ETV Bharat / state

200 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್ ವಿತರಿಸಿದ ಸಚಿವ ಗೋಪಾಲಯ್ಯ

author img

By

Published : Aug 25, 2020, 3:15 AM IST

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಗಪುರ ವಾರ್ಡ್​ನಲ್ಲಿನ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್​ಟಾಪ್ ವಿತರಿಸಲಾಗಿದೆ.

minister-gopayaiah-distributed-free-laptops-to-students
ಉಚಿತ ಲ್ಯಾಪ್​ಟಾಪ್

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಗಪುರ ವಾರ್ಡ್​ನಲ್ಲಿನ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಚಿವ ಗೋಪಾಲಯ್ಯ ಉಚಿತವಾಗಿ ಲ್ಯಾಪ್​ಟಾಪ್ ವಿತರಿಸಿದ್ದಾರೆ.

ಸ್ಥಳೀಯ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರು ಅನುದಾನದಡಿ ಸುಮಾರು 200 ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್​ಟಾಪ್ ವಿತರಿಸಿ ಮಾತನಾಡಿದ ಸಚಿವ ಗೋಪಾಲಯ್ಯ, ಬಹುಶಃ ನೀವೆಲ್ಲ ಅದೃಷ್ಟವಂತರು ಎಂದರೆ ತಪ್ಪಾಗಲಾರದು. ಯಾಕಂದ್ರೆ ನಿಮಗೆ, ನಿಮ್ಮ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲೆಂದು ಲ್ಯಾಪ್​ಟಾಪ್ ನೀಡುತ್ತಿದ್ದೇವೆ. ಎಲ್ಲರೂ ಚೆನ್ನಾಗಿ ಓದಿ ನಿಮ್ಮ ತಂದೆ-ತಾಯಿ ಹಾಗೂ ಊರಿಗೆ ಒಳ್ಳೆಯ ಹೆಸರು ತರಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್ ವಿತರಣೆ

ಕೋವಿಡ್-19 ನಿಯಂತ್ರಣಕ್ಕೆ ತರಲು ವಿದ್ಯಾವಂತರಾದ ನೀವೆಲ್ಲರೂ ಸಹಕರಿಸಬೇಕು. ನಿಮ್ಮ ಮನೆ, ಏರಿಯಾವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಏನಾದ್ರೂ ಸಹಾಯ ಬೇಕಿದ್ದರೆ ನನ್ನ ಕಚೇರಿಗೆ ಬನ್ನಿ, ನಿಮಗೆ 15 ದಿನಕ್ಕಾಗುವಷ್ಟು ಔಷಧಿಯನ್ನು ನೀಡುತ್ತೇನೆ. ಯಾರೂ ಧೃತಿಗೆಡದೆ ಜೀವನ ನಡೆಸಬೇಕು ಎಂದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 3 ಸರ್ಕಾರಿ ಸ್ಮಾರ್ಟ್ ಶಾಲಾ ಕಟ್ಟಡಗಳನ್ನು ಉನ್ನತಿಗೊಳಿಸಿ ವಿಶ್ವದರ್ಜೆಯ ಶಿಕ್ಷಣ ನೀಡಲು ಎಲ್ಲ ರಿತಿಯ ಕೆಲಸ ಮಾಡುತ್ತಿದ್ದೇನೆ. 50 ಬೆಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನೂ ಸಮೀಪದ ಕಮಲಾನಗರದಲ್ಲಿ ನಿರ್ಮಿಸಲಾಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರೋಗ್ಯದ ದೃಷ್ಟಿಯಿಂದ ಈ ಆಸ್ಪತ್ರೆ ಕಟ್ಟಿಸಲಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಗಪುರ ವಾರ್ಡ್​ನಲ್ಲಿನ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಚಿವ ಗೋಪಾಲಯ್ಯ ಉಚಿತವಾಗಿ ಲ್ಯಾಪ್​ಟಾಪ್ ವಿತರಿಸಿದ್ದಾರೆ.

ಸ್ಥಳೀಯ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರು ಅನುದಾನದಡಿ ಸುಮಾರು 200 ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್​ಟಾಪ್ ವಿತರಿಸಿ ಮಾತನಾಡಿದ ಸಚಿವ ಗೋಪಾಲಯ್ಯ, ಬಹುಶಃ ನೀವೆಲ್ಲ ಅದೃಷ್ಟವಂತರು ಎಂದರೆ ತಪ್ಪಾಗಲಾರದು. ಯಾಕಂದ್ರೆ ನಿಮಗೆ, ನಿಮ್ಮ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲೆಂದು ಲ್ಯಾಪ್​ಟಾಪ್ ನೀಡುತ್ತಿದ್ದೇವೆ. ಎಲ್ಲರೂ ಚೆನ್ನಾಗಿ ಓದಿ ನಿಮ್ಮ ತಂದೆ-ತಾಯಿ ಹಾಗೂ ಊರಿಗೆ ಒಳ್ಳೆಯ ಹೆಸರು ತರಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್ ವಿತರಣೆ

ಕೋವಿಡ್-19 ನಿಯಂತ್ರಣಕ್ಕೆ ತರಲು ವಿದ್ಯಾವಂತರಾದ ನೀವೆಲ್ಲರೂ ಸಹಕರಿಸಬೇಕು. ನಿಮ್ಮ ಮನೆ, ಏರಿಯಾವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಏನಾದ್ರೂ ಸಹಾಯ ಬೇಕಿದ್ದರೆ ನನ್ನ ಕಚೇರಿಗೆ ಬನ್ನಿ, ನಿಮಗೆ 15 ದಿನಕ್ಕಾಗುವಷ್ಟು ಔಷಧಿಯನ್ನು ನೀಡುತ್ತೇನೆ. ಯಾರೂ ಧೃತಿಗೆಡದೆ ಜೀವನ ನಡೆಸಬೇಕು ಎಂದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 3 ಸರ್ಕಾರಿ ಸ್ಮಾರ್ಟ್ ಶಾಲಾ ಕಟ್ಟಡಗಳನ್ನು ಉನ್ನತಿಗೊಳಿಸಿ ವಿಶ್ವದರ್ಜೆಯ ಶಿಕ್ಷಣ ನೀಡಲು ಎಲ್ಲ ರಿತಿಯ ಕೆಲಸ ಮಾಡುತ್ತಿದ್ದೇನೆ. 50 ಬೆಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನೂ ಸಮೀಪದ ಕಮಲಾನಗರದಲ್ಲಿ ನಿರ್ಮಿಸಲಾಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರೋಗ್ಯದ ದೃಷ್ಟಿಯಿಂದ ಈ ಆಸ್ಪತ್ರೆ ಕಟ್ಟಿಸಲಾಗುತ್ತದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.