ETV Bharat / state

ಖಾಸಗಿ ವಲಯದ ಕರ್ನಾಟಕ ಬ್ಯಾಂಕ್​ಗೆ ನಿರ್ದೇಶನ ನೀಡಲು ಕೋರಿದ್ದ ಅರ್ಜಿ ವಜಾ

author img

By ETV Bharat Karnataka Team

Published : Dec 15, 2023, 9:14 PM IST

ಕರ್ನಾಟಕ ಬ್ಯಾಂಕ್​ ಸರ್ಕಾರದ ಅಧೀನದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಯಾವುದೇ ರೀತಿಯಲ್ಲಿಯೂ ನಿರ್ದೇಶನ ನೀಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

karnataka-high-court-dismissed-the-petition-seeking-direction-to-the-private-sector-karnataka-bank
ಖಾಸಗಿ ವಲಯದ ಕನಾರ್ಟಕ ಬ್ಯಾಂಕ್​ಗೆ ನಿರ್ದೇಶನ ನೀಡಲು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಖಾಸಗಿ ವಲಯದ ಬ್ಯಾಂಕ್​ ಆಗಿರುವ ಕರ್ನಾಟಕ ಬ್ಯಾಂಕ್​ ಸಂವಿಧಾನದ ಪರಿಚ್ಛೇದ 12ನೇ ವಿಧಿ ಪ್ರಕಾರ ಸರ್ಕಾರದ ಅಧೀನದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಯಾವುದೇ ರೀತಿಯಲ್ಲಿಯೂ ನಿರ್ದೇಶನ ನೀಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕರ್ನಾಟಕ ಬ್ಯಾಂಕ್​ನಲ್ಲಿ ಇಟ್ಟಿದ್ದ 1,34,37,826 ಸ್ಥಿರ ಠೇವಣಿ ಪಡೆಯಲು ನಿರ್ದೇಶನ ನೀಡುವಂತೆ ಕೋರಿ ರಾಜೇಶ್​ ಕುಮಾರ್​ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಹಣಕಾಸು ವ್ಯವಹಾರ ನಡೆಸುವುದಕ್ಕಾಗಿ ಕರ್ನಾಟಕ ಬ್ಯಾಂಕ್​ ಭಾರತೀಯ ರಿಸರ್ವ್ ಬ್ಯಾಂಕ್​ನ ನಿಯಂತ್ರಣದಲ್ಲಿದೆ. ಆದರೆ, ಶಾಸಸನಬದ್ಧವಾಗಿ ಸಾರ್ವಜನಿಕ ಕರ್ತವ್ಯ ನಿರ್ವಹಿಸುವ ಸಂಸ್ಥೆ ಅಥಾವ ಕಂಪನಿ ಅಲ್ಲ. ಭಾರತದ ಸಂವಿಧಾನದ 12ನೇ ವಿಧಿಯ ಅಡಿಯಲ್ಲಿ ಪರಿಗಣಿಸಿ ಅಧಿಕಾರಿಗಳಿಗೆ ಯಾವುದೇ ನಿರ್ದೇಶನ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣ ಅರ್ಜಿದಾರರು ಮತ್ತು ಬ್ಯಾಂಕ್​ ನಡುವಿನ ಸಂಬಂಧಿಸಿದ ಪ್ರಕರಣವಲ್ಲ. ಆದರೆ, ಪ್ರಕರಣದ ಮತ್ತೊಬ್ಬ ಪ್ರತಿವಾದಿಗೆ ಸಂಬಂಧಿಸಿದ್ದಾಗಿದೆ. ವಿಚಾರಣಾ ನ್ಯಾಯಾಲಯದಿಂದ ಸ್ಪಷ್ಟನೆ ಪಡೆಯಲು ಸ್ಥಿರ ಠೇವಣಿಗಳನ್ನು ಒಳಗೊಂಡಿರುವ ಸಿವಿಲ್​ ಮೊಕದ್ದಮೆ ಬಾಕಿಯಿರುವುದಾಗಿ ಅರ್ಜಿದಾರರಿಗೆ ಬ್ಯಾಂಕ್​ ಸಲಹೆ ಮಾತ್ರ ನೀಡಿದೆ. ಬ್ಯಾಂಕ್​ ಖಾಸಗಿ ವಲಯದ್ದಾಗಿದ್ದು, ವಿಚಾರಣೆಗೆ ಅರ್ಹವಿಲ್ಲ. ಜತೆಗೆ, ಖಾಸಗಿ ಬ್ಯಾಂಕ್​ ಆಗಿರುವುದರಿಂದ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣದ ವಿವರ: ಟಿ.ಗೀತಾ ಪೂಂಜಾ ಮತ್ತು ಡಾ.ಪಿ.ತಿಮ್ಮಪ್ಪ ಪೂಂಜಾ ಎಂಬವರು ಮಾಡಿರುವ ಉಯಿಲು(ವಿಲ್​)ಗಳಿಗೆ ಸುಬ್ಬಯ್ಯ ಶೆಟ್ಟಿ ಎಂಬವರು ಏಕೈಕ ನಿರ್ವಾಹಕರು ಎಂಬುದಾಗಿ ಘೋಷಣೆ ಮಾಡಬೇಕು ಎಂದು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 2022ರ ನವೆಂಬರ್​ನಲ್ಲಿ ವಿಚಾರಣೆ ನ್ಯಾಯಾಲಯ, ಗೀತಾ ಪೂಂಜಾ ಮತ್ತು ತಿಮ್ಮಪ್ಪ ಪೂಂಜಾ ಅವರ ಖಾತೆಗಳಲ್ಲಿದ್ದ ಹಣ ಹಿಂಪಡೆಯುವುದಕ್ಕೆ ತಾತ್ಕಾಲಿಕ ತಡೆ ನೀಡಿ ಆದೇಶಿಸಿದ್ದರು.

ಜತೆಗೆ, ಪ್ರಸ್ತಾಪಿತ ಮೊತ್ತ ಅರ್ಜಿದಾರರ ಹೆಸರಿನಲ್ಲಿ ಠೇವಣಿ ಇರುವುದರಿಂದ ಅವರನ್ನು 13ನೇ ಪ್ರತಿವಾದಿಯನ್ನಾಗಿ ಸೇರಿಸಲಾಗಿತ್ತು. ಈ ನಡುವೆ ಹಣ ಠೇವಣಿಯಿಟ್ಟಿದ್ದ ರಾಜೇಶ್​ ಕುಮಾರ್​ ಶೆಟ್ಟಿ ಎಂಬುವರು ತನ್ನ ವೈಯಕ್ತಿಕ ಖಾತೆಗಳಲ್ಲಿರುವ ಹಣ ಬಿಡುಗಡೆ ಮಾಡುವಂತೆ ಕೋರಿ ಬ್ಯಾಂಕ್​ಗೆ ಮನವಿ ಸಲ್ಲಿಸಿದ್ದರು. ಈ ಮನವಿ ಪರಿಶೀಲಿಸಿದ್ದ ಬ್ಯಾಂಕ್​, ಪ್ರಸ್ತಾಪಿಸಿರುವ ಹಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ. ಈ ನಿಟ್ಟಿನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಹಣ ಬಿಡುಗಡೆಗೆ ಅವಕಾಶವಿಲ್ಲ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ರಾಜೇಶ್​ ಕುಮಾರ್​ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ವೇಳೆ ಬ್ಯಾಂಕ್​ ಪರ ವಾದ ಮಂಡಿಸಿದ್ದ ವಕೀಲರು, ಬ್ಯಾಂಕ್​ ಯಾವುದೇ ಸಾರ್ವಜನಿಕ ಕರ್ತವ್ಯ ಅಥಾವ ಕಾರ್ಯವನ್ನು ನಿರ್ವಹಣೆ ಮಾಡುತ್ತಿಲ್ಲ. ಆದ್ದರಿಂದ ಬ್ಯಾಂಕ್​ ಸಂವಿಧಾನದ 12ನೇ ಪರಿಚ್ಛೇದದ ಅಡಿಯಲ್ಲಿ ಸರ್ಕಾರದ ಸ್ವತ್ತಲ್ಲ. ಆದ್ದರಿಂದ ಹೈಕೋರ್ಟ್ ಯಾವುದೇ ರೀತಿಯ ನಿರ್ದೇಶನ ನೀಡುವುದಕ್ಕೆ ಅವಕಾಶವಿಲ್ಲ ಎಂದು ವಾದ ಮಂಡಿಸಿದ್ದರು.

ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಪ್ರಕರಣ: ವಿಸ್ತೃತ ವಾದ ಮಂಡಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್

ಬೆಂಗಳೂರು: ಖಾಸಗಿ ವಲಯದ ಬ್ಯಾಂಕ್​ ಆಗಿರುವ ಕರ್ನಾಟಕ ಬ್ಯಾಂಕ್​ ಸಂವಿಧಾನದ ಪರಿಚ್ಛೇದ 12ನೇ ವಿಧಿ ಪ್ರಕಾರ ಸರ್ಕಾರದ ಅಧೀನದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಯಾವುದೇ ರೀತಿಯಲ್ಲಿಯೂ ನಿರ್ದೇಶನ ನೀಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕರ್ನಾಟಕ ಬ್ಯಾಂಕ್​ನಲ್ಲಿ ಇಟ್ಟಿದ್ದ 1,34,37,826 ಸ್ಥಿರ ಠೇವಣಿ ಪಡೆಯಲು ನಿರ್ದೇಶನ ನೀಡುವಂತೆ ಕೋರಿ ರಾಜೇಶ್​ ಕುಮಾರ್​ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಹಣಕಾಸು ವ್ಯವಹಾರ ನಡೆಸುವುದಕ್ಕಾಗಿ ಕರ್ನಾಟಕ ಬ್ಯಾಂಕ್​ ಭಾರತೀಯ ರಿಸರ್ವ್ ಬ್ಯಾಂಕ್​ನ ನಿಯಂತ್ರಣದಲ್ಲಿದೆ. ಆದರೆ, ಶಾಸಸನಬದ್ಧವಾಗಿ ಸಾರ್ವಜನಿಕ ಕರ್ತವ್ಯ ನಿರ್ವಹಿಸುವ ಸಂಸ್ಥೆ ಅಥಾವ ಕಂಪನಿ ಅಲ್ಲ. ಭಾರತದ ಸಂವಿಧಾನದ 12ನೇ ವಿಧಿಯ ಅಡಿಯಲ್ಲಿ ಪರಿಗಣಿಸಿ ಅಧಿಕಾರಿಗಳಿಗೆ ಯಾವುದೇ ನಿರ್ದೇಶನ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣ ಅರ್ಜಿದಾರರು ಮತ್ತು ಬ್ಯಾಂಕ್​ ನಡುವಿನ ಸಂಬಂಧಿಸಿದ ಪ್ರಕರಣವಲ್ಲ. ಆದರೆ, ಪ್ರಕರಣದ ಮತ್ತೊಬ್ಬ ಪ್ರತಿವಾದಿಗೆ ಸಂಬಂಧಿಸಿದ್ದಾಗಿದೆ. ವಿಚಾರಣಾ ನ್ಯಾಯಾಲಯದಿಂದ ಸ್ಪಷ್ಟನೆ ಪಡೆಯಲು ಸ್ಥಿರ ಠೇವಣಿಗಳನ್ನು ಒಳಗೊಂಡಿರುವ ಸಿವಿಲ್​ ಮೊಕದ್ದಮೆ ಬಾಕಿಯಿರುವುದಾಗಿ ಅರ್ಜಿದಾರರಿಗೆ ಬ್ಯಾಂಕ್​ ಸಲಹೆ ಮಾತ್ರ ನೀಡಿದೆ. ಬ್ಯಾಂಕ್​ ಖಾಸಗಿ ವಲಯದ್ದಾಗಿದ್ದು, ವಿಚಾರಣೆಗೆ ಅರ್ಹವಿಲ್ಲ. ಜತೆಗೆ, ಖಾಸಗಿ ಬ್ಯಾಂಕ್​ ಆಗಿರುವುದರಿಂದ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣದ ವಿವರ: ಟಿ.ಗೀತಾ ಪೂಂಜಾ ಮತ್ತು ಡಾ.ಪಿ.ತಿಮ್ಮಪ್ಪ ಪೂಂಜಾ ಎಂಬವರು ಮಾಡಿರುವ ಉಯಿಲು(ವಿಲ್​)ಗಳಿಗೆ ಸುಬ್ಬಯ್ಯ ಶೆಟ್ಟಿ ಎಂಬವರು ಏಕೈಕ ನಿರ್ವಾಹಕರು ಎಂಬುದಾಗಿ ಘೋಷಣೆ ಮಾಡಬೇಕು ಎಂದು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 2022ರ ನವೆಂಬರ್​ನಲ್ಲಿ ವಿಚಾರಣೆ ನ್ಯಾಯಾಲಯ, ಗೀತಾ ಪೂಂಜಾ ಮತ್ತು ತಿಮ್ಮಪ್ಪ ಪೂಂಜಾ ಅವರ ಖಾತೆಗಳಲ್ಲಿದ್ದ ಹಣ ಹಿಂಪಡೆಯುವುದಕ್ಕೆ ತಾತ್ಕಾಲಿಕ ತಡೆ ನೀಡಿ ಆದೇಶಿಸಿದ್ದರು.

ಜತೆಗೆ, ಪ್ರಸ್ತಾಪಿತ ಮೊತ್ತ ಅರ್ಜಿದಾರರ ಹೆಸರಿನಲ್ಲಿ ಠೇವಣಿ ಇರುವುದರಿಂದ ಅವರನ್ನು 13ನೇ ಪ್ರತಿವಾದಿಯನ್ನಾಗಿ ಸೇರಿಸಲಾಗಿತ್ತು. ಈ ನಡುವೆ ಹಣ ಠೇವಣಿಯಿಟ್ಟಿದ್ದ ರಾಜೇಶ್​ ಕುಮಾರ್​ ಶೆಟ್ಟಿ ಎಂಬುವರು ತನ್ನ ವೈಯಕ್ತಿಕ ಖಾತೆಗಳಲ್ಲಿರುವ ಹಣ ಬಿಡುಗಡೆ ಮಾಡುವಂತೆ ಕೋರಿ ಬ್ಯಾಂಕ್​ಗೆ ಮನವಿ ಸಲ್ಲಿಸಿದ್ದರು. ಈ ಮನವಿ ಪರಿಶೀಲಿಸಿದ್ದ ಬ್ಯಾಂಕ್​, ಪ್ರಸ್ತಾಪಿಸಿರುವ ಹಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ. ಈ ನಿಟ್ಟಿನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಹಣ ಬಿಡುಗಡೆಗೆ ಅವಕಾಶವಿಲ್ಲ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ರಾಜೇಶ್​ ಕುಮಾರ್​ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ವೇಳೆ ಬ್ಯಾಂಕ್​ ಪರ ವಾದ ಮಂಡಿಸಿದ್ದ ವಕೀಲರು, ಬ್ಯಾಂಕ್​ ಯಾವುದೇ ಸಾರ್ವಜನಿಕ ಕರ್ತವ್ಯ ಅಥಾವ ಕಾರ್ಯವನ್ನು ನಿರ್ವಹಣೆ ಮಾಡುತ್ತಿಲ್ಲ. ಆದ್ದರಿಂದ ಬ್ಯಾಂಕ್​ ಸಂವಿಧಾನದ 12ನೇ ಪರಿಚ್ಛೇದದ ಅಡಿಯಲ್ಲಿ ಸರ್ಕಾರದ ಸ್ವತ್ತಲ್ಲ. ಆದ್ದರಿಂದ ಹೈಕೋರ್ಟ್ ಯಾವುದೇ ರೀತಿಯ ನಿರ್ದೇಶನ ನೀಡುವುದಕ್ಕೆ ಅವಕಾಶವಿಲ್ಲ ಎಂದು ವಾದ ಮಂಡಿಸಿದ್ದರು.

ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಪ್ರಕರಣ: ವಿಸ್ತೃತ ವಾದ ಮಂಡಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.