ETV Bharat / state

ಟೆಲಿಫೋನ್​​ ಕದ್ದಾಲಿಕೆ ಪ್ರಕರಣ: ಸಿಬಿಐನಿಂದ ಶರಣಗೌಡ ವಿಚಾರಣೆ ಸಾಧ್ಯತೆ

author img

By

Published : Oct 29, 2019, 5:27 PM IST

ಟೆಲಿಫೋನ್ ಟ್ಯಾಪಿಂಗ್ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದ್ದು, ಬಿಎಸ್​ವೈ ಆಡಿಯೋ ವಿಚಾರವಾಗಿ ಶರಣಗೌಡ ಅವರಿಂದ ಸಿಬಿಐ ಹೇಳಿಕೆ ಪಡೆಯಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಫೋನ್ ಕದ್ದಾಲಿಕೆ ಪ್ರಕರಣ

ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಳಿಸಿದ್ದು, ಜೆಡಿಎಸ್ ಕಾರ್ಯದರ್ಶಿ ಶರಣಗೌಡ ಕಂದಕೂರ್​ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ.

ಜೆಡಿಎಸ್ ರಾಜ್ಯ ಯುವ ಘಟಕದ ಮಹಾ‌ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ದೇವದುರ್ಗದ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಬಿಎಸ್​ವೈ ಜೊತೆ ಐಬಿಯಲ್ಲಿ ಮಾತುಕತೆ ನಡೆಸಿದ್ದ ಸಂದರ್ಭ, ಬಿಜೆಪಿಗೆ ಬರುವಂತೆ ಆಮಿಷವೊಡಿದ್ದಾರೆಂದು ಅರೋಪಿಸಿದ್ದರು. ಈ ಕುರಿತು ಫೋನ್​ ಸಂಭಾಷಣೆಯ ರೆಕಾರ್ಡ್​ನ್ನು ಅಂದಿನ ಸಿಎಂ ಕುಮಾರಸ್ವಾಮಿಯವರಿಗೆ ನೀಡಿದ್ದರು. ಅಂದು ಪತ್ರಿಕಾಗೋಷ್ಠಿ ನಡೆಸಿದ್ದ ಹೆಚ್​ಡಿಕೆ ಧ್ವನಿಮುದ್ರಿಕೆ ಬಿಡುಗಡೆ ಮಾಡಿದ್ದರು. ಈ ಬಗ್ಗೆ ಗುರುಮಿಟ್ಕಲ್ ಠಾಣೆಯಲ್ಲಿ ಎಫ್​​ಐಆರ್ ಕೂಡಾ ದಾಖಲಾಗಿತ್ತು.

ಸದ್ಯ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವ ಟೆಲಿಫೋನ್ ಟ್ಯಾಪಿಂಗ್ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದ್ದು, ಆಡಿಯೋ ವಿಚಾರವಾಗಿ ಶರಣಗೌಡ ಅವರಿಂದ ಸಿಬಿಐ ಮಾಹಿತಿ ಪಡೆಯಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಳಿಸಿದ್ದು, ಜೆಡಿಎಸ್ ಕಾರ್ಯದರ್ಶಿ ಶರಣಗೌಡ ಕಂದಕೂರ್​ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ.

ಜೆಡಿಎಸ್ ರಾಜ್ಯ ಯುವ ಘಟಕದ ಮಹಾ‌ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ದೇವದುರ್ಗದ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಬಿಎಸ್​ವೈ ಜೊತೆ ಐಬಿಯಲ್ಲಿ ಮಾತುಕತೆ ನಡೆಸಿದ್ದ ಸಂದರ್ಭ, ಬಿಜೆಪಿಗೆ ಬರುವಂತೆ ಆಮಿಷವೊಡಿದ್ದಾರೆಂದು ಅರೋಪಿಸಿದ್ದರು. ಈ ಕುರಿತು ಫೋನ್​ ಸಂಭಾಷಣೆಯ ರೆಕಾರ್ಡ್​ನ್ನು ಅಂದಿನ ಸಿಎಂ ಕುಮಾರಸ್ವಾಮಿಯವರಿಗೆ ನೀಡಿದ್ದರು. ಅಂದು ಪತ್ರಿಕಾಗೋಷ್ಠಿ ನಡೆಸಿದ್ದ ಹೆಚ್​ಡಿಕೆ ಧ್ವನಿಮುದ್ರಿಕೆ ಬಿಡುಗಡೆ ಮಾಡಿದ್ದರು. ಈ ಬಗ್ಗೆ ಗುರುಮಿಟ್ಕಲ್ ಠಾಣೆಯಲ್ಲಿ ಎಫ್​​ಐಆರ್ ಕೂಡಾ ದಾಖಲಾಗಿತ್ತು.

ಸದ್ಯ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವ ಟೆಲಿಫೋನ್ ಟ್ಯಾಪಿಂಗ್ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದ್ದು, ಆಡಿಯೋ ವಿಚಾರವಾಗಿ ಶರಣಗೌಡ ಅವರಿಂದ ಸಿಬಿಐ ಮಾಹಿತಿ ಪಡೆಯಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

Intro:

ರಾಜ್ಯದಲ್ಲಿ ಗಣ್ಯರ ಪೋನ್ ಕದ್ದಾಲಿಕೆ
ಸಿಬಿಐ ತನೀಕೆ ಚುರುಕು

ರಾಜ್ಯದಲ್ಲಿ ಗಣ್ಯರ ಪೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ
ಸಿಬಿಐ‌ ಮತ್ತೆ ತನಿಖೆ ಚುರುಕುಗೊಳಿಸಿ ಜೆಡಿಎಸ್ ಕಾರ್ಯದರ್ಶಿ ಶರಣಗೌಡ ಕಂದಕೂರ್ ಗೆ ಸಿಬಿಐ ನೋಟೀಸ್ ನೀಡಿ
ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ

ಜೆಡಿ ಎಸ್ ರಾಜ್ಯ ಯುವ ಘಟಕದ ಮಹಾ‌ಪ್ರಧಾನ ಕಾರ್ಯದರ್ಶಿ ಶರಣ ಗೌಡ ಕಂದಕೂರ ಅವರು ದೇವದುರ್ಗದ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಬಿಎಸ್ ವೈ ಜೊತೆ ಐಬಿಯಲ್ಲಿ ಮಾತುಕತೆ ನಡೆಸಿದ್ದ ಸಂದರ್ಭ. ಬಿಜೆಪಿಗೆ ಬರುವಂತೆ ಆಮಿಷ ವೊಡಿದ್ದಾರೆಂದು ಅರೋಪಿಸಿದ್ರು.

ಹಾಗೆ ಮಾತಾಡುವ ವೇಳೆ
ಫೋನ್ ನಲ್ಲಿ ಶರಣ ಗೌಡ ರೆಕಾರ್ಡ್ ಮಾಡಿ ನಂತ್ರ ಶರಣಗೌಡ ಅದನ್ನು ಆಗಿನ ಸಿಎಂ ಕುಮಾರಸ್ವಾಮಿಗೆ ನೀಡಿದ್ದರು. ಇದನ್ನ ಪತ್ರಿಕಾಗೋಷ್ಟೀ ನಡೆಸಿ ಆಗಿನ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ರು.ಈ ಬಗ್ಗೆ ಗುರುಮಿಟ್ಕಲ್ ಠಾಣೆಯಲ್ಲಿ ಎಫ್ ಐ ಆರ್ ಕೂಡಾ ದಾಖಲಾಗಿತ್ತು.

ಹೀಗಾಗಿ ಸದ್ಯ ರಾಜ್ಯದಲ್ಲಿ ತಲ್ಲಣ ಸೃಷ್ಟಿಯಾಗಿ ರುವ ರಾಜಕಾರಣಿ ಗಳ ಫೋನ್ ಟ್ಯಾಪಿಂಗ್ ಪ್ರಕರಣ ಸಂಬಂಧ ಸಿಬಿಐ ತನೀಕೆ ನಡೆಸುತ್ತಿದ್ದು ಸದ್ಯ ಆಡಿಯೋ ವಿಚಾರಣ ಕುರಿತು ಸಿಬಿಐ ಮಾಹಿತಿ ಪಡೆಯಲ್ಲಿದ್ದಾರೆಂದು ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆBody:KN_BNG_02_cbI_7204498Conclusion:KN_BNG_02_cbI_7204498

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.