ETV Bharat / state

ವಿಶ್ವ ಪರಿಸರ ದಿನ: ಖಾಸಗಿ ಆಸ್ಪತ್ರೆಯಲ್ಲಿ ಗಿಡ ನೆಟ್ಟು ನಿಸರ್ಗ ಸಂರಕ್ಷಣೆ ಶಪಥ ಮಾಡಿದ ಕೋವಿಡ್ ಗೆದ್ದವರು

author img

By

Published : Jun 4, 2021, 3:43 PM IST

Updated : Jun 4, 2021, 9:44 PM IST

ಕೊರೊನಾ ಮಹಾಮಾರಿ ಬಂದ ನಂತರ ಜನತೆಗೆ ಪ್ರಾಣವಾಯುವಿನ ಮಹತ್ವದ ಬಗ್ಗೆ ಅರಿವು ಮೂಡಿದೆ. ಹೀಗಾಗಿ ಜನರಿಗೆ ಗಿಡ ನೆಡುವುದರ ಜರೂರತ್ತಿನ ಬಗ್ಗೆ ತಿಳಿವಳಿಕೆ ಮೂಡಿದ್ದು, ಇಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಹೆಸರಘಟ್ಟದ ಖಾಸಗಿ ಆಸ್ಪತ್ರೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕೊರೊನಾ ಸೋಂಕಿನಿಂದ ಗುಣಮುಖರಾದವರು ಗಿಡ ನೆಟ್ಟಿದ್ದಾರೆ.

hesaragatta
hesaragatta

ಬೆಂಗಳೂರು :ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಉತ್ತಮ ಆಮ್ಲಜನಕ ಸಿಗಲಿ ಎಂಬ ಸದುದ್ದೇಶದಿಂದ ಹೆಸರಘಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಎಂದರೆ ಕೋವಿಡ್ ಸೋಂಕಿನಿಂದ ಬಳಲಿ ಆಮ್ಲಜನಕದ ನೆರವಿನಿಂದ ಗುಣಮುಖರಾದವರು ಗಿಡ ನೆಟ್ಟಿದ್ದಾರೆ.

ಕೋವಿಡ್ ಮಹಾಮಾರಿಯಿಂದ ಇದೀಗ ಪ್ರಾಣವಾಯುವಿನ ಮಹತ್ವದ ಅರಿವಾಗಿದ್ದು, ನಾವು ಇನ್ನಷ್ಟು ಗಿಡಗಳನ್ನು ನೆಟ್ಟು ಸೂಕ್ತ ರೀತಿಯಲ್ಲಿ ಪರಿಸರ ಸಂರಕ್ಷಿಸಬೇಕು. ಎಲ್ಲರ ಸಹಕಾರದಿಂದ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ಸೋಂಕಿನಿಂದ ಗುಣಮುಖರಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ಗಿಡ ನೆಟ್ಟು ನಿಸರ್ಗ ಸಂರಕ್ಷಣೆ ಶಪಥ ಮಾಡಿದ ಕೋವಿಡ್ ಗೆದ್ದವರು
ಇನ್ನು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ .ಜಯಂತಿ ತಜ್ಞ ವೈದ್ಯ ಮಾತನಾಡಿ, ಬೆಂಗಳೂರಿನ ಜನಸಂಖ್ಯೆಗೆ ಪ್ರತಿಯೊಬ್ಬ ಮನುಷ್ಯನಿಗೆ ಕನಿಷ್ಠ ಏಳು ಮರಗಳು ಇರಬೇಕಾಗಿತ್ತು. ಆದರೆ, ಕೇವಲ ಒಬ್ಬ ವ್ಯಕ್ತಿಗೆ ಒಂದು ಮರ ಮಾತ್ರ ಇದೆ. ನೀಲಗಿರಿ, ಅಕೇಶಿಯಾದಂತಹ ಮರಗಳು ಪರಿಸರಕ್ಕೆ ಮಾರಕವಾಗಿದ್ದು, ವಾತಾವರಣವನ್ನು ತಂಪಾಗಿಸುವ, ಹೊಂಗೆ, ಹಣ್ಣು ಬಿಡುವ ವಿವಿಧ ಜಾತಿಯ ಮರಗಳನ್ನು ಬೆಳೆಸಬೇಕು. ಇದರಿಂದ ಪ್ರಾಣಿ ಪಕ್ಷಿಗಳ ಸಂತತಿಯನ್ನು ಸಲಹಲು ಅನುಕೂಲವಾಗಲಿದೆ ಎಂದರು..ಮತ್ತೋರ್ವ ತಜ್ಞ ವೈದ್ಯ ಮಾತನಾಡಿ, ಕೋವಿಡ್ ಸಂಕಷ್ಟ ಎದುರಾದ ನಂತರ ನಮಗೆ ಔಷಧೀಯ ಸಸ್ಯಗಳ ಮಹತ್ವ ಅರಿವಾಗುತ್ತಿದೆ.. ವೈವಿದ್ಯಮಯ ಸಸ್ಯ ಸಂಕುಲದಿಂದ ಜೀವ ವೈವಿದ್ಯತೆ ರಕ್ಷಣೆಗೆ ಸಹಕಾರಿಯಾಗಲಿದೆ.. ಪ್ರತಿಯೊಂದು ಆಸ್ಪತ್ರೆ, ಪಂಚಾಯತ್ ಕಚೇರಿಗಳು, ಶಾಲೆಗಳಲ್ಲಿ ಕಿರು ಅರಣ್ಯ ಮಾದರಿಯಲ್ಲಿ ಗಿಡ, ಮರಗಳನ್ನು ನೆಡುವ ಪರಿಸರಮುಖಿ ಕೆಲಸ ಆಗಬೇಕು ಎಂದರು.

ಬೆಂಗಳೂರು :ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಉತ್ತಮ ಆಮ್ಲಜನಕ ಸಿಗಲಿ ಎಂಬ ಸದುದ್ದೇಶದಿಂದ ಹೆಸರಘಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಎಂದರೆ ಕೋವಿಡ್ ಸೋಂಕಿನಿಂದ ಬಳಲಿ ಆಮ್ಲಜನಕದ ನೆರವಿನಿಂದ ಗುಣಮುಖರಾದವರು ಗಿಡ ನೆಟ್ಟಿದ್ದಾರೆ.

ಕೋವಿಡ್ ಮಹಾಮಾರಿಯಿಂದ ಇದೀಗ ಪ್ರಾಣವಾಯುವಿನ ಮಹತ್ವದ ಅರಿವಾಗಿದ್ದು, ನಾವು ಇನ್ನಷ್ಟು ಗಿಡಗಳನ್ನು ನೆಟ್ಟು ಸೂಕ್ತ ರೀತಿಯಲ್ಲಿ ಪರಿಸರ ಸಂರಕ್ಷಿಸಬೇಕು. ಎಲ್ಲರ ಸಹಕಾರದಿಂದ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ಸೋಂಕಿನಿಂದ ಗುಣಮುಖರಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ಗಿಡ ನೆಟ್ಟು ನಿಸರ್ಗ ಸಂರಕ್ಷಣೆ ಶಪಥ ಮಾಡಿದ ಕೋವಿಡ್ ಗೆದ್ದವರು
ಇನ್ನು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ .ಜಯಂತಿ ತಜ್ಞ ವೈದ್ಯ ಮಾತನಾಡಿ, ಬೆಂಗಳೂರಿನ ಜನಸಂಖ್ಯೆಗೆ ಪ್ರತಿಯೊಬ್ಬ ಮನುಷ್ಯನಿಗೆ ಕನಿಷ್ಠ ಏಳು ಮರಗಳು ಇರಬೇಕಾಗಿತ್ತು. ಆದರೆ, ಕೇವಲ ಒಬ್ಬ ವ್ಯಕ್ತಿಗೆ ಒಂದು ಮರ ಮಾತ್ರ ಇದೆ. ನೀಲಗಿರಿ, ಅಕೇಶಿಯಾದಂತಹ ಮರಗಳು ಪರಿಸರಕ್ಕೆ ಮಾರಕವಾಗಿದ್ದು, ವಾತಾವರಣವನ್ನು ತಂಪಾಗಿಸುವ, ಹೊಂಗೆ, ಹಣ್ಣು ಬಿಡುವ ವಿವಿಧ ಜಾತಿಯ ಮರಗಳನ್ನು ಬೆಳೆಸಬೇಕು. ಇದರಿಂದ ಪ್ರಾಣಿ ಪಕ್ಷಿಗಳ ಸಂತತಿಯನ್ನು ಸಲಹಲು ಅನುಕೂಲವಾಗಲಿದೆ ಎಂದರು..ಮತ್ತೋರ್ವ ತಜ್ಞ ವೈದ್ಯ ಮಾತನಾಡಿ, ಕೋವಿಡ್ ಸಂಕಷ್ಟ ಎದುರಾದ ನಂತರ ನಮಗೆ ಔಷಧೀಯ ಸಸ್ಯಗಳ ಮಹತ್ವ ಅರಿವಾಗುತ್ತಿದೆ.. ವೈವಿದ್ಯಮಯ ಸಸ್ಯ ಸಂಕುಲದಿಂದ ಜೀವ ವೈವಿದ್ಯತೆ ರಕ್ಷಣೆಗೆ ಸಹಕಾರಿಯಾಗಲಿದೆ.. ಪ್ರತಿಯೊಂದು ಆಸ್ಪತ್ರೆ, ಪಂಚಾಯತ್ ಕಚೇರಿಗಳು, ಶಾಲೆಗಳಲ್ಲಿ ಕಿರು ಅರಣ್ಯ ಮಾದರಿಯಲ್ಲಿ ಗಿಡ, ಮರಗಳನ್ನು ನೆಡುವ ಪರಿಸರಮುಖಿ ಕೆಲಸ ಆಗಬೇಕು ಎಂದರು.
Last Updated : Jun 4, 2021, 9:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.