ETV Bharat / state

ತಾಳಗುಪ್ಪ-ಹೊನ್ನಾವರ ಮಾರ್ಗ ಆರಂಭ ; ಆದ್ಯತೆ ಮೇಲೆ ರೈಲ್ವೆ ಯೋಜನೆಗಳ ಪರಿಗಣನೆ - ಸಚಿವ ವಿ ಸೋಮಣ್ಣ

ಗ್ರಾಮ ಲೆಕ್ಕಿಗ ಮತ್ತು ದ್ವಿತೀಯ ದರ್ಜೆ ಸಿಬ್ಬಂದಿ ಜೇಷ್ಠತೆ ಬೇರ್ಪಡಿಸಿ ಪದೋನ್ನತಿ ನೀಡುತ್ತಿರುವ ಕುರಿತು ಸದಸ್ಯ ನಜೀರ್ ಅಹಮದ್ ಪ್ರಶ್ನೆಗೆ ಅವರು ಉತ್ತರಿಸಿದರು. ಕಂದಾಯ ಇಲಾಖೆಯ ಗ್ರಾಮಲೆಕ್ಕಿಗ, ದ್ವಿತೀಯ ದರ್ಜೆ ಸಿಬ್ಬಂದಿ ಎರಡೂ ವೃಂದವನ್ನು ಒಂದು ಜೇಷ್ಠತಾ ಪಟ್ಟಿ ತಯಾರಿಸಿ ಸೇವಾ ಹಿರಿತನದ ಮೇಲೆ ಬಡ್ತಿ ನೀಡಲು ನಿರ್ಧರಿಸಲಾಗಿದೆ..

author img

By

Published : Sep 15, 2021, 4:04 PM IST

council
ವಿಧಾನ ಪರಿಷತ್

ಬೆಂಗಳೂರು : ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ನಿರ್ಮಾಣ ಆರಂಭ ಸೇರಿದಂತೆ ನೆನಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಕುರಿತು ಶೀಘ್ರದಲ್ಲಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ ಸೋಮಣ್ಣ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಪ್ರಶ್ನೆಗೆ ಅವರು ಉತ್ತರಿಸಿದರು. ತಾಳಗುಪ್ಪ-ಹೊನ್ನಾವರ 82 ಕಿ.ಮೀ ದೂರ ಯೋಜನೆ ಆಗಿದೆ. ಇಂತಹ ಯೋಜನೆಗೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ.

ತಾಳಗುಪ್ಪ- ಹೊನ್ನಾವರ ಪಶ್ಚಿಮಘಟ್ಟ ಇರುವುದರಿಂದ ಇದರ ಬಗ್ಗೆ ಚರ್ಚೆ ಮಾಡುತ್ತೇವೆ‌. ರೈಲ್ವೆ ಯೋಜನೆಗಳಿಗೆ ಶೇ.50ರ ಕಾಸ್ಟ್ ಶೇರಿಂಗ್ ಮಾಡುತ್ತಿದ್ದೇವೆ. ಇದರ ಜೊತೆ ಭೂಸ್ವಾಧೀನ ದೊಡ್ಡ ಹೊರೆಯಾಗಿದೆ ಎಂದರು.

10 ಸಾವಿರ ಕೋಟಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕೊಡಬೇಕಿದೆ. ಆದರೂ ನಾವು ಯೋಜನೆಗಳನ್ನು ಕಡೆಗಣಿಸುವುದಿಲ್ಲ. ಇನ್ನು, 15-20 ದಿನದಲ್ಲಿ ಸಭೆ ನಡೆಸಲಿದ್ದೇವೆ. ತಾಳಗುಪ್ಪ ಹೊನ್ನಾವರದ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಎಲ್ಲ ಕುಳಿತು ಚರ್ಚಿಸಿ ಸಿಎಂ ಗಮನಕ್ಕೆ ತರಲಾಗುತ್ತದೆ. ಈಗಾಗಲೇ ನೆನಗುದಿಗೆ ಬಿದ್ದಿರುವ ಯೋಜನೆಗಳಿಗೆ ಆದ್ಯತೆ ನೀಡಲಿದ್ದೇವೆ.

ಬಾಕಿ ಇರುವ 9 ಯೋಜನೆ ಜೊತೆಗೆ ತಾಳಗುಪ್ಪ ಹೊನ್ನಾವರ ಯೋಜನೆ ಕೈಗೆತ್ತಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಿಎಂ ಜೊತೆ ಮಾತುಕತೆ ನಡೆಸಲಾಗುತ್ತದೆ. ನಾವು ಆದ್ಯತೆ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದೇವೆ ಎಂದರು.

ಅಕ್ರಮ ಸಕ್ರಮಕ್ಕೆ ಸುಪ್ರೀಂ ತಡೆ ತೆರವಿಗೆ ಕ್ರಮ : ಅಕ್ರಮ ಸಕ್ರಮ ಯೋಜನೆಗೆ ಸುಪ್ರೀಂಕೋರ್ಟ್ ನೀಡಿರುವ ತಡೆಯಾಜ್ಞೆ ತೆರವು ಕುರಿತು ಸರ್ಕಾರ ಎಲ್ಲ ರೀತಿಯ ಕ್ರಮಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ‌ ಇ ಖಾತೆ ನೀಡದ ವಿಚಾರ ಕುರಿತು ಜೆಡಿಎಸ್ ಪರಿಷತ್ ಸದಸ್ಯ ಕಾಂತರಾಜ್ ಪ್ರಶ್ನೆಗೆ ಅವರು ಉತ್ತರಿಸಿದರು.

ಅಕ್ರಮವಾಗಿ ಕೃಷಿ ‌ಜಮೀನಿನಲ್ಲಿ ನಿವೇಶನ ‌ಮಾಡಿ ಮಾರಾಟ ಮಾಡಿರುವವರು‌ ಸರ್ಕಾರದ ಅನುಮತಿ ನಿಲ್ಲದೆ ಬಡಾವಣೆ ಮಾಡಿದ್ದವರಿಗೆ ಅಕ್ರಮ‌ ಸಕ್ರಮ ಕಾಯ್ದೆ ಜಾರಿ ಮಾಡಿದ್ದೆವು. ಆದರೆ, ಅಕ್ರಮ ಸಕ್ರಮ ಯೋಜನೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ‌ನೀಡಿದೆ.

ದೆಹಲಿ‌ ಭೇಟಿ ವೇಳೆ ಚರ್ಚೆ ಮಾಡಿದ್ದೇನಿ. ಆದಷ್ಟು ಬೇಗ ಇತ್ಯರ್ಥ ಮಾಡುತ್ತೇವೆ ಎಂದರು. ಗ್ರಾಮ‌ ಠಾಣಾದಲ್ಲಿರುವ ನಿವೇಶನಗಳಿಗೆ ಇ ಖಾತೆ ನೀಡಲಾಗುತ್ತದೆ. ಸಂಸಾರ ಬೆಳದ ಹಾಗೆ ಹೂಲ ಗದ್ದೆಗಳಲ್ಲೂ ಮನೆ ನಿರ್ಮಾಣ ಮಾಡಿದ್ದಾರೆ. ಈ ಸಂಬಂಧ ನಾವು ಎಲ್ಲ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಉಳಿದಿದ್ದನ್ನೂ ಶೀಘ್ರದಲ್ಲೇ ಪರಿಹಾರ ಮಾಡುತ್ತೇವೆ ಎಂದರು.

ಎಲ್ಲ ಗ್ರಾಮಗಳಿಗೂ ಸ್ಮಶಾನ : ರಾಜ್ಯದ ಎಲ್ಲಾ ಗ್ರಾಮಗಳಿಗೂ ಸ್ಮಶಾನ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಗ್ರಾಮಗಳಿಗೆ ಸ್ಮಶಾನಗಳು ಇಲ್ಲದ ಬಗ್ಗೆ ಬಿಜೆಪಿ ವಿಪ್ ಮಹಾಂತೇಶ ಕವಟಗಿಮಠ ಪ್ರಶ್ನೆಗೆ ಅವರು ಉತ್ತರಿಸಿದರು.

ಖಾಸಗಿ ಜಮೀನಿಗೆ ಮೂರು ಪಟ್ಟು ಹಣ ಕೊಡುತ್ತೇವೆ ಎಂದು ಹೇಳಿದ್ದೇವೆ. ಪ್ರತಿ ಗ್ರಾಮಕ್ಕೂ ಒಂದು ಸ್ಮಶಾನ ಇರಬೇಕು. ಮೂರು ವರ್ಷದಲ್ಲಿ 26 ಕೋಟಿ ಬಿಡುಗಡೆ ಆಗಿದೆ. ನಾನು ಪ್ರತಿ ಸಭೆಯಲ್ಲೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸರ್ಕಾರಿ ಜಮೀನು ಇದ್ದರೆ ಜಿಲ್ಲಾಧಿಕಾರಿಗಳೇ ವ್ಯವಸ್ಥೆ ಮಾಡುತ್ತಾರೆ. ಖಾಸಗಿ ಜಾಗವಿದ್ದರೆ ದರ ನಿಗದಿ ಮಾಡಲಿ. ಅದಕ್ಕೆ ಅನುಮತಿ ಕೊಡುತ್ತೇವೆ ಎಂದರು.

ಗ್ರಾಮ ಲೆಕ್ಕಿಗ, ದ್ವಿತೀಯ ದರ್ಜೆ ಸಿಬ್ಬಂದಿಗೆ ಒಂದೇ ಜೇಷ್ಠತೆ : ಗ್ರಾಮ ಲೆಕ್ಕಿಗ ಮತ್ತು ದ್ವಿತೀಯ ದರ್ಜೆ ಸಿಬ್ಬಂದಿಯನ್ನು ಒಂದೇ ಜೇಷ್ಠತೆಗೆ ತಂದು ಸೇವಾ ಹಿರಿತನದ ಮೇಲೆ ಪದೋನ್ನತಿ ನೀಡಲು ಸರ್ಕಾರ ಎಲ್ಲ ರೀತಿಯ ಕ್ರಮಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗ್ರಾಮ ಲೆಕ್ಕಿಗ ಮತ್ತು ದ್ವಿತೀಯ ದರ್ಜೆ ಸಿಬ್ಬಂದಿ ಜೇಷ್ಠತೆ ಬೇರ್ಪಡಿಸಿ ಪದೋನ್ನತಿ ನೀಡುತ್ತಿರುವ ಕುರಿತು ಸದಸ್ಯ ನಜೀರ್ ಅಹಮದ್ ಪ್ರಶ್ನೆಗೆ ಅವರು ಉತ್ತರಿಸಿದರು. ಕಂದಾಯ ಇಲಾಖೆಯ ಗ್ರಾಮಲೆಕ್ಕಿಗ, ದ್ವಿತೀಯ ದರ್ಜೆ ಸಿಬ್ಬಂದಿ ಎರಡೂ ವೃಂದವನ್ನು ಒಂದು ಜೇಷ್ಠತಾ ಪಟ್ಟಿ ತಯಾರಿಸಿ ಸೇವಾ ಹಿರಿತನದ ಮೇಲೆ ಬಡ್ತಿ ನೀಡಲು ನಿರ್ಧರಿಸಲಾಗಿದೆ.

ಇದಕ್ಕೆ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ. ಅಧಿಸೂಚನೆ ಹೊರಡಿಸಬೇಕು. ಅದಕ್ಕೂ ಮೊದಲು ಆಕ್ಷೇಪಣೆ ಕೇಳಲಾಗಿದೆ. ಅದು ಮುಗಿಯುತ್ತಿದ್ದಂತೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದರು.

ಓದಿ: ದೇವಸ್ಥಾನ ನೆಲಸಮಗೊಳಿಸುವ ವಿಚಾರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು: ಸಿದ್ದರಾಮಯ್ಯ ನೇರ ಆರೋಪ

ಬೆಂಗಳೂರು : ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ನಿರ್ಮಾಣ ಆರಂಭ ಸೇರಿದಂತೆ ನೆನಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಕುರಿತು ಶೀಘ್ರದಲ್ಲಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ ಸೋಮಣ್ಣ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಪ್ರಶ್ನೆಗೆ ಅವರು ಉತ್ತರಿಸಿದರು. ತಾಳಗುಪ್ಪ-ಹೊನ್ನಾವರ 82 ಕಿ.ಮೀ ದೂರ ಯೋಜನೆ ಆಗಿದೆ. ಇಂತಹ ಯೋಜನೆಗೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ.

ತಾಳಗುಪ್ಪ- ಹೊನ್ನಾವರ ಪಶ್ಚಿಮಘಟ್ಟ ಇರುವುದರಿಂದ ಇದರ ಬಗ್ಗೆ ಚರ್ಚೆ ಮಾಡುತ್ತೇವೆ‌. ರೈಲ್ವೆ ಯೋಜನೆಗಳಿಗೆ ಶೇ.50ರ ಕಾಸ್ಟ್ ಶೇರಿಂಗ್ ಮಾಡುತ್ತಿದ್ದೇವೆ. ಇದರ ಜೊತೆ ಭೂಸ್ವಾಧೀನ ದೊಡ್ಡ ಹೊರೆಯಾಗಿದೆ ಎಂದರು.

10 ಸಾವಿರ ಕೋಟಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕೊಡಬೇಕಿದೆ. ಆದರೂ ನಾವು ಯೋಜನೆಗಳನ್ನು ಕಡೆಗಣಿಸುವುದಿಲ್ಲ. ಇನ್ನು, 15-20 ದಿನದಲ್ಲಿ ಸಭೆ ನಡೆಸಲಿದ್ದೇವೆ. ತಾಳಗುಪ್ಪ ಹೊನ್ನಾವರದ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಎಲ್ಲ ಕುಳಿತು ಚರ್ಚಿಸಿ ಸಿಎಂ ಗಮನಕ್ಕೆ ತರಲಾಗುತ್ತದೆ. ಈಗಾಗಲೇ ನೆನಗುದಿಗೆ ಬಿದ್ದಿರುವ ಯೋಜನೆಗಳಿಗೆ ಆದ್ಯತೆ ನೀಡಲಿದ್ದೇವೆ.

ಬಾಕಿ ಇರುವ 9 ಯೋಜನೆ ಜೊತೆಗೆ ತಾಳಗುಪ್ಪ ಹೊನ್ನಾವರ ಯೋಜನೆ ಕೈಗೆತ್ತಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಿಎಂ ಜೊತೆ ಮಾತುಕತೆ ನಡೆಸಲಾಗುತ್ತದೆ. ನಾವು ಆದ್ಯತೆ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದೇವೆ ಎಂದರು.

ಅಕ್ರಮ ಸಕ್ರಮಕ್ಕೆ ಸುಪ್ರೀಂ ತಡೆ ತೆರವಿಗೆ ಕ್ರಮ : ಅಕ್ರಮ ಸಕ್ರಮ ಯೋಜನೆಗೆ ಸುಪ್ರೀಂಕೋರ್ಟ್ ನೀಡಿರುವ ತಡೆಯಾಜ್ಞೆ ತೆರವು ಕುರಿತು ಸರ್ಕಾರ ಎಲ್ಲ ರೀತಿಯ ಕ್ರಮಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ‌ ಇ ಖಾತೆ ನೀಡದ ವಿಚಾರ ಕುರಿತು ಜೆಡಿಎಸ್ ಪರಿಷತ್ ಸದಸ್ಯ ಕಾಂತರಾಜ್ ಪ್ರಶ್ನೆಗೆ ಅವರು ಉತ್ತರಿಸಿದರು.

ಅಕ್ರಮವಾಗಿ ಕೃಷಿ ‌ಜಮೀನಿನಲ್ಲಿ ನಿವೇಶನ ‌ಮಾಡಿ ಮಾರಾಟ ಮಾಡಿರುವವರು‌ ಸರ್ಕಾರದ ಅನುಮತಿ ನಿಲ್ಲದೆ ಬಡಾವಣೆ ಮಾಡಿದ್ದವರಿಗೆ ಅಕ್ರಮ‌ ಸಕ್ರಮ ಕಾಯ್ದೆ ಜಾರಿ ಮಾಡಿದ್ದೆವು. ಆದರೆ, ಅಕ್ರಮ ಸಕ್ರಮ ಯೋಜನೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ‌ನೀಡಿದೆ.

ದೆಹಲಿ‌ ಭೇಟಿ ವೇಳೆ ಚರ್ಚೆ ಮಾಡಿದ್ದೇನಿ. ಆದಷ್ಟು ಬೇಗ ಇತ್ಯರ್ಥ ಮಾಡುತ್ತೇವೆ ಎಂದರು. ಗ್ರಾಮ‌ ಠಾಣಾದಲ್ಲಿರುವ ನಿವೇಶನಗಳಿಗೆ ಇ ಖಾತೆ ನೀಡಲಾಗುತ್ತದೆ. ಸಂಸಾರ ಬೆಳದ ಹಾಗೆ ಹೂಲ ಗದ್ದೆಗಳಲ್ಲೂ ಮನೆ ನಿರ್ಮಾಣ ಮಾಡಿದ್ದಾರೆ. ಈ ಸಂಬಂಧ ನಾವು ಎಲ್ಲ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಉಳಿದಿದ್ದನ್ನೂ ಶೀಘ್ರದಲ್ಲೇ ಪರಿಹಾರ ಮಾಡುತ್ತೇವೆ ಎಂದರು.

ಎಲ್ಲ ಗ್ರಾಮಗಳಿಗೂ ಸ್ಮಶಾನ : ರಾಜ್ಯದ ಎಲ್ಲಾ ಗ್ರಾಮಗಳಿಗೂ ಸ್ಮಶಾನ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಗ್ರಾಮಗಳಿಗೆ ಸ್ಮಶಾನಗಳು ಇಲ್ಲದ ಬಗ್ಗೆ ಬಿಜೆಪಿ ವಿಪ್ ಮಹಾಂತೇಶ ಕವಟಗಿಮಠ ಪ್ರಶ್ನೆಗೆ ಅವರು ಉತ್ತರಿಸಿದರು.

ಖಾಸಗಿ ಜಮೀನಿಗೆ ಮೂರು ಪಟ್ಟು ಹಣ ಕೊಡುತ್ತೇವೆ ಎಂದು ಹೇಳಿದ್ದೇವೆ. ಪ್ರತಿ ಗ್ರಾಮಕ್ಕೂ ಒಂದು ಸ್ಮಶಾನ ಇರಬೇಕು. ಮೂರು ವರ್ಷದಲ್ಲಿ 26 ಕೋಟಿ ಬಿಡುಗಡೆ ಆಗಿದೆ. ನಾನು ಪ್ರತಿ ಸಭೆಯಲ್ಲೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸರ್ಕಾರಿ ಜಮೀನು ಇದ್ದರೆ ಜಿಲ್ಲಾಧಿಕಾರಿಗಳೇ ವ್ಯವಸ್ಥೆ ಮಾಡುತ್ತಾರೆ. ಖಾಸಗಿ ಜಾಗವಿದ್ದರೆ ದರ ನಿಗದಿ ಮಾಡಲಿ. ಅದಕ್ಕೆ ಅನುಮತಿ ಕೊಡುತ್ತೇವೆ ಎಂದರು.

ಗ್ರಾಮ ಲೆಕ್ಕಿಗ, ದ್ವಿತೀಯ ದರ್ಜೆ ಸಿಬ್ಬಂದಿಗೆ ಒಂದೇ ಜೇಷ್ಠತೆ : ಗ್ರಾಮ ಲೆಕ್ಕಿಗ ಮತ್ತು ದ್ವಿತೀಯ ದರ್ಜೆ ಸಿಬ್ಬಂದಿಯನ್ನು ಒಂದೇ ಜೇಷ್ಠತೆಗೆ ತಂದು ಸೇವಾ ಹಿರಿತನದ ಮೇಲೆ ಪದೋನ್ನತಿ ನೀಡಲು ಸರ್ಕಾರ ಎಲ್ಲ ರೀತಿಯ ಕ್ರಮಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗ್ರಾಮ ಲೆಕ್ಕಿಗ ಮತ್ತು ದ್ವಿತೀಯ ದರ್ಜೆ ಸಿಬ್ಬಂದಿ ಜೇಷ್ಠತೆ ಬೇರ್ಪಡಿಸಿ ಪದೋನ್ನತಿ ನೀಡುತ್ತಿರುವ ಕುರಿತು ಸದಸ್ಯ ನಜೀರ್ ಅಹಮದ್ ಪ್ರಶ್ನೆಗೆ ಅವರು ಉತ್ತರಿಸಿದರು. ಕಂದಾಯ ಇಲಾಖೆಯ ಗ್ರಾಮಲೆಕ್ಕಿಗ, ದ್ವಿತೀಯ ದರ್ಜೆ ಸಿಬ್ಬಂದಿ ಎರಡೂ ವೃಂದವನ್ನು ಒಂದು ಜೇಷ್ಠತಾ ಪಟ್ಟಿ ತಯಾರಿಸಿ ಸೇವಾ ಹಿರಿತನದ ಮೇಲೆ ಬಡ್ತಿ ನೀಡಲು ನಿರ್ಧರಿಸಲಾಗಿದೆ.

ಇದಕ್ಕೆ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ. ಅಧಿಸೂಚನೆ ಹೊರಡಿಸಬೇಕು. ಅದಕ್ಕೂ ಮೊದಲು ಆಕ್ಷೇಪಣೆ ಕೇಳಲಾಗಿದೆ. ಅದು ಮುಗಿಯುತ್ತಿದ್ದಂತೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದರು.

ಓದಿ: ದೇವಸ್ಥಾನ ನೆಲಸಮಗೊಳಿಸುವ ವಿಚಾರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು: ಸಿದ್ದರಾಮಯ್ಯ ನೇರ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.