ETV Bharat / state

ತಾವೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳು ಅಂದ್ರು ಮುರುಗೇಶ್ ನಿರಾಣಿ, ನೆಹರು ಓಲೇಕಾರ್

ನಾವೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳು. ಆದ್ರೆ ಸಿಎಂ ಗೆ ಒತ್ತಡ ಹೇರುವುದಿಲ್ಲ. ಅವರು ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇವೆ ಎಂದು ಮಾಜಿ ಸಚಿವ ಮುರುಗೇಶ್​ ನಿರಾಣಿ ಹಾಗೂ ಹಾವೇರಿ ಶಾಸಕ ನೆಹರು ಓಲೇಕಾರ್​ ತಿಳಿಸಿದ್ದಾರೆ.

author img

By

Published : Feb 4, 2020, 3:41 PM IST

ಮುರುಗೇಶ್ ನಿರಾಣಿ, ನೆಹರು ಓಲೆಕಾರ್, Murugesh Nirani, Nehru Olekar who spoke about ministerial position
ಮುರುಗೇಶ್ ನಿರಾಣಿ, ನೆಹರು ಓಲೆಕಾರ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟ‌ ಸೇರಲು ನಾವು ಕೂಡ ಆಕಾಂಕ್ಷಿಯಾಗಿದ್ದೇವೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.

ಶಾಸಕರ ಭವನದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನದ ಅಪೇಕ್ಷೆ ಎಲ್ಲರಿಗೂ ಇರುವಂತೆ ನನಗೂ ಇದೆ. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಅದಕ್ಕಾಗಿ ಒತ್ತಾಯ ಮಾಡುವುದಿಲ್ಲ. ಮುಖ್ಯಮಂತ್ರಿ ಅವರ ಪರಿಸ್ಥಿತಿಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಆದ್ರೆ ಅವಕಾಶ ಕೊಟ್ಟರೆ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಗೆದ್ದ 11 ಶಾಸಕರಲ್ಲಿ ಮಹೇಶ್ ಕುಮಟಳ್ಳಿಯನ್ನು ಕೈಬಿಡುವುದು ಒಳ್ಳೆಯದಲ್ಲ, ಕುಮಟಳ್ಳಿಗೆ ಇದರಿಂದ ಬೇಸರವಾಗಬಹುದು. ಗೆದ್ದ ಉಳಿದವರನ್ನು ಸಚಿವರನ್ನಾಗಿ ಮಾಡಿ ಇವರೊಬ್ಬರನ್ನು ಕೈಬಿಡುವುದು ಸರಿಯಲ್ಲ. ಸಿಎಂ ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಆದರೆ, ಶಾಸಕನಾಗಿ ಹೀಗೆ ಮಾಡಿ ಅಂತ ಹೇಳಬಹುದಷ್ಟೇ ಎಂದರು.

ಸಚಿವ ಸ್ಥಾನ ನೀಡುವಂತೆ ಮುರುಗೇಶ್ ನಿರಾಣಿ, ನೆಹರು ಓಲೇಕಾರ್ ಮನವಿ

ಬಳಿಕ ಮಾತನಾಡಿದ ಶಾಸಕ ನೆಹರು ಓಲೇಕಾರ್, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಅವಕಾಶ ಸಿಕ್ಕರೆ ಸಂತೋಷ. ಇಲ್ಲದಿದ್ದರೆ ಸಿಎಂ ಜೊತೆ ಕೆಲಸ ಮಾಡಿಕೊಂಡಿರುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿಎಂ ಜೊತೆ ನಿನ್ನೆ ಸಮಾಲೋಚನೆ ನಡೆಸಿದ್ದೇನೆ, ಮುಂದಿನ‌ ದಿನದ ಅವಕಾಶದ ಭರವಸೆಯನ್ನು ನೀಡಿದ್ದಾರೆ. ಹಾಗಾಗಿ ಈ ಬಾರಿ ನಾನು ಸಚಿವ ಆಗದೇ ಇದ್ದರೂ ಮುಂದಿನ‌ ದಿನಗಳಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದರು.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟ‌ ಸೇರಲು ನಾವು ಕೂಡ ಆಕಾಂಕ್ಷಿಯಾಗಿದ್ದೇವೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.

ಶಾಸಕರ ಭವನದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನದ ಅಪೇಕ್ಷೆ ಎಲ್ಲರಿಗೂ ಇರುವಂತೆ ನನಗೂ ಇದೆ. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಅದಕ್ಕಾಗಿ ಒತ್ತಾಯ ಮಾಡುವುದಿಲ್ಲ. ಮುಖ್ಯಮಂತ್ರಿ ಅವರ ಪರಿಸ್ಥಿತಿಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಆದ್ರೆ ಅವಕಾಶ ಕೊಟ್ಟರೆ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಗೆದ್ದ 11 ಶಾಸಕರಲ್ಲಿ ಮಹೇಶ್ ಕುಮಟಳ್ಳಿಯನ್ನು ಕೈಬಿಡುವುದು ಒಳ್ಳೆಯದಲ್ಲ, ಕುಮಟಳ್ಳಿಗೆ ಇದರಿಂದ ಬೇಸರವಾಗಬಹುದು. ಗೆದ್ದ ಉಳಿದವರನ್ನು ಸಚಿವರನ್ನಾಗಿ ಮಾಡಿ ಇವರೊಬ್ಬರನ್ನು ಕೈಬಿಡುವುದು ಸರಿಯಲ್ಲ. ಸಿಎಂ ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಆದರೆ, ಶಾಸಕನಾಗಿ ಹೀಗೆ ಮಾಡಿ ಅಂತ ಹೇಳಬಹುದಷ್ಟೇ ಎಂದರು.

ಸಚಿವ ಸ್ಥಾನ ನೀಡುವಂತೆ ಮುರುಗೇಶ್ ನಿರಾಣಿ, ನೆಹರು ಓಲೇಕಾರ್ ಮನವಿ

ಬಳಿಕ ಮಾತನಾಡಿದ ಶಾಸಕ ನೆಹರು ಓಲೇಕಾರ್, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಅವಕಾಶ ಸಿಕ್ಕರೆ ಸಂತೋಷ. ಇಲ್ಲದಿದ್ದರೆ ಸಿಎಂ ಜೊತೆ ಕೆಲಸ ಮಾಡಿಕೊಂಡಿರುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿಎಂ ಜೊತೆ ನಿನ್ನೆ ಸಮಾಲೋಚನೆ ನಡೆಸಿದ್ದೇನೆ, ಮುಂದಿನ‌ ದಿನದ ಅವಕಾಶದ ಭರವಸೆಯನ್ನು ನೀಡಿದ್ದಾರೆ. ಹಾಗಾಗಿ ಈ ಬಾರಿ ನಾನು ಸಚಿವ ಆಗದೇ ಇದ್ದರೂ ಮುಂದಿನ‌ ದಿನಗಳಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದರು.

Intro:


ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟ‌ ಸೇರಲು ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ ಆದರೆ ಸ್ಥಾನಕ್ಕಾಗಿ ಸಿಎಂ ಮೇಲೆ ಒತ್ತಡ ಹೇರಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.

ಶಾಸಕರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಸಚಿವ ಸ್ಥಾನದ ಅಪೇಕ್ಷೆ ಎಲ್ಲರಿಗೂ ಇರುವಂತೆ ನನಗೂ ಇದೆ, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಆದರೆ ಅದಕ್ಕಾಗಿ ಒತ್ತಾಯ ಮಾಡುವುದಿಲ್ಲ,ಮುಖ್ಯಮಂತ್ರಿಗಳ ಪರಿಸ್ಥಿತಿಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು ಆದರೆ ಅವಕಾಶ ಕೊಟ್ಟರೆ ಒಳ್ಳೆಯ ಹೆಸರು ತರುವ ಕೆಲಸ ಮಾಡುತ್ತೇನೆ ಎಂದರು.

ಒಂದು ವೇಳೆ ಈ ಬಾರಿ ಅವಕಾಶ ಸಿಗದೇ ಇದ್ದರೂ ನಾವು ಕಾಯಲಿದ್ದೇವೆ,ತಾಳಿದವನು ಬಾಳಿಯಾನು ಎನ್ನುವಂತೆ, ಕಾಯಲು ಸಿದ್ದ ಸಿಎಂ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ದ ಎಂದರು.

ಗೆದ್ದ 11 ಶಾಸಕರಲ್ಲಿ ಮಹೇಶ್ ಕುಮಟಳ್ಳಿಯನ್ನು ಕೈ ಬಿಡುವುದು ಒಳ್ಳೆಯದಲ್ಲ, ಕುಮಟಳ್ಳಿಗೆ ಇದರಿಂದ ಬೇಸರವಾಗಬಹುದು, ಗೆದ್ದ ಉಳಿದವರನ್ನು ಸಚಿವರನ್ನಾಗಿ ಮಾಡಿ ಇವರೊಬ್ಬರನ್ನು ಕೈ ಬಿಡುವುದು ಸರಿಯಲ್ಲ, ಸಿಎಂ ಗೆ ಸಲಹೆ ಕೊಡುವಷ್ಡು ನಾನು ದೊಡ್ಡವನಲ್ಲ, ಆದರೆ ಶಾಸಕನಾಗಿ ಹೀಗೆ ಮಾಡಿ ಅಂತ ಹೇಳಬಹುದಷ್ಟೇ, ಸಿಎಂಗೆ 50 ವರ್ಷಕ್ಕೂ ಹೆಚ್ಚು ರಾಜಕೀಯ ಅನುಭವ ಇದೆ, ಎಲ್ಲವನ್ನೂ ಬಗೆಹರಿಸಲಿದ್ದಾರೆ ಎಂದು ಕುಮಟಳ್ಳಿ ಪರ ನಿರಾಣಿ ಬ್ಯಾಟಿಂಗ್ ಮಾಡಿದರು.
Body:.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.