ETV Bharat / state

ಮೈತ್ರೇಯಿ ಯೋಜನೆ; ಅರ್ಚಕರನ್ನು ಮದುವೆಯಾಗುವ ಬ್ರಾಹ್ಮಣ ವಧುಗಳಿಗೆ ಸಿಗಲಿದೆ 3 ಲಕ್ಷ ರೂ!

ಅರುಂಧತಿ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಧುಗಳಿಗೆ 25 ಸಾವಿರ ರೂ. ನೀಡಲಿದ್ದು, ಮೈತ್ರೇಯಿ ಯೋಜನೆಯಲ್ಲಿ ಅರ್ಚಕರನ್ನು ಮದುವೆಯಾಗುವ ಬ್ರಾಹ್ಮಣ ಮಹಿಳೆಯರಿಗೆ 3 ಲಕ್ಷ ರೂ. ನೀಡಲಿದೆ.

author img

By

Published : Jan 9, 2021, 9:51 AM IST

marriage
marriage

ಬೆಂಗಳೂರು: ಕಳೆದ ವರ್ಷ ಯಡಿಯೂರಪ್ಪನವರ ಸರ್ಕಾರ ಸ್ಥಾಪಿಸಿದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಆರ್ಥಿಕವಾಗಿ ಹಿಂದುಳಿದ ವಧುಗಳಿಗೆ ವಿತ್ತೀಯ ಲಾಭಗಳನ್ನು ಒದಗಿಸಲು 'ಅರುಂಧತಿ' ಮತ್ತು 'ಮೈತ್ರೇಯಿ' ಎಂಬ ಎರಡು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ.

ಅರುಂಧತಿ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಧುಗಳಿಗೆ 25 ಸಾವಿರ ರೂ. ನೀಡಲಿದ್ದು, ಮೈತ್ರೇಯಿ ಯೋಜನೆಯಲ್ಲಿ ಅರ್ಚಕರನ್ನು ಮದುವೆಯಾಗುವ ಬ್ರಾಹ್ಮಣ ಮಹಿಳೆಯರಿಗೆ 3 ಲಕ್ಷ ರೂ. ನೀಡಲಿದೆ.

"ಅರುಂಧತಿ ಮತ್ತು ಮೈತ್ರೇಯಿ ಯೋಜನೆಗಳನ್ನು ಪ್ರಾರಂಭಿಸಲು ನಾವು ಅನುಮೋದನೆ ಪಡೆದಿದ್ದೇವೆ ಮತ್ತು ಹಣವನ್ನು ನಿಗದಿಪಡಿಸಲಾಗಿದೆ. ಈ ಹಣವನ್ನು ಪಡೆಯಲು ನಾವು ಕಾರ್ಯವಿಧಾನಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿದ್ದೇವೆ. ಸಮುದಾಯದ ದುರ್ಬಲ ವರ್ಗಗಳಿಗೆ ಸಹಾಯ ಮಾಡುವ ನಮ್ಮ ಪ್ರಯತ್ನಗಳ ಭಾಗ ಇದು" ಎಂದು ಮಂಡಳಿಯ ಅಧ್ಯಕ್ಷ ಎಚ್‌.ಎಸ್. ಸಚ್ಚಿದಾನಂದ ಮೂರ್ತಿ ತಿಳಿಸಿದ್ದಾರೆ.

ಈ ಹಣವನ್ನು 3 ಕಂತುಗಳಲ್ಲಿ ಠೇವಣಿ ಇಡಲಾಗುವುದು ಮತ್ತು ನಾಲ್ಕನೇ ವರ್ಷ, ಮದುವೆ ನಾಲ್ಕು ವರ್ಷಗಳ ಕಾಲ ಮುಂದುವರಿದರೆ ಮಹಿಳೆಯರಿಗೆ ಬಡ್ಡಿಯೊಂದಿಗೆ ಹಣ ಸಿಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಯೋಜನಗಳನ್ನು ಪಡೆಯಲು ಅರ್ಜಿದಾರರು ಐದು ಅಥವಾ ಅದಕ್ಕಿಂತ ಹೆಚ್ಚು ಎಕರೆ ಕೃಷಿ ಭೂಮಿಯನ್ನು ಹೊಂದಿರಬಾರದು, 1,000 ಚದರ ಅಡಿಗಿಂತ ಹೆಚ್ಚು ಇರುವ ವಸತಿ ಫ್ಲಾಟ್ ಇರಬಾರದು, ಅವರು ಹಿಂದುಳಿದ ವರ್ಗ ಅಥವಾ ಪರಿಶಿಷ್ಟ ಜಾತಿಗಳಿಗೆ ಸೇರಿರಬಾರದು ಮತ್ತು ಕುಟುಂಬದ ಆದಾಯ ವಾರ್ಷಿಕ 8 ಲಕ್ಷ ರೂ.ಗಿಂತ ಕಡಿಮೆಯಿರಬೇಕು.

ಬೆಂಗಳೂರು: ಕಳೆದ ವರ್ಷ ಯಡಿಯೂರಪ್ಪನವರ ಸರ್ಕಾರ ಸ್ಥಾಪಿಸಿದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಆರ್ಥಿಕವಾಗಿ ಹಿಂದುಳಿದ ವಧುಗಳಿಗೆ ವಿತ್ತೀಯ ಲಾಭಗಳನ್ನು ಒದಗಿಸಲು 'ಅರುಂಧತಿ' ಮತ್ತು 'ಮೈತ್ರೇಯಿ' ಎಂಬ ಎರಡು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ.

ಅರುಂಧತಿ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಧುಗಳಿಗೆ 25 ಸಾವಿರ ರೂ. ನೀಡಲಿದ್ದು, ಮೈತ್ರೇಯಿ ಯೋಜನೆಯಲ್ಲಿ ಅರ್ಚಕರನ್ನು ಮದುವೆಯಾಗುವ ಬ್ರಾಹ್ಮಣ ಮಹಿಳೆಯರಿಗೆ 3 ಲಕ್ಷ ರೂ. ನೀಡಲಿದೆ.

"ಅರುಂಧತಿ ಮತ್ತು ಮೈತ್ರೇಯಿ ಯೋಜನೆಗಳನ್ನು ಪ್ರಾರಂಭಿಸಲು ನಾವು ಅನುಮೋದನೆ ಪಡೆದಿದ್ದೇವೆ ಮತ್ತು ಹಣವನ್ನು ನಿಗದಿಪಡಿಸಲಾಗಿದೆ. ಈ ಹಣವನ್ನು ಪಡೆಯಲು ನಾವು ಕಾರ್ಯವಿಧಾನಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿದ್ದೇವೆ. ಸಮುದಾಯದ ದುರ್ಬಲ ವರ್ಗಗಳಿಗೆ ಸಹಾಯ ಮಾಡುವ ನಮ್ಮ ಪ್ರಯತ್ನಗಳ ಭಾಗ ಇದು" ಎಂದು ಮಂಡಳಿಯ ಅಧ್ಯಕ್ಷ ಎಚ್‌.ಎಸ್. ಸಚ್ಚಿದಾನಂದ ಮೂರ್ತಿ ತಿಳಿಸಿದ್ದಾರೆ.

ಈ ಹಣವನ್ನು 3 ಕಂತುಗಳಲ್ಲಿ ಠೇವಣಿ ಇಡಲಾಗುವುದು ಮತ್ತು ನಾಲ್ಕನೇ ವರ್ಷ, ಮದುವೆ ನಾಲ್ಕು ವರ್ಷಗಳ ಕಾಲ ಮುಂದುವರಿದರೆ ಮಹಿಳೆಯರಿಗೆ ಬಡ್ಡಿಯೊಂದಿಗೆ ಹಣ ಸಿಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಯೋಜನಗಳನ್ನು ಪಡೆಯಲು ಅರ್ಜಿದಾರರು ಐದು ಅಥವಾ ಅದಕ್ಕಿಂತ ಹೆಚ್ಚು ಎಕರೆ ಕೃಷಿ ಭೂಮಿಯನ್ನು ಹೊಂದಿರಬಾರದು, 1,000 ಚದರ ಅಡಿಗಿಂತ ಹೆಚ್ಚು ಇರುವ ವಸತಿ ಫ್ಲಾಟ್ ಇರಬಾರದು, ಅವರು ಹಿಂದುಳಿದ ವರ್ಗ ಅಥವಾ ಪರಿಶಿಷ್ಟ ಜಾತಿಗಳಿಗೆ ಸೇರಿರಬಾರದು ಮತ್ತು ಕುಟುಂಬದ ಆದಾಯ ವಾರ್ಷಿಕ 8 ಲಕ್ಷ ರೂ.ಗಿಂತ ಕಡಿಮೆಯಿರಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.