ETV Bharat / state

ಖೋಟಾನೋಟು ಚಲಾವಣೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಎನ್ಐಎ

author img

By

Published : Jun 25, 2021, 9:30 PM IST

ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಜಹೀರುದ್ದೀನ್​ನನ್ನು ಹಾಜರುಪಡಿಸಿ ಬಾಡಿ ವಾರೆಂಟ್ ಕೋರಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ..

currency
currency

ಬೆಂಗಳೂರು : ನಗರದ ಮಾದನಾಯಕನಹಳ್ಳಿ ನಕಲಿ ನೋಟು ಚಲಾವಣೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಎನ್ಐಎ ಬಂಧಿಸಿದೆ. ಪರಾರಿಯಾಗಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಎಸ್‌ ಕೆ ಜಹಿರುದ್ದೀನ್ ಅಲಿಯಾಸ್ ಜಹೀರ್​ನನ್ನು ಇಂದು ಕಸ್ಟಡಿ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮೂಲತಃ ನಗರದ ಮದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ಪ್ರಕರಣ ದಾಖಲಾಗಿತ್ತು. ₹2000 ಮುಖಬೆಲೆಯ 6.84 ಲಕ್ಷವನ್ನು ಒಟ್ಟು ನಾಲ್ಕು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣವನ್ನು 2018ರಲ್ಲಿ ರಾಜ್ಯ ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ್ದರು. ಒಟ್ಟು ಮೂರು ಚಾರ್ಜ್‌ಶೀಟ್‌ಗಳನ್ನು ಎನ್‌ಐಎ, ಆರು ಆರೋಪಿಗಳ ವಿರುದ್ಧ ಈ ಹಿಂದೆ ಸಲ್ಲಿಸಿತ್ತು.

ಪರಾರಿಯಾಗಿದ್ದ ಆರೋಪಿ ಜಹೀರುದ್ದೀನ್ ಈಗಾಗಲೇ ಬಂಧಿತ ಆರೋಪಿಗಳಾಗಿರುವ ಅಬ್ದುಲ್ ಖಾದಿರ್ ಮತ್ತು ಸಬಿರುದ್ದೀನ್ ನಿಕಟವರ್ತಿಯಾಗಿದ್ದ. ಬಾಂಗ್ಲಾದೇಶದದಿಂದ ನಕಲಿ ನೋಟು ತರಿಸಿಕೊಂಡು ದೇಶದ ವಿವಿಧ ಭಾಗಗಳಲ್ಲಿ ಹಂಚಲು ಸಹವರ್ತಿಗಳಿಗೆ ಕಳುಹಿಸುತ್ತಿದ್ದರು.

ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಜಹೀರುದ್ದೀನ್​ನನ್ನು ಹಾಜರುಪಡಿಸಿ ಬಾಡಿ ವಾರೆಂಟ್ ಕೋರಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು : ನಗರದ ಮಾದನಾಯಕನಹಳ್ಳಿ ನಕಲಿ ನೋಟು ಚಲಾವಣೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಎನ್ಐಎ ಬಂಧಿಸಿದೆ. ಪರಾರಿಯಾಗಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಎಸ್‌ ಕೆ ಜಹಿರುದ್ದೀನ್ ಅಲಿಯಾಸ್ ಜಹೀರ್​ನನ್ನು ಇಂದು ಕಸ್ಟಡಿ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮೂಲತಃ ನಗರದ ಮದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ಪ್ರಕರಣ ದಾಖಲಾಗಿತ್ತು. ₹2000 ಮುಖಬೆಲೆಯ 6.84 ಲಕ್ಷವನ್ನು ಒಟ್ಟು ನಾಲ್ಕು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣವನ್ನು 2018ರಲ್ಲಿ ರಾಜ್ಯ ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ್ದರು. ಒಟ್ಟು ಮೂರು ಚಾರ್ಜ್‌ಶೀಟ್‌ಗಳನ್ನು ಎನ್‌ಐಎ, ಆರು ಆರೋಪಿಗಳ ವಿರುದ್ಧ ಈ ಹಿಂದೆ ಸಲ್ಲಿಸಿತ್ತು.

ಪರಾರಿಯಾಗಿದ್ದ ಆರೋಪಿ ಜಹೀರುದ್ದೀನ್ ಈಗಾಗಲೇ ಬಂಧಿತ ಆರೋಪಿಗಳಾಗಿರುವ ಅಬ್ದುಲ್ ಖಾದಿರ್ ಮತ್ತು ಸಬಿರುದ್ದೀನ್ ನಿಕಟವರ್ತಿಯಾಗಿದ್ದ. ಬಾಂಗ್ಲಾದೇಶದದಿಂದ ನಕಲಿ ನೋಟು ತರಿಸಿಕೊಂಡು ದೇಶದ ವಿವಿಧ ಭಾಗಗಳಲ್ಲಿ ಹಂಚಲು ಸಹವರ್ತಿಗಳಿಗೆ ಕಳುಹಿಸುತ್ತಿದ್ದರು.

ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಜಹೀರುದ್ದೀನ್​ನನ್ನು ಹಾಜರುಪಡಿಸಿ ಬಾಡಿ ವಾರೆಂಟ್ ಕೋರಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.