ETV Bharat / state

ನನ್ನ ಮೇಲೆ ನಡೆದಿರುವ ಹಲ್ಲೆ ಉದ್ದೇಶ ಪೂರ್ವಕ ಅನ್ನಿಸುತ್ತಿದೆ : ಕೋಮಲ್​​

author img

By

Published : Aug 14, 2019, 3:21 AM IST

ನನ್ನ ಮೇಲೆ ಹಲ್ಲೆ ಮಾಡಿರುವುದನ್ನು ಗಮನಿಸಿದರೆ ಅದು ಉದ್ದೇಶ ಪೂರ್ವ ಅನಿಸುತ್ತದೆ ಎಂದು ನಟ ಕೋಮಲ್​ ಪ್ರತಿಕ್ರಿಯೆ ನೀಡಿದ್ದಾರೆ.

ಕೋಮಲ್​ ಕುಮಾರ್

ಬೆಂಗಳೂರು : ನಿನ್ನೆ ಸಾಯಂಕಾಲ ನಡೆದ ಹಲ್ಲೆ ಬಗ್ಗೆ ಕೋಮಲ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯನ್ನು ನೋಡಿದರೆ ಇದು ಉದ್ದೇಶಪೂರ್ವಕವಾಗಿಯೇ ನಡೆದಿರುವ ಹಲ್ಲೆ ಎಂದು ಕೋಮಲ್​ ಅನುಮಾನ ವ್ಯಕ್ತಪಡಿಸಿದ್ದಾರೆ.

ನನ್ನ ಮೇಲೆ ನಡೆದಿರುವ ಹಲ್ಲೆ ಉದ್ದೇಶ ಪೂರ್ವಕ ಅನ್ನಿಸುತ್ತಿದೆ : ಕೋಮಲ್​​

ಕೆಂಪೇಗೌಡ ಸಿನಿಮಾದಿಂದ ಈ ಘಟನೆ ನಡೆದಿದೆಯಾ ಎಂದು ಸುದ್ದಿಗಾರರರು ಕೋಮಲ್​ರನ್ನ ಕೇಳಿದಾಗ, ಈ ಸಂದರ್ಭದಲ್ಲಿ ನಾನು ಸಿನಿಮಾ ಬಗ್ಗೆ ಮಾತನಾಡುವುದಿಲ್ಲ ಎಂದು ಉತ್ತರಿಸಿದ್ದಾರೆ.

ಘಟನೆ ಏನು..?

ಸ್ಯಾಂಡಲ್​ವುಡ್ ನಟ ಕೋಮಲ್ ಕುಮಾರ್ ಮೇಲೆ ನಿನ್ನೆ ಸಾಯಂಕಾಲ ಶ್ರೀರಾಂಪುರ ರೈಲ್ವೆ ಅಂಡರ್ ಪಾಸ್ ಬಳಿ ವಿಜಯ್ ಎಂಬ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಕೋಮಲ್ ಕಾರು ವ್ಯಕ್ತಿ ಬೈಕ್​ಗೆ ಟಚ್ ಆಯಿತು ಎಂಬ ಕಾರಣಕ್ಕೆ, ಕೋಮಲ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಕೋಮಲ್​ ತನ್ನ ಮಗಳನ್ನು ಟ್ಯೂಷನ್​ಗೆ ಬಿಟ್ಟು ಬರುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಕೋಮಲ್​ ಹೇಳಿದ್ದಾರೆ. ರಸ್ತೆಯಲ್ಲಿ ಗಾಡಿ ಚಲಾಯಿಸುವ ವೇಳೆ ನಾಲ್ಕು ಜನ ಪೊರ್ಕಿಗಳು ಸೈಡ್ ಬಿಡಲಿಲ್ಲ ಅಂತ ವಿನಾಕಾರಣ ಜಗಳ ತೆಗೆದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ ಅವರ್ಯಾರೂ ನನಗೆ ಗೊತ್ತಿಲ್ಲ. ನನ್ನ ತಾಯಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಕ್ಕೆ ನಾನು ಕಾರಿನಿಂದ ಇಳಿದೆ. ಆ ಸಂದರ್ಭದಲ್ಲಿ ನನ್ನ ಮೇಲೆ ಹಲ್ಲೆಯಾಯಿತು ಎಂದು ಹೇಳಿದ್ದಾರೆ.

ಬೆಂಗಳೂರು : ನಿನ್ನೆ ಸಾಯಂಕಾಲ ನಡೆದ ಹಲ್ಲೆ ಬಗ್ಗೆ ಕೋಮಲ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯನ್ನು ನೋಡಿದರೆ ಇದು ಉದ್ದೇಶಪೂರ್ವಕವಾಗಿಯೇ ನಡೆದಿರುವ ಹಲ್ಲೆ ಎಂದು ಕೋಮಲ್​ ಅನುಮಾನ ವ್ಯಕ್ತಪಡಿಸಿದ್ದಾರೆ.

ನನ್ನ ಮೇಲೆ ನಡೆದಿರುವ ಹಲ್ಲೆ ಉದ್ದೇಶ ಪೂರ್ವಕ ಅನ್ನಿಸುತ್ತಿದೆ : ಕೋಮಲ್​​

ಕೆಂಪೇಗೌಡ ಸಿನಿಮಾದಿಂದ ಈ ಘಟನೆ ನಡೆದಿದೆಯಾ ಎಂದು ಸುದ್ದಿಗಾರರರು ಕೋಮಲ್​ರನ್ನ ಕೇಳಿದಾಗ, ಈ ಸಂದರ್ಭದಲ್ಲಿ ನಾನು ಸಿನಿಮಾ ಬಗ್ಗೆ ಮಾತನಾಡುವುದಿಲ್ಲ ಎಂದು ಉತ್ತರಿಸಿದ್ದಾರೆ.

ಘಟನೆ ಏನು..?

ಸ್ಯಾಂಡಲ್​ವುಡ್ ನಟ ಕೋಮಲ್ ಕುಮಾರ್ ಮೇಲೆ ನಿನ್ನೆ ಸಾಯಂಕಾಲ ಶ್ರೀರಾಂಪುರ ರೈಲ್ವೆ ಅಂಡರ್ ಪಾಸ್ ಬಳಿ ವಿಜಯ್ ಎಂಬ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಕೋಮಲ್ ಕಾರು ವ್ಯಕ್ತಿ ಬೈಕ್​ಗೆ ಟಚ್ ಆಯಿತು ಎಂಬ ಕಾರಣಕ್ಕೆ, ಕೋಮಲ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಕೋಮಲ್​ ತನ್ನ ಮಗಳನ್ನು ಟ್ಯೂಷನ್​ಗೆ ಬಿಟ್ಟು ಬರುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಕೋಮಲ್​ ಹೇಳಿದ್ದಾರೆ. ರಸ್ತೆಯಲ್ಲಿ ಗಾಡಿ ಚಲಾಯಿಸುವ ವೇಳೆ ನಾಲ್ಕು ಜನ ಪೊರ್ಕಿಗಳು ಸೈಡ್ ಬಿಡಲಿಲ್ಲ ಅಂತ ವಿನಾಕಾರಣ ಜಗಳ ತೆಗೆದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ ಅವರ್ಯಾರೂ ನನಗೆ ಗೊತ್ತಿಲ್ಲ. ನನ್ನ ತಾಯಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಕ್ಕೆ ನಾನು ಕಾರಿನಿಂದ ಇಳಿದೆ. ಆ ಸಂದರ್ಭದಲ್ಲಿ ನನ್ನ ಮೇಲೆ ಹಲ್ಲೆಯಾಯಿತು ಎಂದು ಹೇಳಿದ್ದಾರೆ.

Intro:ಸ್ಯಾಂಡಲ್ವುಡ್ ನಟ ಕೋಮಲ್ ಕುಮಾರ್ ಮೇಲೆ ಇಂದು ಸಾಯಂಕಾಲ ಶ್ರೀರಾಂಪುರ ರೈಲ್ವೆ ಅಂಡರ್ ಪಾಸ್ ಬಳಿ ವಿಜಯ್ ಎಂಬ ಅಪರಿಚಿತ ವ್ಯಕ್ತಿ ಕೋಮಲ್ ಅವರ ಕಾರು ಬಕೆಟ್ ಟಚ್ ಆಯಿತು ಎಂಬ ಕಾರಣಕ್ಕೆ, ಕೋಮಲ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಕೋಮಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು . ನಾನು ನನ್ನ ಮಗಳನ್ನು ಟ್ಯೂಷನ್ಗೆ ಬಿಟ್ಟು ಬರುತ್ತಿದೆ ಆ ಸಮಯದಲ್ಲಿ ಈ ಅನಾಹುತವಾಗಿದೆ. ರಸ್ತೆಯಲ್ಲಿ ಗಾಡಿ ಚಲಾಯಿಸುವ ವೇಳೆ ನಾಲ್ಕು ಜನ ಪೊರ್ಕಿ ಗಳು ಸೈಡ್ ಬಿಡಲಿಲ್ಲ ಅಂತ ವಿನಾಕಾರಣ ಜಗಳ ತೆಗೆದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನು ಅವರ್ಯಾರು ಎಂಬುದು ನನಗೆ ಗೊತ್ತಿಲ್ಲ. ನನ್ನ ತಾಯಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹಾಗಾಗಿ ನಾನು ಕಾರಿನಿಂದ ಇಳಿದೆ. ಆಗ ಏಕಾಏಕಿ ಆ ವ್ಯಕ್ತಿ ನನ್ನ ಮೇಲೆ ಹಲ್ಲೆ ನಡೆಸಿದ. ಅಲ್ಲದೆ ಸ್ಥಳದಲ್ಲಿ ಸಾರ್ವಜನಿಕರು ನನ್ನನ್ನು ತಡೆದು ಸ್ಟೇಷನ್ ಗೆ ಕರೆದುಕೊಂಡು ಬಂದರು. ಎಂದು ಕೋಮಲ್ ತಿಳಿಸಿದರು.


Body:ಆದರೆ ಇಂತಹ ಘಟನೆ ಈ ಮುಂಚೆ ನನಗೆ ಆಗಿರಲಿಲ್ಲ. ಸದ್ಯ ನಾನು ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದರು. ಇನ್ನೂ ಕೆಂಪೆಗೌಡ 2 ಚಿತ್ರದ ವಿಚಾರಕ್ಕಾಗಿ ಏನಾದರೂ ಈ ರೀತಿ ಆಗಿರಬಹುದು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೋಮಲ್ ಇಂತಹ ಸಮಯದಲ್ಲಿ ಸಿನಿಮಾ ಬಗ್ಗೆ ಮಾತನಾಡುವುದು ನಾನು ಇಷ್ಟಪಡುವುದಿಲ್ಲ. ಆದರೆ ನಾನು ರಸ್ತೆಯಲ್ಲಿ ಹೋಗುವಾಗ ಏಕಾಏಕಿ ಈ ರೀತಿ ನನ್ನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವುದನ್ನು ಗಮನಿಸಿದರೆ ಉದ್ದೇಶಪೂರ್ವಕವಾಗಿಯೇ ನನ್ನ ಮೇಲೆ ದಾಳಿ ಮಾಡಿದ್ದಾರೆ ಎಂಬ ಅನುಮಾನ ಮೂಡುತ್ತದೆ ಎಂದು ನಟ ಕೋಮಲ್ ಕುಮಾರ್ ತಿಳಿಸಿದರು.

ಸತೀಶ ಎಂಬಿ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.