ETV Bharat / state

ವ್ಯಾಪಾರ ಕುಸಿತ : ಅಂಗಡಿಗಳನ್ನು ಮುಚ್ಚಲು ಮುಂದಾದ ಮಾಲೀಕರು

author img

By

Published : Jul 14, 2020, 10:34 PM IST

ನಗರದ ಪ್ರತಿಷ್ಠಿತ ಮಾರುಕಟ್ಟೆ ಸ್ಥಳಗಳಾದ ಎಸ್.ಪಿ ರಸ್ತೆ, ಮಜೆಸ್ಟಿಕ್, ಕಲಾಸಿಪಾಳ್ಯ ಸೇರಿದಂತೆ ಹಲವೆಡೆ ಅಂಗಡಿಗಳನ್ನು ಖಾಲಿ ಮಾಡಿದ ಪರಿಣಾಮ To-Let ಬೋರ್ಡ್ ಕಾಣ ಸಿಗುತ್ತಿವೆ. ಅಷ್ಟೇ ಅಲ್ಲದೆ ಮಾರುಕಟ್ಟೆ ಪ್ರದೇಶಗಳಲ್ಲಿ ಕೊರೊನಾ ವ್ಯಾಪಕವಾಗಿ ಹರಡಿರುವ ಕಾರಣದಿಂದ ದಶಕಗಳಿಂದ ವ್ಯಾಪಾರ ನಡೆಸುತ್ತಿದ್ದವರ ಸ್ಥಿತಿ ಆರ್ಥಿಕವಾಗಿ ಚಿಂತಾಜನಕವಾಗಿದೆ.

merchant plans to close their shops
ಅಂಗಡಿಗಳನ್ನು ಮುಚ್ಚಲು ಮುಂದಾದ ಮಾಲೀಕರು

ಬೆಂಗಳೂರು : ನಗರದಲ್ಲಿ ವ್ಯಾಪಾರ, ವಹಿವಾಟು ಆಗದ ಕಾರಣ ಸಾಕಷ್ಟು ಮಾಲೀಕರು ಅಂಗಡಿಗಳನ್ನು ಖಾಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ನಗರದ ಪ್ರತಿಷ್ಠಿತ ಮಾರುಕಟ್ಟೆ ಸ್ಥಳಗಳಾದ ಎಸ್‌ಪಿರಸ್ತೆ, ಮಜೆಸ್ಟಿಕ್, ಕಲಾಸಿಪಾಳ್ಯ ಸೇರಿ ಹಲವೆಡೆ ಅಂಗಡಿಗಳನ್ನು ಖಾಲಿ ಮಾಡಿದ ಪರಿಣಾಮ To-Let ಬೋರ್ಡ್ ಕಾಣ ಸಿಗುತ್ತಿವೆ. ಅಷ್ಟೇ ಅಲ್ಲ, ಮಾರುಕಟ್ಟೆ ಪ್ರದೇಶಗಳಲ್ಲಿ ಕೊರೊನಾ ವ್ಯಾಪಕವಾಗಿ ಹರಡಿರುವ ಕಾರಣದಿಂದ ದಶಕಗಳಿಂದ ವ್ಯಾಪಾರ ನಡೆಸುತ್ತಿದ್ದವರ ಸ್ಥಿತಿ ಆರ್ಥಿಕವಾಗಿ ಚಿಂತಾಜನಕವಾಗಿದೆ.

ಅಂಗಡಿಗಳನ್ನು ಮುಚ್ಚಲು ಮುಂದಾದ ಮಾಲೀಕರು

ಈ ಸಂಬಂಧ ಈಟಿವಿ ಭಾರತ್​ಗೆ ಪ್ರತಿಕ್ರಿಯೆ ನೀಡಿದ ಚಿಕ್ಕಪೇಟೆ ಅಂಗಡಿ ಮಾಲೀಕ ದಿಲೀಪ್ ಕುಮಾರ್, ಸದ್ಯಕ್ಕೆ ರಾಜ್ಯ ಸರ್ಕಾರ ಪುನಃ ಲಾಕ್​ಡೌನ್ ಹೇರಿದೆ 2 ತಿಂಗಳ ಬಳಿಕ ಅಂಗಡಿ ಬಾಡಿಗೆ, ನೌಕರರ ವೇತನ ವಿದ್ಯುತ್​​​ನಂತಹ ಜವಾಬ್ದಾರಿಗಳನ್ನು ನಿರ್ವಹಿಸಬಹುದು ಎಂದು ಅಂಗಡಿಗಳನ್ನು ಪ್ರಾರಂಭ ಮಾಡಿದೆವು. ಆದರೆ, ಈಗ ಮರು ಲಾಕ್​ಡೌನ್ ಆದರೆ ನಮ್ಮ ಸ್ಥಿತಿ ಕಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದೂವರೆ ತಿಂಗಳು ಸಾಲ ಮಾಡಿ ನಮ್ಮ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಯಿತು, ಈಗ ಲಾಕ್​ಡೌನ್ ಆದರೆ ನಮಗೆ ವೇತನ ನೀಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ನೌಕರರು ಊರುಗಳಿಗೆ ತೆರಳಿದ್ದಾರೆ. ಕೊರೊನಾ ಮಹಾಮಾರಿಗೆ ಹೆದರಿರುವ ಕಾರಣ ಅವರು ಮರಳಿ ಬರುವುದು ಕಷ್ಟ ಎಂದರು.

ಸರ್ಕಾರ ಹೇಳುವ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಪಾಲಿಸುತ್ತೇವೆ. ನಮಗೆ ಲಾಕ್​ಡೌನ್ ಬೇಡ ಎಂದು ಸರ್ಕಾರಕ್ಕೆ ಈಟಿವಿ ಭಾರತ್ ಮೂಲಕ ಮನವಿ ಮಾಡಿದರು.

ಬೆಂಗಳೂರು : ನಗರದಲ್ಲಿ ವ್ಯಾಪಾರ, ವಹಿವಾಟು ಆಗದ ಕಾರಣ ಸಾಕಷ್ಟು ಮಾಲೀಕರು ಅಂಗಡಿಗಳನ್ನು ಖಾಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ನಗರದ ಪ್ರತಿಷ್ಠಿತ ಮಾರುಕಟ್ಟೆ ಸ್ಥಳಗಳಾದ ಎಸ್‌ಪಿರಸ್ತೆ, ಮಜೆಸ್ಟಿಕ್, ಕಲಾಸಿಪಾಳ್ಯ ಸೇರಿ ಹಲವೆಡೆ ಅಂಗಡಿಗಳನ್ನು ಖಾಲಿ ಮಾಡಿದ ಪರಿಣಾಮ To-Let ಬೋರ್ಡ್ ಕಾಣ ಸಿಗುತ್ತಿವೆ. ಅಷ್ಟೇ ಅಲ್ಲ, ಮಾರುಕಟ್ಟೆ ಪ್ರದೇಶಗಳಲ್ಲಿ ಕೊರೊನಾ ವ್ಯಾಪಕವಾಗಿ ಹರಡಿರುವ ಕಾರಣದಿಂದ ದಶಕಗಳಿಂದ ವ್ಯಾಪಾರ ನಡೆಸುತ್ತಿದ್ದವರ ಸ್ಥಿತಿ ಆರ್ಥಿಕವಾಗಿ ಚಿಂತಾಜನಕವಾಗಿದೆ.

ಅಂಗಡಿಗಳನ್ನು ಮುಚ್ಚಲು ಮುಂದಾದ ಮಾಲೀಕರು

ಈ ಸಂಬಂಧ ಈಟಿವಿ ಭಾರತ್​ಗೆ ಪ್ರತಿಕ್ರಿಯೆ ನೀಡಿದ ಚಿಕ್ಕಪೇಟೆ ಅಂಗಡಿ ಮಾಲೀಕ ದಿಲೀಪ್ ಕುಮಾರ್, ಸದ್ಯಕ್ಕೆ ರಾಜ್ಯ ಸರ್ಕಾರ ಪುನಃ ಲಾಕ್​ಡೌನ್ ಹೇರಿದೆ 2 ತಿಂಗಳ ಬಳಿಕ ಅಂಗಡಿ ಬಾಡಿಗೆ, ನೌಕರರ ವೇತನ ವಿದ್ಯುತ್​​​ನಂತಹ ಜವಾಬ್ದಾರಿಗಳನ್ನು ನಿರ್ವಹಿಸಬಹುದು ಎಂದು ಅಂಗಡಿಗಳನ್ನು ಪ್ರಾರಂಭ ಮಾಡಿದೆವು. ಆದರೆ, ಈಗ ಮರು ಲಾಕ್​ಡೌನ್ ಆದರೆ ನಮ್ಮ ಸ್ಥಿತಿ ಕಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದೂವರೆ ತಿಂಗಳು ಸಾಲ ಮಾಡಿ ನಮ್ಮ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಯಿತು, ಈಗ ಲಾಕ್​ಡೌನ್ ಆದರೆ ನಮಗೆ ವೇತನ ನೀಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ನೌಕರರು ಊರುಗಳಿಗೆ ತೆರಳಿದ್ದಾರೆ. ಕೊರೊನಾ ಮಹಾಮಾರಿಗೆ ಹೆದರಿರುವ ಕಾರಣ ಅವರು ಮರಳಿ ಬರುವುದು ಕಷ್ಟ ಎಂದರು.

ಸರ್ಕಾರ ಹೇಳುವ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಪಾಲಿಸುತ್ತೇವೆ. ನಮಗೆ ಲಾಕ್​ಡೌನ್ ಬೇಡ ಎಂದು ಸರ್ಕಾರಕ್ಕೆ ಈಟಿವಿ ಭಾರತ್ ಮೂಲಕ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.