ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ನಗರದ ಟೌನ್ ಹಾಲ್ ಬಳಿ ಸಾಹಿತಿ ಮರುಳು ಸಿದ್ದಪ್ಪ, ಎಚ್. ಸಿ ಸಿದ್ದರಾಮಯ್ಯ, ಜನವಾದಿ ಮಹಿಳಾ ಸಂಘಟನೆಯ ವಿಮಲಾ ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿದರು.
ಪೌರತ್ವ ನಮ್ಮ ಹಕ್ಕು, ಎನ್ಆರ್ಸಿ ಬೇಡವೇ ಬೇಡ ಎಂದು ಘೋಷಣೆ ಕೂಗುತ್ತಾ, ಕ್ರಾಂತಿಕಾರಿ ಹಾಡುಗಳನ್ನ ಹಾಡುತ್ತಾ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತಾನಾಡಿದ ಸಾಹಿತಿ ಮರಳ ಸಿದ್ದಪ್ಪ, ಧರ್ಮ, ಜಾತಿ ಆಧಾರದ ಮೇಲೆ ಕಾನೂನು ತರೋದು ಸರಿಯಲ್ಲ, ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧವಿಲ್ಲ, ಆದರೆ ಜನಗಳನ್ನ ಪ್ರತ್ಯೇಕಿಸುವ ಅವಶ್ಯಕತೆಯಿಲ್ಲ, ಮುಸ್ಲಿಂ ಸಮುದಾಯದವರನ್ನು ಬಿಟ್ಟು ಇನ್ನುಳಿದವರಿಗೆ ಪೌರತ್ವ ಕೊಡುತ್ತೇವೆ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಮೋದಿ ಹೇಳ್ತಾರೆ, ಮನಮೋಹನ್ ಸಿಂಗ್ ಜಾರಿಗೆ ತಂದರು ಅಂತಾ, ಮುಸ್ಲಿಮರನ್ನು ಬಿಟ್ಟು ಕಾಯಿದೆ ಜಾರಿಗೆ ತನ್ನಿ ಅಂತ ಅವರು ಹೇಳಿಲ್ಲ- ಕಾನೂನಿನ ನೆಪದಲ್ಲಿ ಮುಸ್ಲಿಮರಿಗೆ ಅನಾಥ ಭಾವನೆ ಹುಟ್ಟು ಹಾಕುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.
ಸಮೂಹ ಒಡೆಯುವ ರಾಜಕೀಯ ಮಾಡಬಾರದು. ಹಾಗೇ ಮಾಡಿದಾಗ ವಿರೋಧ ಪಕ್ಷಗಳು ಇದನ್ನು ಬಳಸಿಕೊಳ್ಳುತ್ತವೆ, ಇಲ್ಲಿ ಯಾವ ಕಾಂಗ್ರೆಸ್ ಪಕ್ಷದವರು ಇಲ್ಲ, ಯುವ ಸಮೂಹವೇ ಬಂದು ಧರಣಿ ಕುತಿದಿದ್ದಾರೆ ಇಲ್ಲಿ ಯಾರು ನಾಯಕರು ಇಲ್ಲ ಅನ್ಯಾಯದ ವಿರುದ್ಧ ಜನ ನಿಲ್ಲುತ್ತಾರೆ ಎಂದರು.