ETV Bharat / state

ಬೆಂಗಳೂರು ಪ್ರವಾಹ ತಡೆಯಲು ಒಳಚರಂಡಿ ಕುರಿತ ಮಾಸ್ಟರ್‌ಪ್ಲಾನ್​ ಅಗತ್ಯ: ನೈಟ್ ಫ್ರಾಂಕ್ ಇಂಡಿಯಾ

ನಗರ ಪ್ರವಾಹವನ್ನು ತಡೆಯುವ ಮತ್ತು ನಗರದ ಒಳಚರಂಡಿ ವ್ಯವಸ್ಥೆ ಕುರಿತ ಸಮಗ್ರ ವರದಿಯೊಂದನ್ನು ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿದೆ

author img

By

Published : May 31, 2023, 10:32 PM IST

knight-frank-india-released-a-comprehensive-report-on-drainage-system
ಬೆಂಗಳೂರು ಪ್ರವಾಹವನ್ನು ತಡೆಯಲು ಒಳಚರಂಡಿಯ ಕುರಿತ ಮಾಸ್ಟರ್‌ಪ್ಲಾನ್ ಮತ್ತು ಪರಿಹಾರ ಕ್ರಮ ಅಗತ್ಯ: ನೈಟ್ ಫ್ರಾಂಕ್ ಇಂಡಿಯಾ

ಬೆಂಗಳೂರು: ನಗರ ಪ್ರವಾಹವನ್ನು ತಡೆಯುವ ಮತ್ತು ನಗರದ ಒಳಚರಂಡಿ ವ್ಯವಸ್ಥೆ ಕುರಿತ ಸಮಗ್ರ ವರದಿಯೊಂದನ್ನು ಇಂದು ಪ್ರಮುಖ ಅಂತಾರಾಷ್ಟ್ರೀಯ ಸಲಹಾ ಸಂಸ್ಥೆಯಾದ ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ತನ್ನ ಕಚೇರಿಯಲ್ಲಿ ಬಿಡುಗಡೆ ಮಾಡಿದೆ.

ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದ್ವಿಗುಣಗೊಂಡಿದೆ ಮತ್ತು ಮುಂದಿನ ದಶಕದಲ್ಲಿ 18 ಮಿಲಿಯನ್ ತಲುಪುವ ಸಾಧ್ಯತೆಯಿದೆ. ಜನಸಂಖ್ಯೆ ಒಳಹರಿವನ್ನು ನೀಗಿಸಲು ಸಾಧ್ಯವಾಗುವಂತೆ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ. ಜನಸಂಖ್ಯೆಯ ಬೆಳವಣಿಗೆಯಿಂದಾಗಿ, ನಗರದ ಭೂ ಬಳಕೆಯ ಕ್ರಿಯೆಗಳು ಗಮನಾರ್ಹವಾಗಿ ಬದಲಾಗಿದೆ. ನಗರದ ಕಟ್ಟಡ ಪ್ರದೇಶದ ಪಾಲು 2002 ರಲ್ಲಿ 37.4% ಇತ್ತು ಇದು 2020 ರಲ್ಲಿ 93.3% ಕ್ಕೆ ಏರಿಕೆಯಾಗಿದೆ ಎಂದು ನೈಟ್ ಫ್ರಾಂಕ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಶಾಂತನು ಮಜುಂದಾರ್ ಈ ಸಂದರ್ಭದಲ್ಲಿ ಹೇಳಿದರು.

ತ್ವರಿತ ಮತ್ತು ಯೋಜಿತವಲ್ಲದ ಅಭಿವೃದ್ಧಿಯ ಪರಿಣಾಮವಾಗಿ, ಬೆಂಗಳೂರಿನ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ಮೂಲಸೌಕರ್ಯ, ವಿಶೇಷವಾಗಿ ಮಳೆ ನೀರು ಒಳಚರಂಡಿ ವ್ಯವಸ್ಥೆಯು ತೀವ್ರ ಒತ್ತಡಕ್ಕೆ ಒಳಗಾಗಿದೆ. ಪ್ರಾಥಮಿಕವಾಗಿ, ಸರೋವರಗಳು ಮತ್ತು ಮಳೆನೀರಿನ ಚರಂಡಿಗಳಂತಹ ಜಲಮೂಲಗಳ ನಡುವಿನ ಪರಸ್ಪರ ಸಂಪರ್ಕವು ತೀವ್ರವಾಗಿ ಪ್ರಭಾವಿತವಾಗಿದೆ. ಭಾರಿ ಮಳೆಯ ಸಂದರ್ಭದಲ್ಲಿ ಪುನರಾವರ್ತಿತ ಪ್ರವಾಹಕ್ಕೆ ಕಾರಣವಾಗಿದೆ ಎಂದು ಹೇಳಿದರು.

ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆಯ ಮಾತೊಬ್ಬ ನಿರ್ದೇಶಕ ರಾಜೀವ್ ವಿಜಯ್ ಆನ್ಲೈನ್ ಮೂಲಕ ನೆರೆದಿದ್ದ ಪತ್ರಕರ್ತರನ್ನು ಉದ್ದೇಶಸಿ ಮಾತನಾಡಿ ಬೆಂಗಳೂರಿನ ಮೂಲ ಸೌಕರ್ಯಗಳನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ವರದಿಯು ಸೂಕ್ತವಾಗಿ ಎತ್ತಿ ತೋರಿಸುತ್ತದೆ. ನಗರದ ರಾಜಕಾಲುವೆಗಳು ಕುರಿತು ಹಾಗೂ ಸಮಗ್ರ ಮಳೆ ನೀರಿನ ಮಾಸ್ಟರ್ ಪ್ಲಾನ್ ಅನ್ನು ಅಭಿವೃದ್ಧಿಪಡಿಸುವುದು ಮತ್ತು ಪರ್ಯಾಯ ಪ್ರವಾಹ ನಿಯಂತ್ರಣ ತಂತ್ರಗಳನ್ನು ಅಳವಡಿಸಿಕೊಳ್ಳುವುದಕ್ಕೆ ನಿರ್ಣಾಯಕ ಹಂತಗಳಿವೆ. ಈ ವರದಿಯು ಮಳೆ ನೀರಿನ ಒಳಚರಂಡಿ ವ್ಯವಸ್ಥೆಯ ಪ್ರಸ್ತುತ ಸ್ಥಿತಿಯನ್ನು ವಿವರಿಸಿದೆ. ನಗರದ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು, ಸುಧಾರಣೆ ಮತ್ತು ವಿಸ್ತರಣೆಯ ಕುರಿತು ಪ್ರಸ್ತಾಪಿಸುತ್ತದೆ ಎಂದರು.

ಪರ್ಯಾಯ ಪ್ರವಾಹ ನಿಯಂತ್ರಣ ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಮಳೆ ನೀರನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಗರದ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಈ ಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಮತ್ತು ಮಳೆನೀರಿನ ಮಾಸ್ಟರ್ ಪ್ಲಾನ್‌ ಅನ್ನು ಸಂಯೋಜಿಸುವ ಮೂಲಕ ನಗರದ ಪ್ರವಾಹದ ಅಪಾಯ ತಗ್ಗಿಸಬಹುದಾಗಿದೆ. ಸಾಮಾಜಿಕ ಮತ್ತು ಆರ್ಥಿಕ ನಷ್ಟಗಳನ್ನು ಕಡಿಮೆ ಮಾಡಬಹುದಾಗಿದೆ. ನಗರದ ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಸಾಮರಸ್ಯದಿಂದ ಕೂಡಿದ ನಗರ ಪರಿಸರವನ್ನು ಸೃಷ್ಟಿಸಲು ನಗರದ ಆರ್ಥಿಕ ಬೆಳವಣಿಗೆಯ ಜೊತೆಗೆ ಮೂಲಸೌಕರ್ಯ ಕ್ಷೇತ್ರದ ಹೂಡಿಕೆಗೆ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಕರ್ನಾಟಕ ಮತ್ತು ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿದೆ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿ ಮುಂದುವರಿಯುತ್ತದೆ. 2031ರ ವೇಳೆಗೆ ನಗರದ ಜನಸಂಖ್ಯೆಯು 18 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಜನಸಂಖ್ಯೆಯ ಬೆಳವಣಿಗೆಗೆ ಪೂರಕವಾಗಿ ಮತ್ತು ಅದನ್ನು ಸರಿಹೊಂದಿಸಲು, ನಗರದಲ್ಲಿನ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯಗಳು ಅಭಿವೃದ್ಧಿ ಹೊಂದುವುದು ಅತ್ಯಗತ್ಯವಾಗಿದೆ. ಒಟ್ಟಿನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವು ಬೆಂಗಳೂರಿನ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಿದ ಕ್ಷೇತ್ರವಾಗಿದೆ. ನಗರದ ಆರ್ಥಿಕ ಬೆಳವಣಿಗೆಗೆ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಅನಿವಾರ್ಯವಾಗಿದೆ ಎಂದು ತಿಳಿಸಿದರು. ವರದಿ ಬಿಡುಗಡೆ ಮತ್ತು ಪತ್ರಿಕಾಗೋಷ್ಠಿಯಲ್ಲಿ ನೈಟ್ ಫ್ರಾಂಕ್ ಇಂಡಿಯಾದ ಕನ್ಸಲ್ಟೆಂಟ್ ರಿಸರ್ಚ್ ಲೀಡ್ ಶಿಲ್ಪಾ ಶ್ರೀ ಉಪಸ್ಥಿತರಿದ್ದರು.

ಇದನ್ನೂ ಓದಿ:ವಿದ್ಯಾರ್ಥಿ ಪಾಸ್ ವಿತರಣೆ ವಿಳಂಬ: ಶುಲ್ಕ ಪಾವತಿಸಿದ ರಸೀದಿ ತೋರಿಸಿ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ..

ಬೆಂಗಳೂರು: ನಗರ ಪ್ರವಾಹವನ್ನು ತಡೆಯುವ ಮತ್ತು ನಗರದ ಒಳಚರಂಡಿ ವ್ಯವಸ್ಥೆ ಕುರಿತ ಸಮಗ್ರ ವರದಿಯೊಂದನ್ನು ಇಂದು ಪ್ರಮುಖ ಅಂತಾರಾಷ್ಟ್ರೀಯ ಸಲಹಾ ಸಂಸ್ಥೆಯಾದ ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ತನ್ನ ಕಚೇರಿಯಲ್ಲಿ ಬಿಡುಗಡೆ ಮಾಡಿದೆ.

ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದ್ವಿಗುಣಗೊಂಡಿದೆ ಮತ್ತು ಮುಂದಿನ ದಶಕದಲ್ಲಿ 18 ಮಿಲಿಯನ್ ತಲುಪುವ ಸಾಧ್ಯತೆಯಿದೆ. ಜನಸಂಖ್ಯೆ ಒಳಹರಿವನ್ನು ನೀಗಿಸಲು ಸಾಧ್ಯವಾಗುವಂತೆ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ. ಜನಸಂಖ್ಯೆಯ ಬೆಳವಣಿಗೆಯಿಂದಾಗಿ, ನಗರದ ಭೂ ಬಳಕೆಯ ಕ್ರಿಯೆಗಳು ಗಮನಾರ್ಹವಾಗಿ ಬದಲಾಗಿದೆ. ನಗರದ ಕಟ್ಟಡ ಪ್ರದೇಶದ ಪಾಲು 2002 ರಲ್ಲಿ 37.4% ಇತ್ತು ಇದು 2020 ರಲ್ಲಿ 93.3% ಕ್ಕೆ ಏರಿಕೆಯಾಗಿದೆ ಎಂದು ನೈಟ್ ಫ್ರಾಂಕ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಶಾಂತನು ಮಜುಂದಾರ್ ಈ ಸಂದರ್ಭದಲ್ಲಿ ಹೇಳಿದರು.

ತ್ವರಿತ ಮತ್ತು ಯೋಜಿತವಲ್ಲದ ಅಭಿವೃದ್ಧಿಯ ಪರಿಣಾಮವಾಗಿ, ಬೆಂಗಳೂರಿನ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ಮೂಲಸೌಕರ್ಯ, ವಿಶೇಷವಾಗಿ ಮಳೆ ನೀರು ಒಳಚರಂಡಿ ವ್ಯವಸ್ಥೆಯು ತೀವ್ರ ಒತ್ತಡಕ್ಕೆ ಒಳಗಾಗಿದೆ. ಪ್ರಾಥಮಿಕವಾಗಿ, ಸರೋವರಗಳು ಮತ್ತು ಮಳೆನೀರಿನ ಚರಂಡಿಗಳಂತಹ ಜಲಮೂಲಗಳ ನಡುವಿನ ಪರಸ್ಪರ ಸಂಪರ್ಕವು ತೀವ್ರವಾಗಿ ಪ್ರಭಾವಿತವಾಗಿದೆ. ಭಾರಿ ಮಳೆಯ ಸಂದರ್ಭದಲ್ಲಿ ಪುನರಾವರ್ತಿತ ಪ್ರವಾಹಕ್ಕೆ ಕಾರಣವಾಗಿದೆ ಎಂದು ಹೇಳಿದರು.

ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆಯ ಮಾತೊಬ್ಬ ನಿರ್ದೇಶಕ ರಾಜೀವ್ ವಿಜಯ್ ಆನ್ಲೈನ್ ಮೂಲಕ ನೆರೆದಿದ್ದ ಪತ್ರಕರ್ತರನ್ನು ಉದ್ದೇಶಸಿ ಮಾತನಾಡಿ ಬೆಂಗಳೂರಿನ ಮೂಲ ಸೌಕರ್ಯಗಳನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ವರದಿಯು ಸೂಕ್ತವಾಗಿ ಎತ್ತಿ ತೋರಿಸುತ್ತದೆ. ನಗರದ ರಾಜಕಾಲುವೆಗಳು ಕುರಿತು ಹಾಗೂ ಸಮಗ್ರ ಮಳೆ ನೀರಿನ ಮಾಸ್ಟರ್ ಪ್ಲಾನ್ ಅನ್ನು ಅಭಿವೃದ್ಧಿಪಡಿಸುವುದು ಮತ್ತು ಪರ್ಯಾಯ ಪ್ರವಾಹ ನಿಯಂತ್ರಣ ತಂತ್ರಗಳನ್ನು ಅಳವಡಿಸಿಕೊಳ್ಳುವುದಕ್ಕೆ ನಿರ್ಣಾಯಕ ಹಂತಗಳಿವೆ. ಈ ವರದಿಯು ಮಳೆ ನೀರಿನ ಒಳಚರಂಡಿ ವ್ಯವಸ್ಥೆಯ ಪ್ರಸ್ತುತ ಸ್ಥಿತಿಯನ್ನು ವಿವರಿಸಿದೆ. ನಗರದ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು, ಸುಧಾರಣೆ ಮತ್ತು ವಿಸ್ತರಣೆಯ ಕುರಿತು ಪ್ರಸ್ತಾಪಿಸುತ್ತದೆ ಎಂದರು.

ಪರ್ಯಾಯ ಪ್ರವಾಹ ನಿಯಂತ್ರಣ ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಮಳೆ ನೀರನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಗರದ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಈ ಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಮತ್ತು ಮಳೆನೀರಿನ ಮಾಸ್ಟರ್ ಪ್ಲಾನ್‌ ಅನ್ನು ಸಂಯೋಜಿಸುವ ಮೂಲಕ ನಗರದ ಪ್ರವಾಹದ ಅಪಾಯ ತಗ್ಗಿಸಬಹುದಾಗಿದೆ. ಸಾಮಾಜಿಕ ಮತ್ತು ಆರ್ಥಿಕ ನಷ್ಟಗಳನ್ನು ಕಡಿಮೆ ಮಾಡಬಹುದಾಗಿದೆ. ನಗರದ ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಸಾಮರಸ್ಯದಿಂದ ಕೂಡಿದ ನಗರ ಪರಿಸರವನ್ನು ಸೃಷ್ಟಿಸಲು ನಗರದ ಆರ್ಥಿಕ ಬೆಳವಣಿಗೆಯ ಜೊತೆಗೆ ಮೂಲಸೌಕರ್ಯ ಕ್ಷೇತ್ರದ ಹೂಡಿಕೆಗೆ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಕರ್ನಾಟಕ ಮತ್ತು ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿದೆ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿ ಮುಂದುವರಿಯುತ್ತದೆ. 2031ರ ವೇಳೆಗೆ ನಗರದ ಜನಸಂಖ್ಯೆಯು 18 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಜನಸಂಖ್ಯೆಯ ಬೆಳವಣಿಗೆಗೆ ಪೂರಕವಾಗಿ ಮತ್ತು ಅದನ್ನು ಸರಿಹೊಂದಿಸಲು, ನಗರದಲ್ಲಿನ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯಗಳು ಅಭಿವೃದ್ಧಿ ಹೊಂದುವುದು ಅತ್ಯಗತ್ಯವಾಗಿದೆ. ಒಟ್ಟಿನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವು ಬೆಂಗಳೂರಿನ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಿದ ಕ್ಷೇತ್ರವಾಗಿದೆ. ನಗರದ ಆರ್ಥಿಕ ಬೆಳವಣಿಗೆಗೆ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಅನಿವಾರ್ಯವಾಗಿದೆ ಎಂದು ತಿಳಿಸಿದರು. ವರದಿ ಬಿಡುಗಡೆ ಮತ್ತು ಪತ್ರಿಕಾಗೋಷ್ಠಿಯಲ್ಲಿ ನೈಟ್ ಫ್ರಾಂಕ್ ಇಂಡಿಯಾದ ಕನ್ಸಲ್ಟೆಂಟ್ ರಿಸರ್ಚ್ ಲೀಡ್ ಶಿಲ್ಪಾ ಶ್ರೀ ಉಪಸ್ಥಿತರಿದ್ದರು.

ಇದನ್ನೂ ಓದಿ:ವಿದ್ಯಾರ್ಥಿ ಪಾಸ್ ವಿತರಣೆ ವಿಳಂಬ: ಶುಲ್ಕ ಪಾವತಿಸಿದ ರಸೀದಿ ತೋರಿಸಿ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.