ETV Bharat / state

ಖರೀದಿಸಿದ ಪ್ಲಾಟ್​ ಹಣ ಕೊಡಲಿಲ್ಲ ಎಂದು ಸ್ನೇಹಿತನ ಬರ್ಬರ ಹತ್ಯೆ - murder

ಖರೀದಿಸಿದ ಪ್ಲಾಟ್ ಗೆ ಹಣ ಕೊಟ್ಟಿಲ್ಲ ಎಂದು ರೊಚ್ಚಿಗೆದ್ದ ವ್ಯಕ್ತಿಯೊಬ್ಬ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

murder-in-bangalore
ಖರೀದಿಸಿದ ಪ್ಲ್ಯಾಟ್ ಹಣ ಕೊಡಲಿಲ್ಲವೆಂದು ಸ್ನೇಹಿತನ ಬರ್ಬರ ಹತ್ಯೆ
author img

By

Published : Jun 16, 2021, 10:45 PM IST

ಬೆಂಗಳೂರು: ಖರೀದಿಸಿದ ಪ್ಲಾಟ್​ಗೆ ಹಣ ಕೊಡದೆ ಸತಾಯಿಸಿದ ಎಂಬ ಕಾರಣಕ್ಕೆ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತೈ ಮಾಡಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರ್ತಿಕ್‌ (42) ಕೊಲೆಯಾದ ವ್ಯಕ್ತಿ. ಪರಿಚಿತನಾಗಿದ್ದ ಮೋಹನ್‌ ಎಂಬಾತ‌ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಪರಿಚಿತನಾಗಿದ್ದ ಮೋಹನ್, ಕಾರ್ತಿಕ್ ಜೊತೆ ಸೇರಿ ಅಪಾರ್ಟ್​ಮೆಂಟ್​ ಜಾಯಿಂಟ್ ವೆಂಚರ್​ನಲ್ಲಿ ನಿರ್ಮಾಣ ಮಾಡಿದ್ದ. ಅಲ್ಲದೇ ಅಪಾರ್ಟ್​​ಮೆಂಟ್​ನಲ್ಲಿ ಎರಡು ಫ್ಲಾಟ್ ಕಾರ್ತಿಕ್ ಖರೀದಿ ಮಾಡಿದ್ದ. ಆದರೆ, ಒಂದು ಪ್ಲ್ಯಾಟ್​ಗೆ ಹಣ ನೀಡಿ ಮತ್ತೊಂದು ಫ್ಲಾಟ್​ಗೆ ಹಣ ನೀಡದೇ ಸತಾಯಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಆಗಾಗ ಗಲಾಟೆ ಕೂಡ ನಡೆದಿತ್ತು. ಅಷ್ಟೇ ಅಲ್ಲ ಕಾರ್ತಿಕ್, ಮೋಹನ್ ಮಾಡಿದ ಪ್ರತಿ ಕೆಲಸಕ್ಕೂ ಅಡ್ಡಿಪಡಿಸುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಮೋಹನ್, ಕಾರ್ತಿಕ್ ಕೊಲೆ‌ ಮಾಡಲು ನಿರ್ಧರಿಸಿದ್ದ ಎನ್ನಲಾಗಿದೆ.

ರಾತ್ರಿ 7 ಗಂಟೆ ಸುಮಾರಿಗೆ ಕಾರ್ತಿಕ್ ತಾನು ವಾಸವಿದ್ದ ಅಪಾರ್ಟ್​ಮೆಂಟ್ ರಸ್ತೆಯಲ್ಲಿ ಬೈಕ್​ನಲ್ಲಿ ಬರುತ್ತಿದ್ದಾಗ ಸ್ನೇಹಿತನ ಜೊತೆ ಸೇರಿ ಮೋಹನ್ ಬೈಕ್ ಅಡ್ಡ ಹಾಕಿದ್ದಾನೆ. ಜಗಳವಾಗಿ ಅತಿರೇಕಕ್ಕೆ ಹೋಗಿ ಸಿಮೆಂಟ್ ಇಟ್ಟಿಗೆ ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಾಹಿತಿ ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ರಾಜಗೋಪಾಲನಗರ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಖರೀದಿಸಿದ ಪ್ಲಾಟ್​ಗೆ ಹಣ ಕೊಡದೆ ಸತಾಯಿಸಿದ ಎಂಬ ಕಾರಣಕ್ಕೆ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತೈ ಮಾಡಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರ್ತಿಕ್‌ (42) ಕೊಲೆಯಾದ ವ್ಯಕ್ತಿ. ಪರಿಚಿತನಾಗಿದ್ದ ಮೋಹನ್‌ ಎಂಬಾತ‌ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಪರಿಚಿತನಾಗಿದ್ದ ಮೋಹನ್, ಕಾರ್ತಿಕ್ ಜೊತೆ ಸೇರಿ ಅಪಾರ್ಟ್​ಮೆಂಟ್​ ಜಾಯಿಂಟ್ ವೆಂಚರ್​ನಲ್ಲಿ ನಿರ್ಮಾಣ ಮಾಡಿದ್ದ. ಅಲ್ಲದೇ ಅಪಾರ್ಟ್​​ಮೆಂಟ್​ನಲ್ಲಿ ಎರಡು ಫ್ಲಾಟ್ ಕಾರ್ತಿಕ್ ಖರೀದಿ ಮಾಡಿದ್ದ. ಆದರೆ, ಒಂದು ಪ್ಲ್ಯಾಟ್​ಗೆ ಹಣ ನೀಡಿ ಮತ್ತೊಂದು ಫ್ಲಾಟ್​ಗೆ ಹಣ ನೀಡದೇ ಸತಾಯಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಆಗಾಗ ಗಲಾಟೆ ಕೂಡ ನಡೆದಿತ್ತು. ಅಷ್ಟೇ ಅಲ್ಲ ಕಾರ್ತಿಕ್, ಮೋಹನ್ ಮಾಡಿದ ಪ್ರತಿ ಕೆಲಸಕ್ಕೂ ಅಡ್ಡಿಪಡಿಸುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಮೋಹನ್, ಕಾರ್ತಿಕ್ ಕೊಲೆ‌ ಮಾಡಲು ನಿರ್ಧರಿಸಿದ್ದ ಎನ್ನಲಾಗಿದೆ.

ರಾತ್ರಿ 7 ಗಂಟೆ ಸುಮಾರಿಗೆ ಕಾರ್ತಿಕ್ ತಾನು ವಾಸವಿದ್ದ ಅಪಾರ್ಟ್​ಮೆಂಟ್ ರಸ್ತೆಯಲ್ಲಿ ಬೈಕ್​ನಲ್ಲಿ ಬರುತ್ತಿದ್ದಾಗ ಸ್ನೇಹಿತನ ಜೊತೆ ಸೇರಿ ಮೋಹನ್ ಬೈಕ್ ಅಡ್ಡ ಹಾಕಿದ್ದಾನೆ. ಜಗಳವಾಗಿ ಅತಿರೇಕಕ್ಕೆ ಹೋಗಿ ಸಿಮೆಂಟ್ ಇಟ್ಟಿಗೆ ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಾಹಿತಿ ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ರಾಜಗೋಪಾಲನಗರ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ನಳಿನ್ ಕುಮಾರ್ ಕಟೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.