪಾರ ನಡೆಸುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

ಬೊಮ್ಮನಹಳ್ಳಿ, ತುಮಕೂರು ರಸ್ತೆ, ಹಳೆ ಮದ್ರಾಸ್ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಯೊಂದು ವಾಹನಗಳನ್ನು ಪೊಲೀಸರು ತಪಾಸಣೆಗೊಳಪಡಿಸುತ್ತಿದ್ದಾರೆ. ಈ ವೇಳೆ‌ ಕೆಲ ವಾಹನ ಸವಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವುದು ಕಂಡು ಬಂತು. ಅನಗತ್ಯವಾಗಿ ಓಡಾಡುವುದಲ್ಲದೆ ವಾಗ್ವಾದ ನಡೆಸಿದವರಿಗೂ ಪೊಲೀಸರು ಲಾಠಿಯಿಂದ ಪಾಠ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.