ETV Bharat / state

ಗುರಾಯಿಸಿದರೆಂದು ಹೊಡೆದು ಬಿಟ್ಟ, ಹೊಡೆತ ತಿಂದವರು ಕೊಂದೇ ಬಿಟ್ಟರು...! - ಕ್ರಿಕೆಟ್​ ವಿಚಾರಕ್ಕೆ ಬೆಂಗಳೂರಲ್ಲಿ ಕೊಲೆ

ಕಾಲೇಜಿನಲ್ಲಿ ಕ್ರಿಕೆಟ್​​ ಆಡುವ ವೇಳೆ ಪರಸ್ಪರ ಕಿತ್ತಾಡಿಕೊಂಡು ಕಾಲೇಜು ಹುಡುಗನನ್ನು ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೊಲೆ ಆರೋಪಿಗಳ ಬಂಧನ
author img

By

Published : Nov 24, 2019, 10:03 AM IST

ಬೆಂಗಳೂರು: ಕಾಲೇಜು ಹುಡುಗರು ಕ್ರಿಕೆಟ್ ಆಡುವ ವೇಳೆ ಗುರಾಯಿಸಿದ್ರು ಅಂತಾ ಹಲ್ಲೆ ನಡೆಸಿದ್ದ ಹುಡುಗನನ್ನು ಕೊಲೆಗೈದ ಆರೋಪಿಗಳನ್ನು ಪೊಲೀಸರು ಪೊಲೀಸರು ಬಂಧಿಸಿದ್ದಾರೆ.

murder
ಕಾಲೇಜು ಹುಡುಗನ ಕೊಲೆ

ಚಂದನ್@ಎಬಿಸಿಡಿ ಚಂದ್ರು ಮತ್ತು ರೋಹಿತ್‌ ಎಂಬ ಆರೋಪಿಗಳನ್ನು ಪೊಲೀಸರು ಶೂಟೌಟ್ ಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ 21 ರಂದು ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಮಾ ಮಹೇಶ್ವರ್ ಎಂಬ ಹುಡುಗನನ್ನು ಚಂದನ್ ಹಾಗೂ ರೋಹಿತ್ ಕ್ರಿಕೆಟ್ ಆಡುವ ವೇಳೆ ಗುರಾಯಿಸಿದ್ದರು. ಹೀಗಾಗಿ ಉಮಾ ಮಹೇಶ್ವರ್ ಇಬ್ಬರ ಮೇಲೂ ಹಲ್ಲೆ ಮಾಡಿದ್ದ. ನಂತ್ರ ಹಲ್ಲೆಗೊಳಗಾದವರು ಅದೇ ರಾತ್ರಿ ಅವನನ್ನು ಕರೆದು ಚಾಕು ಇರಿದು ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ನಂದಿನಿ ಲೇಔಟ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಲೆ ಆರೋಪಿಗಳ ಬಂಧನ

ಆರೋಪಿಗಳು ನಿನ್ನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಕೆಡಬ್ಲೂ ಲೇಔಟ್​​ನಲ್ಲಿ ಇರುವ ಮಾಹಿತಿ ಮೇರೆಗೆ ನಂದಿನಿ ಲೇಔಟ್ ಇನ್ಸ್‌ಪೆಕ್ಟರ್ ಲೋಹಿತ್, ಹಂತಕರನ್ನ ಹಿಡಿಯಲು ಹೋಗಿದ್ದಾರೆ. ಆರೋಪಿಗಳಿಬ್ಬರನ್ನು ಬಂಧಿಸಲು ಹೋದಾಗ ಪಿಎಸ್​​ಐ ನಿತ್ಯಾನಂದ ಹಾಗೂ ಪೇದೆ ಬಸವಣ್ಣ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಇನ್ಸ್‌ಪೆಕ್ಟರ್ ಲೋಹಿತ್ ಆತ್ಮರಕ್ಷಣೆಗಾಗಿ ಹಂತಕರ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಸದ್ಯ ಗಾಯಾಳು ಆರೋಪಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಬಂಧಿತ ಇಬ್ಬರು ಆರೋಪಿಗಳ‌ ಮೇಲೆ ಉತ್ತರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ, ಡಕಾಯಿತಿ, ರಾಬರಿ ಪ್ರಕರಣಗಳು ದಾಖಲಾಗಿದ್ದು, ಸದ್ಯ ಪ್ರಕರಣದ ತನಿಖೆ ಮುಂದುವರೆದಿದೆ.

ಕೊಲೆಯಾದ ಉಮಾ ಮಹೇಶ್‌ ಮೂಲತಃ ಆಂಧ್ರ ಮೂಲದವನಾಗಿದ್ದು ಈತ ಬೆಂಗಳೂರಿನ ನಂದಿನಿ ಲೇಔಟ್​​​ನ‌ ಸರಸ್ವತಿ ಬಡಾವಣೆಯ ನಿವಾಸಿ. ಖಾಸಗಿ ಕಾಲೇಜ್‌ನಲ್ಲಿ ಬಿಸಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಬೆಂಗಳೂರು: ಕಾಲೇಜು ಹುಡುಗರು ಕ್ರಿಕೆಟ್ ಆಡುವ ವೇಳೆ ಗುರಾಯಿಸಿದ್ರು ಅಂತಾ ಹಲ್ಲೆ ನಡೆಸಿದ್ದ ಹುಡುಗನನ್ನು ಕೊಲೆಗೈದ ಆರೋಪಿಗಳನ್ನು ಪೊಲೀಸರು ಪೊಲೀಸರು ಬಂಧಿಸಿದ್ದಾರೆ.

murder
ಕಾಲೇಜು ಹುಡುಗನ ಕೊಲೆ

ಚಂದನ್@ಎಬಿಸಿಡಿ ಚಂದ್ರು ಮತ್ತು ರೋಹಿತ್‌ ಎಂಬ ಆರೋಪಿಗಳನ್ನು ಪೊಲೀಸರು ಶೂಟೌಟ್ ಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ 21 ರಂದು ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಮಾ ಮಹೇಶ್ವರ್ ಎಂಬ ಹುಡುಗನನ್ನು ಚಂದನ್ ಹಾಗೂ ರೋಹಿತ್ ಕ್ರಿಕೆಟ್ ಆಡುವ ವೇಳೆ ಗುರಾಯಿಸಿದ್ದರು. ಹೀಗಾಗಿ ಉಮಾ ಮಹೇಶ್ವರ್ ಇಬ್ಬರ ಮೇಲೂ ಹಲ್ಲೆ ಮಾಡಿದ್ದ. ನಂತ್ರ ಹಲ್ಲೆಗೊಳಗಾದವರು ಅದೇ ರಾತ್ರಿ ಅವನನ್ನು ಕರೆದು ಚಾಕು ಇರಿದು ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ನಂದಿನಿ ಲೇಔಟ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಲೆ ಆರೋಪಿಗಳ ಬಂಧನ

ಆರೋಪಿಗಳು ನಿನ್ನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಕೆಡಬ್ಲೂ ಲೇಔಟ್​​ನಲ್ಲಿ ಇರುವ ಮಾಹಿತಿ ಮೇರೆಗೆ ನಂದಿನಿ ಲೇಔಟ್ ಇನ್ಸ್‌ಪೆಕ್ಟರ್ ಲೋಹಿತ್, ಹಂತಕರನ್ನ ಹಿಡಿಯಲು ಹೋಗಿದ್ದಾರೆ. ಆರೋಪಿಗಳಿಬ್ಬರನ್ನು ಬಂಧಿಸಲು ಹೋದಾಗ ಪಿಎಸ್​​ಐ ನಿತ್ಯಾನಂದ ಹಾಗೂ ಪೇದೆ ಬಸವಣ್ಣ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಇನ್ಸ್‌ಪೆಕ್ಟರ್ ಲೋಹಿತ್ ಆತ್ಮರಕ್ಷಣೆಗಾಗಿ ಹಂತಕರ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಸದ್ಯ ಗಾಯಾಳು ಆರೋಪಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಬಂಧಿತ ಇಬ್ಬರು ಆರೋಪಿಗಳ‌ ಮೇಲೆ ಉತ್ತರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ, ಡಕಾಯಿತಿ, ರಾಬರಿ ಪ್ರಕರಣಗಳು ದಾಖಲಾಗಿದ್ದು, ಸದ್ಯ ಪ್ರಕರಣದ ತನಿಖೆ ಮುಂದುವರೆದಿದೆ.

ಕೊಲೆಯಾದ ಉಮಾ ಮಹೇಶ್‌ ಮೂಲತಃ ಆಂಧ್ರ ಮೂಲದವನಾಗಿದ್ದು ಈತ ಬೆಂಗಳೂರಿನ ನಂದಿನಿ ಲೇಔಟ್​​​ನ‌ ಸರಸ್ವತಿ ಬಡಾವಣೆಯ ನಿವಾಸಿ. ಖಾಸಗಿ ಕಾಲೇಜ್‌ನಲ್ಲಿ ಬಿಸಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

Intro:ಗುರಾಯಿಸಿದರೆಂದು ಹೊಡೆದೆ ಬಿಟ್ಟ.. ಹೊಡೆತ ತಿಂದವರು ಕೊಂದೆ ಬಿಟ್ಟರು.
ಸದ್ಯ ಆರೋಪಿಗಳನ್ನ ಅಂದರ್ ಮಾಡಿದ್ರು ಪೊಲೀಸರು


ಅವನು ಟಿನೇಜ್‌ ಹುಡುಗ..ಸಕತ್‌ ಸ್ಟೈಲಿಶ್‌ ಕೂಡ ಹೌದು.ಆದ್ರೆ ಇತ್ತೇಚೆಗೆ ಕಾಲೇಜ್ ಮೆಟ್ಟಿಲೇರಿದ್ಮೆಲೆ ಪ್ರೆಂಡ್ಸ್ ಅಂತ ಸಕತ್ ಸುತ್ತಾಡ್ತಿದ್ದ. ಅದೆ ಕಾಲೇಜಿನ ಚಪ್ಪರ್ ಹುಡುಗರು ಕ್ರಿಕೆಟ್ ಆಡುವ ವೇಳೆ ಗುರಾಯಿಸಿದ್ರು ಅಂತಾ ಹೊಡೆದೆಬಿಟ್ಡಿದ್ದ. ಇದೇ ದ್ವೇಷಕ್ಕೆ ಹುಡುಗರಿಬ್ಬರ ಟೀಂ ಸ್ಟೈಲೀಶ್ ಹಾಗೂ ಸ್ಮಾರ್ಟ್ ಹುಡುಗನ ಮುಗಿಸೆ ಬಿಟ್ಟಿದ್ರು.

ಸದ್ಯ ಇಂದು ಆರೋಪಿಗಳನ್ನ ಪೊಲೀಸರು ಶೂಟೌಟ್ ಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಚಂದನ್ @ ಎಬಿಸಿಡಿ ಚಂದ್ರು, ರೋಹಿತ್ ಕಾಲಿಗೆ ಗುಂಡುತಿಂದ ಆರೋಪಿಗಳು.

ಇದೇ ೨೧ ರಂದು ನಂದಿನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಮಾ ಮಾಹೇಶ್ವರ್ ಎಂಬುವ ಹುಡುಗನನ್ನ ಚಂದನ್ @ ಎಬಿಸಿಡಿ ಚಂದ್ರು, ರೋಹಿತ್ ಕ್ರಿಕೇಟ್ ಆಟವಾಡುವ ವೇಳೆ ಗುರಾಯಿಸಿದ್ದರು. ಹೀಗಾಗಿ ಉಮಾ ಮಹೇಶ್ವರ್ ಇಬ್ಬರ ಮೇಲೆ ಹಲ್ಲೆ ಮಾಡಿದ್ದ. ನಂತ್ರ ಹಲ್ಲೆಗೊಳಗಾದವರು ಅದೆ ರಾತ್ರಿ ಕರೆದು ಚಾಕು ಇರಿದು ಕೊಲೆ ಮಾಡಿದ್ದರು. ಈ ಸಂಬಂಧ ನಂದಿನೀಲೆಔಟ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳು ನಿನ್ನೆ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಕೆ ಡಬ್ಲೂ ಲೇಔಟ್ ನಲ್ಲಿ ಇರುವ ಮಾಹಿತಿ ಮೇರೆಗೆ
ನಂದಿನಿ ಲೇಔಟ್ ಇನ್ಸ್‌ಪೆಕ್ಟರ್ ಲೋಹಿತ್ ಹಂತಕರನ್ನ ಹಿಡಿಯಲು ಹೊಗಿದ್ದಾರೆ. ಆರೋಪಿಗಳಿಬ್ಬರನ್ನ ಬಂಧಿಸಲು ಹೋದಾಗ
ಪಿಎಸ್ ಐ ನಿತ್ಯಾನಂದ ಹಾಗೂ ಪೆದೇ ಬಸವಣ್ಣಗೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಆರೋಪಿ ಗಳು. ಈ ವೇಳೆ ಇನ್ಸ್ಪೆಕ್ಟರ್ ಶರಣಾಗುವಂತೆ ಸೂಚಿಸಿದ್ದು ಇನ್ಸ್ಪೆಕ್ಟರ್ ಮೇಲೆ ಹಲ್ಲೆಗೆ ಮುಂದದಾಗ ತಕ್ಷಣ ಇನ್ಸ್‌ಪೆಕ್ಟರ್ ಲೋಹಿತ್ ಆತ್ಮರಕ್ಷಣೆಗಾಗಿ ಹಂತಕರ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ .ಸದ್ಯ ಘಟನೆ ಯಲ್ಲಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂದಿನಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನು ಬಂಧಿತ ಇಬ್ಬರು ಆರೋಪಿಗಳ‌ಮೇಲೆ ಕೊಲೆಯತ್ನ, ಡಕಾಯಿತಿ, ರಾಬರಿ ಪ್ರಕರಣಗಳು ಉತ್ತರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು ಸದ್ಯ ತನೀಕೆ ಮುಂದುವರೆದಿದೆ

ಕೊಲೆಯಾದ ಉಮಾಮಹೇಶ್.ಮೂಲತಃ ಆಂಧ್ರ ಮೂಲದವಾನಾಗಿದ್ದು ಇತ ಬೆಂಗಳೂರಿನ ನಂದಿನಿ ಲೇಔಟ್ ನ‌ ಸರಸ್ವತಿ ಬಡಾವಣೆಯಲ್ಲಿ ವಾಸವಾಗಿದ್ದು ಖಾಸಗಿ ಕಾಲೇಜ್‌ನಲ್ಲಿ ಬಿಸಿಎ ದ್ವಿತಿಯ ವರ್ಷ ವ್ಯಾಸಂಗ ಮಾಡುತ್ತಿದ್ದ.

Body:KN_bNG_03_MURDDERA_ARREST_7204498Conclusion:KN_bNG_03_MURDDERA_ARREST_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.