ETV Bharat / state

ದಾಖಲೆ ಬರೆದ ಮೆಗಾ ಲೋಕ್​ ಅದಾಲತ್: ಒಂದೇ ದಿನ 3 ಲಕ್ಷ ಪ್ರಕರಣ ಇತ್ಯರ್ಥ

ಮಾರ್ಚ್‌ 27ರಂದು ಏರ್ಪಡಿಸಿದ್ದ ಲೋಕ ಅದಾಲತ್​​ನಲ್ಲಿ ಒಟ್ಟು 3,32,936 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಇಷ್ಟು ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು ಒಂದು ದಾಖಲೆ.

author img

By

Published : Mar 29, 2021, 9:11 PM IST

Bangalore
ಕೆಎಸ್ಎಲ್ಎಸ್ಎ ಕಾರ್ಯ ನಿರ್ವಾಹಕ ಅಧ್ಯಕ್ಷ ಅರವಿಂದ್ ಕುಮಾರ್

ಬೆಂಗಳೂರು: ಕೋವಿಡ್ ಬಳಿಕ ರಾಜ್ಯಮಟ್ಟದಲ್ಲಿ ನಡೆಸಿದ 3ನೇ ಲೋಕ ಅದಾಲತ್​ನಲ್ಲಿ 3.32 ಲಕ್ಷ ಪ್ರಕರಣಗಳನ್ನು ಬಗೆಹರಿಸುವ ಮೂಲಕ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ದೇಶದಲ್ಲೇ ಹೊಸ ದಾಖಲೆ ಬರೆದಿದೆ.

ಈ ಕುರಿತು ಇಂದು ಸಂಜೆ ಮಾಧ್ಯಮಗೋಷ್ಠಿ ನಡೆಸಿದ ಕೆಎಸ್ಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮಾ.27ರಂದು ಏರ್ಪಡಿಸಿದ್ದ ಲೋಕ ಅದಾಲತ್​​ನಲ್ಲಿ ಒಟ್ಟು 3,32,936 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದೇವೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಇಷ್ಟು ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು ದಾಖಲೆಯಾಗಿದೆ. ಈ ಸಾಧನೆಯ ಹಿಂದೆ ನ್ಯಾಯಾಂಗ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಕೀಲರ ಶ್ರಮ ಮಹತ್ವದ್ದಾಗಿದೆ. ಹಾಗೆಯೇ ಕಕ್ಷಿದಾರರು ಕೂಡ ತಮ್ಮ ವ್ಯಾಜ್ಯ ಬಗೆಹರಿಸಿಕೊಳ್ಳಲು ಮುಂದಾಗಿದ್ದರಿಂದ ಈ ಮೈಲಿಗಲ್ಲು ಸಾಧಿಸಲು ಸಾಧ್ಯವಾಗಿದೆ ಎಂದರು.

ಕೆಎಸ್ಎಲ್ಎಸ್ಎ ಕಾರ್ಯ ನಿರ್ವಾಹಕ ಅಧ್ಯಕ್ಷ ಅರವಿಂದ್ ಕುಮಾರ್

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿದ್ದು, ಬಾಕಿ ಉಳಿದಿದ್ದ 5,44,376 ಪ್ರಕರಣಗಳನ್ನು ಈ ಮೆಗಾ ಲೋಕ್​​ ಅದಾಲತ್​​ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿತ್ತು. ಅದರಂತೆ ಕಾರ್ಯಾರಂಭ ಮಾಡಿದ ಮೆಗಾ ಲೋಕ್ ಅದಾಲತ್​​ನಲ್ಲಿ 19,113 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿಯಿದ್ದ 3,13,823 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಈ ವೇಳೆ ಕಕ್ಷಿದಾರರಿಗೆ 1,033 ಕೋಟಿಗೂ ಹೆಚ್ಚು ಪರಿಹಾರ ಕೊಡಿಸಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 41.59 ಕೋಟಿ ದಂಡ ಸಂಗ್ರಹಿಸಿ ಕೊಡಲಾಗಿದೆ. ಇದಲ್ಲದೇ ಈ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಲು ತಗುಲುತ್ತಿದ್ದ ವೆಚ್ಚ 123.76 ಕೋಟಿ, ನ್ಯಾಯಾಧೀಶರ ವೇತನ 18.19 ಕೋಟಿ ಹಾಗೂ ದಂಡ ಸಂಗ್ರಹ ಸೇರಿ ರಾಜ್ಯದ ಬೊಕ್ಕಸಕ್ಕೆ 140.83 ಕೋಟಿ ಉಳಿತಾಯವಾಗಿದೆ ಎಂದರು.

1.04 ಮೆಗಾ ಲೋಕ್​​ ಅದಾಲತ್​​ನಲ್ಲಿ ರಾಜ್ಯದಾದ್ಯಂತ ಒಟ್ಟು 963 ಪೀಠಗಳು ಕಾರ್ಯ ನಿರ್ವಹಿಸಿದ್ದವು. ಮೆಗಾ ಲೋಕ್ ಅದಾಲತ್​​ನಲ್ಲಿ ಭಾಗಿಯಾಗಿದ್ದ ಮೈಸೂರಿನ 29 ದಂಪತಿಗಳು ತಮ್ಮ ಪ್ರಕರಣಗಳನ್ನು ಹಿಂಪಡೆಯಲು ಮುಂದೆ ಬಂದು ಮತ್ತೆ ಒಂದಾಗಿರುವುದು ಈ ಬಾರಿಯ ವಿಶೇಷ. ಹಾಗೆಯೇ, ತಲೆಮಾರು ಕಳೆದರೂ ಮುಗಿಯದ ಆಸ್ತಿ ವ್ಯಾಜ್ಯಗಳು ಕೂಡ ಬಗೆಹರಿದಿವೆ.

3,853 ಆಸ್ತಿ ವ್ಯಾಜ್ಯಗಳನ್ನು ಬಗೆಹರಿಸಲಾಗಿದೆ. ಭೂ ಪರಿಹಾರ ಪ್ರಕರಣಗಳಲ್ಲಿ 133 ಕೋಟಿ ರೂ ಪರಿಹಾರ ಕೊಡಿಸಲಾಗಿದೆ. ಈ ಬಾರಿಯ ಲೋಕ ಅದಾಲತ್ ಹೊಸ ದಾಖಲೆಯನ್ನೇ ಬರೆದಿದ್ದು, ಈ ಬಗ್ಗೆ ಮಾಧ್ಯಮಗಳ ಮೂಲಕ ಹೆಚ್ಚೆಚ್ಚು ಜನರಿಗೆ ಮಾಹಿತಿ ತಲುಪಬೇಕು ಎಂದರು.

ಇದನ್ನೂ ಓದಿ: ಮಾರ್ಚ್‌ 27ರಂದು ರಾಜ್ಯಾದ್ಯಂತ ಮೆಗಾ ಲೋಕ್ ಅದಾಲತ್.. ಸದುಪಯೋಗಕ್ಕೆ ನ್ಯಾ. ಅರವಿಂದ್ ಕುಮಾರ್​ ಕರೆ

ಬೆಂಗಳೂರು: ಕೋವಿಡ್ ಬಳಿಕ ರಾಜ್ಯಮಟ್ಟದಲ್ಲಿ ನಡೆಸಿದ 3ನೇ ಲೋಕ ಅದಾಲತ್​ನಲ್ಲಿ 3.32 ಲಕ್ಷ ಪ್ರಕರಣಗಳನ್ನು ಬಗೆಹರಿಸುವ ಮೂಲಕ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ದೇಶದಲ್ಲೇ ಹೊಸ ದಾಖಲೆ ಬರೆದಿದೆ.

ಈ ಕುರಿತು ಇಂದು ಸಂಜೆ ಮಾಧ್ಯಮಗೋಷ್ಠಿ ನಡೆಸಿದ ಕೆಎಸ್ಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮಾ.27ರಂದು ಏರ್ಪಡಿಸಿದ್ದ ಲೋಕ ಅದಾಲತ್​​ನಲ್ಲಿ ಒಟ್ಟು 3,32,936 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದೇವೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಇಷ್ಟು ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು ದಾಖಲೆಯಾಗಿದೆ. ಈ ಸಾಧನೆಯ ಹಿಂದೆ ನ್ಯಾಯಾಂಗ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಕೀಲರ ಶ್ರಮ ಮಹತ್ವದ್ದಾಗಿದೆ. ಹಾಗೆಯೇ ಕಕ್ಷಿದಾರರು ಕೂಡ ತಮ್ಮ ವ್ಯಾಜ್ಯ ಬಗೆಹರಿಸಿಕೊಳ್ಳಲು ಮುಂದಾಗಿದ್ದರಿಂದ ಈ ಮೈಲಿಗಲ್ಲು ಸಾಧಿಸಲು ಸಾಧ್ಯವಾಗಿದೆ ಎಂದರು.

ಕೆಎಸ್ಎಲ್ಎಸ್ಎ ಕಾರ್ಯ ನಿರ್ವಾಹಕ ಅಧ್ಯಕ್ಷ ಅರವಿಂದ್ ಕುಮಾರ್

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿದ್ದು, ಬಾಕಿ ಉಳಿದಿದ್ದ 5,44,376 ಪ್ರಕರಣಗಳನ್ನು ಈ ಮೆಗಾ ಲೋಕ್​​ ಅದಾಲತ್​​ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿತ್ತು. ಅದರಂತೆ ಕಾರ್ಯಾರಂಭ ಮಾಡಿದ ಮೆಗಾ ಲೋಕ್ ಅದಾಲತ್​​ನಲ್ಲಿ 19,113 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿಯಿದ್ದ 3,13,823 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಈ ವೇಳೆ ಕಕ್ಷಿದಾರರಿಗೆ 1,033 ಕೋಟಿಗೂ ಹೆಚ್ಚು ಪರಿಹಾರ ಕೊಡಿಸಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 41.59 ಕೋಟಿ ದಂಡ ಸಂಗ್ರಹಿಸಿ ಕೊಡಲಾಗಿದೆ. ಇದಲ್ಲದೇ ಈ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಲು ತಗುಲುತ್ತಿದ್ದ ವೆಚ್ಚ 123.76 ಕೋಟಿ, ನ್ಯಾಯಾಧೀಶರ ವೇತನ 18.19 ಕೋಟಿ ಹಾಗೂ ದಂಡ ಸಂಗ್ರಹ ಸೇರಿ ರಾಜ್ಯದ ಬೊಕ್ಕಸಕ್ಕೆ 140.83 ಕೋಟಿ ಉಳಿತಾಯವಾಗಿದೆ ಎಂದರು.

1.04 ಮೆಗಾ ಲೋಕ್​​ ಅದಾಲತ್​​ನಲ್ಲಿ ರಾಜ್ಯದಾದ್ಯಂತ ಒಟ್ಟು 963 ಪೀಠಗಳು ಕಾರ್ಯ ನಿರ್ವಹಿಸಿದ್ದವು. ಮೆಗಾ ಲೋಕ್ ಅದಾಲತ್​​ನಲ್ಲಿ ಭಾಗಿಯಾಗಿದ್ದ ಮೈಸೂರಿನ 29 ದಂಪತಿಗಳು ತಮ್ಮ ಪ್ರಕರಣಗಳನ್ನು ಹಿಂಪಡೆಯಲು ಮುಂದೆ ಬಂದು ಮತ್ತೆ ಒಂದಾಗಿರುವುದು ಈ ಬಾರಿಯ ವಿಶೇಷ. ಹಾಗೆಯೇ, ತಲೆಮಾರು ಕಳೆದರೂ ಮುಗಿಯದ ಆಸ್ತಿ ವ್ಯಾಜ್ಯಗಳು ಕೂಡ ಬಗೆಹರಿದಿವೆ.

3,853 ಆಸ್ತಿ ವ್ಯಾಜ್ಯಗಳನ್ನು ಬಗೆಹರಿಸಲಾಗಿದೆ. ಭೂ ಪರಿಹಾರ ಪ್ರಕರಣಗಳಲ್ಲಿ 133 ಕೋಟಿ ರೂ ಪರಿಹಾರ ಕೊಡಿಸಲಾಗಿದೆ. ಈ ಬಾರಿಯ ಲೋಕ ಅದಾಲತ್ ಹೊಸ ದಾಖಲೆಯನ್ನೇ ಬರೆದಿದ್ದು, ಈ ಬಗ್ಗೆ ಮಾಧ್ಯಮಗಳ ಮೂಲಕ ಹೆಚ್ಚೆಚ್ಚು ಜನರಿಗೆ ಮಾಹಿತಿ ತಲುಪಬೇಕು ಎಂದರು.

ಇದನ್ನೂ ಓದಿ: ಮಾರ್ಚ್‌ 27ರಂದು ರಾಜ್ಯಾದ್ಯಂತ ಮೆಗಾ ಲೋಕ್ ಅದಾಲತ್.. ಸದುಪಯೋಗಕ್ಕೆ ನ್ಯಾ. ಅರವಿಂದ್ ಕುಮಾರ್​ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.