ETV Bharat / state

ಸ್ಥಿರ ಸರ್ಕಾರಕ್ಕಾಗಿ ಜನ ಬಿಜೆಪಿಗೆ ಮತ ನೀಡಲಿದ್ದಾರೆ.. ಸಚಿವ ವಿ. ಸೋಮಣ್ಣ

author img

By

Published : Dec 1, 2019, 3:24 PM IST

ಉಪ ಚುನಾವಣೆಯಲ್ಲಿ ಬೆಂಗಳೂರಿನ ನಾಲ್ಕೂ ಕ್ಷೇತ್ರ ಸೇರಿ ಎಲ್ಲಾ‌ 15 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದ್ದು, ಸ್ಥಿರ ಸರ್ಕಾರಕ್ಕಾಗಿ ಜನ ಮತ ನೀಡಲಿದ್ದಾರೆ ಎಂದು ಸಚಿವ ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Minister V. Somanna
ಸಚಿವ ವಿ. ಸೋಮಣ್ಣ

ಬೆಂಗಳೂರು: ಕುಮಾರಸ್ವಾಮಿ ವಿಫಲ ರಾಜಕಾರಣಿ. ಉಪ ಚುನಾವಣೆಯಲ್ಲಿ ಬೆಂಗಳೂರಿನ ನಾಲ್ಕೂ ಕ್ಷೇತ್ರ ಸೇರಿ ಎಲ್ಲಾ‌ 15 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದ್ದು, ಸ್ಥಿರ ಸರ್ಕಾರಕ್ಕಾಗಿ ಜನ ಮತ ನೀಡಲಿದ್ದಾರೆ ಎಂದು ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವ ವಿ. ಸೋಮಣ್ಣ..

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.3ಕ್ಕೆ ಉಪಚುನಾವಣ ಪ್ರಚಾರ ಮುಗಿಯುತ್ತದೆ. 15 ಕ್ಷೇತ್ರಗಳಲ್ಲಿ ಸಾಕಷ್ಟು ಸುತ್ತಾಡಿದ್ದೇನೆ. ರಾಜ್ಯದ ಜನ ಬಯಸಿರೋದು ಸ್ಥಿರ ಸರ್ಕಾರ. ಮೈತ್ರಿ ಸರ್ಕಾರದ ಕಿತ್ತಾಟ ಸೇರಿ ಹಲವು ವಿಚಾರಗಳನ್ನ ಜನ ನೋಡಿದ್ದಾರೆ. ನಾನು ಬಿಜೆಪಿಗೆ ಬಂದ ಬಳಿಕ ಕೊಟ್ಟ ಎಲ್ಲಾ ಉಪ ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಚನ್ನಪಟ್ಟಣ ಉಪಚುನಾವಣೆ ನನಗೆ ಕೊಟ್ಟಿದ್ದರು. ದೇವದುರ್ಗ ಉಪಚುನಾವಣೆಯಲ್ಲಿ ಜನ ನಮ್ಮ ಪರ ತೀರ್ಪು ನೀಡಿದ್ದರು. ಚಿಂಚೋಳಿಯಲ್ಲೂ ಅವಿನಾಶ್ ಜಾಧವ್ ಗೆಲುವು ಸಾಧಿಸಿದರು. ಮಹಾಲಕ್ಷ್ಮಿಲೇಔಟ್‌ನ ಉಪಚುನಾವಣಾ ಉಸ್ತುವಾರಿ ನೀಡಿದ್ದಾರೆ. 2.81 ಲಕ್ಷ ಮತದಾರರಿದ್ದು, 200 ಬೂತ್​ಗಳಲ್ಲಿ ನಾನೇ ಸುತ್ತಾಡಿದ್ದೇನೆ. ಎಲ್ಲರೂ ಸೇರಿ ಟೀಂ ವರ್ಕ್ ಮಾಡಿದ್ದೇವೆ. ಹೀಗಾಗಿ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗಿಂತ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಡಿ. 9ರವರೆಗೂ ಇರಿ ಗುಡ್ ನ್ಯೂಸ್ ಕೊಡುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆ ಅವರು 6 ತಿಂಗಳು ಅಧಿಕಾರ ಇಲ್ಲದೆ ಈ ರೀತಿ ಮಾತನಾಡುತ್ತಾರೆ. ಅವರ ಪಕ್ಷದ 12 ಮಂದಿ ಶಾಸಕರು ಹೋಗಿದ್ದಾರೆ. ಯಾವ ಗುಡ್ ನ್ಯೂಸ್ ಕೊಡ್ತಾರೋ ನೋಡೋಣ ಎಂದರು.

ಬೆಂಗಳೂರು: ಕುಮಾರಸ್ವಾಮಿ ವಿಫಲ ರಾಜಕಾರಣಿ. ಉಪ ಚುನಾವಣೆಯಲ್ಲಿ ಬೆಂಗಳೂರಿನ ನಾಲ್ಕೂ ಕ್ಷೇತ್ರ ಸೇರಿ ಎಲ್ಲಾ‌ 15 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದ್ದು, ಸ್ಥಿರ ಸರ್ಕಾರಕ್ಕಾಗಿ ಜನ ಮತ ನೀಡಲಿದ್ದಾರೆ ಎಂದು ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವ ವಿ. ಸೋಮಣ್ಣ..

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.3ಕ್ಕೆ ಉಪಚುನಾವಣ ಪ್ರಚಾರ ಮುಗಿಯುತ್ತದೆ. 15 ಕ್ಷೇತ್ರಗಳಲ್ಲಿ ಸಾಕಷ್ಟು ಸುತ್ತಾಡಿದ್ದೇನೆ. ರಾಜ್ಯದ ಜನ ಬಯಸಿರೋದು ಸ್ಥಿರ ಸರ್ಕಾರ. ಮೈತ್ರಿ ಸರ್ಕಾರದ ಕಿತ್ತಾಟ ಸೇರಿ ಹಲವು ವಿಚಾರಗಳನ್ನ ಜನ ನೋಡಿದ್ದಾರೆ. ನಾನು ಬಿಜೆಪಿಗೆ ಬಂದ ಬಳಿಕ ಕೊಟ್ಟ ಎಲ್ಲಾ ಉಪ ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಚನ್ನಪಟ್ಟಣ ಉಪಚುನಾವಣೆ ನನಗೆ ಕೊಟ್ಟಿದ್ದರು. ದೇವದುರ್ಗ ಉಪಚುನಾವಣೆಯಲ್ಲಿ ಜನ ನಮ್ಮ ಪರ ತೀರ್ಪು ನೀಡಿದ್ದರು. ಚಿಂಚೋಳಿಯಲ್ಲೂ ಅವಿನಾಶ್ ಜಾಧವ್ ಗೆಲುವು ಸಾಧಿಸಿದರು. ಮಹಾಲಕ್ಷ್ಮಿಲೇಔಟ್‌ನ ಉಪಚುನಾವಣಾ ಉಸ್ತುವಾರಿ ನೀಡಿದ್ದಾರೆ. 2.81 ಲಕ್ಷ ಮತದಾರರಿದ್ದು, 200 ಬೂತ್​ಗಳಲ್ಲಿ ನಾನೇ ಸುತ್ತಾಡಿದ್ದೇನೆ. ಎಲ್ಲರೂ ಸೇರಿ ಟೀಂ ವರ್ಕ್ ಮಾಡಿದ್ದೇವೆ. ಹೀಗಾಗಿ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗಿಂತ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಡಿ. 9ರವರೆಗೂ ಇರಿ ಗುಡ್ ನ್ಯೂಸ್ ಕೊಡುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆ ಅವರು 6 ತಿಂಗಳು ಅಧಿಕಾರ ಇಲ್ಲದೆ ಈ ರೀತಿ ಮಾತನಾಡುತ್ತಾರೆ. ಅವರ ಪಕ್ಷದ 12 ಮಂದಿ ಶಾಸಕರು ಹೋಗಿದ್ದಾರೆ. ಯಾವ ಗುಡ್ ನ್ಯೂಸ್ ಕೊಡ್ತಾರೋ ನೋಡೋಣ ಎಂದರು.

Intro:


ಬೆಂಗಳೂರು: ಕುಮಾರಸ್ವಾಮಿ ವಿಫಲ ರಾಜಕಾರಣಿ,ಬರೀ ಗುಮಿಕ್ ಮಾಡಿಕೊಂಡು ಬರುತ್ತಿದ್ದಾರೆ ಉಪ ಚುನಾವಣೆಯಲ್ಲಿ ಬೆಂಗಳೂರಿನ ನಾಲ್ಕೂ ಕ್ಷೇತ್ರ ಸೇರಿ ಎಲ್ಲಾ‌ 15 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಸ್ಥಿರ ಸರ್ಕಾರಕ್ಕಾಗಿ ಜನ ಮತ ನೀಡಲಿದ್ದಾರೆ ಎಂದು ಸಚಿವ ವಿ ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಡಿ.3 ಕ್ಕೆ ಉಪಚುನಾವಣ ಪ್ರಚಾರ ಮುಗಿಯುತ್ತದೆ 15 ಕ್ಷೇತ್ರಗಳಲ್ಲಿ ಸಾಕಷ್ಟು ಸುತ್ತಾಡಿದ್ದೇನೆ ರಾಜ್ಯದ ಜನ ಬಯಸಿರೋದು ಸ್ಥಿರ ಸರ್ಕಾರ ಮೈತ್ರಿ ಸರ್ಕಾರದ ಕಿತ್ತಾಟ ಸೇರಿದಂತೆ ಹಲವು ವಿಚಾರಗಳನ್ನ ಜನ ನೋಡಿದ್ದಾರೆ ನಾನು ಬಿಜೆಪಿಗೆ ಬಂದ ಬಳಿಕ ಕೊಟ್ಟ ಎಲ್ಲಾ ಉಪ ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ.ಚನ್ನಪಟ್ಟಣ ಉಪಚುನಾವಣೆ ನನಗೆ ಕೊಟ್ಟಿದ್ದರು ದೇವದುರ್ಗ ಉಪಚುನಾವಣೆಯಲ್ಲಿ ಜನ ನಮ್ಮ ಪರ ತೀರ್ಪು ನೀಡಿದ್ದರು
ಚಿಂಚೋಳಿಯಲ್ಲೂ ಅವಿನಾಶ್ ಜಾದವ್ ಗೆಲುವು ಸಾಧಿಸಿದರು.ಮಹಾಲಕ್ಷ್ಮಿ ಲೇಔಟ್ ನ ಉಪಚುನಾವಣಾ ಉಸ್ತುವಾರಿ ನೀಡಿದ್ದಾರೆ 2.81 ಲಕ್ಷ ಮತದಾರರಿದ್ದಾರೆ, 200 ಬೂತ್ ಗಳಲ್ಲಿ ನಾನೇ ಸುತ್ತಾಡಿದ್ದೇನೆ ಎಲ್ಲರೂ ಸೇರಿ ಟೀಂ ವರ್ಕ್ ಮಾಡಿದ್ದೇವೆ ಹೀಗಾಗಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗಿಂತ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರ ಸಿಕ್ಕಾಗ ಏನ್ ಏನ್ ಮಾಡಿದ್ದಾರೆ ಅಂತ ಜನರಿಗೆ ಗೊತ್ತಿದೆ ಮತ್ತೆ ಅಪವಿತ್ರ ಮೈತ್ರಿಗೆ ಜನ ಮತ ಹಾಕಲ್ಲ ಹೀಗಾಗಿ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಾರೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಡಿ 9 ವರೆಗೂ ಇರಿ ಗುಡ್ ನ್ಯೂಸ್ ಕೊಡುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರೊಯೆ ನೀಡಿದ ಸೋಮಣ್ಣ ಖರ್ಗೆ ಅವರು 6 ತಿಂಗಳು ಅಧಿಕಾರ ಇಲ್ಲದೆ ಈ ರೀತಿ ಮಾತನಾಡುತ್ತಾರೆ ಅವರ ಪಕ್ಷದ 12 ಮಂದಿ ಶಾಸಕರು ಹೋಗಿದ್ದಾರೆ ಯಾವ ಗುಡ್ ನ್ಯೂಸ್ ಕೊಡ್ತಾರೋ ನೋಡೋಣ ಕುಮಾರಸ್ವಾಮಿ ಏನ್ ಏನ್ ಮಾಡ್ತಾರೋ ಎಲ್ಲವೂ ಫೇಲ್ಯೂರ್ 100 ಕ್ಕೆ 100 ಫೇಲ್ಯೂರ್,ತಾವು 20 ತಿಂಗಳ ಅಧಿಕಾರ ಅನಭವಿಸಿ ನಂತರ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಲಿಲ್ಲ ಗಿಮಿಕ್ ಮಾಡಿಕೊಂಡು ಬರುತ್ತಿದ್ದಾರೆ ಕಾಂಗ್ರೆಸ್ ನವರ ಮೂತಿಗೆ ತುಪ್ಪ ಸವರಿದ್ರು ರಾಜ್ಯದ ಜನತೆ ಎಲ್ಲದಕ್ಕೂ ಉತ್ತರ ನೀಡ್ತಾರೆ ಒಂದಕ್ಕಿಂತ ಒಂದು ಕ್ಷೇತ್ರದಲ್ಲಿ ಜನ ಉತ್ಸಾಹದಿಂದ ಇದ್ದಾರೆ
ನಾವು ಚಿನ್ಹೆಯ ಬಗ್ಗೆ ಹೆಚ್ಚಿನ ಆಧ್ಯತೆ ನೀಡಿದ್ದೇವೆ, ಕುಮಾರಸ್ವಾಮಿನೂ ಇಲ್ಲ, ಯಾರು ಇಲ್ಲ, ಯಡಿಯೂರಪ್ಪ ಸ್ಥಿರ ಸರ್ಕಾರ ನೀಡುತ್ತಾರೆ ಎಂದರು.

ಹೊಸಕೋಟೆಯಲ್ಲಿ ಅಚ್ಚರಿ ಫಲಿತಾಂಶ ಬರುತ್ತದೆ
ಎಂಟಿಬಿ ಪರ ತೀರ್ಪು ಬರುತ್ತದೆ ಎರಡು ಮೂರು ದಿನಗಳಲ್ಲಿ ಬದಲಾಗುತ್ತದೆ ಶರತ್ ಬಚ್ಚೇಗೌಡ ಗೆದ್ದು ಎಲ್ಲಿ ಹೋಗ್ತಾರೆ, ಪಕ್ಷದಲ್ಲಿ ಇರುವವರಿಗೆ ಮತ ಹಾಕುತ್ತಾರೆ.ಜನ ದಡ್ಡರಲ್ಲ ರಾಜ್ಯದ ಜನ ಸ್ಥಿರ ಸರ್ಕಾರ ನೀಡ್ತಾರೆ‌, ಜನ ನಮ್ಮ ಪರ ಇರ್ತಾರೆ ಸಿದ್ದರಾಮಯ್ಯ ಹೇಳೋದು ಎಲ್ಲ ಸುಳ್ಳು, ನಾನು ಹೇಳೋದು ಸತ್ಯ ಕುಮಾರಸ್ವಾಮಿ ಹೇಳೋದು ಲೆಕ್ಕಕ್ಕೆ ಇಲ್ಲ
ನಾನು ದೈವ ಭಕ್ತ ಎಂದು ಸೋಮಣ್ಣ ಧಾರ್ಮಿಕವಾಗಿ ನುಡಿದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.