ETV Bharat / state

ಬೆಂಗಳೂರಿನಲ್ಲಿ ಪತ್ನಿಯ ಸ್ನೇಹಿತೆಯ ಪ್ರೀತಿಸಿ ಕೊಲೆಗೈದ ಆರೋಪಿ ಸೆರೆ

author img

By

Published : Jun 14, 2022, 5:58 PM IST

Updated : Jun 14, 2022, 10:59 PM IST

ಪತ್ನಿಯ ಸ್ನೇಹಿತೆಯನ್ನೇ ಪ್ರೀತಿಸಿದ್ದ ಆರೋಪಿ ಇತ್ತೀಚೆಗೆ ಆಕೆ ತನ್ನ ಫೋನ್​ಗೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂಬ ಕಾರಣಕ್ಕೆ ಲಾಡ್ಜ್ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ.

lover-murder-accused-arrested-in-bengaluru
ಬೆಂಗಳೂರಿನಲ್ಲಿ ಪತ್ನಿಯ ಸ್ನೇಹಿತೆಯನ್ನೇ ಪ್ರೀತಿಸಿ ಕೊಲೆಗೈದ ಆರೋಪಿ ಸೆರೆ

ಬೆಂಗಳೂರು:‌ ತನಗೆ ಮದುವೆಯಾದರೂ ತಾನು ಪ್ರೀತಿಸುತ್ತಿದ್ದ ಮತ್ತೊಬ್ಬ ಯುವತಿ ಪರಪುರುಷನೊಂದಿಗೆ ಓಡಾಡುತ್ತಿರುವುದಾಗಿ ಅನುಮಾನ ವ್ಯಕ್ತಪಡಿಸಿ ಲಾಡ್ಜ್​​ಗೆ ಕರೆದೊಯ್ದು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ದುಷ್ಕರ್ಮಿಯನ್ನು ಬೆಂಗಳೂರಿನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ‌.

ಯಶವಂತಪುರ ರೈಲ್ವೆ ಠಾಣೆ ಬಳಿಯಿರುವ ಲಾಡ್ಜ್​​ನಲ್ಲಿ‌ ಒಡಿಶಾ‌‌ ಮೂಲದ‌ ದೀಪಾ‌ ಬದನ್ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇನ್​​ಸ್ಪೆಕ್ಟರ್​​ ಸುರೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಅನ್ಮಲ್ ರತನ್ಕಂ ದರ್ ಪತ್ತೆ ಹೆಚ್ಚಿ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ನಿಯ ಸ್ನೇಹಿತೆಯ ಪ್ರೀತಿಸಿ ಕೊಲೆಗೈದ ಆರೋಪಿ ಸೆರೆ

ಆರೋಪಿ ಅನ್ಮಲ್‌ ಎರಡು ವರ್ಷಗಳ ಹಿಂದೆ‌‌ ಕೊಲೆಯಾದ ಯುವತಿಯ ಸ್ನೇಹಿತೆಯನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದ. ಹೆಚ್ಎಎಲ್​ನಲ್ಲಿ ದಂಪತಿ‌ ವಾಸವಾಗಿದ್ದರು. ಅನ್ಮಲ್‌ ಪತ್ನಿ ಮತ್ತು ಕೊಲೆಯಾದ ದೀಪಾ ಒಡಿಶಾದಲ್ಲಿ ಕಾಲೇಜು ಸಹಪಾಠಿಗಳಾಗಿದ್ದರು. ಇದೇ ಪರಿಚಯ ಮೇರೆಗೆ ದೀಪಾ‌ ಸಹ ಬೆಂಗಳೂರಿಗೆ ಬಂದು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗಾಗ್ಗೆ ಗೆಳತಿಗೆ ಮನೆಗೆ ದೀಪಾ ಮನೆಗೆ ಹೋಗಿ ಬರುತ್ತಿದ್ದಳು.

ಈ ನಡುವೆ ಆರೋಪಿ ಅನ್ಮಲ್ ಹಾಗೂ‌ ದೀಪಾ ಸ್ನೇಹಿತರಾಗಿ ಆತ್ಮೀಯತೆ ಹೆಚ್ಚಾಗಿದೆ. ಅಲ್ಲದೇ, ಇಬ್ಬರು ದೈಹಿಕ‌ ಸಂಬಂಧ ಬೆಳೆಸಿಕೊಂಡಿದ್ದರು. ಆದರೆ, ಇತ್ತೀಚೆಗೆ ದೀಪಾ ಸರಿಯಾಗಿ ತನ್ನ ಫೋನ್​ಗೆ ರೆಸ್ಪಾನ್ಸ್ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅನ್ಮಲ್ ಅಸಮಾಧಾನ ಹೊಂದಿದ್ದ‌‌‌ ಎನ್ನಲಾಗುತ್ತಿದೆ.

ಹೀಗಾಗಿ ಜೂನ್ 9ರಂದು ದೀಪಾಗೆ ಕರೆ ಮಾಡಿ ಲಾಡ್ಜ್‌ಗೆ ಕರೆಯಿಸಿಕೊಂಡಿದ್ದ.‌‌ ‌ಈ ವೇಳೆ ಬೇರೊಬ್ಬನೊಂದಿಗೆ ಓಡಾಡುತ್ತೀಯಾ ಎಂದು ಕ್ಯಾತೆ ತೆಗೆದು ಜಗಳ‌ ಮಾಡಿದ್ದಾನೆ.‌ ಕೋಪದಿಂದ ತಲೆದಿಂಬಿನಿಂದ ಉಸಿರುಗಟ್ಟಿಸಿದ್ದಾನೆ. ಸಾವು‌ ಖಚಿತವಾಗುತ್ತಿದ್ದಂತೆ ರೂಮ್​ಗೆ ಬೀಗ ಹಾಕಿ ತಲೆಮರೆಸಿಕೊಂಡ. ಬಳಿಕ‌ ಮಾರನೇ ದಿನ‌ ಲಾಡ್ಜ್ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ‌ ನೀಡಿದ್ದರು. ಇದರಂತೆ ಸ್ಥಳಕ್ಕೆ ಬಂದ‌ ಪೊಲೀಸರು ಬೀಗ ಮುರಿದು‌‌ ಒಳ‌ ನುಗ್ಗಿದಾಗ ದೀಪಾ ಕೊಲೆಯಾಗಿರುವ ಸಂಗತಿ ಬಯಲಾಗಿತ್ತು.

ಇದನ್ನೂ ಓದಿ: ಪತ್ನಿಯ ಗೆಳತಿಯನ್ನೇ ಪ್ರೀತಿಸಿ ಲಾಡ್ಜ್‌ಗೆ ಕರೆದೊಯ್ದು ಕೊಂದು ಹಾಕಿದ!

ಬೆಂಗಳೂರು:‌ ತನಗೆ ಮದುವೆಯಾದರೂ ತಾನು ಪ್ರೀತಿಸುತ್ತಿದ್ದ ಮತ್ತೊಬ್ಬ ಯುವತಿ ಪರಪುರುಷನೊಂದಿಗೆ ಓಡಾಡುತ್ತಿರುವುದಾಗಿ ಅನುಮಾನ ವ್ಯಕ್ತಪಡಿಸಿ ಲಾಡ್ಜ್​​ಗೆ ಕರೆದೊಯ್ದು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ದುಷ್ಕರ್ಮಿಯನ್ನು ಬೆಂಗಳೂರಿನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ‌.

ಯಶವಂತಪುರ ರೈಲ್ವೆ ಠಾಣೆ ಬಳಿಯಿರುವ ಲಾಡ್ಜ್​​ನಲ್ಲಿ‌ ಒಡಿಶಾ‌‌ ಮೂಲದ‌ ದೀಪಾ‌ ಬದನ್ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇನ್​​ಸ್ಪೆಕ್ಟರ್​​ ಸುರೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಅನ್ಮಲ್ ರತನ್ಕಂ ದರ್ ಪತ್ತೆ ಹೆಚ್ಚಿ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ನಿಯ ಸ್ನೇಹಿತೆಯ ಪ್ರೀತಿಸಿ ಕೊಲೆಗೈದ ಆರೋಪಿ ಸೆರೆ

ಆರೋಪಿ ಅನ್ಮಲ್‌ ಎರಡು ವರ್ಷಗಳ ಹಿಂದೆ‌‌ ಕೊಲೆಯಾದ ಯುವತಿಯ ಸ್ನೇಹಿತೆಯನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದ. ಹೆಚ್ಎಎಲ್​ನಲ್ಲಿ ದಂಪತಿ‌ ವಾಸವಾಗಿದ್ದರು. ಅನ್ಮಲ್‌ ಪತ್ನಿ ಮತ್ತು ಕೊಲೆಯಾದ ದೀಪಾ ಒಡಿಶಾದಲ್ಲಿ ಕಾಲೇಜು ಸಹಪಾಠಿಗಳಾಗಿದ್ದರು. ಇದೇ ಪರಿಚಯ ಮೇರೆಗೆ ದೀಪಾ‌ ಸಹ ಬೆಂಗಳೂರಿಗೆ ಬಂದು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗಾಗ್ಗೆ ಗೆಳತಿಗೆ ಮನೆಗೆ ದೀಪಾ ಮನೆಗೆ ಹೋಗಿ ಬರುತ್ತಿದ್ದಳು.

ಈ ನಡುವೆ ಆರೋಪಿ ಅನ್ಮಲ್ ಹಾಗೂ‌ ದೀಪಾ ಸ್ನೇಹಿತರಾಗಿ ಆತ್ಮೀಯತೆ ಹೆಚ್ಚಾಗಿದೆ. ಅಲ್ಲದೇ, ಇಬ್ಬರು ದೈಹಿಕ‌ ಸಂಬಂಧ ಬೆಳೆಸಿಕೊಂಡಿದ್ದರು. ಆದರೆ, ಇತ್ತೀಚೆಗೆ ದೀಪಾ ಸರಿಯಾಗಿ ತನ್ನ ಫೋನ್​ಗೆ ರೆಸ್ಪಾನ್ಸ್ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅನ್ಮಲ್ ಅಸಮಾಧಾನ ಹೊಂದಿದ್ದ‌‌‌ ಎನ್ನಲಾಗುತ್ತಿದೆ.

ಹೀಗಾಗಿ ಜೂನ್ 9ರಂದು ದೀಪಾಗೆ ಕರೆ ಮಾಡಿ ಲಾಡ್ಜ್‌ಗೆ ಕರೆಯಿಸಿಕೊಂಡಿದ್ದ.‌‌ ‌ಈ ವೇಳೆ ಬೇರೊಬ್ಬನೊಂದಿಗೆ ಓಡಾಡುತ್ತೀಯಾ ಎಂದು ಕ್ಯಾತೆ ತೆಗೆದು ಜಗಳ‌ ಮಾಡಿದ್ದಾನೆ.‌ ಕೋಪದಿಂದ ತಲೆದಿಂಬಿನಿಂದ ಉಸಿರುಗಟ್ಟಿಸಿದ್ದಾನೆ. ಸಾವು‌ ಖಚಿತವಾಗುತ್ತಿದ್ದಂತೆ ರೂಮ್​ಗೆ ಬೀಗ ಹಾಕಿ ತಲೆಮರೆಸಿಕೊಂಡ. ಬಳಿಕ‌ ಮಾರನೇ ದಿನ‌ ಲಾಡ್ಜ್ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ‌ ನೀಡಿದ್ದರು. ಇದರಂತೆ ಸ್ಥಳಕ್ಕೆ ಬಂದ‌ ಪೊಲೀಸರು ಬೀಗ ಮುರಿದು‌‌ ಒಳ‌ ನುಗ್ಗಿದಾಗ ದೀಪಾ ಕೊಲೆಯಾಗಿರುವ ಸಂಗತಿ ಬಯಲಾಗಿತ್ತು.

ಇದನ್ನೂ ಓದಿ: ಪತ್ನಿಯ ಗೆಳತಿಯನ್ನೇ ಪ್ರೀತಿಸಿ ಲಾಡ್ಜ್‌ಗೆ ಕರೆದೊಯ್ದು ಕೊಂದು ಹಾಕಿದ!

Last Updated : Jun 14, 2022, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.