ETV Bharat / state

2024 'ಪ್ರಯಾಣಿಕ ಸ್ನೇಹಿ ವರ್ಷ'; ನಗದುರಹಿತ UPI ಸೇವೆ ಘೋಷಿಸಿದ ಕೆಎಸ್ಆರ್​ಟಿಸಿ

author img

By ETV Bharat Karnataka Team

Published : Jan 1, 2024, 2:47 PM IST

Updated : Jan 1, 2024, 3:01 PM IST

KSRTC: 2024ನೇ ವರ್ಷವನ್ನು ಪ್ರಯಾಣಿಕ ಸ್ನೇಹಿ ವರ್ಷ ಎಂದು ಘೋಷಣೆ ಮಾಡಿರುವ ಕೆಎಸ್​ಆರ್​ಟಿಸಿ ಹಲವು ಯೋಜನೆಗಳ ಭರವಸೆ ನೀಡಿದೆ.

ಪ್ರಯಾಣಿಕ ಸ್ನೇಹಿ ವರ್ಷ ಘೋಷಣೆ
ಪ್ರಯಾಣಿಕ ಸ್ನೇಹಿ ವರ್ಷ ಘೋಷಣೆ

ಬೆಂಗಳೂರು: 2023ನೇ ವರ್ಷವನ್ನು ಕಾರ್ಮಿಕ ಕಲ್ಯಾಣ ವರ್ಷವೆಂದು ಘೋಷಿಸಿ ಕಾರ್ಮಿಕರ ಪರ ಹಲವು ಕಾರ್ಯಕ್ರಮ ರೂಪಿಸಿದ್ದ ಕೆಎಸ್ಆರ್​ಟಿಸಿ 2024ನೇ ವರ್ಷವನ್ನು ಪ್ರಯಾಣಿಕ ಸ್ನೇಹಿ ವರ್ಷವೆಂದು ಘೋಷಿಸಿದೆ. ನಗದು ರಹಿತ ಡಿಜಿಟಲ್ ಹಣ ಪಾವತಿ ವ್ಯವಸ್ಥೆ ಪರಿಚಯ, ಪ್ರಯಾಣಿಕರ ಜೊತೆ ಸೌಜನ್ಯದ ವರ್ತನೆಗೆ ಸಿಬ್ಬಂದಿಗೆ ತರಬೇತಿ, ಬಸ್ ನಿಲ್ದಾಣಗಳ ಮೂಲಸೌಕರ್ಯಕ್ಕೆ ಆದ್ಯತೆ ಸೇರಿದಂತೆ ಹಲವು ಪ್ರಯಾಣಿಕ ಸ್ನೇಹಿ ಯೋಜನೆಗಳ ಭರವಸೆ ನೀಡಿದೆ. ಜೊತೆಗೆ ನಗದು ರಹಿತ ಸೇವೆಯನ್ನೂ ಇಲಾಖೆ ಘೋಷಿಸಿದೆ.

ಕೆಎಸ್​ಆರ್​ಟಿಸಿಯು ತನ್ನ ಗತವೈಭವದ ಪಯಣಕ್ಕೆ ಮರಳಿದ್ದು, ಈ ಪ್ರಯಾಣದ ಅವಿಭಾಜ್ಯ ಅಂಗವಾದ ನಿಗಮದ ಸಮಸ್ತ ಅಧಿಕಾರಿ/ಸಿಬ್ಬಂದಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಹೊಸ ವರುಷ 2024ರ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತಾ ಕೆಎಸ್​ಆರ್​ಟಿಸಿಯು 2024ನೇ ವರ್ಷವನ್ನು "ಪ್ರಯಾಣಿಕ ಸ್ನೇಹಿ ವರ್ಷ" ವೆಂದು ಘೋಷಣೆ ಮಾಡಿದೆ ಎಂದು ಕೆಎಸ್ಆರ್​ಟಿಸಿ ಎಂಡಿ ವಿ ಅನ್ಬುಕುಮಾರ್ ತಿಳಿಸಿದ್ದಾರೆ.

ಅಪಘಾತ ವಿಮೆ ಹೆಚ್ಚಳ: 2024ನೇ ಸಾಲಿನ ಪ್ರಯಾಣಿಕ ಸ್ನೇಹಿ ವರ್ಷದಲ್ಲಿ ನಿಗಮವು ಕೈಗೊಳ್ಳುವ ನೂತನ ಕಾರ್ಯಕ್ರಮಗಳ ಕಿರುನೋಟವನ್ನು ಇಲಾಖೆ ಪ್ರಕಟಿಸಿದ್ದು, ಇಂದಿನಿಂದ ಜಾರಿಗೆ ಬರುವಂತೆ, ಅಪಘಾತ ಪರಿಹಾರ ವಿಮಾ ಯೋಜನೆಯಡಿ ಮೃತ ಪ್ರಯಾಣಿಕರ ಅವಲಂಬಿತರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಅನ್ಬುಕುಮಾರ್ ತಿಳಿಸಿದ್ದಾರೆ.

2000 ಹೊಸ ವಾಹನಗಳು: ಪ್ರಸಕ್ತ ವರ್ಷದಲ್ಲಿ 2000 ಹೊಸ ವಾಹನಗಳ ಸೇರ್ಪಡೆ, ಅಂಬಾರಿ ಉತ್ಸವ 20, ಐರಾವತ ಕ್ಲಬ್ ಕ್ಲಾಸ್- 20, ಪಲ್ಲಕ್ಕಿ-100, ಪಾಯಿಂಟ್- ಟು-ಪಾಯಿಂಟ್ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳು 1000 ಹಾಗು 500 ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಸಲಾಗುತ್ತದೆ. ಪ್ರಸ್ತುತ ಪರಿಚಯಿಸಲಾಗಿರುವ 20 "ನಮ್ಮ ಕಾರ್ಗೋ ಟ್ರಕ್ಕುಗಳನ್ನು ವರ್ಷಾಂತ್ಯಕ್ಕೆ 500ಕ್ಕೆ ಹೆಚ್ಚಿಸಲಾಗುವುದು 1000 ವಾಹನಗಳ ಪುನಶ್ವೇತನ ಯೋಜನೆಯ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನವನ್ನು ಆಧುನೀಕರಣಗೊಳಿಸಿ, ಪ್ರಯಾಣಿಕರ ಅನುಕೂಲಕ್ಕಾಗಿ VTMS (Vehicle Tracking & Monitoring System), Mobile App, (UPI, ATM, Debit/Credit Cards, NAMC) ಕಾರ್ಡ್ ಜಾರಿ ಮೂಲಕ ನಗದ ರಹಿತ ಸೇವೆಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರಕಟಿಸಿದೆ. ಹೀಗಾಗಿ ಇನ್ಮುಂದೆ ಕೆಎಸ್ಆರ್​ಟಿಸಿ ಬಸ್​ಗಳಲ್ಲಿ ಕ್ಯಾಷ್​ಲೆಸ್ ಟ್ರಾವೆಲ್ ಮಾಡಬಹುದು. ಇದರಿಂದ ಚಿಲ್ಲರೆ ಸಮಸ್ಯೆಗೂ ಬ್ರೇಕ್ ಬೀಳಲಿದೆ.

ಶುಚಿತ್ವಕ್ಕೆ ಆದ್ಯತೆ: ಬಸ್ ನಿಲ್ದಾಣಗಳ ಶುಚಿತ್ವಕ್ಕೆ ಆದ್ಯತೆ, ಉತ್ತಮ ಕುಡಿಯುವ ನೀರಿನ ವ್ಯವಸ್ಥೆ, ಆಸನಗಳು ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದಕ್ಕೆ ಆಧ್ಯತೆ ನೀಡುವುದಾಗಿ ತಿಳಿಸಿದೆ. ಬಸ್ಸುಗಳ ಸ್ವಚ್ಛತೆ ಹಾಗೂ ಯಾಂತ್ರಿಕ ನಿರ್ವಹಣೆಗೆ ಒತ್ತು ಚಾಲನಾ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತನೆ ಸಂಬಂಧ ನುರಿತ ತರಬೇತುದಾರರಿಂದ Soft Skill Training ಹಾಗೂ ಅಪಘಾತ/ಸಂಚಾರ ನಿಯಮ ಪಾಲನೆ ಸಂಬಂಧ ನಿರಂತರ ಕಾರ್ಯಾಗಾರ ಹಮ್ಮಿಕೊಳ್ಳುವ ಭರವಸೆ ನೀಡಿದ್ದಾರೆ.

ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು/ಉಪಕ್ರಮಗಳು 2023ರ ಸಾಲಿನಲ್ಲಿ 50ಕ್ಕೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದು, ಈ ಪ್ರಶಸ್ತಿಗಳನ್ನು ನಿಗಮದ ಸಿಬ್ಬಂದಿಗಳು ಹಾಗೂ ಪ್ರಯಾಣಿಕರಿಗೆ ಸಮರ್ಪಿಸಲಾಗಿದೆ. ಸಾರಿಗೆ ಮತ್ತು ಮುಜರಾಯಿ ಸಚಿವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಸಮಸ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ಅವಿರತ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆ ಶ್ಲಾಘನೀಯ.

ತಮ್ಮಲ್ಲೆರ ಸಹಕಾರದಿಂದ ನಿಗಮವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದಿ, ಸಾರ್ವಜನಿಕರಿಗೆ ಉತ್ತಮ ಸಮಗ್ರ ಸಾರಿಗೆ ಸೌಲಭ್ಯ ನೀಡುವಂತಾಗಲೆಂದು ಆಶಿಸುತ್ತೇನೆ ಎಂದು ಕೆಎಸ್ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಶುಭ ಕೋರಿದ್ದಾರೆ.

2023 ಕಾರ್ಮಿಕ ಕಲ್ಯಾಣ ವರ್ಷದ ಹಿನ್ನೋಟ: ರೂ.1 ಕೋಟಿಗಳ On Road/ Off Road ಅಪಘಾತ ವಿಮಾ ಯೋಜನೆ. ಈ ಯೋಜನೆಯಡಿಯಲ್ಲಿ ಈಗಾಗಲೇ 12 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.1 ಕೋಟಿ ವಿಮಾ ಹಣವನ್ನು ನೀಡಲಾಗಿದೆ. ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೊತ್ತವನ್ನು 3 ರಿಂದ 5 ಪಟ್ಟು ಹೆಚ್ಚಳ ಮಾಡಿ, ಹೊಸ ಕೋರ್ಸುಗಳನ್ನು ಸೇರ್ಪಡೆಗೊಳಿಸಿ, ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದು "ವಿದ್ಯಾ ಚೇತನ ಯೋಜನೆ' ಹೆಸರಿನಲ್ಲಿ 3345 ಮಕ್ಕಳಿಗೆ ರೂ.1.67 ಕೋಟಿ ವಿದ್ಯಾರ್ಥಿ ವೇತನವನ್ನು ಪಾವತಿಸಲಾಗಿದೆ.

ತನ್ನ ಸಿಬ್ಬಂದಿಗಳ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಸದುದ್ದೇಶದಿಂದ, ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, 10 ಕ್ಕಿಂತ ಹೆಚ್ಚಿನ ಹೃದಯ ಸಂಬಂಧಿ ಪರೀಕ್ಷೆಗಾಗಿ ಪ್ರತಿ ವರ್ಷ ರೂ.2.55 ಕೋಟಿಗಳನ್ನು ಪಾವತಿಸುತ್ತಿದೆ. ಇದರಿಂದ ಸುಮಾರು 21000 ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ.

ಕಾರ್ಮಿಕರ ಕುಟುಂಬ ಕಲ್ಯಾಣ ಯೋಜನೆಯಡಿ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ನೌಕರರ ಮೇಲಿನ 10,364 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ ದಂಡ ವಿಧಿಸಿ ಮನ್ನಾ ಹಾಗೂ 10 ತಿಂಗಳುಗಿಂತ ಕಡಿಮೆ ಗೈರು ಹಾಜರಿ ಪ್ರಕರಣಗಳಲ್ಲಿ 425ಕ್ಕೂ ಹೆಚ್ಚು ಚಾಲಕರಿಗೆ ಕರ್ತವ್ಯಕ್ಕ ಮರಳಲು ಅವಕಾಶ ನೀಡಲಾಗಿದೆ.

ಕೇಂದ್ರ ಕಚೇರಿಯ ಮಟ್ಟದಲ್ಲಿ ವ್ಯವಸ್ಥಾಪಕ ನಿರ್ದೇಶಕರು/ನಿರ್ದೇಶಕರು (ಸಿ&ಜಾ)ರವರು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ ಪರಿಹಾರವನ್ನು ಒದಗಿಸುತ್ತಿದ್ದಾರೆ. ವಿಭಾಗ/ಘಟಕ ಮಟ್ಟದಲ್ಲಿ ಕಾಲಕಾಲಕ್ಕೆ ಸಿಬ್ಬಂದಿಗಳ ಕುಂದು ಕೊರತೆ ಸಭೆಯನ್ನು ಆಯೋಜಿಸಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತಿದೆ. ನಿಗಮಗಳಿಗೆ ಸ್ನಾಯತ್ತತೆ ನೀಡಲಾಗಿದ್ದು, (Autonomous) ಅಧಿಕಾರಿಗಳು/ಸಿಬ್ಬಂದಿಗಳನ್ನು ಆಯಾಯ ನಿಗಮಗಳಿಗೆ ವರ್ಗಾಯಿಸಿ ಅನುಕೂಲ ಕಲ್ಪಿಸಲಾಗಿದೆ.

ಅಂತರ ವಿಭಾಗ/ ಘಟಕಗಳಿಗೆ 900ಕ್ಕೂ ಹೆಚ್ಚು ನೌಕರರಿಗೆ ವರ್ಗಾವಣೆ ನೀಡಲಾಗಿದೆ. ಚಾಲಕರಲ್ಲಿ ಸುರಕ್ಷತಾ ಚಾಲನೆಯನ್ನು ಹವ್ಯಾಸವಾಗಿಸುವ ನಿಟ್ಟಿನಲ್ಲಿ, ಅಪಘಾತ ರಹಿತ ಚಾಲನೆಯ ಕುರಿತು ಕಾರ್ಯಾಗಾರ/ಉಪನ್ಯಾಸಗಳ ಆಯೋಜನೆ ಹಾಗೂ 65ಹೊಸ ಬೊಲೆರೋ ಜೀಪುಗಳನ್ನು ವಿಭಾಗಗಳಿಗೆ ನೀಡಿದ್ದು, ಅಪಘಾತ ಸ್ಥಳಗಳಿಗೆ ತ್ವರಿತವಾಗಿ ತೆರಳಲು ಹಾಗೂ ಮುಂಜಾಗ್ರತಾ ಕ್ರಮವಹಿಸಲಾಗಿದೆ.

ನಿಗಮದ ಅರ್ಹ ನೌಕರರಿಗೆ Higher Pension ಸೌಲಭ್ಯವನ್ನು ಒದಗಿಸುತ್ತಿದ್ದು, ಅಂದಾಜು ರೂ.1650 ಕೋಟಿ ಪಾವತಿಸಲಾಗುವುದು.

ಇದನ್ನೂ ಓದಿ: ವಾಯವ್ಯ ಕರ್ನಾಟಕ ಸಾರಿಗೆ : 1.50 ಕೋಟಿ ದಾಟಿದ ಯುಪಿಐ ವಹಿವಾಟು

ಬೆಂಗಳೂರು: 2023ನೇ ವರ್ಷವನ್ನು ಕಾರ್ಮಿಕ ಕಲ್ಯಾಣ ವರ್ಷವೆಂದು ಘೋಷಿಸಿ ಕಾರ್ಮಿಕರ ಪರ ಹಲವು ಕಾರ್ಯಕ್ರಮ ರೂಪಿಸಿದ್ದ ಕೆಎಸ್ಆರ್​ಟಿಸಿ 2024ನೇ ವರ್ಷವನ್ನು ಪ್ರಯಾಣಿಕ ಸ್ನೇಹಿ ವರ್ಷವೆಂದು ಘೋಷಿಸಿದೆ. ನಗದು ರಹಿತ ಡಿಜಿಟಲ್ ಹಣ ಪಾವತಿ ವ್ಯವಸ್ಥೆ ಪರಿಚಯ, ಪ್ರಯಾಣಿಕರ ಜೊತೆ ಸೌಜನ್ಯದ ವರ್ತನೆಗೆ ಸಿಬ್ಬಂದಿಗೆ ತರಬೇತಿ, ಬಸ್ ನಿಲ್ದಾಣಗಳ ಮೂಲಸೌಕರ್ಯಕ್ಕೆ ಆದ್ಯತೆ ಸೇರಿದಂತೆ ಹಲವು ಪ್ರಯಾಣಿಕ ಸ್ನೇಹಿ ಯೋಜನೆಗಳ ಭರವಸೆ ನೀಡಿದೆ. ಜೊತೆಗೆ ನಗದು ರಹಿತ ಸೇವೆಯನ್ನೂ ಇಲಾಖೆ ಘೋಷಿಸಿದೆ.

ಕೆಎಸ್​ಆರ್​ಟಿಸಿಯು ತನ್ನ ಗತವೈಭವದ ಪಯಣಕ್ಕೆ ಮರಳಿದ್ದು, ಈ ಪ್ರಯಾಣದ ಅವಿಭಾಜ್ಯ ಅಂಗವಾದ ನಿಗಮದ ಸಮಸ್ತ ಅಧಿಕಾರಿ/ಸಿಬ್ಬಂದಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಹೊಸ ವರುಷ 2024ರ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತಾ ಕೆಎಸ್​ಆರ್​ಟಿಸಿಯು 2024ನೇ ವರ್ಷವನ್ನು "ಪ್ರಯಾಣಿಕ ಸ್ನೇಹಿ ವರ್ಷ" ವೆಂದು ಘೋಷಣೆ ಮಾಡಿದೆ ಎಂದು ಕೆಎಸ್ಆರ್​ಟಿಸಿ ಎಂಡಿ ವಿ ಅನ್ಬುಕುಮಾರ್ ತಿಳಿಸಿದ್ದಾರೆ.

ಅಪಘಾತ ವಿಮೆ ಹೆಚ್ಚಳ: 2024ನೇ ಸಾಲಿನ ಪ್ರಯಾಣಿಕ ಸ್ನೇಹಿ ವರ್ಷದಲ್ಲಿ ನಿಗಮವು ಕೈಗೊಳ್ಳುವ ನೂತನ ಕಾರ್ಯಕ್ರಮಗಳ ಕಿರುನೋಟವನ್ನು ಇಲಾಖೆ ಪ್ರಕಟಿಸಿದ್ದು, ಇಂದಿನಿಂದ ಜಾರಿಗೆ ಬರುವಂತೆ, ಅಪಘಾತ ಪರಿಹಾರ ವಿಮಾ ಯೋಜನೆಯಡಿ ಮೃತ ಪ್ರಯಾಣಿಕರ ಅವಲಂಬಿತರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಅನ್ಬುಕುಮಾರ್ ತಿಳಿಸಿದ್ದಾರೆ.

2000 ಹೊಸ ವಾಹನಗಳು: ಪ್ರಸಕ್ತ ವರ್ಷದಲ್ಲಿ 2000 ಹೊಸ ವಾಹನಗಳ ಸೇರ್ಪಡೆ, ಅಂಬಾರಿ ಉತ್ಸವ 20, ಐರಾವತ ಕ್ಲಬ್ ಕ್ಲಾಸ್- 20, ಪಲ್ಲಕ್ಕಿ-100, ಪಾಯಿಂಟ್- ಟು-ಪಾಯಿಂಟ್ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳು 1000 ಹಾಗು 500 ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಸಲಾಗುತ್ತದೆ. ಪ್ರಸ್ತುತ ಪರಿಚಯಿಸಲಾಗಿರುವ 20 "ನಮ್ಮ ಕಾರ್ಗೋ ಟ್ರಕ್ಕುಗಳನ್ನು ವರ್ಷಾಂತ್ಯಕ್ಕೆ 500ಕ್ಕೆ ಹೆಚ್ಚಿಸಲಾಗುವುದು 1000 ವಾಹನಗಳ ಪುನಶ್ವೇತನ ಯೋಜನೆಯ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನವನ್ನು ಆಧುನೀಕರಣಗೊಳಿಸಿ, ಪ್ರಯಾಣಿಕರ ಅನುಕೂಲಕ್ಕಾಗಿ VTMS (Vehicle Tracking & Monitoring System), Mobile App, (UPI, ATM, Debit/Credit Cards, NAMC) ಕಾರ್ಡ್ ಜಾರಿ ಮೂಲಕ ನಗದ ರಹಿತ ಸೇವೆಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರಕಟಿಸಿದೆ. ಹೀಗಾಗಿ ಇನ್ಮುಂದೆ ಕೆಎಸ್ಆರ್​ಟಿಸಿ ಬಸ್​ಗಳಲ್ಲಿ ಕ್ಯಾಷ್​ಲೆಸ್ ಟ್ರಾವೆಲ್ ಮಾಡಬಹುದು. ಇದರಿಂದ ಚಿಲ್ಲರೆ ಸಮಸ್ಯೆಗೂ ಬ್ರೇಕ್ ಬೀಳಲಿದೆ.

ಶುಚಿತ್ವಕ್ಕೆ ಆದ್ಯತೆ: ಬಸ್ ನಿಲ್ದಾಣಗಳ ಶುಚಿತ್ವಕ್ಕೆ ಆದ್ಯತೆ, ಉತ್ತಮ ಕುಡಿಯುವ ನೀರಿನ ವ್ಯವಸ್ಥೆ, ಆಸನಗಳು ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದಕ್ಕೆ ಆಧ್ಯತೆ ನೀಡುವುದಾಗಿ ತಿಳಿಸಿದೆ. ಬಸ್ಸುಗಳ ಸ್ವಚ್ಛತೆ ಹಾಗೂ ಯಾಂತ್ರಿಕ ನಿರ್ವಹಣೆಗೆ ಒತ್ತು ಚಾಲನಾ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತನೆ ಸಂಬಂಧ ನುರಿತ ತರಬೇತುದಾರರಿಂದ Soft Skill Training ಹಾಗೂ ಅಪಘಾತ/ಸಂಚಾರ ನಿಯಮ ಪಾಲನೆ ಸಂಬಂಧ ನಿರಂತರ ಕಾರ್ಯಾಗಾರ ಹಮ್ಮಿಕೊಳ್ಳುವ ಭರವಸೆ ನೀಡಿದ್ದಾರೆ.

ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು/ಉಪಕ್ರಮಗಳು 2023ರ ಸಾಲಿನಲ್ಲಿ 50ಕ್ಕೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದು, ಈ ಪ್ರಶಸ್ತಿಗಳನ್ನು ನಿಗಮದ ಸಿಬ್ಬಂದಿಗಳು ಹಾಗೂ ಪ್ರಯಾಣಿಕರಿಗೆ ಸಮರ್ಪಿಸಲಾಗಿದೆ. ಸಾರಿಗೆ ಮತ್ತು ಮುಜರಾಯಿ ಸಚಿವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಸಮಸ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ಅವಿರತ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆ ಶ್ಲಾಘನೀಯ.

ತಮ್ಮಲ್ಲೆರ ಸಹಕಾರದಿಂದ ನಿಗಮವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದಿ, ಸಾರ್ವಜನಿಕರಿಗೆ ಉತ್ತಮ ಸಮಗ್ರ ಸಾರಿಗೆ ಸೌಲಭ್ಯ ನೀಡುವಂತಾಗಲೆಂದು ಆಶಿಸುತ್ತೇನೆ ಎಂದು ಕೆಎಸ್ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಶುಭ ಕೋರಿದ್ದಾರೆ.

2023 ಕಾರ್ಮಿಕ ಕಲ್ಯಾಣ ವರ್ಷದ ಹಿನ್ನೋಟ: ರೂ.1 ಕೋಟಿಗಳ On Road/ Off Road ಅಪಘಾತ ವಿಮಾ ಯೋಜನೆ. ಈ ಯೋಜನೆಯಡಿಯಲ್ಲಿ ಈಗಾಗಲೇ 12 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.1 ಕೋಟಿ ವಿಮಾ ಹಣವನ್ನು ನೀಡಲಾಗಿದೆ. ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೊತ್ತವನ್ನು 3 ರಿಂದ 5 ಪಟ್ಟು ಹೆಚ್ಚಳ ಮಾಡಿ, ಹೊಸ ಕೋರ್ಸುಗಳನ್ನು ಸೇರ್ಪಡೆಗೊಳಿಸಿ, ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದು "ವಿದ್ಯಾ ಚೇತನ ಯೋಜನೆ' ಹೆಸರಿನಲ್ಲಿ 3345 ಮಕ್ಕಳಿಗೆ ರೂ.1.67 ಕೋಟಿ ವಿದ್ಯಾರ್ಥಿ ವೇತನವನ್ನು ಪಾವತಿಸಲಾಗಿದೆ.

ತನ್ನ ಸಿಬ್ಬಂದಿಗಳ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಸದುದ್ದೇಶದಿಂದ, ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, 10 ಕ್ಕಿಂತ ಹೆಚ್ಚಿನ ಹೃದಯ ಸಂಬಂಧಿ ಪರೀಕ್ಷೆಗಾಗಿ ಪ್ರತಿ ವರ್ಷ ರೂ.2.55 ಕೋಟಿಗಳನ್ನು ಪಾವತಿಸುತ್ತಿದೆ. ಇದರಿಂದ ಸುಮಾರು 21000 ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ.

ಕಾರ್ಮಿಕರ ಕುಟುಂಬ ಕಲ್ಯಾಣ ಯೋಜನೆಯಡಿ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ನೌಕರರ ಮೇಲಿನ 10,364 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ ದಂಡ ವಿಧಿಸಿ ಮನ್ನಾ ಹಾಗೂ 10 ತಿಂಗಳುಗಿಂತ ಕಡಿಮೆ ಗೈರು ಹಾಜರಿ ಪ್ರಕರಣಗಳಲ್ಲಿ 425ಕ್ಕೂ ಹೆಚ್ಚು ಚಾಲಕರಿಗೆ ಕರ್ತವ್ಯಕ್ಕ ಮರಳಲು ಅವಕಾಶ ನೀಡಲಾಗಿದೆ.

ಕೇಂದ್ರ ಕಚೇರಿಯ ಮಟ್ಟದಲ್ಲಿ ವ್ಯವಸ್ಥಾಪಕ ನಿರ್ದೇಶಕರು/ನಿರ್ದೇಶಕರು (ಸಿ&ಜಾ)ರವರು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ ಪರಿಹಾರವನ್ನು ಒದಗಿಸುತ್ತಿದ್ದಾರೆ. ವಿಭಾಗ/ಘಟಕ ಮಟ್ಟದಲ್ಲಿ ಕಾಲಕಾಲಕ್ಕೆ ಸಿಬ್ಬಂದಿಗಳ ಕುಂದು ಕೊರತೆ ಸಭೆಯನ್ನು ಆಯೋಜಿಸಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತಿದೆ. ನಿಗಮಗಳಿಗೆ ಸ್ನಾಯತ್ತತೆ ನೀಡಲಾಗಿದ್ದು, (Autonomous) ಅಧಿಕಾರಿಗಳು/ಸಿಬ್ಬಂದಿಗಳನ್ನು ಆಯಾಯ ನಿಗಮಗಳಿಗೆ ವರ್ಗಾಯಿಸಿ ಅನುಕೂಲ ಕಲ್ಪಿಸಲಾಗಿದೆ.

ಅಂತರ ವಿಭಾಗ/ ಘಟಕಗಳಿಗೆ 900ಕ್ಕೂ ಹೆಚ್ಚು ನೌಕರರಿಗೆ ವರ್ಗಾವಣೆ ನೀಡಲಾಗಿದೆ. ಚಾಲಕರಲ್ಲಿ ಸುರಕ್ಷತಾ ಚಾಲನೆಯನ್ನು ಹವ್ಯಾಸವಾಗಿಸುವ ನಿಟ್ಟಿನಲ್ಲಿ, ಅಪಘಾತ ರಹಿತ ಚಾಲನೆಯ ಕುರಿತು ಕಾರ್ಯಾಗಾರ/ಉಪನ್ಯಾಸಗಳ ಆಯೋಜನೆ ಹಾಗೂ 65ಹೊಸ ಬೊಲೆರೋ ಜೀಪುಗಳನ್ನು ವಿಭಾಗಗಳಿಗೆ ನೀಡಿದ್ದು, ಅಪಘಾತ ಸ್ಥಳಗಳಿಗೆ ತ್ವರಿತವಾಗಿ ತೆರಳಲು ಹಾಗೂ ಮುಂಜಾಗ್ರತಾ ಕ್ರಮವಹಿಸಲಾಗಿದೆ.

ನಿಗಮದ ಅರ್ಹ ನೌಕರರಿಗೆ Higher Pension ಸೌಲಭ್ಯವನ್ನು ಒದಗಿಸುತ್ತಿದ್ದು, ಅಂದಾಜು ರೂ.1650 ಕೋಟಿ ಪಾವತಿಸಲಾಗುವುದು.

ಇದನ್ನೂ ಓದಿ: ವಾಯವ್ಯ ಕರ್ನಾಟಕ ಸಾರಿಗೆ : 1.50 ಕೋಟಿ ದಾಟಿದ ಯುಪಿಐ ವಹಿವಾಟು

Last Updated : Jan 1, 2024, 3:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.