ETV Bharat / state

ಬೆಂಗಳೂರು: ಜೈನ ಸಮುದಾಯದ ಸಮ್ಮೇದ ಶಿಖರ್ಜಿ ತೀರ್ಥಸ್ಥಳ ಉಳಿಸಿ ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆ

author img

By

Published : Dec 28, 2022, 4:31 PM IST

ಜೈನರ ಪವಿತ್ರ ಯಾತ್ರಾಸ್ಥಳ ರಕ್ಷಣೆಗೆ ಕರೆ - ಸಮ್ಮೇದ ಶಿಖರ್ಜಿ ಕ್ಷೇತ್ರವನ್ನು ಪ್ರವಾಸಿತಾಣವಾಗಿಸಲು ಮುಂದಾದ ಸರ್ಕಾರ - ಜೈನ ಸಮುದಾಯದಿಂದ ಭಾರೀ ವಿರೋಧ

ಜೈನ ಸಮುದಾಯದ ಸಮ್ಮೇದ ಶಿಖರ್ಜಿ ತೀರ್ಥಸ್ಥಳ ಉಳಿಸಿ ಬೃಹತ್ ಪ್ರತಿಭಟನೆ
massive-protest-by-jain-community-to-save-sammed-shikharji-shrine

ಬೆಂಗಳೂರು: ಜಾರ್ಖಂಡ್ ರಾಜ್ಯದ ಪರ್ವತದ ಮೇಲಿರುವ ಜೈನ ಸಮುದಾಯದ ಪವಿತ್ರ ಕ್ಷೇತ್ರವನ್ನು ಸಮ್ಮೇದ ಶಿರ್ಖಜಿ ಪ್ರವಾಸಿ ತಾಣವಾಗಿಸಲು ನಿರ್ಧರಿಸಿರುವ ಜಾರ್ಖಂಡ್ ಮತ್ತು ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಫ್ರೀಡಂ ಪಾರ್ಕ್ ಅವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ಜೈನ ಸಮುದಾಯ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಧವಲಕೀರ್ತಿ ಸ್ವಾಮೀಜಿ, ಭಾನುಕೀರ್ತಿ ಸ್ವಾಮೀಜಿ, ಲಕ್ಷ್ಮೀಸೇನ ಭಟ್ಟರಕ ಸ್ವಾಮೀಜಿ, ಸಿದ್ದಾಂತಕೀರ್ತಿ ಸ್ವಾಮೀಜಿ ಮತ್ತು ಕರ್ನಾಟಕ ಜೈನ ಆಸೋಸಿಯೇಷನ್ ಅಧ್ಯಕ್ಷ ಪ್ರಸನ್ನಯ್ಯ ಸ್ವಾಮೀಜಿ, ಜೈನ ಸಮುದಾಯದ ಸಂಘಟನೆಗಳು, ಜೈನ ಪರಂಪರೆಯ ಆನುಯಾಯಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಜಾರ್ಖಂಡ್ ರಾಜ್ಯದಲ್ಲಿರುವ ಜೈನರ ಪರಮ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಜಂಟಿಯಾಗಿ ಪ್ರವಾಸಿ ತಾಣ ಎಂದು ಘೋಷಿಸಿದೆ. ಹಿಂದೂಗಳಿಗೆ ಕಾಶಿ, ಸಿಖ್ಖರಿಗೆ ಗುರುದ್ವಾರದಂತೆ ಜೈನ ಸಮುದಾಯಕ್ಕೆ ಅನಾದಿ ಕಾಲದಿಂದಲೂ ಪವಿತ್ರ ಕ್ಷೇತ್ರವಾಗಿರುವ ಸಮ್ಮೇದ ಶಿಖರ್ಜಿ ಇಪ್ಪತ್ತು ತೀರ್ಥಂಕರರ ಸಹಿತ ಅನೇಕಾನೇಕ ಕೇವಲಿಗಳು ಮುಕ್ತಿ ಹೊಂದಿದ ತಾಣವಾಗಿದೆ. ಈ ಕ್ಷೇತ್ರದ ದರ್ಶನ ಮಾಡಿದರೆ ಸಕಲ ಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆ ಜೈನರಿಗಿದೆ.

ಪ್ರವಾಸಿತಾಣ ಘೋಷಣೆ ಮಾಡುವುದರಿಂದ ಮದ್ಯಪಾನ, ಮಾಂಸಹಾರ ಹಾಗೂ ಧೂಮಪಾನ ಸೇವನೆ ಮಾಡುವವರು ಬರುತ್ತಾರೆ. ಇದರಿಂದ ಕ್ಷೇತ್ರದ ಪಾವಿತ್ರ್ಯತೆ ನಶಿಸುತ್ತದೆ ಹಾಗೂ ಜೈನರ ಭಕ್ತಿ ಭಾವನೆಗಳಿಗೆ ಕುಂದು ಉಂಟಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಸಿ ತಾಣವೆಂದು ಘೋಷಿಸಿರುವ ಸರಕಾರ ತನ್ನ ಆದೇಶವನ್ನ ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಸಂಘಟನೆಯ ನಾಯಕರು, ಪ್ರತಿಭಟನೆಯಲ್ಲಿ ನಿರತರಾದವರು ಒತ್ತಾಯಿಸಿದರು. ಜೈನ ಸಮುದಾಯದ ಶ್ವೇತಾಂಬರ, ದಿಗಂಬರ, ಸ್ಥಾನಕವಾಸಿ,ತೇರಾಪಂಥ ಪರಂಪರೆಯ ಸಾವಿರಾರು ಆನುಯಾಯಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು. ಅಲ್ಲದೇ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅದ್ಧೂರಿ ಬ್ರಹ್ಮರಥೋತ್ಸವ

ಬೆಂಗಳೂರು: ಜಾರ್ಖಂಡ್ ರಾಜ್ಯದ ಪರ್ವತದ ಮೇಲಿರುವ ಜೈನ ಸಮುದಾಯದ ಪವಿತ್ರ ಕ್ಷೇತ್ರವನ್ನು ಸಮ್ಮೇದ ಶಿರ್ಖಜಿ ಪ್ರವಾಸಿ ತಾಣವಾಗಿಸಲು ನಿರ್ಧರಿಸಿರುವ ಜಾರ್ಖಂಡ್ ಮತ್ತು ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಫ್ರೀಡಂ ಪಾರ್ಕ್ ಅವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ಜೈನ ಸಮುದಾಯ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಧವಲಕೀರ್ತಿ ಸ್ವಾಮೀಜಿ, ಭಾನುಕೀರ್ತಿ ಸ್ವಾಮೀಜಿ, ಲಕ್ಷ್ಮೀಸೇನ ಭಟ್ಟರಕ ಸ್ವಾಮೀಜಿ, ಸಿದ್ದಾಂತಕೀರ್ತಿ ಸ್ವಾಮೀಜಿ ಮತ್ತು ಕರ್ನಾಟಕ ಜೈನ ಆಸೋಸಿಯೇಷನ್ ಅಧ್ಯಕ್ಷ ಪ್ರಸನ್ನಯ್ಯ ಸ್ವಾಮೀಜಿ, ಜೈನ ಸಮುದಾಯದ ಸಂಘಟನೆಗಳು, ಜೈನ ಪರಂಪರೆಯ ಆನುಯಾಯಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಜಾರ್ಖಂಡ್ ರಾಜ್ಯದಲ್ಲಿರುವ ಜೈನರ ಪರಮ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಜಂಟಿಯಾಗಿ ಪ್ರವಾಸಿ ತಾಣ ಎಂದು ಘೋಷಿಸಿದೆ. ಹಿಂದೂಗಳಿಗೆ ಕಾಶಿ, ಸಿಖ್ಖರಿಗೆ ಗುರುದ್ವಾರದಂತೆ ಜೈನ ಸಮುದಾಯಕ್ಕೆ ಅನಾದಿ ಕಾಲದಿಂದಲೂ ಪವಿತ್ರ ಕ್ಷೇತ್ರವಾಗಿರುವ ಸಮ್ಮೇದ ಶಿಖರ್ಜಿ ಇಪ್ಪತ್ತು ತೀರ್ಥಂಕರರ ಸಹಿತ ಅನೇಕಾನೇಕ ಕೇವಲಿಗಳು ಮುಕ್ತಿ ಹೊಂದಿದ ತಾಣವಾಗಿದೆ. ಈ ಕ್ಷೇತ್ರದ ದರ್ಶನ ಮಾಡಿದರೆ ಸಕಲ ಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆ ಜೈನರಿಗಿದೆ.

ಪ್ರವಾಸಿತಾಣ ಘೋಷಣೆ ಮಾಡುವುದರಿಂದ ಮದ್ಯಪಾನ, ಮಾಂಸಹಾರ ಹಾಗೂ ಧೂಮಪಾನ ಸೇವನೆ ಮಾಡುವವರು ಬರುತ್ತಾರೆ. ಇದರಿಂದ ಕ್ಷೇತ್ರದ ಪಾವಿತ್ರ್ಯತೆ ನಶಿಸುತ್ತದೆ ಹಾಗೂ ಜೈನರ ಭಕ್ತಿ ಭಾವನೆಗಳಿಗೆ ಕುಂದು ಉಂಟಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಸಿ ತಾಣವೆಂದು ಘೋಷಿಸಿರುವ ಸರಕಾರ ತನ್ನ ಆದೇಶವನ್ನ ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಸಂಘಟನೆಯ ನಾಯಕರು, ಪ್ರತಿಭಟನೆಯಲ್ಲಿ ನಿರತರಾದವರು ಒತ್ತಾಯಿಸಿದರು. ಜೈನ ಸಮುದಾಯದ ಶ್ವೇತಾಂಬರ, ದಿಗಂಬರ, ಸ್ಥಾನಕವಾಸಿ,ತೇರಾಪಂಥ ಪರಂಪರೆಯ ಸಾವಿರಾರು ಆನುಯಾಯಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು. ಅಲ್ಲದೇ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅದ್ಧೂರಿ ಬ್ರಹ್ಮರಥೋತ್ಸವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.