ETV Bharat / state

ಕೆ.ಆರ್. ಪುರದಲ್ಲಿ ಕೈ- ಕಮಲ ಸ್ಪರ್ಧೆ: ಕ್ಷೇತ್ರ ಉಳಿಸಿಕೊಳ್ಳಲು ಕೈ ಕಸರತ್ತು; ಬೈರತಿಗೆ ಹ್ಯಾಟ್ರಿಕ್ ಕನಸು

author img

By

Published : Dec 5, 2019, 11:39 AM IST

ಕೈಗಾರಿಕೆ ಹಾಗೂ ಗಾರ್ಮೆಂಟ್ಸ್ ಜತೆ ಐಟಿ ಕಂಪನಿಗಳನ್ನು ಹೇರಳವಾಗಿ ಒಳಗೊಂಡಿರುವ ಕೆ.ಆರ್.ಪುರದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ.

K R Puram By-election
ಕೆ.ಆರ್. ಪುರದಲ್ಲಿ ಕೈ-ಕಮಲ ಸ್ಪರ್ಧೆ: ಕ್ಷೇತ್ರ ಉಳಿಸಿಕೊಳ್ಳಲು ಕೈ ಕಸರತ್ತು; ಬೈರತಿಗೆ ಹ್ಯಾಟ್ರಿಕ್ ಕನಸು

ಬೆಂಗಳೂರು: ವ್ಯಕ್ತಿಗತ ಶಕ್ತಿ ಹಾಗೂ ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಕ್ಷೇತ್ರದಲ್ಲಿ, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿ - ಕಾಂಗ್ರೆಸ್ ನಡುವೆ ಸೆಣಸಾಟವೇ ಹೊರತು, ಉಳಿದವರ ಸ್ಪರ್ಧೆ ನಗಣ್ಯವಾಗಿದೆ. ಕಾಂಗ್ರೆಸ್ ಪಕ್ಷದ ಮತದಾರರ ಜತೆ ತಮ್ಮ ವೈಯಕ್ತಿಕ ಮತ ಬ್ಯಾಂಕ್ ಹೊಂದಿ 2013 ಮತ್ತು 2018ರಲ್ಲಿ ಗೆಲುವು ಸಾಧಿಸಿದ್ದ ಬೈರತಿ ಬಸವರಾಜು ಇದೀಗ ರಾಜೀನಾಮೆ ನೀಡಿ ಮರುಚುನಾವಣೆಗೆ ಕಾರಣವಾಗಿದ್ದಾರೆ. ಅಲ್ಲದೇ ಬಿಜೆಪಿಯಿಂದ ಕಣಕ್ಕಿಳಿದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಗೆಲುವಿನ ಸಾಧ್ಯತೆ ಕೂಡ ಹೆಚ್ಚಾಗಿ ಹೊಂದಿದ್ದು, ಕಾಂಗ್ರೆಸ್​​​ನಿಂದ ಸ್ಪರ್ಧಿಸಿರುವ ಎಂ. ನಾರಾಯಣಸ್ವಾಮಿ ಕಡೆಯಿಂದ ಕೊಂಚ ಸ್ಪರ್ಧೆ ಎದುರಾಗಲಿದೆ. ವೈಯಕ್ತಿಕ ವರ್ಚಸ್ಸು, ಕ್ಷೇತ್ರದಲ್ಲಿ ಹೊಂದಿರುವ ಹಿಡಿತ, ಬಿಜೆಪಿ ಸಾಂಗಿಕ ಪ್ರಯತ್ನ, ಕಾಂಗ್ರೆಸ್ ಪಾಲಿಕೆ ಸದಸ್ಯರ ಬೆಂಬಲ ಸೇರಿದಂತೆ ಹಲವು ಅಂಶಗಳು ಬೈರತಿ ಬಸವರಾಜುಗೆ ಧನಾತ್ಮಕವಾಗಿ ಲಭಿ ಸಿದ್ದು, ಗೆಲುವಿನ ಅವಕಾಶ ಹೆಚ್ಚಿಸಿದೆ.

2018ರ ಚುನಾವಣೆಯಲ್ಲಿ 22 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿಯ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರನ್ನು ಎರಡನೇ ಸಾರಿ ಸೋಲಿಸಿದ್ದ ಬೈರತಿ ಬಸವರಾಜು 32,729 ಮತಗಳ ಅಂತರದ ಗೆಲುವು ಸಾಧಿಸಿದ್ದರು. 2013ರಲ್ಲಿ ಸಹ ಬೈರತಿ ಬಸವರಾಜು 24,001 ಮತಗಳಿಂದ ನಂದೀಶ್ ರೆಡ್ಡಿ ವಿರುದ್ಧ ಗೆದ್ದಿದ್ದರು. ಹಣಬಲ, ಜನಬಲ ಹೊಂದಿರುವ ಬೈರತಿ ಬಸವರಾಜು ಕಳೆದ ಎರಡು ಅವಧಿಯಲ್ಲಿ ಕಾಂಗ್ರೆಸ್ ಮತ ಬ್ಯಾಂಕ್ ಹೆಚ್ಚಿಸಿದ್ದರು. ಅದನ್ನು ಪಡೆದು ಬಿಜೆಪಿಗೆ ತೆರಳಿದ್ದಾರೆ ಎಂಬ ಮಾಹಿತಿ ಇದೆ.

ಇನ್ನೊಂದೆಡೆ, ಒಟ್ಟು 9 ಬಿಬಿಎಂಪಿ ಸದಸ್ಯರ ಪೈಕಿ ಆರು ಮಂದಿ ಕಾಂಗ್ರೆಸ್​​​ನಿಂದ ಗೆದ್ದವರು. ಇವರಲ್ಲಿ ನಾಲ್ವರು ಬೈರತಿ ಬಸವರಾಜು ಪರ ಗುರುತಿಸಿಕೊಂಡು ಉಚ್ಛಾಟಿತರಾಗಿದ್ದಾರೆ. ಇವರ ಬಲ ಕೂಡ ಬೈರತಿಗೆ ಸಿಕ್ಕ ಹಿನ್ನೆಲೆ ಅತಿ ಹೆಚ್ಚು ಪಾಲಿಕೆ ಸದಸ್ಯರ ಬಲ ಇವರಿಗೆ ಲಭಿಸಿದೆ. ಅಲ್ಪಸಂಖ್ಯಾತರ ಮತ ಸೆಳೆಯುವಲ್ಲಿ ಬೈರತಿ ವಿಫಲವಾದರೂ, ದೊಡ್ಡ ಸಂಖ್ಯೆಯಲ್ಲಿರುವ ಪರಿಶಿಷ್ಟರು, ಒಕ್ಕಲಿಗರು ಹಾಗೂ ಕುರುಬರ ಮತ ಸೆಳೆಯುವಲ್ಲಿ ಸಫಲವಾಗಿದ್ದಾರೆ. ಬಿಜೆಪಿ ಮತಗಳು ಒಡೆಯದೇ ಇರುವುದು ಹಾಗೂ ಕಾಂಗ್ರೆಸ್ ಮತಗಳು ಬೈರತಿ ಪರ ಚಲಾವಣೆಯಾಗಿರುವುದು ಗೆಲುವಿಗೆ ಪ್ರಮುಖ ಮೂಲಕವಾಗಿ ಲಭಿಸಿದೆ.

ಅಖಾಡದಲ್ಲಿರುವ 15 ಅಭ್ಯರ್ಥಿಗಳು
1. ಜೆಡಿಎಸ್:- ಸಿ ಕೃಷ್ಣಮೂರ್ತಿ.
2. ಕಾಂಗ್ರೆಸ್​​:- ಎಂ. ನಾರಾಯಣಸ್ವಾಮಿ.
3. ಬಿಜೆಪಿ:- ಬಿ.ಎ. ಬೈರತಿ ಬಸವರಾಜ್.
4. ರೈತ ಭಾರತ್ ಪಾರ್ಟಿ:- ಕೆಂಪರಾಜು ಎನ್
5. ಕರ್ನಾಟಕ ರಾಷ್ಟ್ರ ಸಮಿತಿ:- ಜಗದೀಶ ಕಾಗೆಪುರ
6. ಯುವ ಕರ್ನಾಟಕ ಪಕ್ಷ:- ವೇಣುಗೋಪಾಲ್​​
7. ಉತ್ತಮ ಪ್ರಜಾಕೀಯ ಪಕ್ಷ:- ಸಂತೋಷ್​ ಎಂ
8. ಪಕ್ಷೇತರ ಅಭ್ಯರ್ಥಿ:- ಕೃಷ್ಣಮೂರ್ತಿ ವಿ
9. ಪಕ್ಷೇತರ ಅಭ್ಯರ್ಥಿ:- ಟಿ.ಕೆ. ದಾಸರ್ ಗೌಡ
10. ಪಕ್ಷೇತರ ಅಭ್ಯರ್ಥಿ:- ಚಳುವಳಿ ರಾಜಣ್ಣ
11. ಪಕ್ಷೇತರ ಅಭ್ಯರ್ಥಿ:- ಎಲ್ ರಾಮಕೃಷ್ಣ
12. ಪಕ್ಷೇತರ ಅಭ್ಯರ್ಥಿ:- ಸ್ಟಾನ್ಲೇ ಪ್ರಸನ್ನ
13. ಪಕ್ಷೇತರ ಅಭ್ಯರ್ಥಿ:- ಸೂರ್ಯಕಾಂತ್ ಸುಬ್ರಹ್ಮಣ್ಯ

ಮತದಾರರ ಒಟ್ಟಾರೆ ಸಂಖ್ಯಾ ಮಾಹಿತಿ

ಕೆಆರ್ ಪುರಂ ಒಟ್ಟು ಮತದಾರರ ಸಂಖ್ಯೆ:- 4,87,857
ಪುರುಷ:- 2,55,465
ಮಹಿಳೆ:- 2,32,228
ಇತರ:- 164
ಯುವಕರು (18-19):- 6,580

ಚುನಾವಣೆಗೆ ನಿಯೋಜನೆಗೊಂಡವರ ಮತಗಳು
ಸರ್ವೀಸ್ ವೋಟರ್ಸ್:- 155
ಪುರುಷ:- 135
ಮಹಿಳೆ:- 20

ವಿಶೇಷ ಚೇತನ ಮತದಾರರು:- 138
ಆರ್ತೋ:- 29
ಕಿವುಡರು:- 26
ಅಂದರು:- 40
ಇತರ:- 43

ಕೆಆರ್ ಪುರಂ ಮತಗಟ್ಟೆಗಳು.
ಒಟ್ಟು ಮತಗಟ್ಟೆಗಳ ಸಂಖ್ಯೆ:- 437
ಸಖೀ ಮತಗಟ್ಟೆಗಳ ಸಂಖ್ಯೆ:- 05
ಮಾದರಿ ಮತಗಟ್ಟೆಗಳ ಸಂಖ್ಯೆ:- 01

ಮತದಾರರ ವಿವರ

ಒಟ್ಟು ಮತದಾರರು - 4.45 ಲಕ್ಷ.

ಜಾತಿವಾರು ಲೆಕ್ಕಾಚಾರ
ಒಕ್ಕಲಿಗ - 70 ಸಾವಿರ.
SC ಸಮುದಾಯ- 35 ಸಾವಿರ.
ST ಸಮುದಾಯ - 20 ಸಾವಿರ.
ಕುರುಬ - 50 ಸಾವಿರ.
ಮುಸ್ಲಿಂ - 45 ಸಾವಿರ.
ಕ್ರಿಶ್ಚಿಯನ್ - 25 ಸಾವಿರ.
ಯಾದವ - 30 ಸಾವಿರ.
ಮಾರ್ವಾಡಿ - 5 ಸಾವಿರ.
ಜೈನ್-ಸಿಖ್ - 10 ಸಾವಿರ.
ಇತರೆ - 1.50 ಲಕ್ಷ.

ಮತ ಎಣಿಕೆ ಕೇಂದ್ರ:- ಸೆಂಟ್ ಜೋಸೆಫ್ ಇಂಡಿಯಾ ಹೈಸ್ಕೂಲ್, ವಿಠ್ಠಲ್ ಮಲ್ಯ ರಸ್ತೆ.

ಬೆಂಗಳೂರು: ವ್ಯಕ್ತಿಗತ ಶಕ್ತಿ ಹಾಗೂ ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಕ್ಷೇತ್ರದಲ್ಲಿ, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿ - ಕಾಂಗ್ರೆಸ್ ನಡುವೆ ಸೆಣಸಾಟವೇ ಹೊರತು, ಉಳಿದವರ ಸ್ಪರ್ಧೆ ನಗಣ್ಯವಾಗಿದೆ. ಕಾಂಗ್ರೆಸ್ ಪಕ್ಷದ ಮತದಾರರ ಜತೆ ತಮ್ಮ ವೈಯಕ್ತಿಕ ಮತ ಬ್ಯಾಂಕ್ ಹೊಂದಿ 2013 ಮತ್ತು 2018ರಲ್ಲಿ ಗೆಲುವು ಸಾಧಿಸಿದ್ದ ಬೈರತಿ ಬಸವರಾಜು ಇದೀಗ ರಾಜೀನಾಮೆ ನೀಡಿ ಮರುಚುನಾವಣೆಗೆ ಕಾರಣವಾಗಿದ್ದಾರೆ. ಅಲ್ಲದೇ ಬಿಜೆಪಿಯಿಂದ ಕಣಕ್ಕಿಳಿದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಗೆಲುವಿನ ಸಾಧ್ಯತೆ ಕೂಡ ಹೆಚ್ಚಾಗಿ ಹೊಂದಿದ್ದು, ಕಾಂಗ್ರೆಸ್​​​ನಿಂದ ಸ್ಪರ್ಧಿಸಿರುವ ಎಂ. ನಾರಾಯಣಸ್ವಾಮಿ ಕಡೆಯಿಂದ ಕೊಂಚ ಸ್ಪರ್ಧೆ ಎದುರಾಗಲಿದೆ. ವೈಯಕ್ತಿಕ ವರ್ಚಸ್ಸು, ಕ್ಷೇತ್ರದಲ್ಲಿ ಹೊಂದಿರುವ ಹಿಡಿತ, ಬಿಜೆಪಿ ಸಾಂಗಿಕ ಪ್ರಯತ್ನ, ಕಾಂಗ್ರೆಸ್ ಪಾಲಿಕೆ ಸದಸ್ಯರ ಬೆಂಬಲ ಸೇರಿದಂತೆ ಹಲವು ಅಂಶಗಳು ಬೈರತಿ ಬಸವರಾಜುಗೆ ಧನಾತ್ಮಕವಾಗಿ ಲಭಿ ಸಿದ್ದು, ಗೆಲುವಿನ ಅವಕಾಶ ಹೆಚ್ಚಿಸಿದೆ.

2018ರ ಚುನಾವಣೆಯಲ್ಲಿ 22 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿಯ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರನ್ನು ಎರಡನೇ ಸಾರಿ ಸೋಲಿಸಿದ್ದ ಬೈರತಿ ಬಸವರಾಜು 32,729 ಮತಗಳ ಅಂತರದ ಗೆಲುವು ಸಾಧಿಸಿದ್ದರು. 2013ರಲ್ಲಿ ಸಹ ಬೈರತಿ ಬಸವರಾಜು 24,001 ಮತಗಳಿಂದ ನಂದೀಶ್ ರೆಡ್ಡಿ ವಿರುದ್ಧ ಗೆದ್ದಿದ್ದರು. ಹಣಬಲ, ಜನಬಲ ಹೊಂದಿರುವ ಬೈರತಿ ಬಸವರಾಜು ಕಳೆದ ಎರಡು ಅವಧಿಯಲ್ಲಿ ಕಾಂಗ್ರೆಸ್ ಮತ ಬ್ಯಾಂಕ್ ಹೆಚ್ಚಿಸಿದ್ದರು. ಅದನ್ನು ಪಡೆದು ಬಿಜೆಪಿಗೆ ತೆರಳಿದ್ದಾರೆ ಎಂಬ ಮಾಹಿತಿ ಇದೆ.

ಇನ್ನೊಂದೆಡೆ, ಒಟ್ಟು 9 ಬಿಬಿಎಂಪಿ ಸದಸ್ಯರ ಪೈಕಿ ಆರು ಮಂದಿ ಕಾಂಗ್ರೆಸ್​​​ನಿಂದ ಗೆದ್ದವರು. ಇವರಲ್ಲಿ ನಾಲ್ವರು ಬೈರತಿ ಬಸವರಾಜು ಪರ ಗುರುತಿಸಿಕೊಂಡು ಉಚ್ಛಾಟಿತರಾಗಿದ್ದಾರೆ. ಇವರ ಬಲ ಕೂಡ ಬೈರತಿಗೆ ಸಿಕ್ಕ ಹಿನ್ನೆಲೆ ಅತಿ ಹೆಚ್ಚು ಪಾಲಿಕೆ ಸದಸ್ಯರ ಬಲ ಇವರಿಗೆ ಲಭಿಸಿದೆ. ಅಲ್ಪಸಂಖ್ಯಾತರ ಮತ ಸೆಳೆಯುವಲ್ಲಿ ಬೈರತಿ ವಿಫಲವಾದರೂ, ದೊಡ್ಡ ಸಂಖ್ಯೆಯಲ್ಲಿರುವ ಪರಿಶಿಷ್ಟರು, ಒಕ್ಕಲಿಗರು ಹಾಗೂ ಕುರುಬರ ಮತ ಸೆಳೆಯುವಲ್ಲಿ ಸಫಲವಾಗಿದ್ದಾರೆ. ಬಿಜೆಪಿ ಮತಗಳು ಒಡೆಯದೇ ಇರುವುದು ಹಾಗೂ ಕಾಂಗ್ರೆಸ್ ಮತಗಳು ಬೈರತಿ ಪರ ಚಲಾವಣೆಯಾಗಿರುವುದು ಗೆಲುವಿಗೆ ಪ್ರಮುಖ ಮೂಲಕವಾಗಿ ಲಭಿಸಿದೆ.

ಅಖಾಡದಲ್ಲಿರುವ 15 ಅಭ್ಯರ್ಥಿಗಳು
1. ಜೆಡಿಎಸ್:- ಸಿ ಕೃಷ್ಣಮೂರ್ತಿ.
2. ಕಾಂಗ್ರೆಸ್​​:- ಎಂ. ನಾರಾಯಣಸ್ವಾಮಿ.
3. ಬಿಜೆಪಿ:- ಬಿ.ಎ. ಬೈರತಿ ಬಸವರಾಜ್.
4. ರೈತ ಭಾರತ್ ಪಾರ್ಟಿ:- ಕೆಂಪರಾಜು ಎನ್
5. ಕರ್ನಾಟಕ ರಾಷ್ಟ್ರ ಸಮಿತಿ:- ಜಗದೀಶ ಕಾಗೆಪುರ
6. ಯುವ ಕರ್ನಾಟಕ ಪಕ್ಷ:- ವೇಣುಗೋಪಾಲ್​​
7. ಉತ್ತಮ ಪ್ರಜಾಕೀಯ ಪಕ್ಷ:- ಸಂತೋಷ್​ ಎಂ
8. ಪಕ್ಷೇತರ ಅಭ್ಯರ್ಥಿ:- ಕೃಷ್ಣಮೂರ್ತಿ ವಿ
9. ಪಕ್ಷೇತರ ಅಭ್ಯರ್ಥಿ:- ಟಿ.ಕೆ. ದಾಸರ್ ಗೌಡ
10. ಪಕ್ಷೇತರ ಅಭ್ಯರ್ಥಿ:- ಚಳುವಳಿ ರಾಜಣ್ಣ
11. ಪಕ್ಷೇತರ ಅಭ್ಯರ್ಥಿ:- ಎಲ್ ರಾಮಕೃಷ್ಣ
12. ಪಕ್ಷೇತರ ಅಭ್ಯರ್ಥಿ:- ಸ್ಟಾನ್ಲೇ ಪ್ರಸನ್ನ
13. ಪಕ್ಷೇತರ ಅಭ್ಯರ್ಥಿ:- ಸೂರ್ಯಕಾಂತ್ ಸುಬ್ರಹ್ಮಣ್ಯ

ಮತದಾರರ ಒಟ್ಟಾರೆ ಸಂಖ್ಯಾ ಮಾಹಿತಿ

ಕೆಆರ್ ಪುರಂ ಒಟ್ಟು ಮತದಾರರ ಸಂಖ್ಯೆ:- 4,87,857
ಪುರುಷ:- 2,55,465
ಮಹಿಳೆ:- 2,32,228
ಇತರ:- 164
ಯುವಕರು (18-19):- 6,580

ಚುನಾವಣೆಗೆ ನಿಯೋಜನೆಗೊಂಡವರ ಮತಗಳು
ಸರ್ವೀಸ್ ವೋಟರ್ಸ್:- 155
ಪುರುಷ:- 135
ಮಹಿಳೆ:- 20

ವಿಶೇಷ ಚೇತನ ಮತದಾರರು:- 138
ಆರ್ತೋ:- 29
ಕಿವುಡರು:- 26
ಅಂದರು:- 40
ಇತರ:- 43

ಕೆಆರ್ ಪುರಂ ಮತಗಟ್ಟೆಗಳು.
ಒಟ್ಟು ಮತಗಟ್ಟೆಗಳ ಸಂಖ್ಯೆ:- 437
ಸಖೀ ಮತಗಟ್ಟೆಗಳ ಸಂಖ್ಯೆ:- 05
ಮಾದರಿ ಮತಗಟ್ಟೆಗಳ ಸಂಖ್ಯೆ:- 01

ಮತದಾರರ ವಿವರ

ಒಟ್ಟು ಮತದಾರರು - 4.45 ಲಕ್ಷ.

ಜಾತಿವಾರು ಲೆಕ್ಕಾಚಾರ
ಒಕ್ಕಲಿಗ - 70 ಸಾವಿರ.
SC ಸಮುದಾಯ- 35 ಸಾವಿರ.
ST ಸಮುದಾಯ - 20 ಸಾವಿರ.
ಕುರುಬ - 50 ಸಾವಿರ.
ಮುಸ್ಲಿಂ - 45 ಸಾವಿರ.
ಕ್ರಿಶ್ಚಿಯನ್ - 25 ಸಾವಿರ.
ಯಾದವ - 30 ಸಾವಿರ.
ಮಾರ್ವಾಡಿ - 5 ಸಾವಿರ.
ಜೈನ್-ಸಿಖ್ - 10 ಸಾವಿರ.
ಇತರೆ - 1.50 ಲಕ್ಷ.

ಮತ ಎಣಿಕೆ ಕೇಂದ್ರ:- ಸೆಂಟ್ ಜೋಸೆಫ್ ಇಂಡಿಯಾ ಹೈಸ್ಕೂಲ್, ವಿಠ್ಠಲ್ ಮಲ್ಯ ರಸ್ತೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.