ETV Bharat / state

ಕೈ ಪಕ್ಷದಲ್ಲಿ ಸೋಲಿನ ಪರಾಮರ್ಶೆ,ಪಕ್ಷ ಸಂಘಟನೆ ಮಂತ್ರ; ಮುಖಂಡರ ಜೊತೆ ಕೆಸಿವಿ ಚರ್ಚೆ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಇಂದು ಬೆಂಗಳೂರಿಗೆ ಆಗಮಿಸಿದ್ದು, ಪಕ್ಷ ಸಂಘಟನೆ ಕುರಿತು ಹಿರಿಯ ನಾಯಕರ ಜೊತೆ ಸಭೆ ನಡೆಸುತ್ತಿದ್ದಾರೆ.

author img

By

Published : Jun 26, 2019, 1:26 PM IST

Updated : Jun 26, 2019, 1:58 PM IST

ಕೆ.ಸಿ ವೇಣುಗೋಪಾಲ್

ಬೆಂಗಳೂರು: ಲೋಕಸಭೆ ಸೋಲಿನ ಪರಾಮರ್ಶೆ ಹಾಗು ಪಕ್ಷ ಸಂಘಟನೆ ವಿಚಾರವಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಪಕ್ಷದ ಹಿರಿಯ ಮುಖಂಡರು ಹಾಗು ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ವಿಶೇಷ ಸಭೆ ನಡೆಸುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ

ಸಭೆಯಲ್ಲಿ ರಿಜ್ವಾನ್ ಅರ್ಷಾದ್, ವೀರಪ್ಪ ಮೊಯ್ಲಿ, ಚಂದ್ರಪ್ಪ, ವಿ.ಎಸ್​.ಉಗ್ರಪ್ಪ, ವಿನಯ್ ಕುಲಕರ್ಣಿ, ಮಿಥುನ್ ರೈ, ರಾಜಶೇಖರ್ ಹಿಟ್ನಾಳ್​, ಕೆ.ಎಚ್ .ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದಾರೆ.

ಈ ಸಭೆಗೆ ಹಲವು ಕಾಂಗ್ರೆಸ್ ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬೆಂ.ಉತ್ತರ ಅಭ್ಯರ್ಥಿ, ಸಚಿವ ಕೃಷ್ಣಬೈರೇಗೌಡ, ಬೆಂ.ದಕ್ಷಿಣ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್, ಚಾಮರಾಜನಗರ ಅಭ್ಯರ್ಥಿ ಆರ್.ಧ್ರುವನಾರಾಯಣ್, ಮೈಸೂರು ಅಭ್ಯರ್ಥಿ ಸಿ .ಎಚ್. ವಿಜಯಶಂಕರ್ ಗೈರಾದವರಾಗಿದ್ದಾರೆ.

ಬಾಗಲಕೋಟೆ ಅಭ್ಯರ್ಥಿ ವೀಣಾ ಕಾಶಪ್ಪನವರ್ ಬದಲು ವಿಜಯಾನಂದ್ ಕಾಶಪ್ಪನವರ್ ಸಭೆಗೆ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ.

ಇನ್ನು ಸಭೆಗೂ ಮುನ್ನ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪಕ್ಷ ಸಂಘಟನೆ, ಲೋಕಸಭೆ ಸೋಲಿಗೆ ಕಾರಣಗಳ ಬಗ್ಗೆ ಚರ್ಚೆ ಮಾಡಲಾಗುತ್ತೆ. ಜೊತೆಗೆ ಬೇರು ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲಿಗೆ ಮೈತ್ರಿಯೇ ಕಾರಣ ಎಂಬ ಮುನಿಯಪ್ಪ ಹಾಗೂ ಮೊಯ್ಲಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುನಿಯಪ್ಪ ಹಾಗೂ ಮೊಯ್ಲಿಯವರು ಅವರ ದೃಷ್ಟಿಕೋನದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಸೋಲಿಗೆ ಮೈತ್ರಿ ಕಾರಣವಲ್ಲ. ಬಿಜೆಪಿಯವರ ಅಪಪ್ರಚಾರ ಹಾಗೂ ಹುಸಿ ರಾಷ್ಟ್ರೀಯತೆಯೇ ಕಾರಣ ಎಂದು ಹರಿಹಾಯ್ದರು.

ಸಿಎಂ ಗ್ರಾಮವಾಸ್ತವ್ಯದ ಕ್ರೆಡಿಟ್ ಜೆಡಿಎಸ್‌ಗೆ ಸೇರುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಾಂಗ್ರೆಸ್ ಸಹ ಮೈತ್ರಿ ಸರ್ಕಾರದ ಪಾಲುದಾರ ಪಕ್ಷ. ಸಾಲಮನ್ನಾ, ಗ್ರಾಮವಾಸ್ತವ್ಯ ಸೇರಿ ನಾನಾ ಯೋಜನೆಗಳ ಯಶಸ್ಸು ಎರಡೂ ಪಕ್ಷಗಳಿಗೂ ಸರಿಸಮನಾಗಿ ಸಿಗುತ್ತೆ ಎಂದರು.

ಬೆಂಗಳೂರು: ಲೋಕಸಭೆ ಸೋಲಿನ ಪರಾಮರ್ಶೆ ಹಾಗು ಪಕ್ಷ ಸಂಘಟನೆ ವಿಚಾರವಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಪಕ್ಷದ ಹಿರಿಯ ಮುಖಂಡರು ಹಾಗು ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ವಿಶೇಷ ಸಭೆ ನಡೆಸುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ

ಸಭೆಯಲ್ಲಿ ರಿಜ್ವಾನ್ ಅರ್ಷಾದ್, ವೀರಪ್ಪ ಮೊಯ್ಲಿ, ಚಂದ್ರಪ್ಪ, ವಿ.ಎಸ್​.ಉಗ್ರಪ್ಪ, ವಿನಯ್ ಕುಲಕರ್ಣಿ, ಮಿಥುನ್ ರೈ, ರಾಜಶೇಖರ್ ಹಿಟ್ನಾಳ್​, ಕೆ.ಎಚ್ .ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದಾರೆ.

ಈ ಸಭೆಗೆ ಹಲವು ಕಾಂಗ್ರೆಸ್ ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬೆಂ.ಉತ್ತರ ಅಭ್ಯರ್ಥಿ, ಸಚಿವ ಕೃಷ್ಣಬೈರೇಗೌಡ, ಬೆಂ.ದಕ್ಷಿಣ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್, ಚಾಮರಾಜನಗರ ಅಭ್ಯರ್ಥಿ ಆರ್.ಧ್ರುವನಾರಾಯಣ್, ಮೈಸೂರು ಅಭ್ಯರ್ಥಿ ಸಿ .ಎಚ್. ವಿಜಯಶಂಕರ್ ಗೈರಾದವರಾಗಿದ್ದಾರೆ.

ಬಾಗಲಕೋಟೆ ಅಭ್ಯರ್ಥಿ ವೀಣಾ ಕಾಶಪ್ಪನವರ್ ಬದಲು ವಿಜಯಾನಂದ್ ಕಾಶಪ್ಪನವರ್ ಸಭೆಗೆ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ.

ಇನ್ನು ಸಭೆಗೂ ಮುನ್ನ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪಕ್ಷ ಸಂಘಟನೆ, ಲೋಕಸಭೆ ಸೋಲಿಗೆ ಕಾರಣಗಳ ಬಗ್ಗೆ ಚರ್ಚೆ ಮಾಡಲಾಗುತ್ತೆ. ಜೊತೆಗೆ ಬೇರು ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲಿಗೆ ಮೈತ್ರಿಯೇ ಕಾರಣ ಎಂಬ ಮುನಿಯಪ್ಪ ಹಾಗೂ ಮೊಯ್ಲಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುನಿಯಪ್ಪ ಹಾಗೂ ಮೊಯ್ಲಿಯವರು ಅವರ ದೃಷ್ಟಿಕೋನದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಸೋಲಿಗೆ ಮೈತ್ರಿ ಕಾರಣವಲ್ಲ. ಬಿಜೆಪಿಯವರ ಅಪಪ್ರಚಾರ ಹಾಗೂ ಹುಸಿ ರಾಷ್ಟ್ರೀಯತೆಯೇ ಕಾರಣ ಎಂದು ಹರಿಹಾಯ್ದರು.

ಸಿಎಂ ಗ್ರಾಮವಾಸ್ತವ್ಯದ ಕ್ರೆಡಿಟ್ ಜೆಡಿಎಸ್‌ಗೆ ಸೇರುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಾಂಗ್ರೆಸ್ ಸಹ ಮೈತ್ರಿ ಸರ್ಕಾರದ ಪಾಲುದಾರ ಪಕ್ಷ. ಸಾಲಮನ್ನಾ, ಗ್ರಾಮವಾಸ್ತವ್ಯ ಸೇರಿ ನಾನಾ ಯೋಜನೆಗಳ ಯಶಸ್ಸು ಎರಡೂ ಪಕ್ಷಗಳಿಗೂ ಸರಿಸಮನಾಗಿ ಸಿಗುತ್ತೆ ಎಂದರು.

Intro:newsBody:ಬೆಂಗಳೂರಿಗೆ ಬಂದ ವೇಣುಗೋಪಾಲ್ ರಾಜ್ಯ ನಾಯಕರೊಂದಿಗೆ ಸಭೆ, ಚರ್ಚೆ

ಬೆಂಗಳೂರು: ದೆಹಲಿಯಿಂದ ಇಂದು ಬೆಳಿಗ್ಗೆ ಆಗಮಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ನೇರವಾಗಿ ಕುಮಾರ ಕೃಪ ಅತಿಥಿಗೃಹಕ್ಕೆ ಆಗಮಿಸಿದರು.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಅವರೊಂದಿಗೆ ಕುಮಾರ ಕೃಪ ಅತಿಥಿಗೃಹಕ್ಕೆ ಆಗಮಿಸಿದ್ದು ಅಲ್ಲಿ ಕೆಲಕಾಲ ನಾಯಕರೊಂದಿಗೆ ಚರ್ಚಿಸಿದರು.
ಇಂದು ಬೆಳಿಗ್ಗೆ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ವಿಶೇಷ ಸಭೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಕೆಸಿ ವೇಣುಗೋಪಾಲ್ ಕೂಡ ಭಾಗವಹಿಸುತ್ತಿದ್ದಾರೆ. ಸಭೆಯಲ್ಲಿ ನಡೆಸಬಹುದಾದ ಚರ್ಚೆಯ ಸಂಬಂಧ ಪೂರ್ವಭಾವಿಯಾಗಿ ದಿನೇಶ್ ಗುಂಡೂರಾವ್ ಹಾಗೂ ಈಶ್ವರ್ ಕಂಡ್ರೆ ಅವರೊಂದಿಗೆ ವೇಣುಗೋಪಾಲ್ ಚರ್ಚಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇದೇ ಸಂದರ್ಭ ಮಾತನಾಡಿ, ಇವತ್ತು ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿಗಳ ಜೊತೆ ವೇಣುಗೋಪಾಲ್ ಅವರು ಸಭೆ ಮಾಡ್ತಾರೆ. ಸೋತಿರುವ ಅಭ್ಯರ್ಥಿಗಳ ಜೊತೆ ಸಮಾಲೋಚನೆ ಮಾಡ್ತಾರೆ. ಪಕ್ಷ ಸಂಘಟನೆ, ಸೋಲಿಗೆ ಕಾರಣಗಳ ಬಗ್ಗೆ ಚರ್ಚೆ ಮಾಡಲಾಗುತ್ತೆ. ಬೇರು ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡ್ತೇವೆ. ಮಧ್ಯಾಹ್ನ ಹಿರಿಯ ನಾಯಕರ ಜೊತೆಗೆ ವೇಣುಗೋಪಾಲ್ ಸಭೆ ನಡೆಸ್ತಾರೆ ಎಂದರು.
ಮೈತ್ರಿಯೇ ಸೋಲಿಗೆ ಕಾರಣ ಎಂಬ ಮುನಿಯಪ್ಪ, ಮೊಯ್ಲಿ ಬಗ್ಗೆ ಮಾತನಾಡಿ, ಮುನಿಯಪ್ಪ, ಮೊಯ್ಲಿ ಹೇಳಿಕೆ ನೀಡಿರಬಹುದು. ಆದರೆ ಸೋಲಿಗೆ ಮೈತ್ರಿ ಕಾರಣ ಅಲ್ಲ. ಬಿಜೆಪಿಯ ಅಪಪ್ರಚಾರ ಹಾಗೂ
ಬಿಜೆಪಿಯವ್ರ ಹುಸಿ ರಾಷ್ಟ್ರೀಯತೆ ಸೋಲಿಗೆ ಕಾರಣ ಎಂದರು.
ಸರಿಸಮನಾದ ಪಾಲು
ಗ್ರಾಮವಾಸ್ತವ್ಯದ ಕ್ರೆಡಿಟ್ ಜೆಡಿಎಸ್ ಗೆ ಸಿಕ್ತಿದೆ ಎಂಬ ಎಂಬ ವಿಚಾರ, ಕಾಂಗ್ರೆಸ್ ಸಹ ಮೈತ್ರಿ ಸರ್ಕಾರದ ಪಾಲುದಾರ ಪಕ್ಷ. ಸಾಲಮನ್ನ, ಗ್ರಾಮವಾಸ್ತವ್ಯ ಸೇರಿ ನಾನಾ ಯೋಜನೆಗಳ ಯಶಸ್ಸು ಎರಡೂ ಪಕ್ಷಗಳಿಗೂ ಸರಿಸಮನಾಗಿ ಸಿಗುತ್ತೆ. ಗ್ರಾಮವಾಸ್ತವ್ಯದಿಂದ ಉತ್ತಮ ಹೆಸರು ಇಬ್ಬರಿಗೂ ಸಿಗುತ್ತೆ. ಗ್ರಾಮವಾಸ್ತವ್ಯ ದಿಂದ ಕಾಂಗ್ರೆಸ್ ಗೂ ಹೆಸರು ಬರುತ್ತೆ ಎಂದರು.
ಸಭೆ ಬಳಿಕ ಸಂಪೂರ್ಣ ಮಾಹಿತಿ
ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ ಮಾತನಾಡಿ, ಪಕ್ಷ ಸಂಘಟನೆ ಕುರಿತು ಚರ್ಚಿಸಲು ಪಕ್ಷದ ಹಿರಿಯ ನಾಯಕರ ಹಾಗೂ ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಸಭೆ ಕರೆಯಲಾಗಿದೆ. ಪದಾಧಿಕಾರಿಗಳ ನೇಮಕದ ಬಗ್ಗೆಯೂ ಚರ್ಚೆ ಮಾಡ್ತೇವೆ. ಸಭೆ ಬಳಿಕ ಸಂಪೂರ್ಟ್ ಮಾಹಿತಿ ನೀಡ್ತೇವೆ ಎಂದರು.Conclusion:news
Last Updated : Jun 26, 2019, 1:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.