ETV Bharat / state

ಭಾರೀ ಮಳೆಯಿಂದ ಕೊಟ್ಟಿಗೆಗೆ ನುಗ್ಗಿದ ರಾಜಕಾಲುವೆ ನೀರು: 10ಕ್ಕೂ ಹೆಚ್ಚು ಜಾನುವಾರುಗಳು ಸಾವು

author img

By

Published : Oct 4, 2021, 9:55 AM IST

ಶಾಹೀನ್ ಚಂಡಮಾರುತದ ಪರಿಣಾಮ ರಾಜಧಾನಿಯಲ್ಲಿ ಧಾರಾಕಾರ ಮಳೆಯಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ನಗರದ ಜನತೆ ಸಂಕಷ್ಟ ಅನುಭವಿಸಿದ್ದಾರೆ.

more-than-10-domestic-animals-died-from-flood-water
ಭಾರೀ ಮಳೆಯಿಂದ ಕೊಟ್ಟಿಗೆಗೆ ನುಗ್ಗಿದ ರಾಜಕಾಲುವೆ ನೀರು

ಬೆಂಗಳೂರು: ತಡರಾತ್ರಿವರೆಗೂ ಸುರಿದ ಜೋರು ಮಳೆಯಿಂದಾಗಿ ಆರ್​ಆರ್ ನಗರದ ಹೊರವಲಯದಲ್ಲಿ ರಾಜಕಾಲುವೆ ನೀರು ಮನೆ ಹಾಗೂ ದನದ ಕೊಟ್ಟಿಗೆಗೆ ನುಗ್ಗಿದ್ದು 10ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ.

ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ 5 ಹಸು, 6 ಮೇಕೆ, 1 ಎತ್ತು, ಎಮ್ಮೆ, ಕರು ಮೃತಪಟ್ಟಿವೆ. ಇವು ಅಂದಾನಪ್ಪ ಎಂಬುವರಿಗೆ ಸೇರಿದ ಜಾನುವಾರುಗಳಾಗಿವೆ ಎಂದು ತಿಳಿದುಬಂದಿದೆ. ಇದರ ಜೊತೆಗೆ, ಮನೆಯಲ್ಲಿದ್ದ ಸುಮಾರು 30 ಮೂಟೆ ಹಿಂಡಿ, ಬೂಸ ಮಳೆ ನೀರು ಪಾಲಾಗಿದೆ.

ನಗರದ ವರ್ತುಲ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಮೆಜೆಸ್ಟಿಕ್, ಚಾಮರಾಜಪೇಟೆ, ಬಸವನಗುಡಿ, ಯಶವಂತಪುರ, ರಾಜರಾಜೇಶ್ವರಿನಗರ, ಮಹದೇವಪುರ, ಹೆಬ್ಬಾಳ ಸೇರಿ ವಿವಿಧೆಡೆ ಟ್ರಾಫಿಕ್ ಉಂಟಾಗಿತ್ತು. ಅಂಡರ್​ಪಾಸ್​ನಲ್ಲಿ ನೀರು ನಿಂತ ಪರಿಣಾಮ ವಾಹನಸವಾರರು ಪರದಾಡಬೇಕಾಯಿತು.

ಇದನ್ನೂ ಓದಿ: ಶಾಹೀನ್ ಚಂಡಮಾರುತ ಎಫೆಕ್ಟ್: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ, ಅವಾಂತರ

ಬೆಂಗಳೂರು: ತಡರಾತ್ರಿವರೆಗೂ ಸುರಿದ ಜೋರು ಮಳೆಯಿಂದಾಗಿ ಆರ್​ಆರ್ ನಗರದ ಹೊರವಲಯದಲ್ಲಿ ರಾಜಕಾಲುವೆ ನೀರು ಮನೆ ಹಾಗೂ ದನದ ಕೊಟ್ಟಿಗೆಗೆ ನುಗ್ಗಿದ್ದು 10ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ.

ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ 5 ಹಸು, 6 ಮೇಕೆ, 1 ಎತ್ತು, ಎಮ್ಮೆ, ಕರು ಮೃತಪಟ್ಟಿವೆ. ಇವು ಅಂದಾನಪ್ಪ ಎಂಬುವರಿಗೆ ಸೇರಿದ ಜಾನುವಾರುಗಳಾಗಿವೆ ಎಂದು ತಿಳಿದುಬಂದಿದೆ. ಇದರ ಜೊತೆಗೆ, ಮನೆಯಲ್ಲಿದ್ದ ಸುಮಾರು 30 ಮೂಟೆ ಹಿಂಡಿ, ಬೂಸ ಮಳೆ ನೀರು ಪಾಲಾಗಿದೆ.

ನಗರದ ವರ್ತುಲ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಮೆಜೆಸ್ಟಿಕ್, ಚಾಮರಾಜಪೇಟೆ, ಬಸವನಗುಡಿ, ಯಶವಂತಪುರ, ರಾಜರಾಜೇಶ್ವರಿನಗರ, ಮಹದೇವಪುರ, ಹೆಬ್ಬಾಳ ಸೇರಿ ವಿವಿಧೆಡೆ ಟ್ರಾಫಿಕ್ ಉಂಟಾಗಿತ್ತು. ಅಂಡರ್​ಪಾಸ್​ನಲ್ಲಿ ನೀರು ನಿಂತ ಪರಿಣಾಮ ವಾಹನಸವಾರರು ಪರದಾಡಬೇಕಾಯಿತು.

ಇದನ್ನೂ ಓದಿ: ಶಾಹೀನ್ ಚಂಡಮಾರುತ ಎಫೆಕ್ಟ್: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ, ಅವಾಂತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.