ETV Bharat / state

ಕನ್ನಡಿಗರಿಗೆ ಅವಕಾಶಗಳ ಕೊರತೆ ಹೆಚ್ಚಾಗಿದೆ: ದುನಿಯಾ ವಿಜಯ್​ - ದುನಿಯಾ ವಿಜಯ್

ಕರ್ನಾಟಕದಲ್ಲಿ ಉದ್ಯೋಗಗಳು ಕನ್ನಡಿಗರಿಗೇ ಮೀಸಲಾಗಿರಬೇಕೆಂಬ ಹೋರಾಟಕ್ಕೆ ನಟ ದುನಿಯಾ ವಿಜಯ್​ ಬೆಂಬಲ ಸೂಚಿಸಿದ್ದಾರೆ.

ದುನಿಯಾ ವಿಜಯ್
author img

By

Published : Aug 15, 2019, 8:07 AM IST

ಬೆಂಗಳೂರು: ಕರ್ನಾಟಕದಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೇ ಮೊದಲ ಆದ್ಯತೆ ನೀಡಬೇಕೆಂದು ಅಗ್ರಹಿಸಿ‌ ಕನ್ನಡಪರ ಸಂಘಟನೆಗಳು ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುತ್ತಿವೆ.

ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲು ದುನಿಯಾ ವಿಜಯ್ ಆಗ್ರಹ ​

ಈ ಹೋರಾಟಕ್ಕೆ ಹಲವಾರು ಸಂಘಟನೆಗಳು ಹಾಗೂ ಕನ್ನಡ ಚಿತ್ರೋದ್ಯಮ ಬೆಂಬಲ ‌ಸೂಚಿಸಿವೆ. ನಟ ದುನಿಯಾ ವಿಜಯ್ ಸಹ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗರಿಗೇ ಮೊದಲು ಉದ್ಯೋಗ ಸಿಗಬೇಕು. ಕನ್ನಡಿಗರಿಗೆ ದುಡಿಯುವ ಹಂಬಲ ಇದೆ. ಆದ್ರೆ, ಅವಕಾಶಗಳ ಕೊರತೆ ಹೆಚ್ಚಾಗಿದೆ. ಖಾಸಗಿ ವಲಯಗಳಲ್ಲಿ ಹೊರ ರಾಜ್ಯದವರ ಹಾವಳಿ ಹೆಚ್ಚಾಗಿದ್ದು, ಕನ್ನಡಿಗರಿಗೆ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ವಿಜಯ್​ ಆರೋಪಿಸಿದರು.

ಅಲ್ಲದೆ ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಸಹ ಉತ್ತಮ ವಿದ್ಯಾಭ್ಯಾಸ ಪಡೆಯುತ್ತಿದ್ದು, ಅವರಿಗೂ ಉದ್ಯೋಗದ ಕೊರತೆ ಕಾಡುತ್ತಿದೆ. ಅಲ್ಲದೆ ನಮ್ಮ ರಾಜ್ಯದಲ್ಲಿ ನಮ್ಮವರಿಗೇ ಉದ್ಯೋಗ ಕೊಡುವುದರಿಂದ ಶೇ.70 ರಷ್ಟು ಬಡತನ ನಿರ್ಮೂಲನೆಗೆ ಸಹಾಯವಾಗುತ್ತದೆ ಎಂದು ದುನಿಯಾ ವಿಜಯ್​ ಅಭಿಪ್ರಾಯಪಟ್ಟರು.

ಬೆಂಗಳೂರು: ಕರ್ನಾಟಕದಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೇ ಮೊದಲ ಆದ್ಯತೆ ನೀಡಬೇಕೆಂದು ಅಗ್ರಹಿಸಿ‌ ಕನ್ನಡಪರ ಸಂಘಟನೆಗಳು ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುತ್ತಿವೆ.

ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲು ದುನಿಯಾ ವಿಜಯ್ ಆಗ್ರಹ ​

ಈ ಹೋರಾಟಕ್ಕೆ ಹಲವಾರು ಸಂಘಟನೆಗಳು ಹಾಗೂ ಕನ್ನಡ ಚಿತ್ರೋದ್ಯಮ ಬೆಂಬಲ ‌ಸೂಚಿಸಿವೆ. ನಟ ದುನಿಯಾ ವಿಜಯ್ ಸಹ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗರಿಗೇ ಮೊದಲು ಉದ್ಯೋಗ ಸಿಗಬೇಕು. ಕನ್ನಡಿಗರಿಗೆ ದುಡಿಯುವ ಹಂಬಲ ಇದೆ. ಆದ್ರೆ, ಅವಕಾಶಗಳ ಕೊರತೆ ಹೆಚ್ಚಾಗಿದೆ. ಖಾಸಗಿ ವಲಯಗಳಲ್ಲಿ ಹೊರ ರಾಜ್ಯದವರ ಹಾವಳಿ ಹೆಚ್ಚಾಗಿದ್ದು, ಕನ್ನಡಿಗರಿಗೆ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ವಿಜಯ್​ ಆರೋಪಿಸಿದರು.

ಅಲ್ಲದೆ ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಸಹ ಉತ್ತಮ ವಿದ್ಯಾಭ್ಯಾಸ ಪಡೆಯುತ್ತಿದ್ದು, ಅವರಿಗೂ ಉದ್ಯೋಗದ ಕೊರತೆ ಕಾಡುತ್ತಿದೆ. ಅಲ್ಲದೆ ನಮ್ಮ ರಾಜ್ಯದಲ್ಲಿ ನಮ್ಮವರಿಗೇ ಉದ್ಯೋಗ ಕೊಡುವುದರಿಂದ ಶೇ.70 ರಷ್ಟು ಬಡತನ ನಿರ್ಮೂಲನೆಗೆ ಸಹಾಯವಾಗುತ್ತದೆ ಎಂದು ದುನಿಯಾ ವಿಜಯ್​ ಅಭಿಪ್ರಾಯಪಟ್ಟರು.

Intro:ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಮೀಸಲು ಆಗಬೇಕೆಂದು ಅಗ್ರಹಿಸಿ‌ ಕನ್ನಡಪರ ಸಂಘಟನೆಗಳು ಇಂದು ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅದಲ್ಲದೇ ಈ ಹೋರಾಟಕ್ಕೆ ಹಲವಾರು ಸಂಘಟನೆಗಳು ಹಾಗೂ ಕನ್ನಡ ಚಿತ್ರೋದ್ಯಮವೂ ಸಹ ಬೆಂಬಲ ‌ಸೂಚಿಸಿದ್ದು. ಇಂದು ನಟ ದುನಿಯಾ ವಿಜಯ್ ಸಹ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.


Body:ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲು ಉದ್ಯೋಗ ಸಿಗಬೇಕು, ಕನ್ನಡಿಗರಿಗೆ ದುಡಿವ ಹಂಬಲ ಇದೆ ಆದರೆ ಅವಕಾಶಗಳ ಕೊರತೆ ಹೆಚ್ಚಾಗಿದೆ. ಖಾಸಗಿ ವಲಯಗಳಲ್ಲಿ ಹೊರ ರಾಜ್ಯದವರ ಹಾವಳಿ ಹೆಚ್ಚಾಗಿದ್ದು ಕನ್ನಡಿಗರಿಗೆ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಸಹ ಉತ್ತಮ ವಿದ್ಯಾಭ್ಯಾಸ ಮಾಡಿಕೊಂಡು ಇದ್ದಾರೆ ಅವರಿಗೂ ಸಹ ಸ್ಕಾಲರ್ಶಿಪ್ ಪಡೆದು ಪ್ರಾಮಾಣಿಕವಾಗಿ ಓದಿದವರಿಗೂ ಸಹ ಉದ್ಯೋಗದ ಕೊರತೆ ಕಾಡುತ್ತಿದೆ. ಅಲ್ಲದೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡುವುದರಿಂದ ಶೇಕಡ ಎಪ್ಪತ್ತರಷ್ಟು ಬಡತನ ನಿರ್ಮೂಲನೆಗೆ ಸಹಾಯವಾಗುತ್ತದೆ. ಆಗಾಗಿ ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಬೇಕು ನಟ ದುನಿಯಾ ವಿಜಯ್ ಹೇಳಿದರು...

ಸತೀಶ ಎಂಬಿ


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.